Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.? ಪ್ರತಿಯೊಬ್ಬ ಮಹಿಳೆಯು ತಪ್ಪದೆ ತಿಳಿದುಕೊಳ್ಳ ಬೇಕಾದ ಮಾಹಿತಿ ಇದು.!

Posted on May 15, 2023February 6, 2025 By Kannada Trend News No Comments on ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.? ಪ್ರತಿಯೊಬ್ಬ ಮಹಿಳೆಯು ತಪ್ಪದೆ ತಿಳಿದುಕೊಳ್ಳ ಬೇಕಾದ ಮಾಹಿತಿ ಇದು.!

 

ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ಅಲ್ಲಿ ಕಳಶ ಪ್ರತಿಷ್ಠಾಪಿಸುತ್ತಾರೆ. ಮನೆಗಳಲ್ಲೂ ಕೂಡ ಕಳಸ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ತಮ್ಮ ತಮ್ಮ ಮನೆ ದೇವರ ಹೆಸರನ್ನು ಹೇಳಿ ಅಥವಾ ಮಹಾಲಕ್ಷ್ಮಿಯ ಸ್ವರೂಪ ಎಂದು ಅಥವಾ ತಾಯಿ ಗೌರಿಯ ಸಂಕೇತ ಎಂದು ಮನೆಯಲ್ಲಿ ಕಳಶಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ರೀತಿ ಕಳಶವು ದೇಶರ ಮನೆಯಲ್ಲಿದ್ದರೆ ಸಾಕ್ಷಾತ್ ತಾಯಿಯೇ ಮನೆಯಲ್ಲಿ ನೆಲೆಸಿದ್ದಾಳೆ ಎನ್ನುವ ಭಾವ. ಆ ನಂಬಿಕೆಯೊಂದಿಗೆ ಪೂಜೆ ಮಾಡಲಾಗುತ್ತದೆ.

ದೇವರ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಈ ಕಳಶವು ಇಡಿ ಮನೆಯ ಏಳಿಗೆಯ ಸಂಕೇತ ಆಗಿರುತ್ತದೆ. ಕಳಶ ಪ್ರತಿಷ್ಠಾಪನೆ ಮಾಡುವುದಕ್ಕೆ ಕಟ್ಟುನಿಟ್ಟಾದ ವಿಧಿವಿಧಾನಗಳು ಇದ್ದು ಆ ಪ್ರಕಾರವಾಗಿ ನಡೆಕೊಂಡುಕೊಂಡಾಗ ಮಾತ್ರ ಆ ಮನೆಗೆ ಶ್ರೇಯಸ್ಸು ಲಭಿಸುತ್ತದೆ. ಕಳಶ ಪ್ರತಿಷ್ಠಾಪನೆ ಮಾಡಿದ ಮೇಲೆ ಅದನ್ನು ವಾರಕೊಮ್ಮೆ ಅವರ ಅನುಕೂಲತೆ ಅಂತೆ ಬದಲಾಯಿಸುತ್ತಾರೆ.

ಒಮ್ಮೆ ಪ್ರತಿಷ್ಠಾಪನೆ ಮಾಡಿದ ಮೇಲೆ ಪ್ರತಿ ದಿನವೂ ಕೂಡ ಅದಕ್ಕೆ ಹೂವಿನಿಂದ ಅಲಂಕರಿಸಿ ಮುಂದೆ ದೀಪಗಳನ್ನು ಇಟ್ಟು ಭಕ್ತಿಯಿಂದ ಪೂಜಿಸುತ್ತಾರೆ. ಸಾಮಾನ್ಯವಾಗಿ ಕಳಸಕ್ಕೆ ಕೆಳಗೆ ಒಂದು ತಟ್ಟೆಯಲ್ಲಿ ಅಕ್ಕಿ ಮತ್ತು ಅದರ ಮೇಲೆ ಒಂದು ತಾಮ್ರದ ಅಥವಾ ಬೆಳ್ಳಿಯ ಅಥವಾ ಹಿತ್ತಾಳೆಯ ಚೊಂಬಿನಲ್ಲಿ ನೀರು ತುಂಬಿ ಅದಕ್ಕೆ ವೀಳ್ಯದೆಲೆ ಅಥವಾ ಮಾವಿನ ಎಲೆಗಳನ್ನು ಹಾಕಿ ಒಂದು ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಅರಿಶಿನ ಕುಂಕುಮ ಹೂ ಅಕ್ಷತೆಗಳಿಂದ ಅಲಂಕರಿಸಲಾಗುತ್ತದೆ.

ಈ ರೀತಿ ಕಳಶಕ್ಕೆ ಇಡುವ ಪ್ರತಿಯೊಂದು ವಸ್ತುವೂ ಕೂಡ ಪವಿತ್ರವಾಗಿದೆಯೇ ಎಂದು ನೋಡಿ ಮಡಿಯಿಂದ ಅದನ್ನು ಇಡಲಾಗುತ್ತದೆ. ಕಳಶಕ್ಕೆ ಇಡುವ ನೀರಿನಿಂದ ಹಿಡಿದು ಬಳಸುವ ಎಲೆಯ ತನಕವೂ ಕೂಡ ಅದು ಒಡೆದಿಡಬಾರದು ನೀರು ಮಡಿಯಾಗಿರಬೇಕು, ಶುದ್ಧವಾಗಿರಬೇಕು ಎಂದೆಲ್ಲ ಮುಂಜಾಗ್ರತೆಯನ್ನು ತೆಗೆದುಕೊಳ್ಳಲಾಗುತ್ತದೆ.

ಈ ರೀತಿ ಎಷ್ಟು ಅಚ್ಚುಕಟ್ಟಾಗಿ ಹಾಗೂ ಭಯ ಭಕ್ತಿಗಳಿಂದ ಪೂಜಿಸುತ್ತೇವೋ ಅಷ್ಟೇ ಪ್ರಕಾರವಾದ ಆಶೀರ್ವಾದ ನಮಗೆ ಸಿದ್ದಿ ಆಗುತ್ತದೆ. ಜೊತೆಗೆ ಮನೆಯಲ್ಲಿರುವ ಕಳಶವೇ ಶಕುನಗಳನ್ನು ಹೇಳುತ್ತದೆ ಎನ್ನುವುದನ್ನು ನಾವು ನಂಬಲೇಬೇಕು. ಯಾಕೆಂದರೆ ಕಳಸದ ಕಾಯಿಯನ್ನು ನೋಡಿಯೇ ಅದನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ ಮನೆಗಳಲ್ಲಿ ಕಳಸದ ಕಾಯಿಯನ್ನು ಇಟ್ಟಾಗ ಕೆಲವೊಮ್ಮೆ ಅದು ಮೊಳಕೆ ಬಂದಿರುತ್ತದೆ.

ಈ ರೀತಿ ಆದಾಗ ಅಥವಾ ಅದರಲ್ಲಿ ಬಿರುಕು ಮೂಡಿದಾಗ ಜನರು ಗೊಂದಲಕ್ಕೆ ಒಳಾಗುತ್ತಾರೆ ಅದು ಶುಭಸೂಚಕವೋ ಅಥವಾ ಅಶುಭವೋ ಎನ್ನುವುದನ್ನು ತಿಳಿದುಕೊಳ್ಳದೆ ಒದ್ದಾಡುತ್ತಾರೆ. ಅದಕ್ಕಾಗಿ ಈ ಅಂಕಣದಲ್ಲಿ ಅದರ ಬಗ್ಗೆ ಮಾಹಿತಿ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಮನೆಯಲ್ಲಿ ಕಳಸಕ್ಕೆ ಇಟ್ಟಿರುವ ಕಾಯಿ ಮೊಳಕೆ ಹೊಡೆದರೆ ನೀವು ಭಯಪಡಬೇಕಿಲ್ಲ ಅದರ ಬಗ್ಗೆ ಯಾವುದೇ ಆತಂಕವು ಬೇಕಿಲ್ಲ.

ಯಾಕೆಂದರೆ ಅದು ಮನೆ ಅಭಿವೃದ್ಧಿಯ ಸಂಕೇತವಾಗಿರುತ್ತದೆ. ಕಳಶದ ಕೈ ಮೊಳಕೆ ಹೊಡೆದಂತೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಆಯಸ್ಸು ಆರೋಗ್ಯವೂ ಕೂಡ ಸಮೃದ್ಧಿಯಾಗುತ್ತದೆ ಎನ್ನುವುದರ ಸಂಕೇತ ಅದಾಗಿರುತ್ತದೆ. ಇದನ್ನು ತೆಗೆದ ನಂತರ ಆ ಕಾಯಿಯನ್ನು ನಿಮ್ಮ ಮನೆ ಹಿತ್ತಲಲ್ಲಿ ಅಥವಾ ಜಮೀನಿನಲ್ಲಿ ನೆಟ್ಟು ಬೆಳೆಸಲು ಪ್ರಯತ್ನಿಸಬೇಕು ಸಾಧ್ಯವಾಗದೆ ಇದ್ದವರು ಯಾವುದಾದರೂ ದೇವಸ್ಥಾನಕ್ಕಾದರೂ ಕೊಡಬೇಕು. ಒಂದು ವೇಳೆ ಕಾಯಿ ಬಿರುಕು ಬಿಟ್ಟಿದ್ದರೆ ಆಗಲು ಸಹ ಆತಂಕ ಪಡುವ ಅಗತ್ಯ ಇಲ್ಲಹ ಯಾಕೆಂದರೆ ಮನೆಯ ವಾತಾವರಣದ ಕಾರಣ ಅದು ಆ ರೀತಿ ಆಗಿರುತ್ತದೆ. ಬೇರೆ ದಿನಗಳಲ್ಲಿ ತೆಂಗಿನಕಾಯಿಯನ್ನು ಬದಲಾಯಿಸಲು ತೆಗೆದಾಗ ತೆಗೆದ ಆ ತೆಂಗಿನಕಾಯಿಯಿಂದ ಸಿಹಿ ಪದಾರ್ಥಗಳನ್ನು ಮಾಡಿ ಮನೆಮಂದಿಗೆಲ್ಲಾ ಬಡಿಸಿದರೆ ಒಳ್ಳೆಯದು.

 

Devotional
WhatsApp Group Join Now
Telegram Group Join Now

Post navigation

Previous Post: ಭಕ್ತರ ಬೇಡಿಕೆ ಕೇಳಿ ಕಣ್ಣೀರು ಸುರಿಸುವ ಆಂಜನೇಯ ದೇವಸ್ಥಾನ ಈ ದೇವಾಲಯದಲ್ಲಿ ಏನೇ ಬೇಡಿಕೊಂಡ್ರು ನೆರವೇರುತ್ತದೆ.
Next Post: ಭಕ್ತರಿಗೆ ಬಂಗಾರದ ಬಿಸ್ಕೆಟ್ ನೀಡುವ ಏಕೈಕ ದೇವಸ್ಥಾನ ಇದು. ಈ ದೇವಸ್ಥಾನಕ್ಕೆ ಹೋದ ಭಕ್ತರ ಸಂಕಷ್ಟ ನಿವಾರಣೆ ಆಗುವುದು 100% ಸತ್ಯ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore