Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹೊಸ ಧಾರವಾಹಿಯ ಮೂಲಕ ಕಿರುತೆರೆಗೆ ಮತ್ತೆ ರೀ ಎಂಟ್ರಿ ಕೊಟ್ಟ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಯಾವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ ಗೊತ್ತಾ.

Posted on December 8, 2022 By Kannada Trend News No Comments on ಹೊಸ ಧಾರವಾಹಿಯ ಮೂಲಕ ಕಿರುತೆರೆಗೆ ಮತ್ತೆ ರೀ ಎಂಟ್ರಿ ಕೊಟ್ಟ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಯಾವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ ಗೊತ್ತಾ.

ಅನಿರುಧ್ & ಎಸ್ ನಾರಾಯಣ್

ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿ ಆದಂತಹ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುಧ್ ಅವರು ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಮೂರು ವರ್ಷದಿಂದ ಈ ತಂಡದೊಟ್ಟಿಗೆ ಉತ್ತಮವಾದಂತಹ ಅವಿನಾಭಾವನಾ ಸಂಬಂಧವನ್ನು ಒಳಗೊಂಡಿದ್ದರು. ಅಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ನಟನೆ ಮಾಡಿದ್ದರು ಕೂಡ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದರು‌.

ಆದರೆ ಕೆಲವು ಕಾರಣಾಂತರಗಳಿಂದ ಧಾರಾವಾಹಿ ತಂಡ ಮತ್ತು ಅನಿರುಧ್ ಅವರ ನಡುವೆ ಮಾತಿನ ಚಕಮಕಿಯಾಗಿ ಈ ಸೀರಿಯಲ್ ಇಂದ ಹೊರ ಬರುತ್ತಾರೆ. ಅಷ್ಟೇ ಅಲ್ಲದೆ ಅನಿರುದ್ಧ್ ಅವರನ್ನು ಕಿರುತೆರೆಯಿಂದ ಎರಡು ವರ್ಷಗಳ ಕಾಲ ಬ್ಯಾನ್ ಮಾಡಬೇಕು ಎಂಬ ನಿರ್ಧಾರವನ್ನು ಕಿರುತೆರೆ ತಂಡದವರು ಮಾಡುತ್ತಾರೆ. ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹೊರ ಬಂದು ಅನಿರುದ್ಧ ಅವರು ಸುಮಾರು ಎರಡು ತಿಂಗಳೇ ಆಯಿತು.

ಯಾವುದೇ ಚಿತ್ರ ಹಾಗೂ ಸೀರಿಯಲ್ ಕುರಿತು ಎಲ್ಲಿಯೂ ಕೂಡ ಮಾಹಿತಿಯನ್ನು ಅನಿರುಧ್ ಅವರು ಬಿಟ್ಟು ಕೊಟ್ಟಿರಲಿಲ್ಲ ಕಳೆದ ವಾರ ವಸ್ತು ಹೊಸ ಮನೆಯ ಗೃಹ ಪ್ರವೇಶವನ್ನು ಕೂಡ ಮಾಡಿದ್ದರು. ಇದೀಗ ಅಭಿಮಾನಿಗಳಿಗೆ ಮತ್ತೊಂದು ಸಂತಸ ಸುದ್ದಿಯನ್ನು ನೀಡಿದ್ದಾರೆ ಹೌದ ಹೊಸ ಸೀರಿಯಲ್ ನಲ್ಲಿ ಅಭಿನಯ ಮಾಡುವ ಮೂಲಕ ಮತ್ತೆ ಕಿರುತೆರೆಗೆ ವಾಪಸ್ ಆಗಿದ್ದಾರೆ‌. ವಿಶೇಷ ಏನೆಂದರೆ ಅನಿರುಧ್ ಅವರಿಗೆ ಸಾತ್ ನೀಡುವುದಕ್ಕೆ ನಟ ಮತ್ತು ನಿರ್ಮಾಪಕ ನಿರ್ದೇಶಕ ಆಗಿರುವ ಎಸ್ ನಾರಾಯಣ್ ಅವರು ಬೆಂಬಲಕ್ಕೆ ನಿಂತಿದ್ದಾರೆ.

ಹೌದು ಉದಯ ಟಿವಿಯಲ್ಲಿ “ಸೂರ್ಯವಂಶ” ಎಂಬ ಹೊಸ ಸೀರಿಯಲ್ ಪ್ರಾರಂಭವಾಗುತ್ತಿದೆ ಈ ಸೀರಿಯಲ್ ನಲ್ಲಿ ನಟ ಅನಿರುದ್ಧ ವರು ಮುಖ್ಯ ಭೂಮಿಗೆಯಲ್ಲಿ ನಟಿಸಲಿದ್ದಾರೆ. ಎಸ್ ನಾರಾಯಣ್ ಅವರು ಅನಿರುದ್ಧ ಕೈಯನ್ನು ಹಿಡಿದುಕೊಂಡು ಕರೆತರುವಂತಹ ಕೆಲವೊಂದಷ್ಟು ಫೋಟೋಸ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಇದನ್ನು ನೋಡಿದಂತಹ ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು.

ಇದಾಗ ಕೆಲವೇ ಗಂಟೆಯಲ್ಲಿ ಅನಿರುದ್ ಮತ್ತು ಎಸ್ ನಾರಾಯಣ್ ಇಬ್ಬರೂ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರಕ್ಕೆ ಸಂಬಂಧ ಪಟ್ಟಂತಹ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸೂರ್ಯಕಾಂತಿ ಧಾರಾವಾಹಿಯಲ್ಲಿ ಅನಿರುಧ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರ ಕೇಳುತ್ತಿದ್ದ ಹಾಗೆ ಅನಿರುದ್ಧ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಆದರೆ ಕೆಲವರ ಮನಸ್ಸಿನಲ್ಲಿ ಇನ್ನೂ ಕೂಡ ಅನುಮಾನ ಹಾಗೆಯೇ ಉಳಿದಿದೆ ಹೌದು ಜೊತೆ ಜೊತೆಯಲಿ ತಂಡದಿಂದ ಕಿರಿಕ್ ಮಾಡಿಕೊಂಡು ಹೊರ ಬಂದ ನಂತರ ಎರಡು ವರ್ಷಗಳ ಕಾಲ ಇವರನ್ನು ಬ್ಯಾನ್ ಮಾಡಬೇಕು ಎಂದು ಕಿರುತರೆ ಸಂಘದವರು ನಿರ್ಧಾರ ಕೈಗೊಂಡಿದ್ದರು. ಆದರೂ ಕೂಡ ಇದೀಗ ಇದ್ದಕ್ಕಿದ್ದ ಹಾಗೆ ಹೇಗೆ ಬೇರೊಂದು ಹೊಸ ಧಾರವಾಹಿಯಲ್ಲಿ ನಟನೆ ಮಾಡುವುದಕ್ಕೆ ಸಾಧ್ಯ ಎಂಬುದು ಎಲ್ಲರ ತಲೆಯಲ್ಲೂ ಕೂಡ ಹುಳು ಬಿಟ್ಟ ಹಾಗಿದೆ.

ಆದರೆ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆರ್ಯ ವರ್ಧನ್ ಅಗಲಿ ಅಥವಾ ಎಸ್ ನಾರಾಯಣ್ ಆಗಲಿ ಯಾರು ಕೂಡ ಮಾತನಾಡಿಲ್ಲ ಅದೇನೇ ಆಗಲಿ ಸದ್ಯಕ್ಕೆ ಅನಿರುದ್ಧ ವರು ಮತ್ತೆ ಕಿರುತರೆಗೆ ಕಮ್ ಬ್ಯಾಕ್ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರವೇ. ಈ ಧಾರಾವಾಹಿಯಿಂದ ಇನ್ನಷ್ಟು ಹೆಸರು ಕೀರ್ತಿ ಅನಿರುಧ್ ಅವರಿಗೆ ದೊರೆಯಲಿ ಎಂಬುದಷ್ಟೇ ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ

View this post on Instagram

A post shared by Aniruddha Jatkar (@aniruddhajatkar)

Serial Loka Tags:Aniruddh jatkhar, S Narayan, Suryavamsa, Udaya TV
WhatsApp Group Join Now
Telegram Group Join Now

Post navigation

Previous Post: “ಹೌದು ನಾನು ಬಾವಿ ಕಪ್ಪೇನೆ” ನನ್ಗೆ ನನ್ನ ಮಾತೃ ಭಾಷೆ ಮೊದಲು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತೀನಿ ಅಂತ ಬಿಲ್ಡಪ್ ಕೊಡಲ್ಲ ಎಂದು ಇದ್ದಕ್ಕಿದ್ದ ಹಾಗೆ ಸಂದರ್ಶನದಲ್ಲಿ ಗರಂ ಆದ ದರ್ಶನ್.
Next Post: ಅಶ್ವಿನಿ ಪಕ್ಕಾ ನಿಂತಿರುವ ಈ ವ್ಯಕ್ತಿ ಯಾರು ಗೊತ್ತ.? ಅಪ್ಪು ಅ.ಗ.ಲಿ.ದ ಒಂದೇ ವರ್ಷಕ್ಕೆ ದಿಟ್ಟ ನಿರ್ಧಾರ ಕೈಗೊಂಡ ಅಶ್ವಿನಿ.! ಅಭಿಮಾನಿಗಳ ಮನಸ್ಸಲ್ಲಿ ಗೊಂದಲ ಮೂಡಿದೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore