Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಯಾವುದೇ ರೇಷನ್ ಕಾರ್ಡ್ ಇದ್ದರು ಜೂನ್ ತಿಂಗಳಿನಿಂದ 10kg ಅಕ್ಕಿ ಜೊತೆ ಈ 2 ಧಾನ್ಯಗಳು ಕೂಡ ಉಚಿತ.!

Posted on May 31, 2023 By Kannada Trend News No Comments on ಯಾವುದೇ ರೇಷನ್ ಕಾರ್ಡ್ ಇದ್ದರು ಜೂನ್ ತಿಂಗಳಿನಿಂದ 10kg ಅಕ್ಕಿ ಜೊತೆ ಈ 2 ಧಾನ್ಯಗಳು ಕೂಡ ಉಚಿತ.!

ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಸರ್ಕಾರವು ಜಾರಿ ಮಾಡವುದಾಗಿ ಹೇಳಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಚರ್ಚೆ ಹೆಚ್ಚಾಗಿದೆ. ಈಗಾಗಲೇ ಸಚಿವ ಸಂಪುಟ ಸಭೆ ಜೊತೆ ಚರ್ಚಿಸಿ ತಾತ್ವಿಕ ಅನುಮೋದನೆ ಆದೇಶ ಪತ್ರ ಹೊರಡಿಸಿರುವ ಮಾನ್ಯ ಮುಖ್ಯಮಂತ್ರಿಗಳೇ ಈ ಎಲ್ಲಾ ಗ್ಯಾರಂಟಿ ಕಾರ್ಡ್ ಯೋಜನೆಗಳಿಗೆ ಇರುವ ಮಾರ್ಗಸೂಚಿ ಮತ್ತು ಮಾನದಂಡಗಳನ್ನು ಜೂನ್ 1ರಂದು ಘೋಷಣೆ ಮಾಡಿತ್ತಾರೆ ಎನ್ನುವುದನ್ನು ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರುಗಳು ಹೇಳುತ್ತಿದ್ದಾರೆ.

ಈಗ ಎಲ್ಲರ ಗಮನವೂ ಕೂಡ ಜೂನ್ 1 ರಂದು ನಡೆಯುವ ಮತ್ತೊಂದು ಕ್ಯಾಬಿನೆಟ್ ಮೀಟಿಂಗ್ ಮೇಲೆ ಇದೆ. ಇದರ ನಡುವೆಯೇ ಕೆಲ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಸಚಿವರುಗಳು ಕೂಡ ಸುಳಿವು ನೀಡುತ್ತಿದ್ದಾರೆ. ಇದೀಗ ಉಚಿತ ಪಡಿತರದ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಅವರು ಸಹ ಮಾತನಾಡಿದ್ದಾರೆ.

ಮಾಧ್ಯಮಗಳ ಎದುರು ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿ ಬಗ್ಗೆ ಮಾತಿಗೆ ಇಳಿದ ಅವರು ಕರ್ನಾಟಕದಲ್ಲಿ BPL ಮತ್ತು AAY ಕಾರ್ಡ್ ಕುಟುಂಬಗಳಿಗೆ ಈ ಉಚಿತ ಪಡಿತರ ತಲುಪುತ್ತದೆ. ಅದನ್ನು ಹೊರತುಪಡಿಸಿ BPL ಯೇತರ ಕಾರ್ಡ್ ಗಳು ಕೂಡ 14,38,796 ಇವೆ. ಇವರಲ್ಲಿ ಎಲ್ಲರೂ ಕೂಡ ತಮಗೂ ಉಚಿತವಾಗಿ ಅಕ್ಕಿ ಬೇಕು ಎಂದು ಕೇಳುತ್ತಿಲ್ಲ ಹಾಗಾಗಿ ಇದರ ಬಗ್ಗೆ ಏನು ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಜೂನ್ 1ರಂದು ನಡೆಯುವ ಕ್ಯಾಬಿನೆಟ್ ಮೀಟಿಂಗ್ ಅಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡು ಸ್ಪಷ್ಟವಾಗಿ ಹೇಳುತ್ತಾರೆ.

ಆದರೆ ಈಗ BPL ಮತ್ತು AAY ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ 10 kg ಪಡಿತರ ಕೊಡುವುದಕ್ಕೆ ಮಾಡಿರುವ ಸಿದ್ಧತೆ ಬಗ್ಗೆ ಹೇಳುತ್ತೇನೆ ಎಂದ ಅವರು ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಅವರು ಕೊಳ್ಳುತ್ತಿರುವ 5kg ಪಡಿತರದ ಜೊತೆಗೆ 10kg ಯನ್ನು ಕೂಡ ಅವರೇ ನೀಡುವುದಕ್ಕೆ ಕೇಳಿಕೊಂಡಿದ್ದೇವೆ. ಅದಕ್ಕಾಗಿ 36 ರೂಪಾಯಿಗಳ ಬೆಲೆ ಕೊಡಲು ತಯಾರಾಗಿದ್ದೇವೆ. ಇದನ್ನು ಅವರು ಸ್ವೀಕರಿಸಿ ಅವರೇ 10kg ಅಕ್ಕಿಯನ್ನು ಕೊಡುವ ನಿರ್ಧಾರಕ್ಕೆ ಬಂದರು ಸರಿ ಅಥವಾ ಇಲ್ಲವೆಂದರೆ ಟೆಂಡರ್ ಕರೆಸಿ ಉಚಿತ ಪಡಿತರ ಕೊಡಲು ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದರ ಜೊತೆ ರಾಗಿ, ಗೋಧಿ, ಜೋಳ ಈ ಧಾನ್ಯಗಳನ್ನು ಕೂಡ ಕೊಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಳಿದ್ದಕ್ಕಾಗಿ ಎಲ್ಲವೂ ಒಟ್ಟಾರೆಯಾಗಿ ಸೇರಿ 10kg ಪಡಿತರ ಎಂದು ನಿರ್ಧರಿಸಿದ್ದೇವೆ. ಒಂದು ವೇಳೆ 3kg ರಾಗಿ ನೀಡಿದರೆ 7kg ಅಕ್ಕಿ ನೀಡುತ್ತೇವೆ, ಇಲ್ಲ 2kg ರಾಗಿ ನೀಡಿದರೆ 8kg ಅಕ್ಕಿ ನೀಡುತ್ತೇವೆ. ಒಟ್ಟಾರೆಯಾಗಿ ಏನೇ ಕೊಟ್ಟರೂ ಕೂಡ 10kg ಪ್ಯಾಕೇಜ್ ಒಳಗಡೆ ಇರುತ್ತದೆ ಎಂದು ಕೆ. ಎಚ್ ಮುನಿಯಪ್ಪ ಅವರು ಹೇಳಿದ್ದಾರೆ.

ಹೊಸದಾಗಿ ಕಾರ್ಡುಗಳಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದರ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಸಹ BPL ಕಾರ್ಡ್ ಪಡೆಯುವುದಕ್ಕೆ ಅರ್ಹರಾಗಿದ್ದರೆ ಅವರಿಗೂ ಈ ಯೋಜನೆಯ ಅನುಕೂಲತೆ ಸಿಗಲಿದೆ ಎಂದು ಉತ್ತರ ಕೊಟ್ಟಿದ್ದಾರೆ. ಜೂನ್ 1ರಂದು ಸಿಎಂ ಸಿದ್ದರಾಮಯ್ಯ ಅವರೇ ಇದೆಲ್ಲದರ ಬಗ್ಗೆ ಅಫಿಷಿಯಲ್ ಆಗಿ ಅನೌನ್ಸ್ ಮಾಡಲಿದ್ದಾರೆ ಅಲ್ಲಿಯವರೆಗೂ ಕಾಯಿರಿ ಎಂದಿದ್ದಾರೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

 

News
WhatsApp Group Join Now
Telegram Group Join Now

Post navigation

Previous Post: ಕುಡಿತದ ಚಟ ಇರುವವರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಈ ದೇವತೆ ಕೊಡುವ ಒಂದೇ ಒಂದು ನಿಂಬೆ ಹಣ್ಣಿನಿಂದ ನಿಮ್ಮ ಎಲ್ಲಾ ಕಷ್ಟವೂ ಕೂಡ ನಿವಾರಣೆ ಆಗುತ್ತದೆ.!
Next Post: 10th ಪಾಸ್ ಆದವರಿಗೆ ಸರ್ವೆ ಇಲಾಖೆಯಲ್ಲಿ ಹುದ್ದೆ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸಂಬಳ 63,200/-

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore