Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕ್ರಾಂತಿ ಸಿನಿಮಾದಲ್ಲಿ ನಟಿಸಲು ನಟ ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ.

Posted on June 22, 2022June 24, 2022 By Kannada Trend News No Comments on ಕ್ರಾಂತಿ ಸಿನಿಮಾದಲ್ಲಿ ನಟಿಸಲು ನಟ ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ.

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ‌ ಹಲವಾರು ಮನೆಯ ಮಗನಂತೆ ಅಂದು ಕೊಂಡಿರುವುದು ಉಂಟು. ದರ್ಶನ್ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದರಲ್ಲಿಯೂ ಇತ್ತೀಚೆಗೆ ಅಭಿಮಾನಿಗಳ ಮನಸ್ಸು ಗೆದ್ದಿರುವ ದರ್ಶನ್ ಅವರ ಅಭಿನಯದ ಡಿ ಬಾಸ್ ಸಿನಿಮಾ ಎಂದರೆ ಈಗಲೂ ಅಭಿಮಾನಿಗಳು ಕಾತುರದಿಂದ ನೋಡುತ್ತಾರೆ. ಈಗಾಗಲೇ ದರ್ಶನ್ ಅವರು ಮತ್ತೆ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು ಸದ್ಯ ಬ್ಯುಸಿ ಯಾಗಿದ್ದಾರೆ. ಸಿನಿಮಾರಂಗದಲ್ಲಿ ನಾಯಕನಟನಾಗಿ ನಟಿಸುವುದಲ್ಲದೆ ಕಷ್ಟ ಎಂದು ಬಂದವರಿಗೆ ತಮ್ಮಿಂದ ಸದ್ಯವಾದಷ್ಟು ಸಹಾಯ ಮಾಡುತ್ತಾರೆ. ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ, ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿಯು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  ಡಿ ಬಾಸ್ ದರ್ಶನ್ ಅವರು ನಟ ಮಾತ್ರವಲ್ಲದೆ ಒಬ್ಬ ಪರಿಸರ ಪ್ರೇಮಿ ಹಾಗೂ ಪ್ರಾಣಿ ಪ್ರಿಯರು ಕೂಡ ಆಗಿದ್ದಾರೆ. ಸಿನಿಮಾರಂಗದಲ್ಲಿ ದರ್ಶನ್ ಅವರ ಪಯಣ, ಅವರ ಗೆಲುವಿನ ಹಾದಿ ಅಷ್ಟು ಸುಲಭವಾಗಿ ಇರಲಿಲ್ಲ. ದರ್ಶನ್ ಅವರ ತಂದೆ ತೂಗುದೀಪ  ಶ್ರೀನಿವಾಸ್ ಅವರು ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದರೂ ಸಹ ಮೊದಲಿಗೆ ದರ್ಶನ್ ಅವರು ಸಿನಿಮಾರಂಗಕ್ಕೆ ಲೈಟ್ ಬಾಯ್ ಆಗಿ ಸೇರಿಕೊಂಡರು. ಸಿನಿಮಾ ಬದುಕಿನ ಪ್ರಾರಂಭದಲ್ಲಿ ಹಲವು ಕಷ್ಟ ಅವಮಾನಗಳನ್ನು ಅನುಭವಿಸಿದರು.



ದರ್ಶನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ಮೊದಲು ಕಿರುತೆರೆಗಳ ಧಾರಾವಾಹಿಯಲ್ಲಿ ನಟಿಸುತ್ತ ಇದ್ದರು. ನಂತರ 1990 ರಲ್ಲಿ ಸಿನಿಮಾ ಇಂಡಸ್ಟ್ರಿಯ ಬದುಕನ್ನು ಪ್ರಾರಂಭ ಮಾಡಿದರು. 2001 ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.  ಮೆಜೆಸ್ಟಿಕ್ ಸಿನಿಮಾವು ದರ್ಶನ್ ಅವರ ಬದುಕಿನ ತಿರುವು ಕೊಟ್ಟ ಸಿನಿಮಾ ಆಗಿದೆ. ತದ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿ ಅಭಿನಯಿಸಿ, ಯಶಸ್ವಿ ಆಗಿ ಇದರ ಮೂಲಕ ಸುದ್ದಿಯಾಗಿ ದರ್ಶನ್ ಅವರು ಯಶಸ್ವಿ ನಾಯಕ ನಟ ಎಂದು ಎನಿಸಿ ಕೊಂಡಿದ್ದಾರೆ. ಅದಲ್ಲದೇ,  2006 ರಲ್ಲಿ ತಮ್ಮ ತಂದೆ ಅವರ ಹೆಸರಿನಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಕೂಡ ಆರಂಭ ಮಾಡಿದರು. ಹೀಗೆ ಯಶಸ್ವಿ ಕಾಣುತ್ತ ಇರುವ ದರ್ಶನ್ ಅವರು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲು ಒಪ್ಪಿ ಸಹಿ ಹಾಕಿದ್ದಾರೆ ಹಾಗೂ ಕೆಲವು ಸಿನಿಮಾಗಳ ಚಿತ್ರೀಕರಣವು ನಡೆಯುತ್ತಲಿವೆ. ಅದರಲ್ಲಿ ಒಂದಾದ ಚಿತ್ರ ಕ್ರಾಂತಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯ ಕ್ರಾಂತಿ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಾ ಬ್ಯುಸಿ ಆಗಿದ್ದಾರೆ.

ಈ ಸಿನಿಮಾವು ದರ್ಶನ್ ಅವರ 55 ನೇ ಸಿನಿಮಾವಾಗಿದ್ದು, ಕಾಂತ್ರಿ ಸಿನಿಮಾವು ಈಗಾಗಲೇ ಬಹು ನಿರೀಕ್ಷೆ ಸೃಷ್ಟಿಸಿದೆ. ಕ್ರಾಂತಿ ಸಿನಿಮಾದ ಪ್ರಾಜೆಕ್ಟ್ ಬರೋಬ್ಬರಿ 75 ಕೋಟಿ ಬಜೆಟ್ ನ‌ ಸಿನಿಮಾ ಆಗಿದೆ.‌ ಈಗಾಗಲೇ‌ ಕಾಂತ್ರಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ದರ್ಶನ್‌ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾವನ್ನು ತೆರೆ ಮೇಲೆ ಕಾಣಲು ಕಾತುರದಿಂದ ಕಾಯುತ್ತಾ ಇದ್ದಾರೆ. ಕೆಲವು ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರುಗಳ ಫೋಟೋ ಎಲ್ಲೆಡೆ ವೈರಲ್ ಆಗಿದ್ದು,. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕ್ರಾಂತಿ ಸಿನಿಮಾ ಸೆಟ್‌ನಲ್ಲಿ ಕಾಣಿಸಿ ಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬಂದಿದೆ. ಕ್ರಾಂತಿ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಕಾಣಿಸಲಿದ್ದಾರೆ, ಈ ಚಿತ್ರ ತಂಡಕ್ಕೆ ಸೇರಿಕೊಂಡಿದ್ದಾರೆ ಎಂಬಂತೆ ಸೆಟ್‌ನಲ್ಲಿ ರವಿಚಂದ್ರನ್ ಮತ್ತು ದರ್ಶನ್ ಒಟ್ಟಿಗೆ ತೆಗೆಸಿಕೊಂಡಿರುವ ಫೋಟೊ ವೈರಲ್ ಆಗಿತ್ತು.

ಅವರ ಜೊತೆಗೆ ಕ್ರಾಂತಿ ಚಿತ್ರದ ನಿರ್ಮಾಪಕ ಸುಪ್ರಿತ್ ಕೂಡ ಇದ್ದರು. ಈ ಸಿನಿಮಾದಲ್ಲಿ ರವಿಚಂದ್ರನ್ ಹೇಗೆ ಕಾಣಿಸಿ ಕೊಂಡಿದ್ದಾರೆ ಎಂಬ ಲುಕ್ ರಿವೀಲ್ ಆಗಿತ್ತು. ದರ್ಶನ್ ಅವರ ಸಿನಿಮಾದಲ್ಲಿ ರವಿಚಂದ್ರನ್ ಅವರು ನಟಿಸುತ್ತಿರುವುದಕ್ಕೆ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸದ್ಯಕ್ಕೆ ದರ್ಶನ್ ಅವರು ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಅಗಿದ್ದು, ಈ ಸಿನಿಮಾದಲ್ಲಿ ನಟಿಸಲು ದರ್ಶನ್ ಅವರು ಪಡೆದಿರುವ ಸಂಭಾವನೆ ಮೊತ್ತ ದೊಡ್ಡ ಮಟ್ಟಿಗೆ ಸುದ್ದಿ ಆಗುತ್ತಿದೆ. ಈ ಸಿನಿಮಾದಲ್ಲಿ ದರ್ಶನ್ ಅವರು ಪಡೆದ ಸಂಭಾವನೆ ಎಷ್ಟು ಎಂದು ಕೇಳಿದರೆ ನಿಜಕ್ಕೂ ಅಚ್ಚರಿ ಯಾಗುತ್ತದೆ. ಹೌದು,  ಕ್ರಾಂತಿ ಸಿನಿಮಾದ ಒಟ್ಟು ಬಜೆಟ್ ಬರೋಬ್ಬರಿ 75 ಕೋಟಿಗಳು ಎನ್ನಲಾಗಿದ್ದು, ಈ ಚಿತ್ರಕ್ಕೆ ತಗುಲುವ ಬಜೆಟ್ ಗೆ ಶೈಲಜಾ ನಾಗ್ ಹಾಗು ಬಿ ಸುರೇಶ್ ಅವರು ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ. ಈ ಹಿಂದೆ, ರಾಬರ್ಟ್ ಸಿನಿಮಾದಲ್ಲಿ ಅಭಿನಯಿಸಿದ ಡಿ ಬಾಸ್ ದರ್ಶನ್ ಅವರು ಬರೋಬ್ಬರಿ 10 ಕೋಟಿಗಳ ಸಂಭಾವನೆಯನ್ನು ಪಡೆದಿದ್ದರು, ಈಗ ಬಹು ನಿರೀಕ್ಷೆಯ ಕ್ರಾಂತಿ ಸಿನಿಮಾಕ್ಕೆ ಡಿ ಬಾಸ್ ದರ್ಶನ್ ಅವರು ಪಡೆದಿರುವ ಸಂಭಾವನೆ ಬರೋಬ್ಬರಿ ಸುಮಾರು 20 ಕೋಟಿಗಳು ಎಂಬ ಸುದ್ದಿ ಹರಡಿದ್ದು, ಸದ್ಯಕ್ಕೆ ದರ್ಶನ್ ಅವರ ಸಂಭಾವನೆ ವಿಚಾರವು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

Cinema Updates Tags:Challenging star darshan, Kranthi movie
WhatsApp Group Join Now
Telegram Group Join Now

Post navigation

Previous Post: ಅಪ್ಪು ಟ್ರೋಫಿ ನೋಡಿದ ತಕ್ಷಣ ಭಾವುಕರಾಗಿ ಕಣ್ಣೀರಿಟ್ಟ ಶಿವಣ್ಣ.! ವೇದಿಕೆ ಮೇಲೆ ಹೇಳಿದ್ದೇನು ನೋಡಿ.
Next Post: ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿದ ಡಿ-ಬಾಸ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore