Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಕುಡಿತದ ಚಟ ಬಿಡಿಸುವ ಮನೆಮದ್ದು.!

Posted on June 21, 2023 By Kannada Trend News No Comments on ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಕುಡಿತದ ಚಟ ಬಿಡಿಸುವ ಮನೆಮದ್ದು.!

 

ಕುಡಿದ ಚಟ ಎನ್ನುವುದು ಒಂದು ಸಾಮಾಜಿಕ ಪಿಡುಗು ಎಂದು ಹೇಳಬಹುದು. ಯಾಕೆಂದರೆ ಒಬ್ಬ ವ್ಯಕ್ತಿ ಕುಡಿತಕ್ಕೆ ದಾಸನಾದರೆ ಆತನ ಆರೋಗ್ಯ ಹದ ಗೆಡುವುದು ಮಾತ್ರವಲ್ಲದೆ ಆತನನ್ನೇ ಅವಲಂಬಿತವಾಗಿದ್ದ ಅವನ ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ಜೊತೆಗೆ ಅವರ ಮಾನಸಿಕ ನೆಮ್ಮದಿಯನ್ನು ಹಾಳಾಗುತ್ತದೆ, ಆತನ ಮಕ್ಕಳ ಉಜ್ವಲ ಭವಿಷ್ಯ ಹಾಳಾಗಿ ಪರೋಕ್ಷವಾಗಿ ದೇಶಕ್ಕೂ ಕೂಡ ಇದು ಹಾನಿ.

ಕುಡಿತದ ಚಟವನ್ನು ಬಿಡಿಸಲು ಪ್ರತಿಯೊಂದು ಕುಟುಂಬದಲ್ಲಿರುವ ಮಹಿಳೆಯರು ಕೂಡ ಸಾಕಷ್ಟು ಹರಸಾಹಸಗಳನ್ನು ಪಡುತ್ತಾರೆ. ಇಂಗ್ಲಿಷ್ ಮೆಡಿಸಿನ್ಗಳು ಅಥವಾ ಡಿ ಅಡಿಕ್ಷನ್ ಕೇಂದ್ರಗಳಿಗೆ ಹಾಕಿದರು ಕೂಡ ಗುಣವಾಗಿರುವುದಿಲ್ಲ ಅಂತವರು ಈಗ ನಾವು ಹೇಳುವ ಈ ಮನೆಮದ್ದನ್ನು ತಪ್ಪದೆ ಒಂದು ತಿಂಗಳ ಮಾಡಿ ಸಾಕು ಜೀವನಪೂರ್ತಿ ಅವರು ಕುಡಿತ ಅಥವಾ ಇನ್ಯಾವುದೇ ದುಷ್ಚಟಗಳ ಸಹವಾಸಕ್ಕೆ ಹೋಗುವುದಿಲ್ಲ.

ಧೂಮಪಾನ, ಮಧ್ಯಪಾನ, ತಂಬಾಕು ಗುಟ್ಕಾ ಸೇವನೆ ಈ ರೀತಿ ಯಾವುದೇ ಕೆಟ್ಟ ಅಭ್ಯಾಸವನ್ನು ಹೊಂದಿದ್ದರೂ ಕೂಡ ಅವರ ಮನಸ್ಸು ಪರಿವರ್ತನೆಯಾಗಿ ಅವರೇ ಬದಲಾಗುವಂತೆ ಚಿಕಿತ್ಸೆ ನೀಡುತ್ತದೆ ಈ ಔಷಧಿ. ಇದನ್ನು ಮಾಡಲು ದುಬಾರಿ ಖರ್ಚು ಆಗುವುದು. ಮನಸ್ಸಿನ ರಜಸು ಗುಣವನ್ನು ಹೋಗಿಸಿ ಸಾತ್ವಿಕ ಭಾವನೆಯನ್ನು ತರುವ ಪಾಸಿಟಿವ್‌ ಸ್ಟಿಮುಲೆಂಟ್ ಆಹಾರ ಪದಾರ್ಥಗಳಿಂದ ಈ ಮನೆ ಮದ್ದನ್ನು ಮಾಡಬಹುದು.

ಇವುಗಳ ಸೇವನೆಯು ಮನಸ್ಸನ್ನು ಪರಿವರ್ತನೆಗೆ ತಂದು ಯಾವುದೇ ಕೆಟ್ಟ ಅಭ್ಯಾಸಗಳ ರೂಢಿ ಇದ್ದರೂ ಕೂಡ ನಿಧಾನವಾಗಿ ಅದರಿಂದ ಮುಕ್ತರಾಗಲು ಮನಸ್ಸನ್ನು ಎಚ್ಚರಗೊಳಿಸುತ್ತದೆ. ಈ ಕಾರಣದಿಂದ ಅವರಾಗಿಯೇ ದುಷ್ಚಟಗಳಿಂದ ಹೊರ ಬರುತ್ತಾರೆ.
ಇದನ್ನು ಮಾಡಲು ಏಲಕ್ಕಿ, ಬಜೆ, ಓಂಕಾಳು, ಜೀರಿಗೆ, ಒಣ ಶುಂಠಿ, ಇಷ್ಟು ಇದ್ದರೆ ಸಾಕು.

ಇದೆಲ್ಲವನ್ನು ಕೂಡ ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಗ್ರೈಂಡ್ ಮಾಡಿ ನಂತರ ಒಂದು ಬಟ್ಟೆಯ ಸಹಾಯದಿಂದ ಅದನ್ನು ಸೋಸಿ ನೈಸ್ ಪೌಡರ್ ಮಾಡಿ ಇಟ್ಟುಕೊಳ್ಳಿ. ಈ ಪೌಡರ್ ಅನ್ನು ಒಂದು ಡಬ್ಬದಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು. ಬಳಿಕ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಊಟಕ್ಕೂ ಮುನ್ನ ಒಂದು ಲೀಟರ್ ನೀರಿಗೆ ಎರಡರಿಂದ ಮೂರು ಚಮಚ ಈ ಪೌಡರ್ ಅನ್ನು ಹಾಕಿ ಚೆನ್ನಾಗಿ ಕುದಿಸಿ.

ಒಂದು ಲೀಟರ್ ನೀರು 100ml ಆಗುವವರೆಗೂ ಕೂಡ ನೀರು ಕುದಿಯಬೇಕು. 200 ml ಗೆ ಅಂದಾಗ ಚೂರು ಬೆಲ್ಲವನ್ನು ಇದಕ್ಕೆ ಹಾಕಿ 100ml ಆಗುವವರೆಗೂ ಕೂಡ ಚೆನ್ನಾಗಿ ಕುದಿಸಿ, ಅದನ್ನು ಶೋಧಿಸದೆ ಕುಡಿಯಲು ಆ ವ್ಯಕ್ತಿಗೆ ಕೊಡಿ. ಒಂದು ತಿಂಗಳಿನವರೆಗೆ ಪ್ರತಿದಿನವೂ ಕೂಡ ತಪ್ಪದೇ ಬೆಳಗ್ಗೆ ಹಾಗೂ ರಾತ್ರಿ ಇದರ ಸೇವನೆ ಮಾಡುತ್ತಾ ಬಂದರೆ ಆಶ್ಚರ್ಯಕರ ರೀತಿಯಲ್ಲಿ ಅವರೇ ಚಟದಿಂದ ಹೊರ ಬರುತ್ತಾರೆ.

ಜೊತೆಗೆ ಒಣಶುಂಠಿ, ಏಲಕ್ಕಿ, ಓಂ ಕಾಳು, ಜೀರಿಗೆ ಕಾಳು, ಬಜೆ ಇವುಗಳಲ್ಲಿರುವ ಔಷಧೀಯ ಅಂಶಗಳು ದೇಹದಲ್ಲಿ ರಕ್ತ ಶುದ್ಧಿಯಾಗಲು ಜೀರ್ಣಾಂಗ ವ್ಯವಸ್ಥೆ ಶುದ್ದಿ ಆಗಲು ರಕ್ತನಾಳಗಳಲ್ಲಿ ಇರುವ ಬ್ಲಾಕೇಜ್ ಕ್ಲಿಯರ್ ಆಗಲು ಸಹಾಯ ಮಾಡುತ್ತದೆ. ಅವರು ಆರೋಗ್ಯವಾಗಿ ಸದೃಢವಾಗುವುದರ ಜೊತೆಗೆ ಇನ್ನೆಂದು ಕೂಡ ಧೂಮಪಾನ ಮದ್ಯಪಾನ ಮಾಡುವುದಿಲ್ಲ.

90%ರಷ್ಟು ಜನ ಇದರಿಂದ ಪರಿಹಾರ ಕಂಡುಕೊಂಡಿದ್ದಾರೆ. ಒಂದು ವೇಳೆ ಇದು ವರ್ಕ್ ಆಗಲಿಲ್ಲ ಎಂದರೆ ಆಯುರ್ವೇದ ಮೆಡಿಸನ್ ಆದ ನಶಾ ಮುಕ್ತ ಚೂರ್ಣವನ್ನು ಅವರು ಸೇವಿಸುವ ಆಹಾರ ಪದಾರ್ಥದಲ್ಲಿ ದಿನಕ್ಕೆ ಒಂದು ಬಾರಿ ಅವರಿಗೆ ಗೊತ್ತಾಗದಂತೆ ಹಾಕಿ ಕೊಡಬಹುದು. ಒಂದು ತಿಂಗಳು ಈ ರೀತಿ ನಶಮುಕ್ತ ಚೂರ್ಣ ಸೇವನೆ ಮಾಡಿದ ಮೇಲೆ ಅವರು ಕೆಟ್ಟ ಅಭ್ಯಾಸಗಳಿಂದ ಮುಕ್ತರಾಗುತ್ತಾರೆ.

Health Tips
WhatsApp Group Join Now
Telegram Group Join Now

Post navigation

Previous Post: ಇನ್ಮೇಲೆ ಆಸ್ತಿ ರಿಜಿಸ್ಟರ್ ಮಾಡಿಸಿದ್ರೆ ಸಾಲಲ್ಲ, ಆಸ್ತಿ ವಿಚಾರವಾಗಿ ಹೊಸ ರೂಲ್ಸ್ ಜಾರಿ. ಈ ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ಆಸ್ತಿ ನಿಮ್ಮ ಸ್ವಂತದಾಗುತ್ತೆ.!
Next Post: ವರ್ಷಕ್ಕೆ ಕೇವಲ 4 ದಿನ ಮಾತ್ರ ಕೆಲಸ, ಸಂಬಳ ಮಾತ್ರ 1 ಕೋಟಿ, ಯಾವುದೇ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಈ ಕೆಲಸಕ್ಕೆ ಸೇರಿಕೊಳ್ಳಬಹುದು.! ಅದ್ಯಾವ ಹುದ್ದೆ ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore