Home Viral News ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.

ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.

0
ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.

 

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ. ದರ್ಶನ್ ಅವರಿಗೆ ಅವರ ಅಭಿಮಾನಿಗಳ ಮೇಲೆ ಎಷ್ಟು ಪ್ರೀತಿ ಇದೆ ಎಂದು ವಿವರಿಸಲು ಸಾಧ್ಯವಿಲ್ಲ, ಅವರು ತಮ್ಮ ಅಭಿಮಾನಿಗಳನ್ನು ಅಭಿಮಾನಿಗಳು ಎಂದು ಕರೆಯುವ ಬದಲು ಅವರೇ ನನ್ನ ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ.

ಇನ್ನು ಅಭಿಮಾನಿಗಳ ಪಾಲಿಗಂತೂ ಡಿ ಬಾಸ್ ಎಂದರೆ ಹುಚ್ಚು ಪ್ರೀತಿ. ಅವರೆಲ್ಲಾ ದರ್ಶನ್ ಅವರನ್ನು ಯಾಕೆ ಇಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಕಾರಣವೇ ಬೇಕಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಪಡ್ಡೆ ಹೈಕಳು ಹೆಣ್ಣು ಮಕ್ಕಳು ವೃದ್ಧರು ಹೀಗೆ ಎಲ್ಲರೂ ದರ್ಶನ್ ಫ್ಯಾನ್ಗಳೇ. ದರ್ಶನ್ ಒಂದು ಮಾತು ಹೇಳಿದರೆ ಅದೇ ಅವರ ಅಭಿಮಾನಿಗಳ ಪಾಲಿಗೆ ವೇದ ವಾಕ್ಯ ಇಷ್ಟು ದರ್ಶನ್ ಮೇಲೆ ಪ್ರೀತಿ ತೋರಿ ದಚ್ಚು, ಡಿ ಬಾಸ್ ಎಂದು ಕರೆದು ದರ್ಶನ್ ಅವರನ್ನು ಮೆರೆಸುತ್ತಿದ್ದಾರೆ ಅವರ ಅಭಿಮಾನಿಗಳು.

ಆದರ ಕೆಲ ಕಿಡಿಗೇಡಿಗಳು ಮಾತ್ರ ದರ್ಶನ್ ಅವರ ಬಗ್ಗೆ ಯಾವಾಗಲೂ ನೆಗೆಟಿವ್ ಆಗಿಯೇ ಮಾತನಾಡುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ಕ್ರಾಂತಿ (Kranthi) ಸಿನಿಮಾದ ಸಮಯದಲ್ಲಿ ಅದು ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಂತೂ ದರ್ಶನ್ ಅವರ ಪರವಾಗಿ ಎಷ್ಟು ಜನ ಕಮೆಂಟ್ ಮಾಡಿರುತ್ತಾರೋ ಅಷ್ಟೇ ನೆಗೆಟಿವ್ ಆಗಿ ಕೂಡ ಬಂದಿರುತ್ತದೆ. ಮುಂದುವರೆದು ದರ್ಶನ ಅವರನ್ನು ಹಲವು ರೀತಿಯಲ್ಲಿ ಟ್ರೋಲ್ (troll) ಕೂಡ ಮಾಡಲಾಗುತ್ತಿದೆ.

ಕ್ರಾಂತಿ ಸಿನಿಮಾದ ಪ್ರಚಾರವಾಗಿ ದರ್ಶನ್ ಅವರು ಹಲವು ತಿಂಗಳ ಹಿಂದಿನಿಂದಲೂ ಇಡೀ ಕರ್ನಾಟಕ ಯಾತ್ರೆಗೆ ಹೊರಟಿದ್ದಾರೆ. ಒಂದು ಕಡೆ ಯೂಟ್ಯೂಬ್ ಚಾನೆಲ್ಗಳಿಗೆ ನಿರೂಪಣೆ ಕೊಡುವುದಾದರೆ ಮತ್ತೊಂದು ಕಡೆ ಕರ್ನಾಟಕದ ಪ್ರಮುಖ ಸಿಟಿಗಳಲ್ಲಿ ಹಾಡುಗಳನ್ನು ರಿಲೀಸ್ ಮಾಡುವುದು ಮತ್ತು ಸಿನಿಮಾದ ವಿಷಯವನ್ನು ಎಲ್ಲಡೆ ಪ್ರಚಾರ ಮಾಡುವುದು. ಈ ಕೆಲಸಕ್ಕಾಗಿ ಇಡಿ ತಂಡವನ್ನೇ ಬೆನ್ನಿಗೆ ಕಟ್ಟಿಕೊಂಡು ತಿರುಗುತ್ತಿದ್ದಾರೆ ಹಾಗಾಗಿ ದರ್ಶನವರು ತಮ್ಮ ಫಿಟ್ನೆಸ್ ಹಾಗೂ ಮೇಕಪ್ ಬಗ್ಗೆ ಗಮನ ಕೊಡಲು ಆಗಿರದೆ ಇರಬಹುದು.

ಇದನ್ನೇ ದೊಡ್ಡದಾಗಿ ಮಾಡಿರುವ ಕೆಲ ಟ್ರೋಲ್ ಪೇಜ್ ಗಳು ದರ್ಶನ್ ಅವರು ತೆರೆ ಮೇಲೆ ಒಂದು ರೀತಿ ಕಾಣುತ್ತಾರೆ, ನೇರವಾಗಿ ಒಂದು ರೀತಿ ಕಾಣುತ್ತಾರೆ ಮೇಕಪ್ ಇಲ್ಲದೆ ದರ್ಶನ್ ಅವರನ್ನು ನೋಡಲು ಆಗುವುದೇ ಇಲ್ಲ, ಮೇಕಪ್ ತೆಗೆದು ಇವರನ್ನು ನೋಡಿದರೆ ಇವರಿಗಿಂತ ನಮ್ಮ ಪಕ್ಕದ ಮನೆಯ ಅಂಕಲ್ ಎಷ್ಟೋ ಚೆನ್ನಾಗಿ ಕಾಣುತ್ತಾರೆ ಎನ್ನುವ ರೀತಿ ಪೋಸ್ಟರ್ಗಳನ್ನು ಹಾಕಿಕೊಂಡು ಟ್ರೋಲ್ ಮಾಡಿದ್ದಾರೆ.

ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ ಜೊತೆಗೆ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ತನಕ ತಲುಪಿ ಈಗ ಅವರು ಅದರ ವಿರುದ್ಧ ಕಿಡಿ ಕಾರಿದ್ದಾರೆ. ಒಬ್ಬ ವ್ಯಕ್ತಿಯ ಚಂದವನ್ನು ಅಂದ ಚಂದದಿಂದ ಲೆಕ್ಕ ಹಾಕುವ ಬದಲು ಆತನ ಸ್ವಭಾವ ಆತನ ವ್ಯಕ್ತಿತ್ವ ಹಾಗೂ ಆತ ಮಾಡಿರುವ ಸಾಧನೆಯಿಂದ ಅಳಿಯಬೇಕು ಎಂದು ತಮ್ಮ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

ಇದು ಟ್ರೋಲ್ ಮಾಡುವವರಿಗೆ ಇಂಡೈರೆಕ್ಟಾಗಿ ಕೊಟ್ಟಿರುವ ತಿರುಗೇಟಾಗಿದೆ. ಇನ್ನು ಇದು ಯಾವ ರೀತಿ ಮುಂದುವರೆಯುತ್ತದೆ ಹಾಗೂ ಈ ವಿಚಾರ ಎಲ್ಲಿಯ ತನಕ ತಲುಪುತ್ತದೆ ಕಾದು ನೋಡಬೇಕಾಗಿದೆ. ಆದರೆ ದರ್ಶನ್ ಅವರ ವಿಚಾರ ಬಂದಾಗ ವಿಜಯಲಕ್ಷ್ಮಿ ಅವರ ಪದೇ ಪದೇ ಇದೇ ರೀತಿ ಅವರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಅಥವಾ ಕಮೆಂಟ್ ಹಾಕುವ ಮೂಲಕ ಅವರ ಸಪೋರ್ಟ್ ಗೆ ನಿಲ್ಲುತ್ತಾರೆ.

LEAVE A REPLY

Please enter your comment!
Please enter your name here