Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇದೇ ಮೊದಲ ಬಾರಿಗೆ ಸ್ಟೇಜ್ ಮೇಲೆ ಕಣ್ಣೀರು ಹಾಕಿದ ರವಿಚಂದ್ರನ್ ಇವರ ಮಾತು ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ. ರವಿಚಂದ್ರನ್ ನಾ ಈ ಸ್ಥಿತಿಗೆ ಕಾರಣವೇನು ಗೊತ್ತಾ.?

Posted on October 10, 2022 By Kannada Trend News No Comments on ಇದೇ ಮೊದಲ ಬಾರಿಗೆ ಸ್ಟೇಜ್ ಮೇಲೆ ಕಣ್ಣೀರು ಹಾಕಿದ ರವಿಚಂದ್ರನ್ ಇವರ ಮಾತು ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ. ರವಿಚಂದ್ರನ್ ನಾ ಈ ಸ್ಥಿತಿಗೆ ಕಾರಣವೇನು ಗೊತ್ತಾ.?

ಕ್ರೇಜಿಸ್ಟಾರ್ ರವಿಚಂದ್ರನ್ ಒಂದು ಕಾಲದಲ್ಲಿ ಅದ್ದೂರಿಯಾಗಿ ಬೆಳೆದವರು ಐಷಾರಾಮಿ ಜೀವನವನ್ನು ಸಾಗಿಸಿದವರು ಕೈಗೊಂದು ಆಳು ಕಾಲಿಗೊಂದು ಆಳು ಇಟ್ಟುಕೊಂಡಿದ್ದವರು. ಇನ್ನು ರವಿಚಂದ್ರನ್ ಅವರು ಅರ್ಧದಲ್ಲಿ ಶ್ರೀಮಂತರಾದ ಅವರ ವ್ಯಕ್ತಿಯಲ್ಲ ಹುಟ್ಟುತ್ತಾಗಲೇ ಆಗರ್ಭ ಶ್ರೀಮಂತರು ಚಿನ್ನದ ಸ್ಪೂನ್ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದಂತಹ ವ್ಯಕ್ತಿ ಅಂತ ಹೇಳಿದರು ಕೂಡ ತಪ್ಪಾಗಲಾರದು. ರವಿಚಂದ್ರನ್ ಅವರ ತಂದೆ ವೀರ ಸ್ವಾಮಿಯವರು ಖ್ಯಾತ ಪ್ರೊಡ್ಯೂಸರ್ ಈಶ್ವರಿ ಎಂಬ ಪ್ರೊಡಕ್ಷನ್ಸ್ ಮೂಲಕ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿ ಅಪಾರ ಆಸ್ತಿಯನ್ನು ಸಂಪಾದನೆ ಮಾಡಿದರು.

ಆದರೆ ರವಿಚಂದ್ರನ್ ಅವರು ಮಾತ್ರ ಆಸ್ತಿಯನ್ನು ಸಂಪಾದನೆ ಮಾಡುವ ಗುರಿಯನ್ನು ಹೊಂದಿರಲಿಲ್ಲ ಬದಲಿಗೆ ಸಿನಿಮಾವನ್ನು ಅದ್ದೂರಿ ತನದಿಂದ ತೋರಿಸಬೇಕು ಜನರಿಗೆ ಮನರಂಜನೆಯನ್ನು ನೀಡಬೇಕು ಎಂಬ ಆಸೆ ಕನಸನ್ನು ಮಾತ್ರ ಒತ್ತಿದ್ದರು. ಈ ಕಾರಣಕ್ಕಾಗಿಯೇ ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಮಲ್ಲ, ಏಕಾಂಗಿ ಈ ರೀತಿ ಅದ್ದೂರಿ ಮೇಕಿಂಗ್ ಇರುವಂತಹ ಸಿನಿಮಾಗಳನ್ನು ತೆಗೆಯುತ್ತಾರೆ. ಆದರೆ ಈ ಸಿನಿಮಾಗಳು ಒಳ್ಳೆಯ ಹೆಸರನ್ನು ಪಡೆದರು ಕೂಡ ಬಾಕ್ಸ್ ಆಫೀಸ್ ನಲ್ಲಿ ಮಾತ್ರ ಹೆಚ್ಚು ಕಲೆಕ್ಷನ್ ಮಾಡಲಿಲ್ಲ ಕೇವಲ ಇದಿಷ್ಟು ಮಾತ್ರವಲ್ಲದೆ ರವಿಚಂದ್ರನ್ ರವರು ಇಲ್ಲಿಯವರೆಗೂ ತೆಗೆದಂತ ಎಲ್ಲಾ ಸಿನಿಮಾಗಳಲ್ಲೂ ಕೂಡ ಕೋಟಿ ಕೋಟಿ ಖರ್ಚು ಮಾಡಿದ್ದಾರೆ.

ಸಾಮಾನ್ಯವಾಗಿ ಯಾವುದೇ ನಟ ಆಗಿರಬಹುದು ನಿರ್ಮಾಪಕ ಆಗಿರಬಹುದು ಅಥವಾ ನಿರ್ದೇಶಕ ಆಗಿರಬಹುದು ಸಿನಿಮಾವನ್ನು ಕೈಗೆತ್ತಿಕೊಂಡರೆ ಸಿನಿಮಾ ಚೆನ್ನಾಗಿ ಮೂಡಿ ಬರಬೇಕು ಇದರಿಂದ ಜನರಿಗೆ ಮನರಂಜನೆ ನೀಡಬೇಕು ಅದಕ್ಕಿಂತಲೂ ಹೆಚ್ಚಾಗಿ ಲಾಭ ದೊರೆಯಬೇಕು ಎಂಬ ದೃಷ್ಟಿಯಿಂದ ಸಿನಿಮಾವನ್ನು ತೆಗೆಯುತ್ತಾರೆ. ಆದರೆ ರವಿಚಂದ್ರನ್ ರವರು ಮಾತ್ರ ಎಂದಿಗೂ ಕೂಡ ಈ ಸಿನಿಮಾದಿಂದ ನಾನು ಕೋಟ್ಯಾಧಿಪತಿ ಆಗಬೇಕು, ಈ ಸಿನಿಮಾದಿಂದ ನನಗೆ ಹೆಚ್ಚು ಲಾಭ ಸಿಗಬೇಕು ಅಂತ ಬಯಸುತ್ತಿರಲಿಲ್ಲವಂತೆ. ಬದಲಿಗೆ ಈ ಸಿನಿಮಾದಿಂದ ಹೆಚ್ಚು ಜನರಿಗೆ ನಾನು ಇನ್ನೂ ಹತ್ತಿರವಾಗಬೇಕು ಅವರಿಗೆ ಮನರಂಜನೆ ದೊರೆಯಬೇಕು ಎಂಬ ಆಸೆಯನ್ನು ಹೊಂದಿದ್ದರಂತೆ.

ಈ ಕಾರಣಕ್ಕಾಗಿಯೇ ರವಿಚಂದ್ರನ್ ಅವರು ತಮ್ಮ ಎಲ್ಲಾ ಆಸ್ತಿಯನ್ನು ಮಾರಿಕೊಂಡು ಎಲ್ಲಾ ಹಣವನ್ನು ಕೂಡ ಸಿನಿಮಾಗಾಗಿಯೇ ಮೀಸಲಿಟ್ಟಿದ್ದಾರೆ. ಆದರೆ ಅದೃಷ್ಟ ಎಂಬುದು ಇವರ ಕೈಹಿಡಿಯಲಿಲ್ಲ ಅಂತಾನೇ ಹೇಳಬಹುದು ಯಾವ ಸಿನಿಮಾದಿಂದಲೂ ಕೂಡ ಇವರಿಗೆ ಲಾಭ ಎಂಬುದು ದೊರೆಯುವುದಿಲ್ಲ. ಇತ್ತೀಚಿಗಷ್ಟೇ ತಾವು ವಾಸವಾಗಿದ್ದಂತಹ ಮನೆಯನ್ನು ಕೂಡ ಬಿಟ್ಟು ಇದೀಗ ಬೇರೆಡೆಗೆ ಹೋಗಿದ್ದಾರೆ. ಒಂದು ಕಾಲದಲ್ಲಿ ಕೋಟಿ ಕೋಟಿ ಸಂಪತ್ತಿನ ಒಡೆಯ ಆಗಿದ್ದಂತಹ ರವಿಚಂದ್ರನ್ ಇದೀಗ ಸಾಲದಲ್ಲಿದ್ದಾರೆ.

ಹೌದು ನೀವು ಇದನ್ನು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ ರವಿಚಂದ್ರನ್ ಅವರ ಕೈಕೆಳಗೆ ದಿನಗೂಲಿ ಮಾಡುತ್ತಿದ್ದಂತಹ ಕೆಲಸಗಾರರೊಬ್ಬ ಇದೀಗ ರವಿಚಂದ್ರನ್ ಅವರಿಗೆ ಒಂದುವರೆ ಕೋಟಿ ರೂಪಾಯಿ ನೀಡಿ ತಮ್ಮ ಸಿನಿಮಾದಲ್ಲಿ ನಟನೆ ಮಾಡಲು ಆಫರ್ ಕೊಟ್ಟರಂತೆ. ಇದನ್ನು ಹೇಳಿಕೊಂಡಂತಹ ರವಿಚಂದ್ರನ್ ನನ್ನ ಕೈ ಕೆಳಗೆ ಇದ್ದಂತಹ ಎಲ್ಲಾ ವ್ಯಕ್ತಿಗಳು ಕೂಡ ಇದೀಗ ಬೃಹದಾಕಾರವಾಗಿ ಬೆಳೆದಿದ್ದಾರೆ ಎಂದರೆ ನನಗೆ ಹೆಮ್ಮೆ ಇದೆ ಅಂದಿದ್ದಾರೆ. ನಾನು ಮನಸ್ಸು ಮಾಡಿದ್ರೆ ಕಂಠೀರವ ಸ್ಟುಡಿಯೋ ಪಕ್ಕದಲ್ಲಿಯೇ ನೂರಾರು ಎಕರೆ ಜಮೀನು ಖರೀದಿ ಮಾಡುತ್ತಿದ್ದೆ ಆದರೆ ನಾನು ಎಂದಿಗೂ ಕೂಡ ಆಸ್ತಿಗಾಗಿ ಆಸೆ ಪಟ್ಟವನಲ್ಲ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.

ರವಿಚಂದ್ರನ್ ರವರು ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮನೆ ಖಾಲಿ ಮಾಡಿದ್ದರ ಬಗ್ಗೆ ಗಾಂಧಿನಗರದಲ್ಲಿ ವಿಧವಿಧವಾಗಿ ಮಾತನಾಡುತ್ತಿದ್ದಾರಂತೆ. ಈ ವಿಚಾರಗಳನ್ನೆಲ್ಲ ಕೇಳಿಸಿಕೊಂಡ ರವಿಚಂದ್ರನ್ ಅವರು ಬೇಸರಗೊಂಡು ಇದೀಗ ಡ್ರಾಮಾ ಜೂನಿಯರ್ಸ್ ವೇದಿಕೆಯ ಮೇಲೆ ಭಾವುಕರಾಗಿ ತಮ್ಮ ಮನದಾಳದ ಮಾತುಗಳನ್ನು ಆಡುವ ಮೂಲಕ ಕಣ್ಣೀರು ಹಾಕಿದ್ದಾರೆ. ಆ ವಿಡಿಯೋ ಈ ಕೆಳಗಿನ ನೋಡಿ ಇದನ್ನು ನೋಡಿ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Anchor Anushree, Drama Juniors, Ravichandran
WhatsApp Group Join Now
Telegram Group Join Now

Post navigation

Previous Post: ಜನ ಮೆಚ್ಚಿದ ನಾಯಕಿ ಅವಾರ್ಡ್ ಪಡೆದ ನಿವೇದಿತಾ ಗೌಡ, ಅವಾರ್ಡ್ ಪಡೆದ ನಂತರ ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ ಯಾಕೆ ಗೊತ್ತಾ.?
Next Post: ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಅನ್ನು ಚಿರು ಪರವಾಗಿ ಪಡೆದ ಮೇಘನಾ ರಾಜ್ ಚಿರು ಫೋಟೊ ಮುಂದೆ ಅವಾರ್ಡ್ ಇಟ್ಟು ಹೇಳಿದ್ದೇನು ಗೊತ್ತಾ.? ಈ ಮಾತು ಕೇಳಿದ್ರೆ ನಿಜಕ್ಕೂ ಕಣ್ಣು ವದ್ದೆಯಾಗುತ್ತೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore