Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತಾತನ ಅಣ್ಣ ಅವರ ಆಸ್ತಿಯನ್ನು ಅಪ್ಪನ ಹೆಸರಿಗೆ ಹಕ್ಕು ಖುಲಾಸೆ ಮಾಡಿ ಹೋಗಿದ್ದರೆ ಮುಂದೆ ತೊಡಕಾಗುವ ಸಾಧ್ಯತೆಗಳು ಇರುತ್ತವೆಯಾ?

Posted on May 7, 2023 By Kannada Trend News No Comments on ತಾತನ ಅಣ್ಣ ಅವರ ಆಸ್ತಿಯನ್ನು ಅಪ್ಪನ ಹೆಸರಿಗೆ ಹಕ್ಕು ಖುಲಾಸೆ ಮಾಡಿ ಹೋಗಿದ್ದರೆ ಮುಂದೆ ತೊಡಕಾಗುವ ಸಾಧ್ಯತೆಗಳು ಇರುತ್ತವೆಯಾ?

ನಮ್ಮ ಭಾರತದಲ್ಲಿ ಆಸ್ತಿಗಳ ವಿಭಜನೆ ವಿಷಯದಲ್ಲಿ ಸಾಕಷ್ಟು ಗೊಂದಲಗಳು ಇವೆ. ಇನ್ನು ಸಹ ನಮ್ಮ ನ್ಯಾಯಾಲಯಗಳಲ್ಲಿ ಹೂಡುವ ಧಾವೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಗೆ ಸಂಬಂಧಪಟ್ಟ ಕೇಸ್ ಗಳೇ ಇರುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಆಸ್ತಿನ ಹಕ್ಕಿನ ಬಗ್ಗೆ ಸಾಮಾನ್ಯ ಜ್ಞಾನವನ್ನು ತಿಳಿದು ಕೊಂಡಿರಲೇಬೇಕು. ಅಂತಹದೊಂದು ಕೇಸಿನ ವಿಷಯವಾಗಿ ಇಲ್ಲಿ ಕೆಲವು ಮಾಹಿತಿಯನ್ನು ತಿಳಿಸಲು ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡಲಾಗಿದೆ.

ಉದಾಹರಣೆಗೆ ಒಂದು ಕೇಸ್ ಅಲ್ಲಿ ಒಬ್ಬ ವ್ಯಕ್ತಿಯ ತಾತನ ಅಣ್ಣ ಅವರ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಅವರ ತಂದೆ ಹೆಸರಿಗೆ ಮಾಡಿ ಹೋಗಿದ್ದಾರೆ ಎಂದೆಟ್ಟು ಕೊಳ್ಳುವುದಾದರೆ ನಂತರ ಅವರ ತಾತನ ಅಣ್ಣನ ಕಡೆಯಿಂದ ಮುಂದೆ ತೊಡಕುಗಳುಂಟಾಗಬಹುದಾ ಎನ್ನುವ ಗೊಂದಲ ಕುರಿತು ಪರಿಹರಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಪಿತ್ರಾರ್ಜಿತ ಆಸ್ತಿಯ ಹಕ್ಕು ಒಬ್ಬ ವ್ಯಕ್ತಿಯ ಎಲ್ಲಾ ಮಕ್ಕಳಿಗೂ ಕೂಡ ಇರುತ್ತದೆ. ಈಗ ವ್ಯಕ್ತಿಯೊಬ್ಬನ ಉದಾಹರಣೆಯೊಂದಿಗೆ ಇದನ್ನು ವಿವರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಉದಾಹರಣೆಗೆ ತೆಗೆದುಕೊಳ್ಳುವುದಾದರೆ ತಾತನ ತಂದೆಗೆ ತಾತ ಹಾಗೂ ಆತನ ಅಣ್ಣ ಇಬ್ಬರು ಮಕ್ಕಳಿದ್ದಾರೆ ಎಂದು ಇಟ್ಟುಕೊಳ್ಳೋಣ. ಪಿತ್ರಾರ್ಜಿತವಾಗಿ ತಾತನ ತಂದೆ ಆಸ್ತಿಯ ಸಮಾನ ಹಕ್ಕು ಅವರಿಗೆ ಬಂದಿರುತ್ತದೆ ಎಂದು ಇಟ್ಟುಕೊಳ್ಳೋಣ.

ಒಂದು ವೇಳೆ ತಾತನ ಅಣ್ಣ ಬೇರೆ ಕುಟುಂಬಕ್ಕೆ ಮನೆ ಅಳಿಯ ಆಗಿ ಹೋದ ಸಂದರ್ಭದಲ್ಲಿ ತನಗೆ ಆಸ್ತಿಯಲ್ಲಿ ಬಿಡಿಗಾಸು ಬೇಡ ಎಂದು ಹಕ್ಕು ಖುಲಾಸೆ ಪತ್ರವನ್ನು ಮಾಡಿ ಆಸ್ತಿ ಹಕ್ಕನ್ನು ಬಿಟ್ಟು ಹೋಗಿದ್ದರೆ ಮುಂದೆ ಅವರ ಕಡೆಯಿಂದ ತಾತನ ಅಣ್ಣನ ಕಡೆಯಿಂದ ಅಥವಾ ತಾತನ ಅಣ್ಣನ ಸಂಬಂಧಿಕರಿಂದ ಏನೇನು ಸಮಸ್ಯೆಗಳು ಆಗಬಹುದು ಎಂದು ತಿಳಿದುಕೊಳ್ಳೋಣ.

ತಾತನ ಅಣ್ಣ ಹಕ್ಕು ಖುಲಾಸೆ ಪತ್ರ ಮಾಡಿ ಆಸ್ತಿಯ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟ ಸಂದರ್ಭದಲ್ಲಿ ಅವರಿಗೆ ಮದುವೆ ಆಗಿ ಮಕ್ಕಳಿಲ್ಲದೆ ಇದ್ದಾಗ ತಾತನ ತಂದೆಯ ಪಿತ್ರಾರ್ಜಿತ ಆಸ್ತಿಗೆ ತಾತ ಮತ್ತು ಆತನ ಅಣ್ಣ ವಾರಸ್ದಾರರು ಆಗಿರುತ್ತಾರೆ. ಅವರು ರಿಲೀಸ್ ಡೀಡ್ ಮೂಲಕ ಆ ಆಸ್ತಿಯ ಮೇಲಿನ ಹಕ್ಕನ್ನು ಬಿಡುಗಡೆ ಮಾಡಿಕೊಟ್ಟಿದ್ದರೆ ತಾತ ಆ ಹಕ್ಕಿಗೆ ಸಂಪೂರ್ಣ ಹಕ್ಕುದಾರರಾಗುತ್ತಾರೆ.

ನಂತರ ತಾತನಿಗೆ ತಂದೆ ಒಬ್ಬರೇ ಮಗನಾಗಿದ್ದರೆ ಆ ಸಂಪೂರ್ಣ ಆಸ್ತಿಗೆ ಮಗ ವಾರಸುದಾರರಾಗುತ್ತಾರೆ ಅಥವಾ ತಾತನಿಗೆ ಎಷ್ಟು ಜನ ಮಕ್ಕಳಿರುತ್ತಾರೆ ಆ ಆಸ್ತಿಯ ಮೇಲೆ ಸಮಾನವಾದ ಹಕ್ಕು ಇರುತ್ತದೆ. ಒಂದು ವೇಳೆ ತಾತನ ಅಣ್ಣ ಆಸ್ತಿ ಮೇಲಿನ ಹಕ್ಕನ್ನು ಬಿಡುಗಡೆ ಮಾಡಿಕೊಟ್ಟ ಸಂದರ್ಭದಲ್ಲಿ ಒಂದು ವೇಳೆ ಅವರಿಗೆ ಮಕ್ಕಳಿದ್ದ ಸಂದರ್ಭದಲ್ಲಿ ತಾತನ ಅಣ್ಣ ಒಬ್ಬರೇ ಹಕ್ಕು ಖುಲಾಸೆ ಪತ್ರ ಮಾಡಿಕೊಟ್ಟರೆ ಮುಂದೆ ಅವರ ಮಕ್ಕಳು ಈ ಹಕ್ಕು ಖುಲಾಸೆ ಪತ್ರ ನ್ಯಾಯ ಬದ್ದದಲ್ಲ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ನ್ಯಾಯದಲ್ಲಿ ಧಾವೆ ಹೂಡಬಹುದು.

ಈ ರೀತಿ ನ್ಯಾಯಾಲಯದಲ್ಲಿ ಇಂದು ಆಸ್ತಿ ವಿಘಟಣೆ ಕಾಯ್ದೆ ಕಾನೂನಿನ ಪ್ರಕಾರ ಅನೇಕ ರೀತಿಯ ನಿಯಮಗಳು ಇರುತ್ತವೆ. ಸಮಸ್ಯೆಯು ಎಷ್ಟು ಸಂಕೀರ್ಣವಾಗಿದೆ ಎನ್ನುವುದರ ಮೇಲೆ, ಅದರ ಬಗೆಗಿನ ಪರಿಹಾರವೂ ಕೂಡ ಇರುತ್ತದೆ. ಈ ವಿಷಯದ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಅಥವಾ ನಿಮ್ಮ ಪರಿಚಯದ ಯಾವುದಾದರು ವಕೀಲರನ್ನು ಸಂಪರ್ಕಿಸಿ ಈ ವಿಷಯದ ಬಗ್ಗೆ ಪೂರ್ತಿ ಮಾಹಿತಿ ಪಡೆದುಕೊಳ್ಳಿ

 

Useful Information

Post navigation

Previous Post: ಮೈತುಂಬಾ ಸಾಲ ಆಗಿದ್ಯಾ.? ಎಷ್ಟೇ ಕಷ್ಟ ಪಟ್ರು ಹಣ ಉಳಿತಾಯ ಮಾಡೋಕೆ ಆಗ್ತಿಲ್ವಾ.? ಚಿಂತೆ ಬಿಡಿ ಉಪ್ಪಿನ ಡಬ್ಬದಲ್ಲಿ ಈ ವಸ್ತು ಹಾಕಿ ಸಾಕು, ನಿಮ್ಮ ಸಾಲವೆಲ್ಲಾ ಬೇಗ ತಿರುತ್ತೆ.
Next Post: ಸೈನಿಕ ಶಾಲೆಯಲ್ಲಿ ನೇಮಕಾತಿ, ಊಟ ವಸತಿ ಉಚಿತದೊಂದಿಗೆ 50,000 ದವರೆಗೆ ಸಂಬಳ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore