ದುಬಾರಿ ಬೆಲೆಯ ಕ್ಲಾಸಿ ಗಿಫ್ಟ್ ನೀಡಿದ ಶಿವಣ್ಣ, ಗಿಫ್ಟ್ ನೋಡಿ ಭಾವುಕರಾದ ಅನುಶ್ರೀ ಈ ವಿಡಿಯೋ ನೋಡಿ.

ಅನುಶ್ರೀ ಅವರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಮಾತಿನಮಲ್ಲಿ ಎಂದೇ ಫೇಮಸ್ ಆಗಿರುವಂತಹ ಅನುಶ್ರೀ ಅವರು ಯಾವುದೇ ಕಾರ್ಯಕ್ರಮಗಳಾದರು ಆಂಕರಿಂಗ್ ನಡೆಸಿಕೊಡಲು ಮುಂದಾಗುತ್ತಾರೆ. ಟಿವಿ ಶೋಗಳು, ಸಿನಿಮಾ ಪ್ರಮೋಷನ್ ಗಳು, ಸ್ಟಾರ್ ನಟರು ಮಾತ್ತು ನಟಿಯರ ಇಂಟರ್ವ್ಯೂ ಇದೆಲ್ಲವನ್ನು ನಡೆಸಿಕೊಡಲು ಇವರು ಪರ್ಫೆಕ್ಟ್ ಎಂದು ಹಲವರ ಹೇಳುತ್ತಾರೆ. ಸ್ಟಾರ್ ಸುವರ್ಣ, ಕಲರ್ಸ್ ಕನ್ನಡ, ಜೀ ಕನ್ನಡ ಹೀಗೆ ಹಲವಾರು ಚಾನೆಲ್ ಗಳಲ್ಲಿ ನಿರೂಪಣೆಯನ್ನು ಮಾಡಿರುವಂತಹ ಅವರು ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಇದ್ದಲ್ಲೆಲ್ಲ ಖುಷಿ ಎನ್ನುವುದು ಸದಾ ತುಂಬಿರುತ್ತದೆ ಅವರು ಯಾವುದೇ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಸಹಾಯ ಎಲ್ಲರಿಗೂ ಮನರಂಜನೆಯನ್ನು ನೀಡುವುದು ಖಂಡಿತ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿ ಹಲವಾರು ಸ್ಪರ್ಧಿಗಳು ತಮ್ಮ ಡಾನ್ಸ್ ನ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ ಈ ಒಂದು ಕಾರ್ಯಕ್ರಮದಲ್ಲಿ ಕ್ರೇಜಿ ಕ್ವೀನ್ ರಕ್ಷಿತ, ಅರ್ಜುನ್ ಜನ್ಯ, ಹಾಗೆಯೇ ಚಿಹ್ನೆ ಮಾಸ್ಟರ್ ಜಡ್ಜ್ ಆಗಿ ನಮ್ಮೆಲ್ಲರ ಮುಂದೆ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ನಿಮ್ಮೆಲ್ಲರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸ್ಪೆಷಲ್ ಜಡ್ಜ್ ಆಗಿ ಬರುತ್ತಿದ್ದಾರೆ. ಶಿವಣ್ಣ ಅವರು ಎಲ್ಲರನ್ನೂ ಪ್ರೋತ್ಸಾಹಿಸುತ್ತಾ ತಮಗೆ ಡ್ಯಾನ್ಸ್‌ ಮೇಲೆ ಇರುವಂತಹ ಒಲವನ್ನು ಇದರ ಮೂಲಕ ತೋರಿಸುತ್ತಿದ್ದಾರೆ. ಇದೀಗ ಶಿವಣ್ಣ ಅವರು ಅನುಶ್ರೀಗೆ ಒಂದು ಮರೆಯಲಾಗದಂತಹ ಗಿಫ್ಟ್ ಅನ್ನು ನೀಡಿದ್ದಾರೆ ಈ ಒಂದು ಶೋ ನಡೆಯುವಂತಹ ಸಂದರ್ಭದಲ್ಲಿ ಶಿವಣ್ಣ ಅವರು ಧರಿಸಿದಂತಹ ಜಾಕೆಟ್ ಸುಂದರವಾಗಿತ್ತು ಈ ಬಗ್ಗೆ ಕಮೆಂಟ್ ಮಾಡಿ ತುಂಬಾ ಚೆನ್ನಾಗಿದೆ ಎಂದು ಅನುಶ್ರೀ ಹೇಳುತ್ತಾರೆ ಶಿವಣ್ಣ ಅವರು ನಿನಗೆ ಜಾಕೆಟ್ ಕೊಡುತ್ತೇನೆ ಎಂದು ಹೇಳುತ್ತಾರೆ.

ಆಗ ಅನುಶ್ರೀ ಅವರು ಸುಮ್ಮನೆ ಹಾಗೆ ಹೇಳಿರುತ್ತಾರೆ ಎಂದುಕೊಳ್ಳುತ್ತಾರೆ ಆದರೆ ಶೋ ಮುಗಿದ ನಂತರ ಶಿವರಾಜ್ ಕುಮಾರ್ ಅವರು ತಮ್ಮ ಆಟೋಗ್ರಾಫ್ ನೊಂದಿಗೆ ಜಾಕೆಟ್ ಅನ್ನು ಅನುಶ್ರೀ ಅವರಿಗೆ ತಮ್ಮ ಕೈಯಾರ ತೊಡಿಸುತ್ತಾರೆ. ಈ ಒಂದು ಖುಷಿ ವಿಚಾರವನ್ನು ಅನುಶ್ರೀ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಜೊತೆಯಲ್ಲೇ ತುಂಬಾ ಸಂತೋಷದಿಂದ ಹಂಚಿಕೊಂಡಿದ್ದಾರೆ. ಈ ರೀತಿಯಾದಂತಹ ಒಂದು ಮಾನವೀಯತೆ ಯಲ್ಲರಿಗೂ ಸಹ ಇರುವುದಿಲ್ಲ ಶಿವಣ್ಣ ಯಾವಾಗಲೂ ನಮ್ಮ ಮನಸ್ಸಿನಲ್ಲಿ ದೊಡ್ಡ ಸ್ಥಾನದಲ್ಲಿರುತ್ತಾರೆ. ಅಣ್ಣ ಅವರ ಮಕ್ಕಳಾದ ಶಿವಣ್ಣ ಅವರು ಅವರಂತೆಯೇ ಉದಾರ ಮನಸ್ಥಿತಿಯನ್ನು ಹೊಂದಿರುವವರು ಎಂದು ಹೇಳಿಕೊಂಡಿದ್ದಾರೆ.

ಶಿವಣ್ಣ ಅವರು ತಮ್ಮ ಜಾಕೆಟ್ ನಲ್ಲಿ ವಿತ್ ಲಾಟ್ಸ್ ಆಫ್ ಲವ್ ಡಿಯರ್ ಫ್ರೆಂಡ್ ಅನು ಎಂದು ಬರೆದು ಜಾಕೆಟ್ ನೀಡಿದ್ದಾರೆ. ಈ ಒಂದು ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ ವಿಡಿಯೋಗಳನ್ನು ನೋಡಿದಂತಹ ಅಭಿಮಾನಿಗಳು ಶಿವಣ್ಣ ಅವರ ಮೇಲಿನ ಗೌರವ ಇನ್ನೂ ಹೆಚ್ಚು ಮಾಡಿಕೊಂಡಿದ್ದಾರೆ. ಶಿವಣ್ಣ ಅವರು ಇದೀಗ ವೇದ ಮತ್ತು ಬೈರಾಗಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಅಷ್ಟೇ ಅಲ್ಲದೆ ಯೋಗರಾಜ್ ಭಟ್ ನಿರ್ಮಾಣದ ಚಿತ್ರಕ್ಕೆ ಸಿನಿಮಾದಲ್ಲಿ ಶಿವಣ್ಣ ಅವರು ಮೊದಲಿಗೆ ಅಭಿನಯ ಮಾಡುತ್ತಿದ್ದಾರೆ, ಈ ಒಂದು ಸಿನಿಮಾಗೆ ರಾಕ್ಲೈನ್ ವೆಂಕಟೇಶ್ ಅವರು ನಿರ್ಮಾಪಕರಾಗಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಶಿವಣ್ಣ ಅವರು ಸ್ಪೆಷಲ್ ಗೆಸ್ಟ್ ಆಗಿರುವುದು ಎಲ್ಲರಿಗೂ ಸಹ ಖುಷಿಯ ವಿಚಾರವಾಗಿದೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

Leave a Comment

WhatsApp Group Join Now
Telegram Group Join Now