Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕೊನೆಗೂ ಬಯಲಾಯಿತು ಸತ್ಯ ಅಪ್ಪು ಅವರ ಮೇಲೆ ಐಟಿ ರೈಡ್ ಮಾಡಿಸಿದ್ದು ಯಾರು ಗೊತ್ತಾ.? ಶಿವಣ್ಣ ಕೊಟ್ಟ ಶಾ’ಕಿಂ’ಗ್ ಹೇಳಿಕೆ

Posted on May 28, 2022May 28, 2022 By Kannada Trend News No Comments on ಕೊನೆಗೂ ಬಯಲಾಯಿತು ಸತ್ಯ ಅಪ್ಪು ಅವರ ಮೇಲೆ ಐಟಿ ರೈಡ್ ಮಾಡಿಸಿದ್ದು ಯಾರು ಗೊತ್ತಾ.? ಶಿವಣ್ಣ ಕೊಟ್ಟ ಶಾ’ಕಿಂ’ಗ್ ಹೇಳಿಕೆ

ಕುಟುಂಬ ಎಂದು ರಾಜಕೀಯದ ಬಗ್ಗೆ ಆಸೆ ಪಟ್ಟವರಲ್ಲ. ಡಾಕ್ಟರ್ ರಾಜಕುಮಾರ್ ಅವರಿಗೆ ಇಡೀ ಕರ್ನಾಟಕದ ಜನತೆ ಅಭಿಮಾನಿಗಳಾಗಿದ್ದರು. ಕನ್ನಡದ ಕಣ್ಮಣಿಯಾದ ಅಣ್ಣಾವ್ರ ಮಾತನ್ನು ಸಿನಿಮಾರಂಗ ದವರು ಎಂದೂ ತೆಗೆದು ಹಾಕುತ್ತಿರಲಿಲ್ಲ. ಹಾಗೆ ಅಭಿಮಾನಿಗಳಿಗೆ ಅಣ್ಣಾವ್ರು ಒಂದು ಮಾತನ್ನು ಹೇಳಿದರೆ ಸಾಕು ಅವರು ಅಕ್ಷರಶಃ ಆಗ ಅದನ್ನು ಪಾಲಿಸುತ್ತಿದ್ದರು. ಈ ರೀತಿ ಎಲ್ಲರಿಗೂ ಒಂದು ಒಳ್ಳೆಯ ಮಾರ್ಗದರ್ಶಕರಾಗಿ ಸ್ವತಃ ತಾವೇ ಒಬ್ಬ ಆದರ್ಶ ವ್ಯಕ್ತಿಯಾಗಿ ಬದುಕಿದವರು ಅಣ್ಣಾವ್ರು. ರಾಜಕೀಯ ಕುಟುಂಬದಿಂದ ಮಗನಿಗೆ ಹೆಣ್ಣು ತಂದರೂ ಕೂಡ ಎಂದಿಗೂ ತಾವು ಯಾವ ಪಕ್ಷದಲ್ಲಿ ಗುರುತಿಸಿಕೊಳ್ಳಲು ಅಣ್ಣಾವ್ರು ಇಷ್ಟಪಡಲಿಲ್ಲ. ಆ ಕಾಲದಿಂದಲೇ ಅಣ್ಣಾವ್ರಿಗೆ ರಾಜಕೀಯದಲ್ಲಿ ಭಾಗವಹಿಸಲು ಸಾಕಷ್ಟು ಆಫರ್ ಗಳು ಬರುತ್ತಿದ್ದರು ಅಣ್ಣಾವ್ರು ಮಾತ್ರ ಇದನ್ನೆಲ್ಲಾ ತಪ್ಪದೆ ತಿರಸ್ಕರಿಸುತ್ತಿದ್ದರು. ಅಣ್ಣಾವ್ರು ಎಂದು ರಾಜಕಾರಣಿಯಾಗಲು ಇಷ್ಟ ಪಟ್ಟವರಲ್ಲ.

ತಾನು ಸಿನಿಮಾದಿಂದ ಬಂದವನು ಈ ಮೂಲಕ ಜನರು ಇಷ್ಟಪಟ್ಟಿದ್ದಾರೆ. ನನಗೆ ಅದೇ ದೊಡ್ಡದು ಬೇರೆ ಯಾವುದೂ ಬೇಡ ಇರುವ ತನಕ ನಾನು ಸಿನಿಮಾಗಳನ್ನು ಮಾಡಿಕೊಂಡೆ ಅಭಿಮಾನಿಗಳಿಗೆ ಹತ್ತಿರವಾಗಿರುತ್ತೇನೆ. ರಾಜಕೀಯದ ಸಹವಾಸ ನನಗೆ ಬೇಡ ಎಂದು ಇರುವ ತನಕ ಹಾಗೆ ಬದುಕಿದವರು ಅಣ್ಣಾವ್ರು. ಅಂದು ಏನಾದರೂ ಅಣ್ಣಾವ್ರು ರಾಜಕೀಯ ಪ್ರವೇಶ ಮಾಡಿದರೆ ಬಹುಶಃ ಕರ್ನಾಟಕದ ಮುಖ್ಯಮಂತ್ರಿಯೇ ಆಗಬಹುದಿತ್ತು. ಆದರೆ ದೊಡ್ಮನೆ ಕುಟುಂಬಕ್ಕೆ ಅದರ ಮೇಲೆ ಆಸಕ್ತಿ ಇರಲಿಲ್ಲ. ಎಂದಿಗೂ ಕನ್ನಡ, ಕನ್ನಡ ಸಿನಿಮಾ ಮತ್ತು ಕರ್ನಾಟಕವನ್ನೇ ಉಸಿರು ಎಂದುಕೊಂಡು ಮಕ್ಕಳಿಗೂ ಅದನ್ನು ಹೇಳಿ ಬೆಳೆಸಿದವರು ಅಣ್ಣಾವ್ರು. ಅಣ್ಣಾವ್ರ ಹಾದಿಯಲ್ಲಿ ಅವರ ಮೂರು ಮಕ್ಕಳು ಸಹ ಎಂದಿಗೂ ರಾಜಕೀಯ ಪ್ರವೇಶವನ್ನು ಮಾಡದೆ ಅದರ ಬಗ್ಗೆ ಆಸಕ್ತಿಯೂ ತೋರದೆ ತಾವು ಮತ್ತು ತಮ್ಮ ಸಿನಿಮಾ ಎಂದುಕೊಂಡು ಅಪ್ಪನಂತೆ ಸನ್ಮಾರ್ಗದಲ್ಲೇ ಬದುಕುತ್ತಿದ್ದಾರೆ.

ಈ ನಡುವೆ ಪುನೀತ್ ರಾಜಕುಮಾರ್ ಅವರ ರಾಜಕೀಯ ಪ್ರವೇಶದ ಬಗ್ಗೆ ಗಾಳಿ ಮಾತುಗಳು ಕೇಳಿ ಬರುತ್ತಿದ್ದವು.ಈ ಬಗ್ಗೆ ನಿರ್ಮಾಪಕ ಎಸ್ ವಿ ಬಾಬು ಅವರು ಕೆಲವೊಂದು ವಿಷಯಗಳನ್ನು ಹೇಳಿಕೊಂಡಿದ್ದಾರೆ. ಪುನೀತ್ ಅವರ ಮನೆಗೆ ಅವರನ್ನು ರಾಜಕೀಯಕ್ಕೆ ಆಹ್ವಾನಿಸುವಂತೆ ಮನವೊಲಿಸಲು ಬಿಜೆಪಿ ಮುಖಂಡರುಗಳಾದ ಆಶಿಶ್ ಮತ್ತು ಪಿವಿಎಸ್ ಶರ್ಮ ಅವರು ಭೇಟಿ ಕೊಟ್ಟಿದ್ದರಂತೆ. ಅಕಸ್ಮಾತ್ ಅವರು ರಾಜಕೀಯ ವಿಷಯ ಇಟ್ಟುಕೊಂಡು ಭೇಟಿ ಮಾಡಲು ಬರುತ್ತಿದ್ದಾರೆ ಎಂದರೆ ಖಂಡಿತ ಭೇಟಿಗೆ ಅಪ್ಪು ಒಪ್ಪುತ್ತಿರಲಿಲ್ಲವಂತೆ. ಅವರು ಎಷ್ಟೇ ಪುನೀತ್ ರಾಜಕುಮಾರ್ ಅವರನ್ನು ಕನ್ವೆನ್ಸ್ ಮಾಡಲು ಪ್ರಯತ್ನಪಟ್ಟರು ಪುನೀತ್ ರಾಜಕುಮಾರ್ ಅವರು ಮಾತ್ರ ತಾವು ರಾಜಕೀಯ ಪ್ರವೇಶ ಎಂದಿಗೂ ಮಾಡುವುದಿಲ್ಲ ಎನ್ನುವ ನಿರ್ಧಾರಕ್ಕೆ ತುಂಬಾ ಕಟ್ಟು ಬದ್ದರಾಗಿದ್ದರು. ಹೀಗಾಗಿ ಅವರ ಪ್ರಯತ್ನವೆಲ್ಲ ವ್ಯರ್ಥ ಆಯಿತು.

ಅದಕ್ಕೂ ಮಂಚೆ ಜಗ್ಗೇಶ್ ಅವರೊಮ್ಮೆ ಪುನೀತ್ ರಾಜಕುಮಾರ್ ಅವರಿಗೆ ಬಿಜೆಪಿ ಸೇರುವಂತೆ ಆಹ್ವಾನಿಸಿದ್ದರಂತೆ. ಅದಕ್ಕೆ ನಯವಾಗಿ ಉತ್ತರ ಹೇಳಿದ ಅಪ್ಪು ಅವರು ನಮಗೆಲ್ಲ ರಾಜಕೀಯ ಆಗಿ ಬರುವುದಿಲ್ಲ ಅಣ್ಣ ಎಂದು ಹೇಳಿ ಸುಮ್ಮನಾಗಿದ್ದಾರಂತೆ. ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಪ್ರವಾಸಕ್ಕೆ ಬಂದಿದ್ದಾಗ ಪುನೀತ್ ರಾಜಕುಮಾರ್ ಅವರು ಮತ್ತು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನರೇಂದ್ರ ಮೋದಿ ಅವರ ಜೊತೆ ನಿಂತು ತೆಗೆಸಿಕೊಂಡ ಫೋಟೋ ಒಂದು ವೈರಲ್ ಆಗಿತ್ತು. ಆ ಸಮಯದಲ್ಲಿ ಪುನೀತ್ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಬಗ್ಗೆ ಮಾತುಗಳು ಕೂಡ ಕೇಳಿಬಂದಿದ್ದವು ಆದರೆ ಪುನೀತ್ ರಾಜಕುಮಾರ್ ಅವರು ಆ ಸಮಯದಲ್ಲೂ ಸಹ ಮೋದಿ ಅವರನ್ನು ಭೇಟಿಯಾಗಲು ಹಿಂದೆ ಮುಂದೆ ನೋಡುತ್ತಿದ್ದಂತೆ ಯಾಕೆಂದರೆ ನಾನು ಈಗ ಅವರನ್ನು ಭೇಟಿಯಾದರೆ ನಾನು ಒಂದು ಪಕ್ಷದ ಪರವಾಗಿ ಗುರುತಿಸಿಕೊಂಡ ಹಾಗಾಗುತ್ತದೆ ಎನ್ನುವುದು ಪುನೀತ್ ಅವರ ಬೇಸರವಾಗಿತ್ತು.

ಆದರೆ ಅಶ್ವಿನಿ ಅವರ ಒತ್ತಾಯದ ಮೇರೆಗೆ ಭೇಟಿ ಮಾಡಲು ಒಪ್ಪಿಕೊಂಡರಂತೆ. ಆ ಸಮಯದಲ್ಲಿ ಮೋದಿ ಅವರು ನಾವು ನಿಮ್ಮನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡುತ್ತೇವೆ ನಮ್ಮ ಪಕ್ಷ ಸೇರಿಕೊಳ್ಳಿ ಎಂದು ಹೇಳಿದ್ದರಂತೆ ಅದಕ್ಕೆ ಆಗಲೂ ಸಹ ಪುನೀತ್ ರಾಜಕುಮಾರ್ ಅವರು ಒಪ್ಪಲಿಲ್ಲ. ಇದಾದ ಕೆಲವು ದಿನಗಳಲ್ಲಿ ಕರ್ನಾಟಕದ ಹಲವಾರು ಸ್ಟಾರ್ ನಟರ ಮನೆಯ ಮೇಲೆ ಐಟಿ ರೈಡ್ ಆಯಿತು. ಆ ಸಮಯದಲ್ಲಿ ಪುನೀತ್ ಅವರು ರಾಜಕೀಯಕ್ಕೆ ಬರಲು ಒಪ್ಪದ ಕಾರಣ ಮೋದಿ ಅವರ ಪುನೀತ್ ರಾಜಕುಮಾರ್ ಅವರ ಮೇಲೆ ಈ ರೀತಿ ಐಟಿ ರೈಡ್ ಮಾಡಿಸಿದ್ದಾರೆ ಎನ್ನುವ ಮಾತುಗಳು ಆಗ ಮಾಧ್ಯಮಗಳಲ್ಲಿ ಕೇಳಿ ಬಂದಿದ್ದವು.

Cinema Updates Tags:Appu
WhatsApp Group Join Now
Telegram Group Join Now

Post navigation

Previous Post: ಮದುವೆಗೆ ಮುನ್ನ ಅಪ್ಪು ವರ್ತನೆ ಈ ರೀತಿ ಇರಲಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟ ನಟಿ ಪ್ರೇಮಾ.
Next Post: ಅಬ್ಬಬ್ಬಾ ಇದೆಂಥಾ ಅಭಿಮಾನ.? ಅಪ್ಪು ಅಭಿಮಾನಿ ಮಾಡಿದ ಈ ಕೆಲಸ ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore