Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಿಮ್ಮ ಮನೆ, ಸೈಟ್, ಜಮೀನು ಇನ್ನಿತರ ಆಸ್ತಿ ಸೇಲ್ ಆಗುತ್ತಿಲ್ಲವೇ.? ಚಿಂತೆ ಬಿಡಿ ಈ ಉಪಾಯ ಮಾಡಿ ನೋಡಿ ವಾರದೊಳಗೆ ಶುಭಸುದ್ದಿ ಕೇಳಿ ಬರುತ್ತದೆ.

Posted on May 7, 2023 By Kannada Trend News No Comments on ನಿಮ್ಮ ಮನೆ, ಸೈಟ್, ಜಮೀನು ಇನ್ನಿತರ ಆಸ್ತಿ ಸೇಲ್ ಆಗುತ್ತಿಲ್ಲವೇ.? ಚಿಂತೆ ಬಿಡಿ ಈ ಉಪಾಯ ಮಾಡಿ ನೋಡಿ ವಾರದೊಳಗೆ ಶುಭಸುದ್ದಿ ಕೇಳಿ ಬರುತ್ತದೆ.

 

ಜಮೀನು ಖರೀದಿಸುವುದು ಒಂದು ಕಷ್ಟ, ಆಮೇಲೆ ಕಷ್ಟ ಬಂದಾಗ ಅದನ್ನು ಮಾರಾಟ ಮಾಡುವುದು ಇನ್ನೊಂದು ರೀತಿಯ ಸಮಸ್ಯೆ. ಜೀವನದಲ್ಲಿ ಕೆಲವೊಮ್ಮೆ ತಾನು ಸಂಪಾದಿಸಿದ ಅಥವಾ ತನಗೆ ಯಾರಾದರೂ ಉಡುಗೊರೆ ರೂಪದಲ್ಲಿ ಕೊಟ್ಟ ಆಸ್ತಿಯನ್ನು ಮಾರಿಕೊಳ್ಳುವ ಸಂದರ್ಭ ಬರುತ್ತದೆ. ಆಗ ಆ ಆಸ್ತಿ ಮಾರಾಟದ ಬಗ್ಗೆ ಎಷ್ಟೇ ಪ್ರಚಾರ ಮಾಡಿದರು, ಯಾರಿಗೆ ತಿಳಿಸಿದರು, ಮಧ್ಯವರ್ತಿಗಳನ್ನು ಸಂಪರ್ಕಿಸಿದರೂ ಅಥವಾ ಜಾಹೀರಾತನ್ನೇ ಕೊಟ್ಟರು ಖರೀದಿಗೆ ಯಾರು ಮುಂದೆ ಬರುತ್ತಿರುವುದಿಲ್ಲ.

ಕೆಲವೊಮ್ಮೆ ನೀವು ಮಾರಾಟ ಮಾಡಲು ಹೋದ ಸಮಯದಲ್ಲಿಯೇ ಅದು ವ್ಯಾಜ್ಯಕ್ಕೆ ತಿರುಗಿ ಬಿಡಬಹುದು. ನೀವು ಊಹೆ ಮಾಡದ ರೀತಿಯಲ್ಲಿ ಆ ಆಸ್ತಿಯ ಕುರಿತು ಸಮಸ್ಯೆಗಳು ಎದುರಾಗಬಹುದು. ಅದುವರೆಗೆ ಕೂಡ ಕಾಡದ ಆಸ್ತಿ ಹಕ್ಕಿನ ಕುರಿತ ಸಮಸ್ಯೆಗಳು, ತಕರಾರುಗಳು ಶುರು ಆಗಿ ಇದೇ ಅಪಪ್ರಚಾರವಾಗಿ ಯಾರು ಆಸ್ತಿ ಖರೀದಿಸಲು ಬರದೆ ಹೋಗುವ ರೀತಿ ಆಗಿ ಬಿಡಬಹುದು.

ಇಂತಹ ಸಮಸ್ಯೆಗಳಲ್ಲಿ ಸಿಲುಕಿಕೊಂಡಾಗ ಅದಕ್ಕೆ ಎಷ್ಟೇ ಪ್ರಯತ್ನ ಮಾಡಿದರು ಪರಿಹಾರ ಸಿಗುತ್ತಿಲ್ಲ ಎಂದರೆ ಭೂತಶಾಸ್ತ್ರದ ಮೂಲಕ ಕೆಲವು ಗಿಡಮೂಲಿಕೆಗಳನ್ನು ಬಳಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಈ ಮೇಲೆ ತಿಳಿಸಿದ ಜಮೀನು ತೋಟ ಸೈಟು ಮನೆ ಮಾರಾಟದ ವಿಷಯ ಮಾತ್ರ ಅಲ್ಲದೆ ನೀವು ಹೊಸ ಮನೆ ಕಟ್ಟಿದಾಗ ಬಾಡಿಗೆಗೆ ಯಾರು ಬರುತ್ತಿಲ್ಲ ಎಂದರೆ.

ಅಥವಾ ನೀವು ಯಾವುದಾದರೂ ಆಫೀಸನ್ನು ಬೇರೆಯವರಿಗೆ ವರ್ಗಾಯಿಸಬೇಕು ಅದನ್ನು ಬೇರೆಯವರ ಸುಪರ್ದಿಗೆ ಕೊಟ್ಟು ಮುಕ್ತರಾಗಬೇಕು ಎಂದು ಬಯಸಿದರೆ‌. ಆಗಲು ಸಹ ಅದನ್ನು ಮಾಡಲು ಆಗುತ್ತಿಲ್ಲ ಎಂದರೆ ಈ ರೀತಿ ಯಾವುದೇ ಸಂದರ್ಭದಲ್ಲಿಯೂ ಭೌತಶಾಸ್ತ್ರದ ಈ ಪ್ರಯೋಗಗಳನ್ನು ಮಾಡಿ ಗಿಡಮೂಲಿಕೆಗಳಿಂದಲೇ ಈ ಸಮಸ್ಯೆ ಪರಿಹಾರ ಆಗುವ ರೀತಿ ಮಾಡಿಕೊಳ್ಳಬಹುದು.

ಭೂತಶಾಸ್ತ್ರ ಎಂದು ಕೂಡಲೇ ಎಲ್ಲರೂ ನೆಗೆಟಿವ್ ಆಗಿ ಥಿಂಕ್ ಮಾಡುತ್ತಾರೆ. ಭೂತಶಾಸ್ತ್ರ ಎಂದರೆ ಅದೊಂದು ಕೆಟ್ಟ ಕಾರ್ಯವಲ್ಲ. ಆದರೆ ಯಾವ ರೀತಿ ಯಾವ ವಸ್ತುಗಳನ್ನು ಉಪಯೋಗಿಸಿಕೊಂಡು ಯಾವ ಕಾರಣಕ್ಕಾಗಿ ಮಾಡುತ್ತಿದ್ದೇನೆ ಎನ್ನುವುದು ಮುಖ್ಯ ಆಗುತ್ತದೆ ಅಷ್ಟೇ. ಕೆಲವೊಂದು ಗಿಡ ಮೂಲಿಕೆಗಳಿಗೆ ವಿಶೇಷ ಶಕ್ತಿ ಇರುತ್ತದೆ. ಇದನ್ನು ಭೂತಶಾಸ್ತ್ರ ಅಲ್ಲದೆ ಆಯುರ್ವೇದದಲ್ಲಿ ಕೂಡ ಬಳಸಿ ವ್ಯಕ್ತಿ ಒಬ್ಬನ ಆರೋಗ್ಯ ಸಮಸ್ಯೆಗಳನ್ನು, ಮಾನಸಿಕ ಸಮಸ್ಯೆಗಳನ್ನು ದೂರ ಮಾಡಲಾಗುತ್ತದೆ.

ಅದೇ ರೀತಿಯ ಗಿಡಮೂಲಿಕೆಗಳನ್ನು ಬಳಸಿಕೊಂಡು ಭೂತಶಾಸ್ತ್ರದ ಮೂಲಕ ಸಹ ಅವರ ಈ ರೀತಿಯ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುತ್ತದೆ. ಹಾಗಾಗಿ ಇದನ್ನು ಸಂಪೂರ್ಣವಾಗಿ ನೆಗೆಟಿವ್ ತಂತ ಎಂದು ಹೇಳಲು ಆಗುವುದಿಲ್ಲ. ಬೆನ್ನತ್ತಿ, ಎಡಮುರಿ, ಬಲಮುರಿ, ಮುಷ್ಟಿ, ವಿಷಮುಷ್ಟಿ ಮುಂತಾದ ಗಿಡಮೂಲಿಕೆಗಳ ಸಹಾಯದಿಂದ ಆಸ್ತಿಗಳನ್ನು ಖರೀದಿ ಮಾಡುವ ರೀತಿ ಹಾಗೂ ಖರೀದಿ ಮಾಡಿರುವ ಆಸ್ತಿಯನ್ನು ಮಾರಾಟ ಆಗುವ ಹಾಗೆ ಮಾಡಿ ನಿಶ್ಚಿಂತೆಯಾಗಿರಬಹುದು.

ಆದರೆ ಯಾವ ಸಮಯದಲ್ಲಿ ಬೇಕಾದರೂ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ. ಒಂದು ಶುಭ ದಿನದಂದು ಒಂದು ಸರಿಯಾದ ವಿಧಾನದಲ್ಲಿ ಹೋಗಿ ಈ ಗಿಡಮೂಲಿಕೆಗಳನ್ನು ಸಂಗ್ರಹಿಸಿ ತಂದು ನಂತರ ಅವುಗಳಿಂದ ಮಾಡಬೇಕಾದ ಪ್ರಯೋಗವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಅಥವಾ ಭೂತಶಾಸ್ತ್ರ ಪರಿಣಿತದಿಂದ ಇದಕ್ಕೆ ಪರಿಹಾರವನ್ನು ಮಾಡಿಸಿಕೊಂಡು ಅದನ್ನು ತಂದ ಮೇಲೆ ಅದೇ ರೀತಿ ಅದನ್ನು ಅನುಷ್ಠಾನ ಮಾಡಿಕೊಂಡು ಪಾಲಿಸಿದಾಗ ಮಾತ್ರ ಇದಕ್ಕೆ ಪರಿಹಾರ ನೂರಕ್ಕೆ ನೂರರಷ್ಟು ಸಿದ್ಧಿ ಆಗುವುದು.

ಹಾಗೆಯೇ ಮಾಡಿದ ತಕ್ಷಣವೇ ಫಲಕಾರಿ ಆಗಿಬಿಡುತ್ತದೆ ಎನ್ನುವುದು ಸುಳ್ಳು. ಅದರದ್ದೇ ಆದ ಸಮಯ ತೆಗೆದುಕೊಳ್ಳುತ್ತದೆ. ನೀವು ಪ್ರಯೋಗ ಮಾಡಿ ನೋಡಿ, ಕೆಲ ಸಮಯ ಆದ ನಂತರ ನ ಇದು ಎಷ್ಟು ಚಮತ್ಕಾರಿಯಾಗಿ ಕೆಲಸ ಮಾಡಿದೆ ಎನ್ನುವುದು ಅರಿವಾಗಿ ಆಶ್ಚರ್ಯ ಆಗುತ್ತದೆ.

Devotional
WhatsApp Group Join Now
Telegram Group Join Now

Post navigation

Previous Post: ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲವೇ, ವಿದ್ಯಾರ್ಜನೆಯಲ್ಲಿ ಅಡಚಣೆಯೇ, ಏಕಾಗ್ರತೆಯಲ್ಲಿ ಕೊರತೆಯೇ ಈ ದೇವಾಲಯಕ್ಕೆ ಭೇಟಿ ಒಮ್ಮೆ ಭೇಟಿ ನೀಡಿ. ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.
Next Post: ದೇವರ ಕೋಣೆಯಲ್ಲಿ ಈ ಒಂದು ವಸ್ತು ಇಟ್ಟರೆ ಸಾಕು, ನಿಮ್ಮ ಮನೆಯ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore