Home Entertainment ‘S’ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿ ಜೊತೆ ರೂಪೇಶ್ ಶೆಟ್ಟಿ ಮದುವೆ ಆಗುತ್ತೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.

‘S’ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿ ಜೊತೆ ರೂಪೇಶ್ ಶೆಟ್ಟಿ ಮದುವೆ ಆಗುತ್ತೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.

0
‘S’ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿ ಜೊತೆ ರೂಪೇಶ್ ಶೆಟ್ಟಿ ಮದುವೆ ಆಗುತ್ತೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.

ರೂಪೇಶ್ ಶೆಟ್ಟಿ ಮದುವೆ ಬಗ್ಗೆ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

ಕನ್ನಡದ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ದಿನ ದಿನಕ್ಕೂ ಹೊಸ ರೋಚಕ ತಿರುವುಗಳನ್ನು ಪಡೆಯುತ್ತಿದೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ 9:30 ಗೆ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋ ಕಲರ್ಸ್ ಕನ್ನಡದ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮವು ವಿಶೇಷವಾಗಿ ಮೂಡಿ ಬರುತ್ತಿದೆ.

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ 18 ಜನ ಸ್ಪರ್ಧಿಗಳು ಇದ್ದು, 9 ಜನ ನವಿನರೂ ಹಾಗೂ 9 ಜನ ಪ್ರವೀಣರು ಇದ್ದಾರೆ. ಪ್ರವೀಣರು ಎಂದರೆ ಈಗಾಗಲೇ ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದವರು, ನವೀನರು ಎಂದರೆ ಬಿಗ್ ಬಾಸ್ ಒ ಟಿ ಟಿ ಯಲ್ಲಿ ಸ್ಪರ್ಧಿಸಿ ಆಯ್ಕೆಯಾದವರು.

ಈ ಬಾರಿಯ ಸ್ಪರ್ಧೆಯು ಬಹಳ ಬಿಗಿಯಾಗಿದ್ದು, ಬಹಳ ಮಾತಾಡುವ ಸ್ಪರ್ಡಿಗಳನ್ನೆ ಬಿಗ್ ಬಾಸ್ ಆರಿಸಿದ್ದಾರೆ. ಬಿಗ್ ಬಾಸ್ ಸೀಸನ್ ಒ ಟಿ ಟಿ ಯಲ್ಲಿ ಆಯ್ಕೆಯಾದವರಲ್ಲಿ toರೂಪೇಶ್ ಶೆಟ್ಟಿ, ಆರ್ಯವರ್ಧನ ಗುರೂಜಿ ಹಾಗೂ ಸಾನಿಯಾ ಅಯ್ಯರ್ ಆಯ್ಕೆಯಾಗಿದ್ದರು. ಈ ಕಾರಣಕ್ಕಾಗಿ ರೂಪೇಶ್ ಶೆಟ್ಟಿ ಅವರು ಆರ್ಯವರ್ಧಾನ್ ಗುರೂಜಿ ಅವರು ಇಬ್ಬರು ಬಹಳ ಕ್ಲೋಸ್ ಆಗಿದ್ದಾರೆ.

ಇದೇ ಕಾರಣದಿಂದ ರೂಪೇಶ್ ಶೆಟ್ಟಿ ಅವರು ಆರ್ಯವರ್ಧನ್ ಗುರುಜಿ ಅವರನ್ನು ಅಪ್ಪಾಜಿ ಎಂದು ಕರೆಯುತ್ತಾರೆ. ಇದೇ ವಿಶ್ವಾಸದಿಂದ ಅರ್ಯವರ್ಧನ್ ಗುರೂಜಿಯವರು ರೂಪೇಶ್ ಶೆಟ್ಟಿ ಅವರ ಮದುವೆಯ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಸದಾ ಒಂದಲ್ಲ ಒಂದು ಮಾತನ್ನು ಆಡಿ ಮನೆಯ ಸದಸ್ಯರ ಕೋಪಕ್ಕೆ ಗುರಿಯಾಗುವ ಗುರೂಜಿಯವರು ಮನೆಯ ಸದಸ್ಯರ ಭವಿಷ್ಯವನ್ನು ಆಗಾಗ ಹೇಳುತ್ತಾ ಇರುತ್ತಾರೆ.

ಈ ಹಿಂದೆ ದಿವ್ಯ ಉರುಡುಗ ಅವರ ಭವಿಷ್ಯವನ್ನು ಹೇಳಿ ದಿವ್ಯ ಅವರ ಕೋಪಕ್ಕೆ ಗುರಿಯಾಗಿದ್ದರು. ಸದ್ಯ ಇತ್ತೀಚೆಗೆ ವಾರದ ಜೊತೆ ಕಿಚ್ಚನ ಜೊತೆಯಲ್ಲಿ ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿಯವರು ಮದುವೆ ಆಗುವ ಹುಡುಗಿಯ ಬಗ್ಗೆ ಚರ್ಚೆ ನಡೆಯುವಾಗ ಸುದೀಪ್ ಅವರು ಆರ್ಯವರ್ಧನ್ ಗುರುಜಿ ಅವರನ್ನು ರೂಪೇಶ್ ಶೆಟ್ಟಿಯ ಸಂಗಾತಿಯ ಬಗ್ಗೆ ಕೇಳಿದ್ದಾರೆ.

ಅದಕ್ಕೆ ಆರ್ಯವಾರ್ಧನ್ ಗುರುಜಿ ಅವರು ರೂಪೇಶ್ ಶೆಟ್ಟಿ ಅವರು ಹುಟ್ಟಿರುವ ತಾರೀಕು 5 ಆದರಿಂದ ಇವರಿಗೆ ಒಳ್ಳೆಯ ಹುಡುಗಿಯನ್ನು ಮದುವೆಯಾಗುತ್ತಾರೆ ಎಂದು ಹೇಳಿದ್ದಾರೆ. ರೂಪೇಶ್ ಶೆಟ್ಟಿ ಎಸ್ ಎಂಬ ಅಕ್ಷರದಿಂದ ಶುರುವಾಗುವ ಹುಡುಗಿಯನ್ನು ಮದುವೆ ಆದರೆ ಒಳ್ಳೆಯದು ಆಗುತ್ತದೆ ಎಂದು ತಿಳಿಸಿದ್ದಾರೆ. ಈ ಮಾತಿಗೆ ಮನೆಯವರೆಲ್ಲರೂ ನಕ್ಕಿದ್ದಾ.

ಎಸ್ ಎಂದು ಹೇಳಿದಾಕ್ಷಣ ಮನೆಯವರೆಲ್ಲರೂ ಸಾನಿಯಾ ಅಯ್ಯರ್ ಎಂದು ಹೇಳುತ್ತಿದ್ದಾರೆ. ಸದ್ಯ ಇತ್ತೀಚೆಗೆ ನಡೆದ ಕಾಡಿನ ಆಟವು ಸ್ವಲ್ಪ ಕಷ್ಟವಾಗಿತ್ತು, ಆದರೂ ತಮ್ಮ ಊಟಕ್ಕಾಗಿ ಕಷ್ಟ ಪಡಲೆ ಬೇಕಾಗಿತ್ತು.
ಯಾವಾಗಲೂ ಊಟ ಅನ್ನೋ ರೂಪೇಶ್ ಶೆಟ್ಟಿ, ಹಸಿವನ್ನು ಸಹಿಸಿಕೊಂಡು, ಆಟಗಳನ್ನು ಚೆನ್ನಾಗಿ ಆಡಿದ್ದರು. ಅದಕ್ಕೆ ಈ ಬಾರಿ ಸುದೀಪ್ ಅವರ ಆಟ, ತಾಳ್ಮೆ ಮೆಚ್ಚಿಕೊಂಡು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ನೀಡಿದ್ದರು.

ರೂಪೇಶ್ ಶೆಟ್ಟಿ ತುಂಬಾ ಖುಷಿ ಪಟ್ಟಿದ್ದರು. ಇನ್ನು ರೂಪೇಶ್ ಶೆಟ್ಟಿ ಅವರು ಸಾಲ ಮಾಡಿ ತುಳು ಸಿನಿಮಾ ಒಂದನ್ನು ತೆಗೆದಿದ್ದರು. ಆ ಸಿನಿಮಾ ಏನಾದ್ರೂ ಸಕ್ಸೆಸ್ ಆಗಿಲ್ಲ ಅಂದರೆ ಸೂಸೈಡ್ ಮಾಡಿಕೊಳ್ಳಬೇಕು ಅಂದುಕೊಂಡಿದ್ದರಂತೆ, ಆದರೆ ಆ ಸಿನಿಮಾ ಬಹಳ ಯಶಸ್ಸನ್ನು ರೂಪೇಶ್ ಅವರಿಗೆ ತಂದುಕೊಟ್ಟಿದೆ ಆದ್ದರಿಂದ ರೂಪೇಶ್ ಅವರು ಸಂತೋಷವಾಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು. ? ತಪ್ಪದೆ ಕಾಮೆಂಟ್ ಮಾಡಿ.

LEAVE A REPLY

Please enter your comment!
Please enter your name here