Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇದ್ದಕ್ಕಿದ್ದ ಹಾಗೆ ಮುಕ್ತಾಯಗೊಂಡ ಜೀ ಕನ್ನಡ ವಾಹಿನಿಯ ಜನಪ್ರಿಯಾ ಧಾರಾವಾಹಿ ನಾಗಿಣಿ-2

Posted on June 5, 2022 By Kannada Trend News No Comments on ಇದ್ದಕ್ಕಿದ್ದ ಹಾಗೆ ಮುಕ್ತಾಯಗೊಂಡ ಜೀ ಕನ್ನಡ ವಾಹಿನಿಯ ಜನಪ್ರಿಯಾ ಧಾರಾವಾಹಿ ನಾಗಿಣಿ-2

ಜೀ ಕನ್ನಡ ವಾಹಿನಿಯು ಕನ್ನಡ ಕಿರುತೆರೆಯಲ್ಲಿ ಹಲವು ಪ್ರಯೋಗಾತ್ಮಕ ಧಾರವಾಹಿಗಳನ್ನು ಪ್ರಸಾರ ಮಾಡುವ ಮೂಲಕ ತನ್ನ ಪ್ರೇಕ್ಷಕರನ್ನು ಯಾವಾಗಲೂ ತನ್ನಡೆಗೆ ಸೆಳೆದು ಇಟ್ಟುಕೊಂಡಿರುತ್ತದೆ. ಇದುವರೆಗೂ ನೂರಾರು ಧಾರಾವಾಹಿಗಳನ್ನು ಪ್ರಸಾರ ಮಾಡಿರುವ ಈ ವಾಹಿನಿಯು ಈಗ ಪ್ರಸಾರ ಮಾಡುತ್ತಿರುವ ಎಲ್ಲಾ ದಾರವಾಹಿಗಳು ಕೂಡ ಧಾರವಾಹಿ ಪ್ರಿಯರ ಫೇವರೆಟ್ ಧಾರಾವಾಹಿಗಳಾಗಿ. ತ್ರಿನಯನಿ, ಕೃಷ್ಣ ತುಳಸಿ, ಹಿಟ್ಲರ್ ಕಲ್ಯಾಣ, ಪಾರು, ಗಟ್ಟಿಮೇಳ, ಜೊತೆ ಜೊತೆಯಲಿ ಪುಟ್ಟಕ್ಕನ ಮಕ್ಕಳು, ನಾಗಿಣಿ ಟು, ಕಮಲಿ ಹೀಗೆ ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರತಿಯೊಂದು ಧಾರವಾಹಿಗೂ ಕೂಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಧಾರಾವಾಹಿ ಶುರುವಾದ ದಿನದಿಂದ ಕೂಡ ಅಷ್ಟೇ ಆಸಕ್ತಿಯಿಂದ ಹಾಗೂ ಕಾತುರದಿಂದ ಒಂದು ದಿನವೂ ಕೂಡಾ ಮಿಸ್ ಮಾಡದೇ ಈ ಧಾರಾವಾಹಿಗಳನ್ನು ನೋಡುವ ಅಭಿಮಾನಿಗಳ ಸಂಖ್ಯೆಗೇನು ಕಡಿಮೆಯಿಲ್ಲ. ಆದರೆ ಇದರಲ್ಲಿ ಒಂದು ಧಾರವಾಹಿ ಸದ್ಯದಲ್ಲೇ ಅಂತ್ಯಗೊಳ್ಳುವ ಸಾಧ್ಯತೆ ಇದೆ.

ಹೌದು ಅದು ಯಾವ ಧಾರಾವಾಹಿ ಎಂದರೆ ನಾಗಿಣಿ ಟು ಎನ್ನುವ ಧಾರವಾಹಿಯ ತುಂಬಾ ಅದ್ಭುತವಾಗಿ ಇಲ್ಲಿಯವರೆಗೂ ಮೂಡಿಬಂದಿತ್ತು. ನಿನಾದ್ ಮತ್ತು ನಮ್ರತ ಗೌಡ ಅವರು ತಮ್ಮ ಅದ್ಭುತ ಅಭಿನಯದಿಂದ ಇದುವರೆಗೂ ಧಾರಾವಾಹಿಯನ್ನು ಗೆಲ್ಲಿಸಿಕೊಂಡು ಬಂದಿದ್ದರು ಎಂದರೆ ತಪ್ಪಾಗುವುದಿಲ್ಲ. ಧಾರಾವಾಹಿಯಲ್ಲಿ ಯ ಅದ್ಭುತ ಸನ್ನಿವೇಶಗಳು, ರೋಚಕ ತಿರುವುಗಳು ಮತ್ತು ರಹಸ್ಯಗಳ ಬಗ್ಗೆ ಕುತೂಹಲ ಇವೆಲ್ಲ ಕಾರಣಗಳಿಂದ ಧಾರಾವಾಹಿಯು ಪ್ರತಿದಿನವೂ ಒಂದು ಸಂಚಿಕೆಗಿಂತ ಮತ್ತೊಂದು ಸಂಚಿಕೆಯು ವಿಭಿನ್ನವಾಗಿ ಮೂಡಿ ಬಂದು ಕನ್ನಡ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿತ್ತು. ಈ ಧಾರಾವಾಹಿ ಶುರುವಾದ ದಿನದಿಂದಲೂ ಕೂಡ ಧಾರಾವಾಹಿಯ ಕಥೆಯ ಬಗ್ಗೆ ಎಲ್ಲರೂ ತುಂಬಾ ಮೆಚ್ಚಿಕೊಂಡಿದ್ದರು. ಇದಕ್ಕೂ ಮೊದಲು ನಾಗಿಣಿ ಸೀಸನ್ 1 ಎನ್ನುವುದು ಪ್ರಸಾರವಾಗಿತ್ತು ಅದರ ಮುಂದುವರಿದ ಭಾಗವಾದ ನಾಗಿಣಿ 2 ಮೂಡಿಬಂದಿತ್ತು.

ಈ ಕಥೆಯಲ್ಲೂ ಸಹ ನಾಗಲೋಕದಲ್ಲಿ ನಾಗಿಣಿ ಮತ್ತು ಆದಿಶೇಷ ಇಬ್ಬರೂ ಕೂಡ ಪ್ರೀತಿಯಿಂದ ಒಂದಾಗಿದ್ದ ಸಂದರ್ಭದಲ್ಲಿ ಮನುಷ್ಯರಾದ ದ್ವಿಗ್ವಿಜಯ ಮತ್ತು ಅವನ ಸ್ನೇಹಿತರು ನಾಗಮಣಿ ಗಾಗಿ ಆದಿಶೇಷನನ್ನು ಕೊಲ್ಲುತ್ತಾರೆ. ಈ ಸಾವನ್ನು ಕಣ್ಣಾರೆ ಕಂಡ ನಾಗಿಣಿಯು ಅವನ ಪ್ರಿಯಕರನನ್ನು ಸಾಯಿಸಿದ ಮನುಷ್ಯರ ಮೇಲೆ ಸೇಡು ತೀರಿಸಿಕೊಳ್ಳಲು ಭೂಮಿಗೆ ನಾಗಿಣಿ ಅವತಾರದ ಕನ್ಯೆ ಶಿವಾನಿಯಾಗಿ ಹುಟ್ಟಿ ಬರುತ್ತಾರೆ. ಆದರೆ ಆದಿಶೇಷನು ಕೂಡ ದಿಗ್ವಿಜಯ ನ ಮಗನಾಗಿ ಅದೇ ಮನೆಯಲ್ಲಿ ಹುಟ್ಟುತ್ತಾನೆ. ಆದರೆ ಅವನು ಹುಟ್ಟಿದ ದಿನವೇ ದಿಗ್ವಿಜಯನ ಸ್ನೇಹಿತನ ಮನೆಯಲ್ಲೂ ಗಂಡು ಮಗುವಿನ ಜನನವಾಗುತ್ತದೆ. ಆ ಸಮಯದಲ್ಲಿ ಇಬ್ಬರ ಮಕ್ಕಳು ಕೂಡ ಅದಲು ಬದಲಾಗಿ ಹೋಗುತ್ತಾರೆ. ನಂತರ ದಿಗ್ವಿಜಯ ನ ಮನೆಗೆ ಯಾವುದೋ ನೆಪ ಇಟ್ಟುಕೊಂಡು ಬಂದು ಸೇರಿಕೊಳ್ಳುವ ಶಿವಾನಿಯು ಬದಲಾದ ದಿಗ್ವಿಜಯನ ಮಗನೇ ಆದಿಶೇಷ ಎಂದು ತ್ರಿವಿಕ್ರಮನ ಪ್ರೀತಿಯಲ್ಲಿ ಬೀಳುತ್ತಾಳೆ.

ಮತ್ತು ಅದು ಮದುವೆ ಹಂತದ ವರೆಗೂ ಕೂಡ ಹೋಗಿ ತಲುಪುತ್ತದೆ. ಆದರೆ ನಿಜವಾದ ಆದಿಶೇಷ ತ್ರಿಶೂಲ್ ಈ ಮದುವೆಯನ್ನು ತಡೆಯುವ ಹಲವಾರು ಪ್ರಯತ್ನವನ್ನು ಮಾಡಿ, ಶಿವಾನಿಯ ಮನವೊಲಿಸುವ ಪ್ರಯತ್ನ ವನ್ನು ಕೂಡ ಮಾಡುತ್ತಾನೆ. ಈ ಮದುವೆ ವಿಷಯ ದವರೆಗೂ ತ್ರಿಶೂಲ್ ಹಾಗೂ ತಿವಿಕ್ರಮ ಇಬ್ಬರೂ ಕೂಡ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ಆದರೆ ದಿಗ್ವಿಜಯ ನಿಗೆ ಒಂದು ಸಂದರ್ಭದಲ್ಲಿ ತ್ರಿಶೂಲ್ ತನ್ನ ಸ್ವಂತ ಮಗ ಎಂದು ಗೊತ್ತಾಗಿ ಅವನನ್ನು ದತ್ತು ತೆಗೆದುಕೊಂಡು ಮನೆಗೆ ಕರೆಸಿಕೊಳ್ಳುತ್ತಾನೆ. ಆದರೆ ಒಮ್ಮೆ ಯಾವಾಗ ಶಿವಾನಿಯ ಮೇಲೆ ತ್ರಿಶೂಲ್ ಗೆ ಪ್ರೀತಿ ಇದೆ ಎನ್ನುವ ವಿಷಯ ತ್ರಿವಿಕ್ರಮನಿಗೆ ತಿಳಿಯುತ್ತದೆ ಅಂದಿನಿಂದ ಇವನನ್ನು ಸಾಯಿಸುವಷ್ಟು ದ್ವೇಷ ಮಾಡುತ್ತಾನೆ. ಕೊನೆಗೂ ಮದುವೆಯ ದಿನ ಎಲ್ಲರ ಕಣ್ತಪ್ಪಿಸಿ ಹೇಗೋ ಶಿವಾನಿಯನ್ನು ತ್ರಿಶೂಲ್ ಮದುವೆ ಆಗಿಯೇ ಬಿಡುತ್ತಾನೆ. ಶಿವಾನಿಯೇ ನಾಗಿಣಿ ಎನ್ನುವುದನ್ನು ಅರಿತ ತ್ರಿಶೂಲ್ ಗೆ ತಾನೇ ಆದಿಶೇಷ ಈಗ ತ್ರಿಶೂಲ್ ಆಗಿ ಹುಟ್ಟಿದ್ದೇನೆ ಎನ್ನುವುದನ್ನು ಶಿವಾನಿಗೆ ಮನವರಿಕೆ ಮಾಡಿಕೊಡುವುದೇ ದೊಡ್ಡ ಸವಾಲು ಆಗುತ್ತದೆ.

ನಂತರ ಶಿವಾನಿಗೆ ಎಲ್ಲವೂ ಅರ್ಥವಾಗಿ ಅವಳು ಈ ಮದುವೆಯನ್ನು ಒಪ್ಪಿಕೊಳ್ಳುವ ಹೊತ್ತಿಗೆ ತ್ರಿಶೂಲ್ ಬದಲಾಗಿರುತ್ತಾನೆ. ಮತ್ತು ಕತೆ ಹೀಗೆ ಮುಂದುವರೆದು ಶಿವಾನಿ ಸಾವನ್ನಪ್ಪುತ್ತಾಳೆ. ಮತ್ತು ಶಿವಾನಿಯು ಶೈಲೂ ಎನ್ನುವ ಹುಡುಗಿಯಾಗಿ ಮತ್ತೆ ಜನ್ಮ ತಾಳುತ್ತಾಳೆ. ಶೈಲು ಅನ್ನು ತ್ರಿಶೂಲ್ ಹುಡುಕಿ ಬರುತ್ತಾನೆ. ಮತ್ತು ತನ್ನ ಹಿಂದಿನ ಎಲ್ಲಾ ಕಥೆಯನ್ನು ಅವಳಿಗೆ ವಿವರಿಸುವ ಪ್ರಯತ್ನವನ್ನು ಕೂಡ ಮಾಡುತ್ತಾನೆ. ಅಷ್ಟರಲ್ಲಿ ನಾಗಸಾಧುಗಳು ಬಂದು ಇವರಿಗೆ ಎಚ್ಚರಿಕೆ ನೀಡುತ್ತಾರೆ. ಇವರಿಬ್ಬರು ಒಟ್ಟಿಗೆ ಇದ್ದರೆ ಅಪಾಯ ತಪ್ಪಿದ್ದಲ್ಲ ಎನ್ನುವ ಮುನ್ಸೂಚನೆಯನ್ನು ನೀಡುತ್ತಾರೆ. ಆದರೂ ಕೂಡ ಈಗ ಶೈಲೂ ತ್ರಿಶೂಲ್ ಅನ್ನು ಮದುವೆಯಾಗಿ ಗರ್ಭಿಣಿಯಾಗಿದ್ದಾಳೆ. ನಾಗಸಾಧುಗಳ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ತ್ರಿಶೂಲ್ ಶೈಲೂ ಹಾಗೂ ಮಗುವಿನ ರಕ್ಷಣೆ ಉದ್ದೇಶದಿಂದ ದೂರವಾಗಿ ಹೋಗಲು ನಿರ್ಧಾರ ಮಾಡಿದ್ದಾನೆ. ಕಥೆ ಇಷ್ಟೊಂದು ಚೆನ್ನಾಗಿ ಓಡುತ್ತಿರುವಾಗ ಧಾರಾವಾಹಿ ತಂಡವನ್ನು ನಿಲ್ಲಿಸುವ ನಿರ್ಧಾರ ಮಾಡಿದೆ. ಈ ಧಾರಾವಾಹಿ ಈಗಾಗಲೇ ಮುಗಿಯ ಬೇಕಿತ್ತಂತೆ ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಇನ್ನೂ ಎರಡು ತಿಂಗಳ ನಂತರ ಧಾರಾವಾಹಿ ಮುಕ್ತಾಯಗೊಳ್ಳಲಿದೆ. ಈ ವಿಷಯ ಈಗ ನಾಗಿಣಿ 2 ಅಭಿಮಾನಿಗಳ ಬಳಗಕ್ಕೆ ಬೇಸರವನ್ನುಂಟು ಮಾಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Serial Loka Tags:Nagini 2, Zee kannada
WhatsApp Group Join Now
Telegram Group Join Now

Post navigation

Previous Post: 4 ಕೋಟಿ ಕೊಟ್ಟರೆ ಮಾತ್ರ ನಿಮ್ಮ ನಿಮಾದಲ್ಲಿ ನಟಿಸುತ್ತೆನೆ ಎಂದ ರಶ್ಮಿಕಾ ಮಂದಣ್ಣ
Next Post: ಸ್ಯಾಂಡಲ್ ವುಡ್ ಟಾಪ್ ನಟರ ಮೊದಲ ಸಂಭಾವನೆ ಎಷ್ಟು ಗೊತ್ತಾ.? ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore