Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದರ್ಶನ್ ಈಗಲೂ ನನ್ನ ನೆನಪಿಟ್ಟುಕೊಂಡಿದ್ದಾರೆ ಆದ್ರೆ ಶಿವಣ್ಣ ಹಾಗಲ್ಲ, ನೀವು ಯಾರು ಗೊತ್ತೇ ಇಲ್ಲ ಅಂತ ಹೇಳಿದ್ರು ಎಂದ ನಟಿ ಲಲಿತಮ್ಮ.

Posted on October 11, 2022October 11, 2022 By Kannada Trend News No Comments on ದರ್ಶನ್ ಈಗಲೂ ನನ್ನ ನೆನಪಿಟ್ಟುಕೊಂಡಿದ್ದಾರೆ ಆದ್ರೆ ಶಿವಣ್ಣ ಹಾಗಲ್ಲ, ನೀವು ಯಾರು ಗೊತ್ತೇ ಇಲ್ಲ ಅಂತ ಹೇಳಿದ್ರು ಎಂದ ನಟಿ ಲಲಿತಮ್ಮ.

ನಟಿ ಲಲಿತಮ್ಮ ದುನಿಯಾ ಸಿನಿಮಾ ಸುಂಟರಗಾಳಿ ಸಿನಿಮಾ ಹಾಗೂ ಕನ್ನಡದ ಬಹುತೇಕ ಸಿನಿಮಾದಲ್ಲಿ ಖಳನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ಪ್ರಧಾನ ಪಾತ್ರದಲ್ಲಿಯೂ ಕೂಡ ಅಭಿನಯಿಸಿದ್ದಾರೆ ಕೆಲವು ಬಾರಿ ಪೋಷಕ ಸ್ಥಾನದಲ್ಲಿಯೂ ನಿಂತು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ನಟಿ ಲಲಿತಮ್ಮ ಅವರು ಇಲ್ಲಿಯವರೆಗೂ ಕನ್ನಡದಲ್ಲಿ ಸುಮಾರು 50ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಬಹುತೇಕ ಎಲ್ಲಾ ಸಿನಿ ರಸಿಕರಿಗೂ ಕೂಡ ಲಲಿತಮ್ಮ ಅವರ ಪರಿಚಯ ಇದ್ದೇ ಇರುತ್ತದೆ ಅದರಲ್ಲಿಯೂ ಕೂಡ ಸುಂಟರಗಾಳಿ ಸಿನಿಮಾದಲ್ಲಿ ನಟಿ ಲಲಿತಮ್ಮ ಅವರ ಅದ್ಭುತವಾದ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ.

ಚಿತ್ರರಂಗದಲ್ಲಿ ಇಷ್ಟೆಲ್ಲ ಯಶಸ್ವಿ ಕೀರ್ತಿ ಸಾಧನೆ ಮಾಡಿದವರು ಕೂಡ ನಟಿ ಲಲಿತಮ್ಮ ಅವರು ಇದೀಗ ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ ಇವರು ಇರುವಂತಹ ಪರಿಸ್ಥಿತಿ ನೋಡಿದರೆ ನಿಜಕ್ಕೂ ಕೂಡ ಆಶ್ಚರ್ಯವಾಗುತ್ತದೆ. ಇಷ್ಟು ಸಿನಿಮಾದಲ್ಲಿ ನಟನೆ ಮಾಡಿದರು ಕೂಡ ಇವರ ಬದುಕಿನ ಸ್ಥಿತಿ ಇನ್ನೂ ಹೀಗೆ ಇದೆಯಲ್ಲ ಎಂಬ ಸತ್ಯದ ಅರಿವು ನಮಗಾಗುತ್ತದೆ. ಅದೇನೇ ಆಗಿರಲಿ ಸದ್ಯಕ್ಕೆ ಲಲಿತಮ್ಮ ಅವರನ್ನು ಸಂದರ್ಶನ ಗಾರರೊಬ್ಬರು ಇಂಟರ್ವ್ಯೂ ಮಾಡಿದಾಗ ರೋಚಕ ಸುದ್ದಿ ಒಂದನ್ನು ಹೊರಹಾಕಿದ್ದಾರೆ. ಹೌದು ತಮ್ಮ ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿದ ಲಲಿತಮ್ಮ ಅವರು ಶಿವಣ್ಣ ಹಾಗೂ ದರ್ಶನ್ ಮತ್ತು ಅಪ್ಪು ಅವರ ಬಗ್ಗೆಯೂ ಕೂಡ ಮಾತನಾಡಿದ್ದಾರೆ ನಟಿ ಲಲಿತಮ್ಮ ಅವರು ಹೇಳಿದಂತಹ ಹೇಳಿಕೆ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಹೌದು ಒಂದು ಬಾರಿ ಲಲಿತಮ್ಮ ಅವರು ಅಚಾನಕ್ಕಾಗಿ ಶಿವಣ್ಣ ಅವರನ್ನು ಭೇಟಿ ಮಾಡುತ್ತಾರಂತೆ ಶಿವಣ್ಣನ ಬಳಿ ಲಲಿತಮ್ಮ ಹೋದಾಗ ಶಿವಣ್ಣ ಅವರು ಲಲಿತಮ್ಮ ಅವರನ್ನು ಯಾರು ನೀವು ಎಂದು ಪ್ರಶ್ನೆ ಕೇಳುತ್ತಾರಂತೆ. ಇದರಿಂದ ಬೇಸರಗೊಂಡಂತಹ ಲಲಿತಮ್ಮ ಅವರು ಅಲ್ಲಿಂದ ಹೊರ ನಡೆಯುತ್ತಾರಂತೆ ಇತ್ತೀಚಿಗಷ್ಟೇ ನಡೆದ ಸಂದರ್ಶನ ಒಂದರಲ್ಲಿ ಶಿವಣ್ಣ ಅವರು ನನ್ನನ್ನು ಸಂಪೂರ್ಣವಾಗಿ ಮರೆತೆ ಬಿಟ್ಟಿದ್ದಾರೆ ಆದರೆ ದರ್ಶನ್ ಹಾಗಲ್ಲ ಈಗಲೂ ಕೂಡ ಎಲ್ಲೆ ಸಿಕ್ಕರು ನಮಸ್ತೆ ಮೇಡಂ ಹೇಗಿದ್ದೀರಾ? ಆರೋಗ್ಯ ಹೇಗಿದೆ ಎಂದು ಎಲ್ಲವನ್ನು ಕೂಡ ವಿಚಾರಿಸುತ್ತಾರೆ ಎಂದು ದರ್ಶನವರ ದೊಡ್ಡ ಗುಣವನ್ನು ಹಾಡಿ ಹೊಗಳಿದ್ದಾರೆ.

ಅಷ್ಟೇ ಅಲ್ಲದೆ ಶಿವಣ್ಣ ಶಿವಣ್ಣನೇ ಅಪ್ಪು ಅಪ್ಪು ಎಂದಿದ್ದಾರೆ ಒಂದು ವೇಳೆ ಅಪ್ಪು ಅವರ ಮನೆ ಬಾಗಿಲಿನ ಮುಂದೆ ಹೋಗಿದ್ದರೆ ಖಂಡಿತವಾಗಿಯೂ ಕೂಡ ಅವರು ನನ್ನನ್ನು ಗುರುತು ಹಿಡಿಯುತ್ತಿದ್ದರು ನನ್ನನ್ನು ಮಾತನಾಡಿಸುತ್ತಿದ್ದರು ಆದರೆ ಶಿವಣ್ಣ ಯಾಕೋ ಇಷ್ಟು ಬೇಗ ಮರೆತು ಬಿಟ್ಟರು ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ. ಶಿವಣ್ಣ ಅವರು ಇಲ್ಲಿಯವರೆಗೂ ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹಾಗಾಗಿ ತಮ್ಮ ಸಿನಿಮಾದಲ್ಲಿ ಅಭಿನಯಿಸಿದಂತಹ ಕಲಾವಿದರು ಗುರುತು ಹಿಡಿಯುವುದಕ್ಕೆ ಕಷ್ಟ ಪಟ್ಟರೋ ಏನೋ ತಿಳಿದಿಲ್ಲ.

ಆದರೂ ಕೂಡ ಲಲಿತಮ್ಮ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿದರು ಇವರು ಕೇವಲ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೆ ಕಿರುತೆರೆಯ ಹಲವಾರು ಧಾರವಾಹಿ ಹಾಗೂ ರಂಗಭೂಮಿಯ ಹಲವಾರು ನಾಟಕಗಳಲ್ಲಿ ಭಾಗವಹಿಸಿದ್ದಾರೆ. ಇಂತಹ ಹಿರಿಯ ನಟಿಯನ್ನು ಮರೆಯುವುದು ಅಷ್ಟು ಸುಲಭದ ಮಾತಲ್ಲ ಆದರೂ ಕೂಡ ಶಿವಣ್ಣ ಅವರು ಆವತ್ತು ಯಾಕೆ ಆ ರೀತಿ ಹೇಳಿದರು ಎಂಬುದು ಈಗಲೂ ತಿಳಿದಿಲ್ಲ. ಆದರೂ ಕೂಡ ಶಿವಣ್ಣ ಅವರು ಹೇಳಿದಂತಹ ಮಾತನ್ನು ಕೇಳಿ ನಟಿ ಲಲಿತಮ್ಮ ಅವರು ಮಾತ್ರ ತುಂಬಾನೇ ಬೇಸರ ಮಾಡಿಕೊಂಡಿದ್ದಾರಂತೆ. ಲಲಿತಮ್ಮ ಮಾತನಾಡಿದಂತಹ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Darshan, Lalithamma, Shiva Rajkumar
WhatsApp Group Join Now
Telegram Group Join Now

Post navigation

Previous Post: ಅನಿಕಾ & ಶಂಭು ಮದುವೆ ಕ್ಯೂಟ್ ವಿಡಿಯೋ, ಕುಟುಂಬಸ್ಥರ ಜೊತೆಗಿರುವ ಸುಂದರ ಕ್ಷಣಗಳು.
Next Post: ಮದುವೆಯಾದ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳನ್ನು ಪಡೆದದ್ದು ಹೇಗೆ ಎಂಬುದರ ಬಗ್ಗೆ ತನಿಖೆ ಆದೇಶಿಸಿದ ತಮಿಳುನಾಡು ಸರ್ಕಾರ.! ನಯನತಾರಾ ಮತ್ತು ವಿಘ್ನೇಶ್ ಗೆ ಎದುರಾಯ್ತು ಸಂ.ಕ.ಷ್ಟ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore