Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದಿನಭವಿಷ್ಯ:- ಆಂಜನೇಯನ ಕೃಪಕಟಾಕ್ಷ ಈ 3 ರಾಶಿಯವರ ಮೇಲಿದೆ, ಅನಿರೀಕ್ಷಿತ ಧನಲಾಭ, ಅಂದುಕೊಂಡ ಕೆಲಸದಲ್ಲಿ ಜಯ

Posted on June 3, 2023June 3, 2023 By Kannada Trend News No Comments on ದಿನಭವಿಷ್ಯ:- ಆಂಜನೇಯನ ಕೃಪಕಟಾಕ್ಷ ಈ 3 ರಾಶಿಯವರ ಮೇಲಿದೆ, ಅನಿರೀಕ್ಷಿತ ಧನಲಾಭ, ಅಂದುಕೊಂಡ ಕೆಲಸದಲ್ಲಿ ಜಯ

 

ಮೇಷ ರಾಶಿ:- ಇಂದು ನೀವು ಹಾಕಿಕೊಂಡ ಯೋಜನೆ ಪ್ರಕಾರ ಕೆಲಸಗಳನ್ನು ಮುಗಿಸಿ, ಇದರಿಂದ ನಿಮಗೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಇದರಿಂದ ಮನೆಯ ವಾತಾವರಣವೂ ಉತ್ತಮವಾಗುತ್ತದೆ. ಇಂದು ಪ್ರಚಲಿತ ವಿದ್ಯಮಾನಗಳ ಬಗ್ಗೆ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ.
ಶುಭ ಸಂಖ್ಯೆ: 03.

ವೃಷಭ ರಾಶಿ:- ವಿವಾದಗಳು ಇತ್ಯರ್ಥಗೊಂಡು ಮಾನಸಿಕ ನೆಮ್ಮದಿ ಮೂಡುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಭಾಗ್ಯ ಸಿಗುತ್ತದೆ. ಇದು ಮಾತ್ರ ಅಲ್ಲದೆ ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದರೂ ಕೂಡ ನಿಮ್ಮ ಕಾರ್ಯ ವೈಖರಿ ಬಗ್ಗೆ ಇಂದು ಮೇಲಾಧಿಕಾರಿಗಳಿಂದ ಪ್ರಶಂಸೆ ಕೇಳಿ ಬರುತ್ತದೆ.
ಶುಭ ಸಂಖ್ಯೆ : 01.

ಮಿಥುನ ರಾಶಿ:- ಆಪ್ತರೊಂದಿಗೆ ವಿಚಾರ ವಿನಿಮಯ ನಡೆಸುತ್ತೀರಿ. ಬಹಳ ದಿನಗಳಿಂದ ಕಾಡುತ್ತಿದ್ದ ಆರ್ಥಿಕ ಸಮಸ್ಯೆಗೆ ಮತ್ತು ಹಳೆಯ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಇಂದು ಓದಿನ ಬಗ್ಗೆ ಆಸಕ್ತಿ ಹೆಚ್ಚುತ್ತದೆ, ಮತ್ತು ಪೋಷಕರು ತಮ್ಮ ಮಕ್ಕಳ ಬಗ್ಗೆ ಶುಭ ಸುದ್ದಿಯನ್ನು ಕೇಳುತ್ತಾರೆ.
ಶುಭ ಸಂಖ್ಯೆ : 07.

ಕಟಕ ರಾಶಿ:- ಬ್ಯಾಂಕ್ ಮತ್ತು ಹಣಕಾಸಿನ ವಹಿವಾಟು ನಡೆಸುವವರಿಗೆ ಇಂದು ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಲಾಭ ಬರುವ ಸಾಧ್ಯತೆ ಇದೆ. ಆದರೆ ಚಿನ್ನ ಬೆಳ್ಳಿ ವ್ಯಾಪಾರ ಮಾಡುವವರಿಗೆ ವ್ಯವಹಾರದಲ್ಲಿ ಸ್ವಲ್ಪ ತೊಡಕುಗಳು ಕಾಡುತ್ತವೆ. ಆದರೂ ಕುಟುಂಬದಲ್ಲಿ ಶಾಂತಿಯುತ ವಾತಾವರಣ ಇರುತ್ತದೆ.
ಶುಭ ಸಂಖ್ಯೆ : 02.

ಸಿಂಹ ರಾಶಿ:- ಕಳೆದು ಹೋದ ವಸ್ತು ಅಥವಾ ಬಹಳ ಹಿಂದೆ ಬೇರೆಯವರು ನಿಮ್ಮಿಂದ ಪಡೆದ ವಸ್ತು ಎಂದು ವಾಪಸ್ಸು ಬರುತ್ತದೆ. ಚರಾಸ್ತಿಗಳ ಖರೀದಿಯನ್ನು ಮಾಡುವಂತಹ ಯೋಗ ಕೂಡ ಈ ದಿನ ಇದೆ. ದೇವತಾ ಕಾರ್ಯಗಳಲ್ಲಿ ಕೂಡ ಭಾಗವಹಿಸುತ್ತೀರಿ ಮತ್ತು ಇದರಿಂದ ಮಾನಸಿಕ ನಿಮ್ಮದಿ ಪಡೆದುಕೊಳ್ಳುತ್ತೀರಿ.
ಶುಭ ಸಂಖ್ಯೆ : 8.

ಕನ್ಯಾ ರಾಶಿ:- ಸಾಹಿತ್ಯ ಸಂಗೀತ ಮುಂತಾದ ಕಲಾ ನೈಪುಣ್ಯತೆ ಹೊಂದಿರುವ ವ್ಯಕ್ತಿಗಳ ಜೊತೆ ದಿನಪೂರ್ತಿ ಒಡನಾಟ ಇರುತ್ತದೆ. ನಿಮ್ಮಲ್ಲಿ ಹೊಸ ಉತ್ಸಾಹವನ್ನು ಉಂಟು ಮಾಡುತ್ತದೆ. ರಿಯಲ್ ಎಸ್ಟೇಟ್ ಮತ್ತು ಭೂ ಸಂಬಂಧಿ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಆಗುವ ಸಾಧ್ಯತೆಗಳು ಇವೆ.
ಶುಭ ಸಂಖ್ಯೆ : 06.

ತುಲಾ ರಾಶಿ:- ಇಂದು ನಿಮ್ಮ ಆಸ್ತಿಯನ್ನು ಪಡೆದುಕೊಳ್ಳುತ್ತೀರಿ. ವಾಹನಗಳ ಮಾರಾಟ ಮಾಡುವವರು ಮತ್ತು ರಿಪೇರಿ ಮಾಡುವವರಿಗೆ ಹೆಚ್ಚಿನ ವ್ಯಾಪಾರ ನಡೆದು ಅಧಿಕ ಲಾಭ ಆಗುತ್ತದೆ. ಕಾನೂನಿಗೆ ಸಂಬಂಧಪಟ್ಟ ವ್ಯವಹಾರಿಗಳಿಗೆ ಕೈ ಹಾಕುವುದಾದರೆ ಸಂಬಂಧಪಟ್ಟವರ ಸಲಹೆ ಪಡೆದು ಮುಂದುವರೆಯಿರಿ.
ಶುಭ ಸಂಖ್ಯೆ: 03.

ವೃಶ್ಚಿಕ ರಾಶಿ:- ಮನೆಯಲ್ಲಿ ಸಂತೋಷಕರ ವಾತಾವರಣ ಇರುತ್ತದೆ. ಉತ್ತಮವಾದ ಹಣಕಾಸಿನ ಪರಿಸ್ಥಿತಿ ಕೂಡ ಇರುತ್ತದೆ. ಸರ್ಕಾರಿ ನೌಕರರಿಗೆ ಬಿಡುವಿನ ದಿನವಾಗಿದ್ದರು ಉನ್ನತ ಹುದ್ದೆಯಲ್ಲಿ ಇರುವವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಚಾಣಾಕ್ಷತನದಿಂದ ಸಮಸ್ಯೆ ಪರಿಹಾರ ಮಾಡಿಕೊಳ್ಳುವಿರಿ.
ಶುಭ ಸಂಖ್ಯೆ : 09.

ಧನಸ್ಸು ರಾಶಿ:- ಕ್ರೀಡಾಪಟುಗಳಿಗೆ ಉತ್ತೇಜನ ಸಿಗುವ ಸಾಧ್ಯತೆಗಳು ಇವೆ, ಉತ್ತಮವಾಗಿ ಸಾಧನೆ ಮಾಡುವ ಅವಕಾಶಗಳು ಸೃಷ್ಟಿಯಾಗುತ್ತವೆ. ವಿಪರೀತವಾದ ಅನಾವಶ್ಯಕ ಮಾತುಗಳಿಂದ ನಿಮ್ಮ ಕೆಲಸಕ್ಕೆ ತೊಂದರೆ ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ, ಎಲ್ಲೂ ಸಹ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಬೇಡಿ.
ಶುಭ ಸಂಖ್ಯೆ : 04.

ಮಕರ ರಾಶಿ:- ಕುಟುಂಬದ ಸದಸ್ಯರ ಜೊತೆ ಮೃದುವಾಗಿ ವರ್ತಿಸಿರಿ. ಮನಸ್ಸಿನಲ್ಲಿ ಎಷ್ಟೇ ದುಗುಢಗಳು ಇದ್ದರೂ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತೀರಿ. ಈ ದಿನ ನಿಮ್ಮ ಹಣಕಾಸಿನ ಆದಾಯವನ್ನು ತಂದು ಕೊಡುವ ಹೊಸ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ.
ಶುಭ ಸಂಖ್ಯೆ : 01.

ಕುಂಭ ರಾಶಿ:- ವರಮಾನದಲ್ಲಿ ಗಣನೀಯ ಸುಧಾರಣೆ ಇದೆ. ವಿದೇಶದಲ್ಲಿರುವ ಮಕ್ಕಳ ಅಥವಾ ಸ್ನೇಹಿತರ ಅಥವಾ ಸಂಬಂಧಿಕರ ಆಗಮನಕ್ಕಾಗಿ ಕಾಯುವಿರಿ. ಇಂದು ಗೃಹಲಂಕಾರ ವಸ್ತುಗಳ ಖರೀದಿಗೆ ಹೆಚ್ಚಿನ ಸಮಯವನ್ನು ಕೊಡುತ್ತೀರಿ. ಇದು ನಿಮಗೆ ಬಹಳ ಆನಂದವನ್ನು ಕೂಡ ಉಂಟು ಮಾಡುತ್ತದೆ.
ಶುಭ ಸಂಖ್ಯೆ : 07.

ಮೀನ ರಾಶಿ:- ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಗಳು ಇವೆ. ಸಂಶೋಧನೆಗೆ ಸಂಬಂಧಪಟ್ಟ ಉದ್ಯೋಗ ಮಾಡುತ್ತಾ ಇರುವವರಿಗೆ ಕೆಲಸದಲ್ಲಿ ಪ್ರಗತಿ ದೊರೆಯುತ್ತದೆ ಇದರ ಜೊತೆಗೆ ಈ ದಿನ ನೀವು ಮಾಡುವ ಕೆಲಸಗಳಿಗೆ ಪ್ರಶಂಸೆಯೂ ಕೂಡ ಸಿಗುತ್ತದೆ. ಈ ದಿನ ಬಹಳ ನಿರಾಳವಾಗಿ ಇರುತ್ತೀರಿ.
ಶುಭ ಸಂಖ್ಯೆ : 02.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

Astrology
WhatsApp Group Join Now
Telegram Group Join Now

Post navigation

Previous Post: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ. ಬೇಕಾಗುವ ದಾಖಲೆ & ಅರ್ಹತೆಗಳೇನು ನೋಡಿ.!
Next Post: ಕಾರ್ಮಿಕರ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್, ಲೇಬರ್ ಕಾರ್ಡ್ ಹೊಂದಿರುವವರ ನೋಡಲೇಬೇಕಾದ ಸುದ್ದಿ ಇದು

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore