Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸ್ತ್ರೀಯರು ಪಾಲಿಸಬೇಕಾದ ನಿಯಮಗಳು.!

Posted on January 31, 2024 By Kannada Trend News No Comments on ಸ್ತ್ರೀಯರು ಪಾಲಿಸಬೇಕಾದ ನಿಯಮಗಳು.!

 

ವಿಶೇಷವಾಗಿ ಹೆಣ್ಣು ಮಕ್ಕಳು ಪ್ರತಿಯೊಬ್ಬರು ತಿಳಿಯಲೇಬೇಕಾದ ನಮ್ಮ ಹಿರಿಯರು ಹೇಳಿರುವಂತಹ 45 ಕಿವಿ ಮಾತುಗಳು ಇವು. ಹಾಗಾದರೆ ಆ ಕಿವಿ ಮಾತುಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.
* ಸಂಜೆ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದು ಮನೆಯ ಹಿಂಭಾಗದಲ್ಲಿರುವ ಬಾಗಿಲನ್ನು ಮುಚ್ಚಬೇಕು.

* ಮನೆಯ ಮುಖ್ಯದ್ವಾರದ ಬಾಗಿಲು ಹೊಸ್ತಿಲ ಮೇಲೆ ನಿಲ್ಲಬೇಡಿ ಅಷ್ಟು ಮಾತ್ರವಲ್ಲದೆ ಬೇರೆ ಯಾರು ಸಹ ಹೊಸ್ತಿಲ ಮೇಲೆ ನಿಲ್ಲದಂತೆ ಎಚ್ಚರವಹಿಸಿ ತಿಳಿಹೇಳಿ.
* ಸಂಜೆ ದೀಪ ಬೆಳಗಿಸಿದ ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ ರಾತ್ರಿ ಮಲಗುವ ಮೊದಲು ಕಸಗುಡಿಸಿದರೆ ಹೊರಗೆ ಹಾಕಬೇಡಿ ಒಂದು ಕಡೆ ಗುಡ್ಡೆ ಮಾಡಿ ಶೇಖರಿಸಿಟ್ಟು ಬೆಳಗಿನ ಜಾವ ಸೂರ್ಯೋದಯದ ನಂತರ ಹೊರಗೆ ಹಾಕಿ.

ಈ ಸುದ್ದಿ ಓದಿ:- ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!

* ಪೊರಕೆಯ ತುದಿಯ ಭಾಗವನ್ನು ಮೇಲೆ ಮಾಡಿ ನಿಲ್ಲಿಸಬೇಡಿ ಅದು ಸ್ಮಶಾನ ಮನೆಯ ಸೂಚಕವಾಗಿದೆ. ಹಾಗೆ ಇಡುವುದು ಸತ್ತವರ ಮನೆ ಯಲ್ಲಿ ಮಾತ್ರ.
* ಮೊರ ಪೊರಕೆಗಳನ್ನು ಕಾಲುಗಳಿoದ ಒದೆಯಬೇಡಿ ಅಥವಾ ತುಳಿಯ ಬೇಡಿ ಹಾಗೇನಾದರೂ ನಿಮ್ಮ ಕಾಲು ಅಚಾನಕ್ಕಾಗಿ ತಗುಲಿದರೂ ಪೊರಕೆಗೆ ನಮಸ್ಕರಿಸಿ.

* ಚಪ್ಪಲಿಗಳನ್ನು ಮನೆಯ ಹೊಸ್ತಿಲು ಮುಖ್ಯ ದ್ವಾರದ ಎದುರಿಗೆ ಅಕ್ಕಪಕ್ಕ ಬಿಡಬೇಡಿ ಸ್ವಲ್ಪ ದೂರದಲ್ಲಿಯೇ ಬಿಟ್ಟರೆ ಒಳ್ಳೆಯದು. ರಂಗೋಲಿ ಹಾಕದೆ ಹಾಗೆ ಬಾಗಿಲು ಮುಂಭಾಗವನ್ನು ಸಾರಿಸಿ ಇಡು ವುದು ಒಳ್ಳೆಯದಲ್ಲ. ಯಾವುದಾದರೂ ಒಂದು ಪುಟ್ಟ ರಂಗೋಲಿಯನ್ನಾದರೂ ಹಾಕಿ.
* ಮನೆಯ ಗೋಡೆಯ ಮೇಲೆ ದೇವರ ಮನೆ ಮುಂತಾದ ಸ್ಥಳಗಳಲ್ಲಿ ಗೋಡೆಯ ಮೇಲೆ ಶಾಯಿ ಅಥವಾ ಕರಿ ಬಣ್ಣದ ಇತ್ಯಾದಿಗಳಿಂದ ವಿಕಾರ ಆಕೃತಿಗಳನ್ನು ಬರೆಯಬೇಡಿ.

ಈ ಸುದ್ದಿ ಓದಿ:- ಕುದುರೆಯ ಫೋಟೋ ಮನೆಯಲ್ಲಿ ಹೀಗಿಟ್ಟರೆ ಹಯಗ್ರೀವ ಸ್ವಾಮಿ ರಕ್ಷಣೆ ಮನೆಗೆ ಪ್ರಾಪ್ತಿ ಆಗುತ್ತೆ.!

* ನಡೆಯುವಾಗ ನಿಮ್ಮ ಪಾದವನ್ನು ನೆಲಕ್ಕೆ ಸವರಿಕೊಂಡು ಓಡಾಡ ಬೇಡಿ ಕಾಲಿನ ಪಾದವನ್ನು ಎತ್ತಿ ಇಟ್ಟು ನಡೆಯಬೇಕು ಸಾಧ್ಯವಾದಷ್ಟು ಶಬ್ದ ಮಾಡದೆ ಇರಲಿ ಹೆಣ್ಣು ಮಕ್ಕಳು ಕಾಲಿಗೆ ಕಾಲ್ಗೆಜ್ಜೆಯನ್ನು ಧರಿಸು ವುದು ಒಳ್ಳೆಯದು.

* ಮಂಗಳವಾರ ಶುಕ್ರವಾರದಂದು ಯಾರನ್ನು ಸಹ ಅವಾಚ್ಯ ಶಬ್ದ ಗಳಿಂದ ಬಯ್ಯಬೇಡಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಆ ದಿನಗಳು ಅವಾಚ್ಯ ಶಬ್ದಗಳಿಂದ ಬಯ್ಯಲು ಬಾರದು ಅವರ ಮನಸ್ಸನ್ನು ಸಹ ನೋಯಿಸಬಾರದು.

* ಹರಿದು ಹೋದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬೇಡಿ. ಒಂದು ವೇಳೆ ನೀವೇನಾದರೂ ಧರಿಸಿದರೆ ಮಾಟ ಮಂತ್ರ ದೃಷ್ಟಿ ದೋಷ ಪ್ರಯೋಗ ಮಾಡಿಸಿದ್ದರೆ ಅವುಗಳ ಮೇಲೆ ಪರಿಣಾಮ ಬೇಗ ಬೀಳುತ್ತದೆ
* ಕೈ ಮತ್ತು ಕಾಲುಗಳ ಉಗುರುಗಳನ್ನು ವಿಪರೀತ ಬೆಳೆಸಬೇಡಿ ಅದು ದಾರಿದ್ರ್ಯದ ಸಂಕೇತವಾಗಿದೆ.
* ಉಗುರುಗಳನ್ನು ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಕತ್ತರಿಸಬೇಡಿ ಹಾಗೆ ಶುಕ್ರವಾರ ಮಂಗಳವಾರ ಶನಿವಾರದ ದಿನ ಉಗುರುಗಳನ್ನು ಕತ್ತರಿಸಬಾರದು ಕತ್ತರಿಸಿದ ಉಗುರುಗಳನ್ನು ಸಹ ಮನೆಯಲ್ಲಿ ಎಲ್ಲೆಂದರಲ್ಲಿ ಎಸೆಯ ಬಾರದು.

ಈ ಸುದ್ದಿ ಓದಿ:- ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

* ಹಾಲನ್ನು ಚೆಲ್ಲಿದರೆ ತುಳಿದುಕೊಂಡು ಓಡಾಡಬೇಡಿ ಒಂದು ವಸ್ತ್ರವನ್ನು ತೆಗೆದುಕೊಂಡು ಕೈಗಳಿಂದ ಸ್ವಚ್ಛಗೊಳಿಸಬೇಕು.
* ಮನೆಯಲ್ಲಿ ಹೆಣ್ಣು ಮಕ್ಕಳು ಕೆದರಿದ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು ಕುಂಕುಮವಿಲ್ಲದ ಹಣೆ ಕೆದರಿದ ಕೂದಲು ಅರಿಶಿನ ಕೈ ಕಾಲುಗಳು ಮಹಿಳೆಯರಿಗೆ ಅಶುಭದ ಸಂಕೇತವಾಗಿದೆ.
* ಮುಸ್ಸಂಜೆ ಮತ್ತು ಸೂರ್ಯಾಸ್ತದ ಬಳಿಕ ತಲೆಯ ಕೂದಲನ್ನು ಬಾಚಬಾರದು.

* ಹಾಸಿಗೆ ಸೋಫಾ ಮಂಚದ ಮೇಲೆ ಕುಳಿತು ಧ್ಯಾನ ಪೂಜೆಗಳನ್ನು ಮಾಡಬೇಡಿ ಯಾವ ಫಲವನ್ನು ನೀಡುವುದಿಲ್ಲ.
* ಸೂರ್ಯೋದಯಕ್ಕೆ ಮುಂಚಿತವಾಗಿಯೇ ಹಾಸಿಗೆಯಿಂದ ಏಳುವ ಅಭ್ಯಾಸ ಮಾಡಿಕೊಳ್ಳಿ. ಮುಸ್ಸಂಜೆ ವೇಳೆ ಸೂರ್ಯೋದಯದ ಸಮಯದಲ್ಲಿ ಮಲಗಬೇಡಿ ಹಾಗೆ ಮಾಡಿದರೆ ದರಿದ್ರ ಲಕ್ಷ್ಮಿ ಮನೆಯಲ್ಲಿ ತಾಂಡವವಾಡುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

News
WhatsApp Group Join Now
Telegram Group Join Now

Post navigation

Previous Post: ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!
Next Post: ಮಕ್ಕಳಿರುವ ಪೋಷಕರು ತಪ್ಪದೆ ಇದನ್ನು ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore