ಹಂಸಲೇಖ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಂಗೀತ ಮಾಂತ್ರಿಕ ಇಲ್ಲಿಯವರೆಗೂ ಕೂಡ ಸುಮಾರು 30 ಸಾವಿರಕ್ಕೂ ಹೆಚ್ಚು ಹಾಡನ್ನು ರಚನೆ ಮಾಡಿದ್ದಾರೆ. ಪ್ರೇಮಲೋಕದಿಂದ ಪ್ರಾರಂಭವಾದಂತ ಇವರ ಸಿನಿಮಾ ಜರ್ನಿ ಇಂದಿಗೂ ಕೂಡ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಹಲವಾರು ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ಬರೆದುಕೊಟ್ಟಂತಹ ಖ್ಯಾತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ರವಿಚಂದ್ರನ್ ಅವರ ಬಹುತೇಕ ಎಲ್ಲಾ ಸಿನಿಮಾಗಳಿಗೂ ಕೂಡ ಹಂಸಲೇಖ ಅವರೇ ಸಂಗೀತ ಸಂಯೋಜನೆಯನ್ನು ಮಾಡಿರುವುದು. ಹಲವಾರು ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಯನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ ಇತ್ತೀಚಿನ ದಿನದಲ್ಲಿ ರಿಯಾಲಿಟಿ ಶೋನಲ್ಲಿಯೂ ಕೂಡ ಪಾಲ್ಗೊಳ್ಳುತ್ತಿರುವುದನ್ನು ನೀವು ನೋಡೇ ಇದ್ದೀರಾ. ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ ಸರಿಗಮಪ ಎಂಬ ಕಾರ್ಯಕ್ರಮದಲ್ಲಿ ಮಹಾ ಗುರುಗಳಾಗಿ ಕಾಣಿಸಿಕೊಳ್ಳುತ್ತಾರೆ.
ಇದರ ಜೊತೆಗೆ ಅವರದ್ದೇ ಆದಂತಹ ಒಂದು ಮ್ಯೂಸಿಕ್ ಕ್ಲಾಸನ್ನು ಒಳಗೊಂಡಿದ್ದಾರೆ ಈ ಒಂದು ಸಂಗೀತ ತರಬೇತಿ ಕೇಂದ್ರದಲ್ಲಿ ಬಡವರಿಗೆ ಮತ್ತು ಸಂಗೀತ ಕಲಿಯುವಂತಹ ಆಸಕ್ತಿ ಉಳ್ಳಂತಹ ದೀನ ವರ್ಗದವರಿಗೆ ಉಚಿತವಾಗಿ ಸಂಗೀತವನ್ನು ಹೇಳಿಕೊಡುತ್ತಿದ್ದಾರೆ. ನಿಜಕ್ಕೂ ಕೂಡ ಹಂಸಲೇಖ ಅವರು ಸಾಹಿತ್ಯ ಕೊಡು ಲೋಕಕ್ಕೆ ಹಲವಾರು ಕೊಡುಗೆಯನ್ನು ನೀಡಿದ್ದಾರೆ. ಇದರ ಜೊತೆಗೆ ರವಿಚಂದ್ರನ್ ಹಾಗೂ ಹಂಸಲೇಖ ಅವರ ಬಾಂಧವ್ಯ ಎಂತಹದು ಅಂತ ನಿಮಗೆ ತಿಳಿದೇ ಇದೆ. ಒಂದು ವೇಳೆ ರವಿಚಂದ್ರನ್ ಅವರು ಅವಕಾಶ ಕೊಡದೆ ಇದ್ದಿದ್ದರೆ ಇಂದು ಹಂಸಲೇಖ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಣಿಸುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಹಾಗಾಗಿ ಹಂಸಲೇಖ ಅವರು ಎಲ್ಲೇ ಹೋದರು ಕೂಡ ರವಿಚಂದ್ರನ್ ಅವರನ್ನು ಸ್ಮರಿಸುತ್ತಾರೆ ಹಾಗೂ ಅವರೇ ನನ್ನ ಬದುಕನ್ನು ಕಟ್ಟಿಕೊಟ್ಟಿದ್ದು ಎಂಬ ಮಾತನ್ನು ಕೂಡ ಹೇಳುತ್ತಾರೆ.
ಇನ್ನು ಮೊನ್ನೆಷ್ಟೇ ರವಿಚಂದ್ರನ್ ಅವರ ಮಗನ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಮದುವೆಗೆ ಚಿತ್ರರಂಗದವರು ಸೇರಿದಂತೆ ಕುಟುಂಬಸ್ಥರು ಬಂಧು ಬಳಗದವರು ಎಲ್ಲರೂ ಕೂಡ ನೆರೆದಿದ್ದರು ಎರಡು ದಿನಗಳ ಕಾಲ ರಿಸೆಪ್ಶನ್ ಸಮಾರಂಭ ಏರ್ಪಟ್ಟಿತು. ಈ ಒಂದು ಆರತಕ್ಷತೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಸಾಕಷ್ಟು ನಟ ನಟಿಯರು ಪಾಲ್ಗೊಂಡಿದ್ದರು ಶಿವಣ್ಣ ರಾಘವೇಂದ್ರ ರಾಜ್ ಕುಮಾರ್ ಕಿರುತ ನಟಿ ಉಮಾಶ್ರೀ ಹಾಗೂ ಶೃತಿ ವಿಜಯ ರಾಘವೇಂದ್ರ ಅಕುಲ್ ಬಾಲಾಜಿ ರಚಿತಾ ರಾಮ್ ಕಿಚ್ಚ ಸುದೀಪ್ ನಟ ದರ್ಶನ್ ಹೀಗೆ ಸಾಕಷ್ಟು ನಟರು ಪಾಲ್ಗೊಂಡಿದ್ದರು. ಎಲ್ಲರೂ ಕೂಡ ನೂತನವಾಗಿ ವಿವಾಹ ವಾದಂತಹ ಮನೋರಂಜನ್ ಮತ್ತು ಸಂಗೀತ ಅವರಿಗೆ ಶುಭಾಶಯಗಳು ಕೋರಿ ಹೋಗಿದ್ದರು. ರವಿಚಂದ್ರನ್ ಮತ್ತು ಹಂಸಲೇಖ ಚಿತ್ರರಂಗದಲ್ಲಿ ಅದೆಷ್ಟು ಒಳ್ಳೆಯ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತು ಮಧ್ಯೆ ಭಿನ್ನಾಭಿಪ್ರಾಯಗಳು ಬಂದಿರಬಹುದು.
ರವಿ ಚಿತ್ರಗಳಿಗೆ ಹಂಸಲೇಖ ಸಂಗೀತ ನೀಡಿರುವುದು ನಿಂತಿರಬಹುದು ಆದರೆ, ಅವರಿಬ್ಬರ ಗೆಳೆತನ ಈಗಲೂ ಹಾಗೆಯೇ ಇದೆ. ರವಿಚಂದ್ರನ್ರನ್ನು ಯಜಮಾನ್ರೇ ಎಂದು ಕರೆಯುವ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಹಂಸಲೇಖ. ಅದು ರವಿಚಂದ್ರನ್ ಮಗಳ ಮದುವೆಯಲ್ಲೂ ಸಾಬೀತಾಯಿತು ಮೇ 28,29ರಂದು ರವಿಚಂದ್ರನ್ ಮಗಳು ಗೀತಾಂಜಲಿ ಮದುವೆ ಯಾಗಿದ್ದು ಆ ಮದುವೆಗೆ ಸಂಗೀತ ಕಾರ್ಯಕ್ರಮವನ್ನು ಹಂಸಲೇಖ ಆಯೋಜಿಸಿದ್ದರು. ರವಿಚಂದ್ರನ್ ತಮ್ಮ ಮಗಳಿಗಾಗಿಯೇ ಒಂದು ಹಾಡನ್ನು ಬರೆದು, ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಅವರ ಮಗಳ ಮದುವೆಯ ಇಡೀ ಸಂಗೀತ ಕಾರ್ಯಕ್ರಮನ್ನು ಅವರ ಗೆಳೆಯ ಹಂಸಲೇಖ ನಿರ್ದೇಶನ ಮಾಡಿದ್ದಾರೆ.
ಇದೀಗ ಪುತ್ರ ಮನೋರಂಜನ್ ಅವರ ವಿವಾಹಕ್ಕೂ ಆಗಮಿಸಿ ಇಬ್ಬರ ಸ್ನೇಹವನ್ನು ಮತ್ತಷ್ಟು ಗಟ್ಟಿ ಗೊಳಿಸಿದ್ದಾರೆ ಎನ್ನಬಹುದು. ಮದುವೆಗೆ ಬಂದದ್ದು ಮಾತ್ರವಲ್ಲದೇ ಭರ್ಜರಿ ಗಿಫ್ಟ್ ಅನ್ನು ಸಹ ತಂದಿದ್ದಾರೆ. ರವಿಚಂದ್ರನ್ ಮಗನ ಮದುವೆಗೆ ದುಬಾರಿ ಬೆಲೆ ಬಾಳುವ ಆಭರಣ ಒಂದನ್ನು ಗಿಫ್ಟಾಗಿ ನೀಡಿದ್ದಾರೆ ಒದರ ಬೆಲೆ ಸುಮಾರು 10 ಲಕ್ಷ ರೂಪಾಯಿ. ಸದ್ಯಕ್ಕೆ ಹಂಸಲೇಖ ಅವರು ರವಿಚಂದ್ರನ್ ಪುತ್ರ ಮನೋರಂಜನ್ ಅವರಿಗೆ ನೀಡಿದಂತಹ ಗಿಫ್ಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.