ನಿಜವಾದ ಶಿವನ ಕೈ ಇರುವ ಶಿವಲಿಂಗ ಇಂದಿಗೂ ಕೈ ಬೆರಳುಗಳು ಅಲಗಾಡುತ್ತೆ.! ಈ ಅದ್ಭುತ ದೃಶ್ಯವನ್ನು ನೀವೇ ನಿಮ್ಮ ಕಣ್ಣಾರೆ ನೋಡಿ.!

ಭಾರತ ದೇಶದಲ್ಲಿ ಲೆಕ್ಕ ಹಾಕಿದರೆ 12 ಲಕ್ಷದ 700 ಉದ್ಭವ ಗೊಂಡ ಶಿವಲಿಂಗವನ್ನು ನೋಡಬಹುದು. ಮತ್ತೊಂದು ಕಡೆ ಪ್ರತಿಷ್ಠಾಪನೆ ಮಾಡಿ ದಂತಹ ಶಿವಲಿಂಗವನ್ನು ಲೆಕ್ಕ ಹಾಕುವುದಕ್ಕೆ ಸಾಧ್ಯವಿಲ್ಲ ಅಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಇದೆ. ಒಂದು ಸರ್ವೆ ಹೇಳುತ್ತದೆ ಪ್ರತಿಷ್ಠಾಪನೆ ಮಾಡಿದಂತಹ ಶಿವಲಿಂಗವು ಪ್ರಪಂಚದಾದ್ಯಂತ ಕಂಡುಬರುತ್ತದೆ. ಭಾರತ ದೇಶದಲ್ಲಿ ಸುಮಾರು ಏಳು ಕೋಟಿಗೂ ಅಧಿಕ ಪ್ರತಿಷ್ಠಾಪನೆ ಗೊಂಡ ಶಿವಲಿಂಗಗಳು ಇದೆ ಎಂದು ಹೇಳಲಾಗಿದೆ.

ಆದರೆ ಈ ದಿನ ನಾವು ಹೇಳಲು ಹೊರಟಿರುವಂತಹ ಈ ಶಿವಲಿಂಗದ ಬಗ್ಗೆ ನೀವೇನಾ ದರೂ ತಿಳಿದರೆ ಈ ಶಿವಲಿಂಗಕ್ಕೆ ನೀವು ಕೂತಲ್ಲಿಯೇ ನಮಸ್ಕಾರವನ್ನು ಮಾಡುತ್ತೀರಿ. ಇದಕ್ಕೆ ಕಾರಣ ಏನು ಎಂದರೆ ಅಷ್ಟೊಂದು ವಿಸ್ಮಯ ಹಾಗೂ ನಿಗೂಢತೆಯಿಂದ ಕೂಡಿದೆ. ಈ ರೀತಿ ಕೈಗಳು ಇರುವಂತಹ ಶಿವಲಿಂಗವನ್ನು ನೀವು ಪ್ರಪಂಚದಾ ದ್ಯಂತ ಎಲ್ಲಿಯೂ ನೋಡಲು ಸಾಧ್ಯವೇ ಇಲ್ಲ.

ಬೆಂಗಳೂರಿನಲ್ಲಿ ನೆಲೆಸಿ ರುವಂತಹ ಪ್ರತಿಯೊಬ್ಬರಿಗೂ ಕೂಡ ಈ ಶಿವಲಿಂಗ ನೆಲೆಸಿರುವಂತಹ ಸ್ಥಳ ಸಮೀಪದಲ್ಲಿಯೇ ಇದೆ. ಹಾಗಾದರೆ ಈ ದೇವಸ್ಥಾನ ಇರುವುದಾ ದರೂ ಎಲ್ಲಿ? ಈ ದೇವಸ್ಥಾನದ ವಿಶೇಷತೆ ಏನು? ಹಾಗೂ ಇದರ ಸಂಪೂರ್ಣವಾದ ವಿಳಾಸ? ಹೀಗೆ ಈ ಎಲ್ಲಾ ಮಾಹಿತಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಈ ದಿನ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಕರ್ನಾಟಕದ ನೆರೆರಾಜ್ಯವಾದ ತಮಿಳುನಾಡಿನಲ್ಲಿ ಇರುವ ಬೃಂದಾಚಲಂ ಎಂಬ ನಗರಕ್ಕೆ ಹೋಗಬೇಕು ಬಂದಾಚಲಂ ನಗರದಿಂದ ರಾಜ್ಯ ಹೆದ್ದಾರಿಯಲ್ಲಿ 74 ಕಿಲೋ ಮೀಟರ್ ಪಯಾಣ ಮಾಡಿದರೆ ತಿರುವಿ ದೈಮರಡು ಎಂಬ ನಗರ ಸಿಗುತ್ತೆ. ಈ ನಗರದಲ್ಲಿ ಶ್ರೀ ಶಂಕರಚಾರ್ಯರ ದೇವಸ್ಥಾನ ಮತ್ತು ಮಠ ಇದೆ ಈ ಮಠದ ಒಳಗಡೆ ಕೈ ಹೊಂದಿರುವ ಶಿವಲಿಂಗ ಉದ್ಭವ ಗೊಂಡಿದೆ. ಶನಿವಾರ ಹಾಗೂ ಭಾನುವಾರದ ದಿನದಂದು ಈ ದೇವಸ್ಥಾನಕ್ಕೆ ಬೆಂಗಳೂರಿನಿಂದ ಸಾಕಷ್ಟು ಜನ ಭಕ್ತರು ಬರುತ್ತಾರೆ.

ಬೆಂಗಳೂರಿನಿಂದ ಈ ದೇವಸ್ಥಾನಕ್ಕೆ ಸುಮಾರು 370 ಕಿಲೋಮೀಟರ್ ಪ್ರಯಾಣ ಮಾಡಬೇಕಾಗುತ್ತದೆ. ತಿರುವಿ ದೈಮರಡು ನಗರದಲ್ಲಿ ಐದು ದೊಡ್ಡ ದೊಡ್ಡ ಚೋಳ ಸಾಮ್ರಾಜ್ಯದವರು ನಿರ್ಮಿಸಿದಂತಹ ದೇವಸ್ಥಾನಗಳು ಕಂಡುಬರುತ್ತದೆ. ಈ ದೇವಸ್ಥಾನಗಳು ನೋಡುವುದಕ್ಕೆ ತುಂಬಾ ಅದ್ಭುತವಾಗಿ ಇದೆ. ಈ ಐದು ದೇವಸ್ಥಾನಗಳು ಕೂಡ 5000 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದೆ. ಕೈಗಳನ್ನು ಹೊಂದಿರುವಂತಹ ಶಿವಲಿಂಗವು ಭಾರತದ ಏಕೈಕ ಮತ್ತು ಪುರಾತನ ಶಿವಲಿಂಗ ಎಂದೇ ಪರಿಗಣಿಸಲಾಗಿದೆ.

ಅಷ್ಟೇ ಅಲ್ಲದೆ ಶಂಕರಾಚಾರ್ಯರ ಪುರಾವೆಯಲ್ಲಿ ಉಲ್ಲೇಖಿಸಿರುವ ಪ್ರಕಾರ ಈ ಶಿವಲಿಂಗವು ಸುಮಾರು 8000 ವರ್ಷಗಳ ಹಳೆಯದ್ದು ಎಂದು ಹೇಳಲಾಗಿದೆ. ಈ ಪುರಾವೆಯ ನ್ನು ಆಧಾರವಾಗಿಟ್ಟುಕೊಂಡು ನೋಡಿದರೆ ಭೂಮಿಯ ಮೇಲೆ ಉದ್ಭವ ಗೊಂಡ ಮೊದಲ ಶಿವಲಿಂಗ ಎಂದು ಹೇಳಿದರು ತಪ್ಪಿಲ್ಲ. ಸುಮಾರು 2500 ವರ್ಷಗಳ ಹಿಂದೆ ಭಾರತ ದೇಶದ ಗುರುಗಳಾಗಿದ್ದಂತಹ ಶ್ರೀ ಆದಿ ಶಂಕರಾಚಾರ್ಯರು ಈ ಶಿವಲಿಂಗ ಇರುವ ಜಾಗಕ್ಕೆ ಬಂದು ತಪಸ್ಸು ಮಾಡಲು ಆರಂಭಿಸುತ್ತಾರೆ.

ನೀವು ಇಲ್ಲಿ ನಿಜವಾಗಲೂ ನೆಲೆಸಿದ್ದರೆ ನೀವು ನನ್ನ ಮುಂದೆ ಬನ್ನಿ ನನಗೆ ಆಶೀರ್ವಾದ ಮಾಡಿ ಎಂದು ಪಟ್ಟು ಬಿಡದೆ ತಪಸ್ಸನ್ನು ಮಾಡುತ್ತಾರೆ. ಶಂಕರಾಚಾರ್ಯರ ಭಕ್ತಿಗೆ ಮೆಚ್ಚಿದoತಹ ಶಿವ ಪರಮಾತ್ಮನು ಲಿಂಗದಿಂದ ತನ್ನ ಕೈಯನ್ನು ಹೊರಗೆ ಹಾಕಿ ಸತ್ಯಂ ಅದ್ವೈತಂ ಎಂದು ಮೂರು ಬಾರಿ ಕೂಗಿ ಆಶೀರ್ವಾದವನ್ನು ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

WhatsApp Group Join Now
Telegram Group Join Now