ನಟ ಚಂದನ್ ಕಿರುತರೆ ಮತ್ತು ಬೆಳಿತರೆ ಎರಡರಲ್ಲೂ ಕೂಡ ಛಾಪು ಮೂಡಿಸಿದಂತಹ ನಾಯಕ ನಟ ಲಕ್ಷ್ಮಿ ಬಾರಮ್ಮ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವ ಮೂಲಕ ಹೆಚ್ಚು ಕೀರ್ತಿಯನ್ನು ಸಂಪಾದನೆ ಮಾಡಿದರು. ಈ ಒಂದು ಧಾರವಾಹಿಯಲ್ಲಿ ನಟನೆ ಮಾಡಿದ ನಂತರ ಇವರಿಗೆ ಬೇಡಿಕೆ ಹೆಚ್ಚಾಗಿದ್ದು ಕನ್ನಡ ಮಾತ್ರವಲ್ಲದೆ ತೆಲುಗುನಲ್ಲಿಯೂ ಕೂಡ ಅಭಿನಯಿಸುವುದಕ್ಕೆ ಪ್ರಾರಂಭ ಮಾಡಿದರು. ಅಷ್ಟೇ ಅಲ್ಲದೆ ಅರ್ಜುನ್ ಸರ್ಜನ್ ಅವರ ಮಗಳು ಐಶ್ವರ್ಯ ಸರ್ಜಾ ಅವರ ಜೊತೆಗೆ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿಯೂ ಕೂಡ ಗುರುತಿಸಿಕೊಂಡರು. ಕೇವಲ ಇಷ್ಟು ಮಾತ್ರವಲ್ಲದೆ ಹಲವಾರು ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದರೆ ಒಟ್ಟಾರೆಯಾಗಿ ಹೇಳುವುದಾದರೆ ಬೆಳ್ಳಿತರೆ ಮತ್ತು ಹೀರಿದರೆ ಎರಡರಲ್ಲೂ ಕೂಡ ಸಕ್ರಿಯವಾಗಿ ಇದ್ದರೂ.
ಆದರೆ ಕಳೆದ ಕೆಲವು ದಿನಗಳಿಂದ ಯಾಕೋ ಚಂದನ್ ಅವರ ನಸೀಬು ಚೆನ್ನಾಗಿಲ್ಲ ಅಂತ ಕಾಣುತ್ತದೆ ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಏನೇ ಮಾಡಿದರು ಕೂಡ ಒಂದಲ್ಲ ಒಂದು ತೊಂದರೆಗಳು ಎದುರಾಗುತ್ತಲೇ ಇರುತ್ತದೆ.ಬಹೌದು ಕಳೆದ ತಿಂಗಳಿನಲ್ಲಿ ನಟ ಚಂದನ್ ಅವರು ತೆಲುಗು ಧಾರವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಅಲ್ಲಿ ಇರುವಂತಹ ಟೆಕ್ನಿಷಿಯನ್ ಗೆ ನಿಂದಿಸಿದರೆ ಎಂಬ ಆಪಾದನೆಯನ್ನು ವರಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ತೆಲುಗು ಧಾರಾವಾಹಿ ತಂಡದಲ್ಲಿ ಕೆಲಸ ಮಾಡುವಂತಹ ವ್ಯಕ್ತಿ ಒಬ್ಬರು ಚಂದನ್ ಮೇಲೆ ಕೈ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದರಿಂದ ಚಂದನ್ ಅವರ ಮಾನ ಹರಣ ಕೂಡ ಆಗಿತ್ತು ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಚಂದನವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನನ್ನನ್ನು ತೆಲುಗು ಚಿತ್ರರಂಗದ ಅವರು ಅವಮಾನ ಮಾಡಿದ್ದಾರೆ ನಿಂದಿಸಿದ್ದಾರೆ ಹಾಗಾಗಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಕೂಡ ನಾನು ತೆಲುಗು ಧಾರಾವಾಹಿಗಳಲ್ಲಿ ನಟನೆ ಮಾಡುವುದಿಲ್ಲ ಎಂಬ ಹೇಳಿಕೆಯನ್ನು ಕೊಟ್ಟಿದ್ದರು. ಈ ವಿವಾದ ತಣ್ಣಗಾಗುವುದಕ್ಕೆ ಒಂದು ವರಗೆ ಬೇಕಾಯಿತು ನಟ ಚಂದನ್ ಅವರು ಕೇವಲ ಸಿನಿಮಾ ಹಾಗೂ ಧಾರಾವಾಹಿ ಮಾತ್ರವಲ್ಲದೆ ಇದರ ಹೊರತಾಗಿಯೂ ಬಿಸಿನೆಸ್ ಅನ್ನು ಕೂಡ ಮಾಡುತ್ತಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು ನಿನ್ನೆ ರಾತ್ರಿ ಈ ಹೋಟೆಲ್ನಲ್ಲಿ ಕಳ್ಳತನ ಆಗಿದೆ. ನಿನ್ನೆ ತಡರಾತ್ರಿ ನಟ ಚಂದನ್ ದೊನ್ನೆ ಬಿರಿಯಾನಿ ಹೋಟೆಲ್ ಸೇರಿ ನಾಲ್ಕೈದು ಅಂಗಡಿಗಳಲ್ಲಿ ಖದೀಮರು ಕಳ್ಳತನ ಮಾಡಿದ್ದಾರೆ. ಖದೀಮರ ದುಷ್ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಇನ್ನು ಬಿರಿಯಾನಿ ಹೋಟೆಲ್ನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಚಂದನ್ ಕುಮಾರ್ ದೂರು ದಾಖಲಿಸಿದ್ದಾರೆ.
ಸದ್ಯಕ್ಕೆ ಚಂದನ ಅವರ ಪರಿಸ್ಥಿತಿ ಯಾವ ರೀತಿ ಆಗಿದೆ ಅಂದರೆ ನಟನೆ ಮಾಡುವುದಕ್ಕೂ ಅವಕಾಶ ಸಿಗುತ್ತಿಲ್ಲ ಇನ್ನು ಸ್ವಂತ ಬುಸಿನೆಸ್ ತೆರೆದಿರುವ ಅಂಗಡಿಯಲ್ಲೂ ಕೂಡ ಕಳ್ಳತನವಾಗಿದೆ ಇವೆಲ್ಲವನ್ನು ನೋಡುತ್ತಿದ್ದರೆ ಚಂದನ್ ಅವರ ನಸೀಬು ಚೆನ್ನಾಗಿಲ್ಲ ಅಂತ ಅನಿಸುತ್ತದೆ. ಒಂದರ ಹಿಂದೆ ಒಂದರ ಹಾಗೆ ಈ ರೀತಿ ಸಂಕಷ್ಟಗಳು ಎದುರಾದಾಗ ಅದನ್ನು ತಡೆದುಕೊಳ್ಳುವಂತಹ ಶಕ್ತಿ ಯಾವ ಮನುಷ್ಯನಿಗೂ ಕೂಡ ಇರುವುದಿಲ್ಲ ಇನ್ನು ಸೆಲೆಬ್ರಿಟಿಗಳು ಯಾವ ಲೆಕ್ಕ ಎಂಬುದು ಕೆಲವು ಅಭಿಮಾನಿಗಳ ಆಶಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಚಂದನ್ ಅವರ ಈ ಪರಿಸ್ಥಿತಿಯನ್ನು ನೋಡಿದರೆ ನಿಮಗೆ ಏನು ಅನಿಸುತ್ತದೆ ಎಂಬುದನ್ನು ಹೇಳಿ