Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸಂಬಳ ಬಂದ ತಕ್ಷಣ ಈ ರೀತಿ ಮಾಡಿ ಸಾಕು, ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ ಹಣ ಖಾಲಿ ಆಗಲ್ಲ, ದುಡ್ಡಿಗಾಗಿ ಪರದಾಡುವುದು ನಿಲ್ಲುತ್ತದೆ ಮನೆಯಲ್ಲಿ ಹಣ ಉಳಿತಾಯ ಆಗುತ್ತೆ.

Posted on June 20, 2023 By Kannada Trend News No Comments on ಸಂಬಳ ಬಂದ ತಕ್ಷಣ ಈ ರೀತಿ ಮಾಡಿ ಸಾಕು, ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ ಹಣ ಖಾಲಿ ಆಗಲ್ಲ, ದುಡ್ಡಿಗಾಗಿ ಪರದಾಡುವುದು ನಿಲ್ಲುತ್ತದೆ ಮನೆಯಲ್ಲಿ ಹಣ ಉಳಿತಾಯ ಆಗುತ್ತೆ.

ಹಣ ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆ ವಸ್ತು. ಈಗಿನ ಕಾಲದಲ್ಲಿ ಹಣ ಇಲ್ಲದೆ ಇದ್ದರೆ ಏನು ಕೂಡ ನಡೆಯುವುದಿಲ್ಲ. ಅಲ್ಲದೆ ಪ್ರತಿನಿತ್ಯದ ನಮ್ಮ ಚಟುವಟಿಕೆಗಳು ಅಂತ್ಯದಲ್ಲಿ ಹಣದ ಮೂಲವನ್ನೇ ಅನುಸರಿಸಿದೆ ಎಂದರು ಕೂಡ ಅದು ತಪ್ಪಾಗುವುದಿಲ್ಲ. ಈಗಿನ ಕಾಲಮಾನದಲ್ಲಿ ಬದುಕು ನಡೆಯುತ್ತಿರುವುದೇ ಹಣದಿಂದ, ಹಾಗಾಗಿ ಇಂತಹ ಹಣದ ಅವಶ್ಯಕತೆ ಮತ್ತು ಆಕರ್ಷಣೆಯನ್ನು ಎಲ್ಲರೂ ಬಯಸುತ್ತಾರೆ.

ನೀವು ಪ್ರತಿದಿನ ದುಡಿಯುವವರಾಗಿರಬಹುದು ಅಥವಾ ತಿಂಗಳ ಸಂಬಳ ತೆಗೆದುಕೊಳ್ಳವವರಾಗಿದ್ದರು ಕೂಡ ನಿಮಗೆ ಹಣ ಬಂದ ತಕ್ಷಣ ಈಗ ನಾವು ಹೇಳುವ ಈ ರೀತಿ ತಂತ್ರವನ್ನು ಮಾಡಿ. ಇದರಿಂದ ಹಣದ ಆಕರ್ಷಣೆ ಹೆಚ್ಚಾಗಿ ನಿಮ್ಮ ಹಣಕಾಸಿನ ತೊಂದರೆಗಳನ್ನು ನಿವಾರಿಸಿಕೊಳ್ಳುವುದರ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಯ ಸುಧಾರಣೆಯಾಗುತ್ತದೆ.

ಇದಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಿ ವಿಶೇಷವಾದ ಆಚರಣೆಗಳನ್ನು ಮಾಡುವ ಅವಶ್ಯಕತೆಯೇ ಇಲ್ಲ. ಈಗ ನಾವು ಹೇಳುವ ರೀತಿ ಮಾಡಿ ಸಾಕು. ನಿಮಗೆ ಸ್ಯಾಲರಿ ಅಕೌಂಟಿಗೆ ಬರುತ್ತಿದ್ದರು ಕೂಡ ಬಂದ ಹಣದಲ್ಲಿ ಸ್ವಲ್ಪ ಮೊತ್ತದ ಹಣವನ್ನು ಡ್ರಾ ಮಾಡಿಕೊಂಡು ನಗದು ರೂಪದಲ್ಲಿ ಮನೆಗೆ ತನ್ನಿ. ಮತ್ತು ಇದೇ ಹಣದಿಂದ ತಪ್ಪದೆ ಉಪ್ಪನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಬನ್ನಿ.

ಒಂದು ಮಣ್ಣಿನ ಮಡಿಕೆಯಲ್ಲಿ ಆ ಉಪ್ಪನ್ನು ಸುರಿದು ಅದರ ಮೇಲೆ ನೀವು ತಂದ ಹಣವನ್ನು ಇಟ್ಟು ದೇವರ ಕೋಣೆಯಲ್ಲಿ ಇಡಿ. ಸ್ನಾನ ಮಾಡಿ ಮಡಿಯುಟ್ಟುಕೊಂಡು ಶುದ್ಧ ಮನಸ್ಸಿನಿಂದ ಪೂಜೆ ಮಾಡಿ. ಹಾಗೆ ಈ ಮಡಿಕೆಯಲ್ಲಿರುವ ಉಪ್ಪು ಹಾಗೂ ಅದರ ಮೇಲಿರುವ ಹಣಕ್ಕೂ ಕೂಡ ಪೂಜೆ ಮಾಡಿ ಆ ದಿನಪೂರ್ತಿ ಅದನ್ನು ದೇವರ ಮನೆಯಲ್ಲಿಯೇ ಬಿಡಿ.

ಮರುದಿನ ನೀವು ನಿಮ್ಮ ಹಣಕಾಸಿನ ಖರ್ಚಿಗೆ ಅಂದರೆ ನಿಮ್ಮ ಸಂಬಳವನ್ನು ಯಾವುದಕ್ಕೆ ಖರ್ಚು ಮಾಡುತ್ತಿದ್ದೀರಾ ಅವುಗಳಿಗೆ ಮನೆ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್, ಮಕ್ಕಳ ಫೀಸ್ ಅಥವಾ ಮನೆಗೆ ದಿನಸಿ ತರುವುದು ಇನ್ಯಾವುದೇ ಖರ್ಚುಗಳು ಇದ್ದರೂ ಆ ಖರ್ಚಿಗೆ ಈ ಹಣವನ್ನು ತೆಗೆದುಕೊಂಡು ಖರ್ಚು ಮಾಡಿ. ಈ ರೀತಿ ಮಾಡುವುದರಿಂದ ಆ ಹಣದಲ್ಲಿ ಒಂದು ಎನರ್ಜಿ ಕ್ರಿಯೇಟ್ ಆಗಿರುತ್ತದೆ.

ಅದು ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ಸಕಾರಾತ್ಮಕತೆ ತುಂಬಿ ಎಲ್ಲವು ಒಳ್ಳೇದಾಗುವ ರೀತಿ ಮಾಡುತ್ತದೆ. ಯಾವುದೇ ಸಮಸ್ಯೆ ಆಗದ ಕಾರಣ ನೀವು ಕೈಕೊಂಡ ಎಲ್ಲಾ ಕಾರ್ಯವು ಪೂರ್ತಿ ಆಗುತ್ತದೆ. ಆ ಹಣದಿಂದ ನಿಮ್ಮ ಹಣವು ಉಳಿತಾಯ ಆಗುತ್ತದೆ ಮತ್ತು ನಿಮ್ಮ ಮನೆಗೆ ಹಣದ ಆಕರ್ಷಣೆ ಹೆಚ್ಚಾಗುತ್ತದೆ. ನೀವು ದಿನದ ಸಂಬಳ ತೆಗೆದುಕೊಳ್ಳುವವರಾಗಿದ್ದರು ಕೂಡ ಈ ಉಪಾಯವನ್ನು ಮಾಡಬಹುದು.

ಒಂದು ದಿನ ಅಂದರೆ ಶುಕ್ರವಾರದಂದು ಮಾಡಿದರೆ ಇನ್ನೂ ಉತ್ತಮ ಫಲ. ಶುಕ್ರವಾರದಂದು ಬೆಳಿಗ್ಗೆ ಎದ್ದ ಕೂಡಲೇ ಮೊದಲು ಉಪ್ಪನ್ನು ಖರೀದಿಸಿ ತನ್ನಿ, ಅದೇ ರೀತಿ ಮಣ್ಣಿನ ಮಡಿಕೆಗೆ ಹಾಕಿ ದೇವರ ಕೋಣೆಯಲ್ಲಿ ಇಡಿ, ನೀವು ದುಡಿದ ಹಣವನ್ನು ಕೂಡ ಅದರ ಮೇಲಿಡಿ. ಒಂದು ದಿನ ಪೂರ್ತಿ ಆ ಹಣ ಅಲ್ಲೇ ಇರಲಿ ಮರುದಿನ ನಿಮ್ಮ ಖರ್ಚಿಗೆ ಆ ಹಣವನ್ನು ತೆಗೆದುಕೊಳ್ಳಿ ಮತ್ತು ಮರುದಿನವೂ ಕೂಡ ನೀವು ದುಡಿದ ಹಣವನ್ನು ಅದೇ ರೀತಿ ಆ ಮಡಿಕೆ ಮೇಲೆ ಹಾಕಿ ಪ್ರತಿ ಶುಕ್ರವಾರದಂದು ಉಪ್ಪನ್ನು ಬದಲಾಯಿಸಿ ಹೊಸ ಉತ್ಪನ್ನ ತಂದು ಮಡಿಕೆ ಶುದ್ಧ ಮಾಡಿ ಅದಕ್ಕೆ ಹಾಕಿ. ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಎಷ್ಟು ಉತ್ತಮವಾಗುತ್ತದೆ ಎಂದು ನೀವೇ ಪರೀಕ್ಷೆ ಮಾಡಿ ನೋಡಿ.

Useful Information
WhatsApp Group Join Now
Telegram Group Join Now

Post navigation

Previous Post: ಆಷಾಡ ಮಾಸದ ಮೊದಲ ಮಂಗಳವಾರ ಇಂದು ದುರ್ಗಾ ದೇವಿಯ ಆಶೀರ್ವಾದ ಈ 5 ರಾಶಿಯವರ ಮೇಲಿದೆ, ಮಾಡುವ ಕೆಲಸ ಕಾರ್ಯದಲ್ಲಿ ಇಂದು ನಿರೀಕ್ಷೆಗೂ ಮೀರಿದ ಲಾಭ.!
Next Post: ಕೋಟಿ ಸಾಲ ಇದ್ದರೂ ಕೂಡ ತೀರುತ್ತೆ, ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಇದೊಂದು ವಸ್ತು ಕೊಟ್ಟು ಬನ್ನಿ ಸಾಕು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore