ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡಿರುವಂತಹ ಸಾಕಷ್ಟು ಸಿನಿಮಾಗಳು ವಿಭಿನ್ನ ಮತ್ತು ವಿಶೇಷತೆಯಿಂದ ಕೂಡಿರುತ್ತದೆ. ಉಪೇಂದ್ರ ಅವರ ನಿರ್ದೇಶನ ಮಾಡಿರುವಂತಹ ಎಲ್ಲಾ ಸಿನಿಮಾಗಳನ್ನೂ ಅಭಿಮಾನಿಗಳು ತುಂಬಾ ಇಷ್ಟಪಟ್ಟು ನೋಡಿದ್ದಾರೆ ಹಾಗೆಯೇ ಅವರ ಮುಂದಿನ ಸಿನಿಮಾಗಳು ಯಾವಾಗ ಬರುತ್ತದೆ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಯಾಕೆಂದರೆ ಉಪೇಂದ್ರ ಅವರ ಸಿನಿಮಾದಲ್ಲಿ ಒಂದು ರೀತಿಯಾದಂತಹ ವಿಶೇಷತೆ ಇರುತ್ತದೆ. ಇವರ ಸಿನಿಮಾಗಳು ಜನರ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಅಲ್ಲದೆ ಜನರನ್ನು ರಂಜಿಸುತ್ತದೆ. ಇದೀಗ ಉಪೇಂದ್ರ ಅವರ ಹೊಸ ಸಿನಿಮಾ ಶುರುವಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಅವರ UI ಸಿನಿಮಾದ ಬಗ್ಗೆ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಲೇ ಇದೆ.

ಉಪೇಂದ್ರ ಅವರು ಈ ಸಿನಿಮಾದಲ್ಲಿ ಯಾವ ರೀತಿಯಾದಂತಹ ಒಂದು ವಿಭಿನ್ನ ಕಥೆಯನ್ನು ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. UI ಸಿನಿಮಾದ ಪೋಸ್ಟರ್ ಗಳನ್ನು ನೋಡಿದಂತಹ ಜನರು ಈ ಸಿನಿಮಾದ ವಿಶೇಷತೆಯನ್ನು ನಾನಾ ರೀತಿಯಲ್ಲಿ ತಮ್ಮ ಆಲೋಚನೆಗಳಿಗೆ ಬಂದಂತೆ ತರ್ಕವನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ಒಂದು ಸಿನಿಮಾವನ್ನು ಶ್ರೀಕಾಂತ್ ಮತ್ತು ಜಿ ಮನೋಹರ್ ರವರು ನಿರ್ಮಾಣ ಮಾಡುತ್ತಿದ್ದಾರೆ. ಈ ಒಂದು ಸಿನಿಮಾದ ಮುಹೂರ್ತವು ಬೆಂಗಳೂರಿನ ದೇವಸ್ಥಾನ ಒಂದರಲ್ಲಿ ನೆರವೇರಿದ್ದು ಈ ಒಂದು ಮುಹೂರ್ತ ಕಾರ್ಯಕ್ರಮಕ್ಕೆ ಬರುವಾಗ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ಮಾಪಕರಾದ ಶ್ರೀಕಾಂತ್ ಮತ್ತು ಜಿ ಮನೋಹರ್ ಅವರು ತಮ್ಮ ಹಣೆಯ ಮೇಲೆ ನಾಮವನ್ನು ಇಟ್ಟುಕೊಂಡು ಮನೆಯಿಂದ ಹೊರಟಿದ್ದಾರೆ ಇದು ವಿಶೇಷತೆಯನ್ನು ಕುತೂಹಲವನ್ನು ಉಂಟು ಮಾಡಿದೆ.

UI ಎನ್ನುವಂತಹ ಟೈಟಲ್ ತುಂಬಾ ವಿಶೇಷವಾಗಿದ್ದು ಉಪೇಂದ್ರ ಅವರು ಈ ಒಂದು ಟೈಟಲ ಬಗ್ಗೆ ಎಲ್ಲಿಯೂ ಸಹ ಹೇಳಿಕೊಂಡಿಲ್ಲ ಇದೀಗ ಮುಹೂರ್ತದ ಕಾರ್ಯಕ್ರಮ ಒಂದರಲ್ಲಿ ಉಪೇಂದ್ರ ಅವರು ಪುನೀತ್ ರಾಜಕುಮಾರ್ ಹಣೆಯ ಮೇಲೆ ನಾಮವನ್ನು ಹಾಕಿಕೊಂಡಿರುವ ಬಾಲ್ಯದ ಫೋಟೋವನ್ನು ತೋರಿಸಿದ್ದಾರೆ ಇದನ್ನು ನೋಡಿದಂತಹ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರಿಗೂ ಈ ಸಿನಿಮಾಗು ಏನು ಸಂಬಂಧ ಇದೆ ಎಂದು ಎಲ್ಲೆಡೆ ಚರ್ಚೆ ನಡೆಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ನಾಮವನ್ನು ಹಾಕಿರುವ ಬಾಲ್ಯದ ಫೋಟೋವನ್ನು ಈ ಸಿನಿಮಾ ನಿರ್ಮಾಣ ಮಾಡುತ್ತಿರುವಂತಹ ಶ್ರೀಕಾಂತ್ ಅವರ ಪತ್ನಿಯೂ ಇದ್ದರು ಪ್ರೆಸ್ ಮೀಟ್ ಮಾಡುತ್ತಿದ್ದಂತ ಸಂದರ್ಭದಲ್ಲಿ ಪತಿಗೆ ಅಂದರೆ ಶ್ರೀಕಾಂತ್ ಅವರಿಗೆ ಕಳುಹಿಸಿದ್ದು ಈ ಒಂದು ಫೋಟೋವನ್ನು ನಟ ಉಪೇಂದ್ರ ಅವರು ತೋರಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ಎಂದೆಂದಿಗೂ ಸಹ ನಮ್ಮ ಜೊತೆಯಲ್ಲಿ ಇದ್ದೆ ಇರುತ್ತಾರೆ.

ಪುನೀತ್ ರಾಜಕುಮಾರ್ ಅವರಿಗೂ ಈ ಸಿನಿಮಾಗೂ ಯಾವುದೇ ರೀತಿ ಆದಂತಹ ಸಂಬಂಧ ಇಲ್ಲ ಪುನೀತ್ ರಾಜಕುಮಾರ್ ಅವರಿಗೆ ಸಂಬಂಧಪಟ್ಟಂತಹ ಯಾವುದೇ ವಿಷಯವು ಸಹ ಈ ಸಿನಿಮಾದಲ್ಲಿ ಬರುವುದಿಲ್ಲ ಎಂದು ಉಪೇಂದ್ರ ಅವರು ಹೇಳಿದ್ದಾರೆ. UI ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ನಟ ಸುದೀಪ್, ಹಾಗೂ ಶಿವರಾಜ್ ಕುಮಾರ್, ಶಿವ ರಾಜಕುಮಾರ್ ಅವರ ಪತ್ನಿ ಗೀತಾ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಈ ಸಿನಿಮಾದ ನಿರ್ಮಾಪಕರಾದ ಶ್ರೀಕಾಂತ್, ಜಿ. ಮನೋಹರ್ ಸೇರಿದಂತೆ ಇನ್ನೂ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಮುಹೂರ್ತ ಕಾರ್ಯಕ್ರಮವು ನೆರವೇರಿದ್ದು ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಸಿನಿಮಾದ ಚಿತ್ರತಂಡದವರು ತಿಳಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಅಪ್ಪು ಅವರನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಬೇಕು ಎನ್ನುವ ಆಸೆ ತುಂಬಾ ಹೊಂದಿದ್ದರು.

ಆದರೆ ಅದು ಸಾಧ್ಯವಾಗಲಿಲ್ಲ ಶಿವ ರಾಜಕುಮಾರ್ ನಟಿಸಿರುವಂತಹ ಓಂ ಸಿನಿಮಾಗಿಂತಲು ಉತ್ತಮವಾದ ಸಿನಿಮಾವನ್ನು ಅಪ್ಪು ಅವರ ಜೊತೆಯಲ್ಲಿ ಮಾಡಬೇಕು ಎಂದು ಅನೇಕ ರೀತಿಯಾದಂತಹ ಆಸೆಯನ್ನು ಹೊಂದಿದ್ದರು. ಆದರೆ ಅದು ನೆರವೇರಲಿಲ್ಲ ಎಂದು ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋದ ಸಮಯದಲ್ಲಿ ಇದನ್ನು ತಿಳಿಸಿದರು. ಉಪ್ಪಿ ಮತ್ತೆ ಅಪ್ಪು ಅವರು ಒಂದು ಉತ್ತಮವಾದಂತಹ ಸ್ನೇಹವನ್ನು ಹೊಂದಿದ್ದರು. UI ಸಿನಿಮಾವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿ ಹಾಗೆ ಈ ಸಿನಿಮಾದಲ್ಲಿ ತಾವೆ ನಟಿಸುತ್ತಿದ್ದಾರೆ. ಇದೀಗ ಮಾಧ್ಯಮದವರೊಂದಿಗೆ ಮಾತನಾಡುವಂತಹ ಸಂದರ್ಭದಲ್ಲಿ ಉಪ್ಪಿ ಅವರು ಈ ಸಿನಿಮಾದ ಟೈಟಲ್ ಬಗ್ಗೆ ಅಲ್ಲಿನ ಮಾಧ್ಯಮದ ಕಾರ್ಯಕರ್ತರ ತಲೆಯಲ್ಲಿ ಹುಳ ಬಿಡುವಂತೆ ಮಾತನಾಡಿದ್ದಾರೆ ಉಪೇಂದ್ರ ಅವರ ಈ ಸಿನಿಮಾ ಬಹುನಿರೀಕ್ಷಿತ ವಾಗಿದ್ದು ಅಭಿಮಾನಿಗಳು ಸಿನಿಮಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೂ ಕೂಡ ಮುಹೂರ್ತದ ವೇಳೆ ಅಪ್ಪು ಅವರ ಭಾವ ಚಿತ್ರವನ್ನು ತೋರಿಸಿ ತಮ್ಮ ಸಿನಿಮಾಗೂ ಮತ್ತು ಅಪ್ಪು ಅವರಿಗೂ ಏನೋ ಒಂದು ಅವಿನಾಭಾವ ಸಂಬಂಧ ಇದೆ ಎಂಬುದನ್ನು ತೋರಿಸಿಕೊಟ್ಟ ಉಪೇಂದ್ರ ಅವರಿಗೆ ನಾವು ಒಂದು ಸಲಾಂ ಹೊಡೆಯಲೇ ಬೇಕು. ಈ ಒಂದು ಕೆಲಸವನ್ನು ನಾವೆಲ್ಲರೂ ಮೆಚ್ಚಲೇಬೇಕು ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.