Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕುದುರೆಯ ಫೋಟೋ ಮನೆಯಲ್ಲಿ ಹೀಗಿಟ್ಟರೆ ಹಯಗ್ರೀವ ಸ್ವಾಮಿ ರಕ್ಷಣೆ ಮನೆಗೆ ಪ್ರಾಪ್ತಿ ಆಗುತ್ತೆ.!

Posted on January 30, 2024 By Kannada Trend News No Comments on ಕುದುರೆಯ ಫೋಟೋ ಮನೆಯಲ್ಲಿ ಹೀಗಿಟ್ಟರೆ ಹಯಗ್ರೀವ ಸ್ವಾಮಿ ರಕ್ಷಣೆ ಮನೆಗೆ ಪ್ರಾಪ್ತಿ ಆಗುತ್ತೆ.!

 

ಮನೆಯಲ್ಲಿ ಯಾವ ರೀತಿಯ ಕುದುರೆಯ ಫೋಟೋವನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಆ ಮನೆಗೆ ಅಭಿವೃದ್ಧಿಯಾಗುತ್ತದೆ ಆ ಮನೆಗೆ ಐಶ್ವರ್ಯ ಅನ್ನುವುದು ಹೆಚ್ಚಾಗುತ್ತದೆ, ನಿಮ್ಮ ವ್ಯಾಪಾರ ವ್ಯವಹಾರ ಗಳಲ್ಲಿ ಅಭಿವೃದ್ಧಿಯಾಗಬೇಕು ಎಂದರೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಏಳಿಗೆ ಕಾಣಬೇಕು ಎಂದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿ ಆರ್ಥಿಕ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸಿಕೊಳ್ಳಬೇಕು ಎಂದರೆ.

ನೀವು ಮನೆಯ ಯಾವ ದಿಕ್ಕಿನಲ್ಲಿ ಯಾವ ರೀತಿಯ ಕುದುರೆ ಫೋಟೋವನ್ನು ಹಾಕಬೇಕು ಹಾಗೂ ಈ ಫೋಟೋವನ್ನು ಹಾಕುವುದ ರಿಂದ ನಮಗೆ ಯಾವುದೇ ರೀತಿಯ ವಿಚಾರದಲ್ಲಿ ಹೆಚ್ಚಿನ ಅನುಗ್ರಹ ಎನ್ನುವುದು ಉಂಟಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ.

ಪರಿಹಾರ ಶಾಸ್ತ್ರದಲ್ಲಿ ಕುದುರೆಯ ಗೊಂಬೆ ಅಥವಾ ಚಿತ್ರಪಟಕ್ಕೆ ವಿಶೇಷವಾದ ಮಹತ್ವ ಇದೆ. ಅದಕ್ಕೂ ಮೊದಲು ಯಾವ ಒಂದು ಕಾರಣಕ್ಕಾಗಿ ನಾವು ಕುದುರೆಯ ಫೋಟೋವನ್ನು ಇಡಬೇಕು ಕುದುರೆಗೂ ನಮ್ಮ ವ್ಯಾಪಾರ ವ್ಯವಹಾರಕ್ಕೆ ನಮ್ಮ ಹಣಕಾಸಿಗೂ ಏನು ಸಂಬಂಧ ಎಂದು ನೋಡುವುದಾದರೆ ಸಾಕ್ಷಾತ್ ಶ್ರೀ ಹಯಗ್ರೀವ ಸ್ವಾಮಿಯ ರೂಪದಲ್ಲಿರುವಂತಹ ಶ್ರೀ ಮಹಾವಿಷ್ಣು ಎಂದರ್ಥ.

ಈ ಸುದ್ದಿ ನೋಡಿ:- ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

ಯಾರ ಮನೆಯಲ್ಲಿ ಕುದುರೆಯ ಗೊಂಬೆ ಅಥವಾ ಚಿತ್ರಪಟ ಇರುತ್ತದೆಯೋ ಆ ಮನೆಗೆ ಸಾಕ್ಷಾತ್ ಹಯಗ್ರೀವ ಸ್ವಾಮಿಯ ಅನುಗ್ರಹದಿಂದ ಸರ್ವ ಸoಪದಗಳು ಹಾಗೂ ಧನ ಲಾಭಗಳು ಪ್ರಾಪ್ತಿಯಾಗುತ್ತದೆ ವಿದ್ಯಾರ್ಥಿ ಗಳಿಗೆ ವಿದ್ಯಾ ರಂಗದಲ್ಲಿ ತಿರುವಿಲ್ಲದಂತಹ ಜಯ ಪ್ರಾಪ್ತಿಯಾಗುತ್ತದೆ.

ಆದ್ದರಿಂದ ಋಗ್ವೇದದಲ್ಲಿಯೂ ಕೂಡ ಕುದುರೆಯನ್ನು ಸಮಸ್ತ ಸಂಪದಗಳ ಸಂಕೇತ ಅಂತ ಹೇಳಲಾಗುತ್ತದೆ. ಆದ್ದರಿಂದ ಮನೆಯಲ್ಲಿ ಕುದುರೆಯ ಫೋಟೋವನ್ನು ಅಥವಾ ಗೊಂಬೆಯನ್ನು ಈ ರೀತಿಯಾಗಿ ಏರ್ಪಾಡು ಮಾಡಿಕೊಳ್ಳಬೇಕು. ಕುದುರೆಯ ಫೋಟೋವನ್ನು ನಿಮ್ಮ ಮನೆಯ ಹಾಲ್ ನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಅಖಂಡ ಧನ ಲಾಭ ಪ್ರಾಪ್ತಿಯಾಗಲು ಕುದುರೆಯ ಚಿತ್ರಪಟವನ್ನು ನಿಮ್ಮ ಮನೆಯಲ್ಲಿ ಅದರಲ್ಲೂ ಮುಖ್ಯವಾದ ಹಾಲ್ ನಲ್ಲಿ ಇಡುವ ವ್ಯವಸ್ಥೆ ಮಾಡಿಕೊಳ್ಳಬೇಕು.

ಆದರೆ ಕುದುರೆಯ ಚಿತ್ರ ಪಟವನ್ನು ಇಡಬೇಕಾದರೆ ಕುದುರೆಯು ಮನೆಯ ಒಳಗೆ ಬರುವಂತೆ ಇಡಬೇಕು ಅಂದರೆ ಕುದುರೆಯ ಮುಖ ನಿಮ್ಮ ಮನೆಯ ಮುಖ್ಯ ದ್ವಾರದ ಕಡೆ ಯಾವುದೇ ಕಾರಣಕ್ಕೂ ನೋಡುವಂತೆ ಏರ್ಪಾಡು ಮಾಡಬಾರದು. ಈ ಒಂದು ನಿಯಮವನ್ನು ನೀವು ತಪ್ಪದೇ ಪಾಲಿಸಿದರೆ ಹಯಗ್ರೀವ ಸ್ವಾಮಿಯ ಅನುಗ್ರಹ ಆ ಮನೆಗೆ ಪ್ರಾಪ್ತಿಯಾಗುತ್ತದೆ.

ಈ ಸುದ್ದಿ ನೋಡಿ:ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್

ಹಾಗೆಯೇ ಕುದುರೆ ಫೋಟೋ ಮತ್ತು ಗೊಂಬೆಯನ್ನು ಮನೆಯ ಒಂದೊಂದು ದಿಕ್ಕಿನಲ್ಲಿ ಇಟ್ಟರೆ ಒಂದೊಂದು ಫಲ ಪ್ರಾಪ್ತಿಯಾಗುತ್ತದೆ. ಅದರಲ್ಲೂ ಪ್ರಧಾನವಾಗಿ ಕುದುರೆಯ ಫೋಟೋ ಅಥವಾ ಗೊಂಬೆ ಯನ್ನು ಮನೆಯ ಯಾವ ಕೋಣೆಯಲ್ಲಿ ಇಡಬೇಕು ಎಂದು ನೋಡುವು ದಾದರೆ ಯಾವ ಕೋಣೆಯಲ್ಲಾದರೂ ಸರಿ ದಕ್ಷಿಣ ದಿಕ್ಕಿಗೆ ಹಾಕುವುದರಿಂದ ಆ ಮನೆಯ ಯಜಮಾನಿಗೆ ಅದೃಷ್ಟ ಎನ್ನುವುದು ಚೆನ್ನಾಗಿ ಕೂಡಿ ಬರುತ್ತದೆ.

ಸೌಭಾಗ್ಯಗಳು ಪ್ರಾಪ್ತಿಯಾಗುತ್ತದೆ. ಉತ್ತಮ ಹೆಸರು ಮತ್ತು ಗೌರವ ಎನ್ನುವುದು ವೃದ್ಧಿಯಾಗುತ್ತದೆ. ಮನೆಯ ಯಜಮಾನಿಯ ಕೈಯಲ್ಲಿ ಹಣಕಾಸು ಅಧಿಕವಾಗಿ ಇರುತ್ತದೆ. ಹಾಗೆಯೇ ಕುದುರೆ ಫೋಟೋ ಅಥವಾ ಗೊಂಬೆಯನ್ನು ನೈರುತ್ಯ ದಿಕ್ಕಿನಲ್ಲಿ ಏರ್ಪಾಡು ಮಾಡಿದರೆ ಉದ್ಯೋಗಸ್ಥರಿಗೆ ಪ್ರಮೋಷನ್ ಎನ್ನುವುದು ಅತಿ ಶೀಘ್ರವಾಗಿ ಪ್ರಾಪ್ತಿಯಾಗುತ್ತದೆ.

ಹಾಗೆ ಗಂಡ ಹೆಂಡತಿ ನಡುವೆ ಸಂಬಂಧ ಗಟ್ಟಿಯಾಗಿರಬೇಕು ಅನ್ಯೋನ್ಯವಾಗಿ ಜೀವನ ನಡೆಸಬೇಕು ಎಂದರೂ ಕೂಡ ಮನೆಯ ನೈರುತ್ಯ ದಿಕ್ಕಿನಲ್ಲಿ ಕುದುರೆಯ ಫೋಟೋ ಅಥವಾ ಗೊಂಬೆಯನ್ನು ಏರ್ಪಾಡು ಮಾಡಬೇಕು. ಹಾಗೂ ಮನೆಯ ಈಶಾನ್ಯ ದಿಕ್ಕಿನಲ್ಲಿ ಕುದುರೆ ಫೋಟೋ ಇಟ್ಟರೆ ಆ ಮನೆಯ ಮಕ್ಕಳ ವಿದ್ಯಾಭ್ಯಾಸ ದಲ್ಲಿ ಏಳಿಗೆ ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

News
WhatsApp Group Join Now
Telegram Group Join Now

Post navigation

Previous Post: ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!
Next Post: ಹೆಂಗಸರಿಗೆ ಸೀರೆಗಳ ಕುರಿತು ಕಿವಿ ಮಾತು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore