ಹಳೆ ದ್ವೇ’ಷ ಮರೆತು ಮತ್ತೆ ಒಂದಾದ ಡಿ ಬಾಸ್ ಮತ್ತು ಕಿಚ್ಚ ವೈರಲ್ ಆಗುತ್ತಿದೆ ಇಬ್ಬರು ಒಟ್ಟಾಗಿರುವ ಫೋಟೋಸ್.

ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಎರಡು ಕಣ್ಣುಗಳಿದ್ದಂತೆ. ಅಭಿಮಾನಿಗಳ ವಿಷಯದಲ್ಲೂ ಅಷ್ಟೇ, ಇಬ್ಬರಿಗೂ ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳು ಸಮವಾಗಿ ಕರ್ನಾಟಕದಲ್ಲಿ ಇದ್ದಾರೆ. ಇಬ್ಬರು ಸಹ ಒಂದೇ ಸಮಯದಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ ಇವರಿಬ್ಬರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ ಎನ್ನುವ ನೋವು ಅಭಿಮಾನಿಗಳಿಗೆ ಇನ್ನು ಕಾಡುತ್ತಿದೆ. ಒಬ್ಬರಿಗೊಬ್ಬರು ಸಿನಿಮಾಗಳಲ್ಲಿ ಪೈಪೋಟಿ ಕೊಡುತ್ತಿದ್ದರು ಕೂಡ ಇವರಿಬ್ಬರ ನಡುವೆ ಮೌನವಾದ ಸ್ನೇಹ ಸಂಬಂಧವಿತ್ತು. ಮೊದನಿಂದಲೂ ಎಲ್ಲೂ ಒಟ್ಟಾಗಿ ಕಾಣಿಸಿಕೊಳ್ಳದೆ ಒಬ್ಬರ ಬಗ್ಗೆ ಒಬ್ಬರು ಮಾತನಾಡದೆ ಇಬ್ಬರು ಕೂಡ ಮೌನವಾಗಿಯೇ ಸಂಬಂಧವನ್ನು ಗೌರವಿಸುತ್ತಿದ್ದರು. ಆದರೆ ಒಮ್ಮೆ ಡಿ ಬಾಸ್ ಅವರ ಬದುಕಿನಲ್ಲಿ ನಡೆದ ದುರ್ಘಟನೆಯಿಂದ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿತ್ತು. ಆ ಪರಿಸ್ಥಿತಿಯಲ್ಲಿ ಅವರ ಕೈ ಹಿಡಿದು ಜೊತೆ ನಡೆದರು ಸುದೀಪ್.

ಇದಾದ ಬಳಿಕ ಇಬ್ಬರ ನಡುವಿನ ಸ್ನೇಹ ಬಾಂಧವ್ಯ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿಯಿತು. ಎಲ್ಲಾ ವೇದಿಕೆಗಳಲ್ಲೂ ಒಬ್ಬರನ್ನೊಬ್ಬರು ಮೆಚ್ಚಿ ಮಾತನಾಡುತ್ತಿದ್ದರು. ಕೈಕೈ ಹಿಡಿದು ಕುಚಿಕು ಕುಚಿಕು ಎಂದು ನೃತ್ಯ ಕೂಡ ಮಾಡಿದ್ದರು. ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಹಾಗೂ ವೈಯುಕ್ತಿಕ ಕಾರ್ಯಕ್ರಮಗಳಲ್ಲೂ ಕೂಡ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ನಡೆದ ಸಿಸಿಎಲ್ ನಲ್ಲೂ ಕೂಡ ಇಬ್ಬರು ಟೀಮ್ ನಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಕಿಚ್ಚ ಸುದೀಪ್ ಅವರೇ ಆಗಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಆಗಲಿ ಇಬ್ಬರು ಕೂಡ ಸ್ನೇಹಕ್ಕೆ ತುಂಬಾ ಮಹತ್ವದ ಸ್ಥಾನ ಕೊಡುತ್ತಾರೆ ಹಾಗಾಗಿ ಇಷ್ಟು ವರ್ಷದಿಂದ ಮೌನವಾಗಿದ್ದ ಅವರ ಸಂಬಂಧ ಆಗ ಬಹಳ ಗಟ್ಟಿಯಾಗಿತ್ತು. ದರ್ಶನ್ ಅವರ ಸಂಗೊಳ್ಳಿ ರಾಯಣ್ಣ ಸಿನಿಮಾಗೂ ಕೂಡ ಸುದೀಪ ಅವರು ಇಂಟರ್ಡಕ್ಷನ್ ಗೆ ವಾಯ್ಸ್ ಕೂಡ ಕೊಟ್ಟಿದ್ದರು.

ಅಣ್ಣ ತಮ್ಮಂದಿರ ಹಾಗೆ ಅನ್ಯೋನ್ಯವಾಗಿದ್ದ ಇವರಿಬ್ಬರ ಸ್ನೇಹಕ್ಕೆ ಯಾರ ಕೆಟ್ಟ ದೃಷ್ಟಿ ಬಿದ್ದಿತ್ತೋ ಏನೋ, ಸುದೀಪ್ ಅವರೇ ಮೆಜೆಸ್ಟಿಕ್ ಸಿನಿಮಾಕ್ಕೆ ದರ್ಶನ್ ಅವರನ್ನು ರೆಫರ್ ಮಾಡಿದ್ದು ಎಂದು ಸುದೀಪ್ ಹೇಳಿಕೆ ಕೊಟ್ಟಿದ್ದಾರೆ ಎನ್ನುವ ವಿಷಯಕ್ಕೆ ಕೋಪ ಮಾಡಿಕೊಂಡ ದರ್ಶನ್ ಅವರು ನಾವಿಬ್ಬರು ಸ್ನೇಹಿತರೆ ಅಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಕೆ ಕೊಟ್ಟೇ ಬಿಟ್ಟರು. ಸುದೀಪ್ ಅವರೇ ದರ್ಶನ್ ಅವರನ್ನು ಹಲವು ಬಾರಿ ಸುಧಾರಿಸುವ ಪ್ರಯತ್ನ ಮಾಡಿದರೂ ದರ್ಶನ್ ಮಾತ್ರ ಮತ್ತೆ ಮನಸ್ಸು ಮಾಡಲಿಲ್ಲ. ಜೊತೆಗೆ ಕೆಲವು ಕಿಡಿಗೇಡಿಗಳು ಇವರಿಬ್ಬರ ನಡುವೆ ಇದ್ದ ಮನಸ್ತಾಪವನ್ನು ಹೆಚ್ಚಾಗುವಂತೆ ಮಾಡಿದರು. ಮತ್ತು ಫ್ಯಾನ್ಸ್ ಕಿತ್ತಾಟ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಗಳ ನಡುವಿನ ಕೆಸರೆರಚಾಟ ಇಬ್ಬರ ನಡುವೆ ಇದ್ದ ಅಂತರವನ್ನು ಹೆಚ್ಚಿಸಿ ಇಲ್ಲಿಯವರೆಗೂ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳದಂತೆ ಮಾಡಿದೆ.

ಆದರೂ ಕೂಡ ಸುದೀಪ್ ಅವರು ದರ್ಶನ್ ಇನ್ನೂ ನನ್ನ ಸ್ನೇಹಿತ ಎಂದು ಹೇಳಿಕೊಳ್ಳುತ್ತಿದ್ದಾರೆ. ಜೊತೆಗೆ ಇಬ್ಬರ ಪ್ರಾಮಾಣಿಕ ಅಭಿಮಾನಿಗಳು ಸಹ ಮೊದಲಿನಂತೆ ಒಂದಾದರೆ ಸಾಕು ಎಂದು ಕಾಯುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಕ್ರಾಂತಿ ಸಿನಿಮಾದ ಪೋಸ್ಟರ್ ಇರುವ ಫೋಟೋವನ್ನು ಸುದೀಪ್ ಅವರು ಹಾಕಿಕೊಂಡಿರುವ ಫೋಟೋ ಹಾಗೂ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಫಸ್ಟ್ ಲುಕ್ ಫೋಟೋ ಇರುವ ಶರ್ಟ್ ಅನ್ನು ದರ್ಶನ್ ಹಾಕಿಕೊಂಡು ಇವರಿಬ್ಬರು ಒಟ್ಟಿಗೆ ನಿಂತಿರುವ ಫೋಟೋ ಒಂದು ವೈರಲ್ ಆಗುತ್ತಿದೆ. ಸಿನಿಮಾ ಪ್ರಚಾರಕ್ಕಾಗಿ ಇವರಿಬ್ಬರು ಒಟ್ಟಿಗೆ ಆಗಿದ್ದಾರ ಎನ್ನುವ ಖುಷಿ ಅಭಿಮಾನಿಗಳಿಗೆ ಇದೆ ಆದರೆ ಇದು ಕಲಾವಿದನೊಬ್ಬನ ಕೈಚಳಕದಲ್ಲಿ ಮೂಡಿ ಬಂದಿರುವ ಫೋಟೋ ಆಗಿದೆ. ಇದು ನೈಜವಾಗಿ ಮೂಡಿ ಬಂದಿದ್ದರೂ ನಿಜವಲ್ಲವಲ್ಲ ಎನ್ನುವ ಬೇಸರ ಮಾತ್ರ ಕಡಿಮೆಯಾಗಿಲ್ಲ. ಸುದೀಪ್ & ದರ್ಶನ್ ಒಂದಾಗಬೇಕಾ.? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಲೈಕ್ & ಶೇರ್ ಮಾಡಿ.

Leave a Comment

WhatsApp Group Join Now
Telegram Group Join Now