Home Entertainment ನನ್ಗೂ ನನ್ನ ಅಪ್ಪನಿಗೂ ಸಂಬಂಧನೇ ಇಲ್ಲ ಎಂದ ಶಾಸಕ ಜಮೀರ್ ಪುತ್ರ ಝೈಧ್ ಖಾನ್ ತನ್ನ ಸಿನಿಮಾ ಬಾಯ್ಕಟ್ ಮಾಡ್ತಾರೆ ಅಂತ ಇಷ್ಟೆಲ್ಲಾ ಮಾಡಿದ್ರ ?

ನನ್ಗೂ ನನ್ನ ಅಪ್ಪನಿಗೂ ಸಂಬಂಧನೇ ಇಲ್ಲ ಎಂದ ಶಾಸಕ ಜಮೀರ್ ಪುತ್ರ ಝೈಧ್ ಖಾನ್ ತನ್ನ ಸಿನಿಮಾ ಬಾಯ್ಕಟ್ ಮಾಡ್ತಾರೆ ಅಂತ ಇಷ್ಟೆಲ್ಲಾ ಮಾಡಿದ್ರ ?

0
ನನ್ಗೂ ನನ್ನ ಅಪ್ಪನಿಗೂ ಸಂಬಂಧನೇ ಇಲ್ಲ ಎಂದ ಶಾಸಕ ಜಮೀರ್ ಪುತ್ರ ಝೈಧ್ ಖಾನ್ ತನ್ನ ಸಿನಿಮಾ ಬಾಯ್ಕಟ್ ಮಾಡ್ತಾರೆ ಅಂತ ಇಷ್ಟೆಲ್ಲಾ ಮಾಡಿದ್ರ ?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಾಸಕ ಜಮೀರ್ ಅವರು ಪ್ರತಿನಿಜವೂ ಕೂಡ ಒಂದಲ್ಲ ಒಂದು ಸುದ್ದಿಗೆ ಸದ್ದು ಮಾಡುತ್ತಲೇ ಇರುತ್ತಾರೆ ಅದರಲ್ಲಿಯೂ ಕೂಡ ಕಳೆದ ತಿಂಗಳು ಅಷ್ಟೇ ನಡೆದಂತಹ ಗಣಪತಿಯ ಉತ್ಸವದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದರು. ಹೌದು ಬೆಂಗಳೂರಿನಲ್ಲಿ ಇರುವಂತಹ ಈದ್ಗ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಇಟ್ಟು ಗಣೇಶೋತ್ಸವವನ್ನು ಮಾಡಬೇಕು ಎಂದು ಹಿಂದು ಪರ ಸಂಘಟನೆಗಳು ಮಾತನಾಡಿಕೊಂಡಿದ್ದವು. ಆದರೆ ಈ ವಿಚಾರ ತಿಳಿಯುತ್ತಿದ್ದ ಹಾಗೆ ಚಾಮರಾಜಪೇಟೆಯ ಶಾಸಕರಾದಂತಹ ಜಮೀರ್ ಅವರು ಯಾವುದೇ ಕಾರಣಕ್ಕೂ ಈದ್ಗ ಮೈದಾನದಲ್ಲಿ ಗಣೇಶೋತ್ಸವ ನಡೆಸಬಾರದು ಇದು ಏನಿದ್ದರೂ ಮುಸ್ಲಿಂ ಹಬ್ಬಗಳಲ್ಲಿ ನಮಾಜ್ ಮಾಡುವುದಕ್ಕೆ ಮಾತ್ರ ಸೀಮಿತ ಇಲ್ಲಿ ಏನಾದರೂ ಗಣೇಶೋತ್ಸವ ನಡೆಸಿದರೆ ನಾನು ಕೋರ್ಟ್ ಮೆಟ್ಟಿಲು ಇರುತ್ತೇನೆ ಎಂದು ದೆಹಲಿಯ ಸುಪ್ರೀಂಕೋರ್ಟ್ ಮರೆಯು ಕೂಡ ಹೋಗಿದ್ದರು.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಹಿಂದೂ ಪರ ಸಂಘಟನೆಗಳು ಏನೇ ಆದರೂ ನಾವು ಇಲ್ಲಿ ಗಣೇಶೋತ್ಸವವನ್ನು ನಡೆಸಲೇಬೇಕು ಎಂದು ಅವರು ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರದಿಂದಲೂ ಕೂಡ ಅನುಮತಿ ಪಡೆದು ಅದ್ದೂರಿಯಾಗಿ ಗಣೇಶೋತ್ಸವ ನಡೆಸಲಾಯಿತು. ಈ ಕಾರಣಕ್ಕಾಗಿ ಹಿಂದುಗಳಿಗೆ ಶಾಸಕ ಜಮೀರ್ ಅಂದರೆ ಬಹಳ ಅನ್ನಿ ಆ.ಕ್ರೋ.ಶ ಇದೆಲ್ಲ ಒಂದು ಕಡೆಯಾದರೆ ಶಾಸಕ ಜಮೀರ್ ಅವರ ಪುತ್ರ ಝೈದ್ ಖಾನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬನಾರಸ್ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿದ್ದು ನವೆಂಬರ್ ತಿಂಗಳಿನಲ್ಲಿ ಎಲ್ಲಾ ಥಿಯೇಟರ್ ಗಳಲ್ಲೂ ಕೂಡ ಈ ಸಿಟಿ ಪ್ರದರ್ಶನ ಕಾಣಲಿದೆ.

ಹಾಗಾಗಿ ಕೆಲವು ಹಿಂದುಗಳು ಜಮೀರ್ ಅವರಿಗೆ ಬುದ್ಧಿ ಕಲಿಸಬೇಕಾದರೆ ಅವರ ಮಗನಿಂದಲೇ ಸಾಧ್ಯ ಹಾಗಾಗಿ ಆತನ ಬನಾರಸ್ ಸಿನಿಮಾ ವನ್ನು ಬಾಯಿ ಕಟ್ ಮಾಡಬೇಕು ಆಗ ಜಮೀರ್ ಅವರಿಗೆ ನಮ್ಮ ಕನ್ನಡದ ಶಕ್ತಿ ನಾಡು ನೆಲ ಜಲ ಹಾಗೂ ದೇವರ ಬಗ್ಗೆ ಇರುವಂತಹ ಶಕ್ತಿ ಗೊತ್ತಾಗುತ್ತದೆ ಎಂದು ಬನಾರಸ್ ಸಿನೆಮಾವನ್ನು ಬಾಯಿ ಕಟ್ ಮಾಡುವುದಕ್ಕೆ ಮುಂದಾದರು. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ನೆನ್ನೆಯಷ್ಟೇ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಸೈದ್ ಖಾನ್ ಅವರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಥಿಯೇಟರ್ ಗಳಲ್ಲಿ ಇನ್ನು ಮುಂದೆ ನಾಡಗೀತೆಯನ್ನು ಪ್ರಸಾರ ಮಾಡಬೇಕು ಎಂದು ಮನವಿಯನ್ನು ಇಟ್ಟಿದ್ದರು.

ಅಷ್ಟೇ ಅಲ್ಲದೆ ಬನರಸ್ ಸಿನಿಮಾವನ್ನು ನೀವು ಕೂಡ ಬಂದು ಥಿಯೇಟರ್ ನಲ್ಲಿ ನೋಡಬೇಕು ಎಂದು ಹೇಳಿದರು ಮುಖ್ಯಮಂತ್ರಿಗಳ ಜೊತೆ ಈ ವಿಚಾರವನ್ನು ಚರ್ಚೆ ಮಾಡಿ ಹೊರಬಂದ ನಂತರ ಮಾಧ್ಯಮ ಮಿತ್ರರೊಂದಿಗೆ ಕೂಡ ಮಾತನಾಡಿದರು. ಈ ಸಮಯದಲ್ಲಿ ಮಾಧ್ಯಮದವರು ಮುಖ್ಯಮಂತ್ರಿ ಭೇಟಿಯಾಗುವುದರ ಹಿನ್ನೆಲೆ ಏನು ಒಂದು ಪ್ರಶ್ನೆಯನ್ನು ಕೇಳಿದರೆ ಈ ಪ್ರಶ್ನೆಗೆ ಉತ್ತರಿಸಿದಂತಹ ಝೈದ್ ಖಾನ್ ಅವರು ನಾಡಗೀತೆಯನ್ನು ಪ್ರಸಾರ ಮಾಡಿ ಎಂದು ಮನವಿಯನ್ನು ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ತದನಂತರ ನಿಮ್ಮ ಸಿನಿಮಾವನ್ನು ಬಾಯಿ ಕಟ್ ಮಾಡುತ್ತಿದ್ದರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆಯನ್ನು ಕೇಳಿದ್ದಾರೆ.

ಈ ಸಮಯದಲ್ಲಿ ನಟ ಝೈಧ್ ಖಾನ್ ಅವರು ನಾನೊಬ್ಬ ನಟ ನಾನು ಇಂಡಸ್ಟ್ರಿಗೆ ಸೇರಿದವನು ನನ್ನ ಸಿನಿಮಾವನ್ನು ಯಾಕೆ ಬಾಯಿ ಕಟ್ ಮಾಡುತ್ತಾರೆ. ನಾನು ಅಂತಹ ತಪ್ಪೇನು ಮಾಡಿದ್ದೇನೆ ನಾನು ತಪ್ಪು ಮಾಡಿದ್ದೇನೆ ನನಗೆ ಶಿಕ್ಷೆ ನೀಡುವುದು ಸರಿ ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ ಆಗಿದ್ದರೂ ಕೂಡ ನನ್ನ ಸಿನಿಮಾವನ್ನು ಬಾಯ್ ಕಟ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ನನ್ನ ತಂದೆಯ ಮೇಲೆ ಇರುವಂತಹ ದ್ವೇಷದಿಂದಾಗಿ ನನ್ನ ಸಿನಿಮಾವನ್ನು ತುಳಿಯುವುದಕ್ಕೆ ಹೋಗಬೇಡಿ ನನಗೂ ನನ್ನ ಅಪ್ಪನಿಗೂ ಸಂಬಂಧನೇ ಇಲ್ಲ ಅವರ ರಾಜಕೀಯಕ್ಕೂ ನನ್ನ ಸಿನಿಮಾ ಕೆಲಸಕ್ಕೂ ಸಂಬಂಧವೇ ಇಲ್ಲ ಎಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕೆಲವು ನೆಟ್ಟಿಗರು ಈತ ಹೇಳುವ ವಿಚಾರದಲ್ಲಿಯೂ ನ್ಯಾಯವಿದೆ ಎಂದು ಹೇಳಿದ್ದಾರೆ ಆದರೆ ಇನ್ನೂ ಕೆಲವು ನೆಟ್ಟಿಗರು ಕೇವಲ ಸಿನಿಮಾಗಾಗಿ ನನಗೂ ನನ್ನ ತಂದೆಗೂ ಸಂಬಂಧನೇ ಇಲ್ಲ ಅಂತ ಹೇಳುತ್ತಿದ್ದಾರೆ ಇವನೆಂತ ಮಗ ಇರಬಹುದು ಎಂದು ಈತನ ವಿರುದ್ಧ ಕಿಡಿ ಕಾರಿದ್ದಾರೆ. ಒಟ್ಟಾರೆಯಾಗಿ ಬನಾರಸ್ ಸಿನಿಮಾ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತದೆಯೋ ಅಥವಾ ಬಾಯ್ ಕಟ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here