ನಮ್ಮ ಹಿಂದೂ ಗ್ರಂಥಗಳ ಪ್ರಕಾರವಾಗಿ ಅಷ್ಟ ದಿಕ್ಪಾಲಕರು ಇರುತ್ತಾರೆ. ಅಂದರೆ ಹೇಗೆ ನಮಗೆ ಎಂಟು ದಿಕ್ಕುಗಳು ಇರುತ್ತದೆಯೋ ಅದೇ ರೀತಿಯಾಗಿ ಎಂಟು ದಿಕ್ಕು ಒಂದೊಂದು ದಿಕ್ಪಾಲಕರು ಇರುತ್ತಾರೆ ಎನ್ನುವುದರ ಅರ್ಥ ಇದಾಗಿದೆ. ಹಾಗಾದರೆ ಯಾವ ದಿಕ್ಕಿಗೆ ಯಾರೂ ದಿಕ್ಪಾಲಕರು ಅಂದರೆ ಅಧಿಪತಿ ಆಗಿರುತ್ತಾರೆ ಎಂದು ನೋಡುವುದಾದರೆ.
* ಪೂರ್ವ ದಿಕ್ಕಿಗೆ ಇಂದ್ರ ಅಧಿಪತಿ.
* ಆಗ್ನೇಯ ದಿಕ್ಕಿಗೆ ಅಗ್ನಿ ಅಧಿಪತಿ.
* ದಕ್ಷಿಣ ದಿಕ್ಕಿಗೆ ಯಮಧರ್ಮರಾಜ ಅಧಿಪತಿ.
* ನೈರುತ್ಯ ದಿಕ್ಕಿಗೆ ನೈರುತಿ ಎನ್ನುವಂತಹ ಒಬ್ಬ ರಾಕ್ಷಸ ಅಧಿಪತಿ.
* ಪಶ್ಚಿಮ ದಿಕ್ಕಿಗೆ ವರುಣದೇವನು ಅಧಿಪತಿ.
* ವಾಯುವ್ಯ ದಿಕ್ಕಿಗೆ ವಾಯುದೇವ ಅಧಿಪತಿ.
* ಉತ್ತರ ದಿಕ್ಕಿಗೆ ಕುಬೇರ ಅಧಿಪತಿ.
* ಈಶಾನ್ಯ ದಿಕ್ಕಿಗೆ ಈಶಾನ್ಯ ಅಂದರೆ ಶಿವನ ಅಂಶದಲ್ಲಿ ಹುಟ್ಟಿರುವಂತಹ ಈಶಾನ್ಯನು ಅಧಿಪತಿ.
ಹೀಗೆ ಒಂದೊಂದು ದಿಕ್ಕಿಗೆ ಒಂದೊಂದು ದೇವರು ಅಧಿಪತಿಯಾಗಿದ್ದು ಒಂದೊಂದು ದಿಕ್ಕು ಕೂಡ ಬಹಳ ವಿಶೇಷವಾದಂತಹ ಸ್ಥಾನವನ್ನು ಹೊಂದಿರುತ್ತದೆ ಎಂದೇ ಹೇಳಬಹುದು. ಹೌದು ಕೆಲವೊಂದಷ್ಟು ದಿಕ್ಕು ಗಳು ನಮಗೆ ಹೆಚ್ಚಿನ ಲಾಭವನ್ನು ತಂದು ಕೊಟ್ಟರೆ ಇನ್ನೂ ಕೆಲವೊಂದ ಷ್ಟು ದಿಕ್ಕುಗಳು ನಮಗೆ ನಷ್ಟವನ್ನು ತಂದು ಕೊಡುತ್ತದೆ ಆದ್ದರಿಂದ ಅದನ್ನು ನಾವು ತಪ್ಪು ಎಂದು ಹೇಳಲು ಸಾಧ್ಯವಿಲ್ಲ.
ನಮಗೆ ಅನುಕೂಲ ವಾಗುವಂತೆ ನಮಗೆ ಅಭಿವೃದ್ಧಿಯಾಗುವಂತೆ ಯಾವ ದಿಕ್ಕು ಒಳ್ಳೆಯ ದಾಗಿರುತ್ತದೆ ಅದಕ್ಕೆ ಅನುಗುಣವಾಗಿ ನಾವು ನಮ್ಮ ಮನೆಯ ಬೀರು ವನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ನಮ್ಮ ಮನೆಯಲ್ಲಿ ಯಾವುದೇ ಎಂತದ್ದೇ ಪರಿಸ್ಥಿತಿಯಲ್ಲೂ ಹಣಕಾಸಿನ ಸಮಸ್ಯೆ ಎನ್ನುವುದು ಬರುವುದಿಲ್ಲ.
ಈ ಹೆಸರಿನ ಹುಡುಗಿಯರು ಮನೆಗೆ ಅದೃಷ್ಟವಂತರು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ.
ಹಾಗೇನಾದರೂ ನೀವು ವಿರುದ್ಧ ವಾಗಿ ಇಟ್ಟಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಹಣಕಾಸು ನಿಲ್ಲುವುದಿಲ್ಲ. ಹಾಗಾದರೆ ಮನೆಯಲ್ಲಿ ಬೀರುವನ್ನು ಇಡುವಂತಹ ಸ್ಥಳ ಯಾವುದಾಗಿರ ಬೇಕು ಅಂದರೆ ಯಾವ ದಿಕ್ಕಿಗೆ ಮುಖ ಮಾಡುವಂತೆ ಬೀರುವನ್ನು ಇಡಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
* ಮನೆಯಲ್ಲಿ ಬೀರುವನ್ನು ಆಗ್ನೇಯ ದಿಕ್ಕಿಗೆ ತಿರುಗಿಸಿ ಇಡಬಾರದು. ಆಗ್ನೇಯ ದಿಕ್ಕಿನ ಅಧಿಪತಿ ಸೂರ್ಯ ಆಗಿರುವುದರಿಂದ ಸೂರ್ಯನ ಬೆಳಕು ಹೇಗೆ ಪ್ರಕಾಶಮಾನವಾಗಿ ಇರುತ್ತದೆಯೋ ಅಂದರೆ ಅದು ತನ್ನ ತಾಪದಿಂದ ಎಲ್ಲವನ್ನು ಹೇಗೆ ಸುಡುತ್ತದೆಯೋ ಅದೇ ರೀತಿಯಾಗಿ ನಮ್ಮ ಬೀರುವಿನಲ್ಲಿ ಇರುವಂತಹ ಎಲ್ಲಾ ಹಣಕಾಸು ಚಿನ್ನ ಎಲ್ಲವೂ ಸಹ ಸುಟ್ಟು ಹೋಗುತ್ತದೆ.
ಶನಿದೇವರ ರಕ್ಷೆಯ ಸಂಕೇತ ಕಪ್ಪುದಾರ ಆದ್ರೆ ಈ ಎರಡು ರಾಶಿಯವರು ಈ ದಾರ ಕಾಲಿಗೆ ಕಟ್ಟುವಂತಿಲ್ಲ ನೋಡಿ.!
ಆದ್ದರಿಂದ ಯಾವುದೇ ಕಾರಣಕ್ಕೂ ಆಗ್ನೇಯ ದಿಕ್ಕಿಗೆ ತಿರುಗಿಸಿ ಬೀರುವನ್ನು ಇಡುವುದು ಅಷ್ಟೊಂದು ಶ್ರೇಯಸ್ಕರವಲ್ಲ ಎಂದೇ ಹೇಳಬಹುದು. ಹಾಗೂ ನೀವು ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಕೂಡ ಹಣಕಾಸು ಮನೆಯಲ್ಲಿ ನಿಲ್ಲುವುದಿಲ್ಲ ಎಂದು ವಾಸ್ತು ಶಾಸ್ತ್ರದ ಪ್ರಕಾರ ತಿಳಿಸಲಾಗಿದೆ.
* ಅದೇ ರೀತಿಯಾಗಿ ವಾಯುವ್ಯ ದಿಕ್ಕಿಗೆ ಬೀರುವನ್ನು ತಿರುಗಿಸಿ ಇಟ್ಟರೆ ಅದು ಕೂಡ ಅಷ್ಟೊಂದು ಶ್ರೇಯಸ್ಕರವಲ್ಲ ಎಂದೇ ಹೇಳಬಹುದು. ಹೌದು ವಾಯುವ್ಯ ದಿಕ್ಕಿನ ಅಧಿಪತಿ, ವಾಯು ಆಗಿರುವುದರಿಂದ ಹೇಗೆ ಅದು ಸಂಚರಿಸುತ್ತದೆಯೋ ಅದೇ ರೀತಿಯಾಗಿ ಬಿರುವಿನಲ್ಲಿರುವಂತಹ ಪ್ರತಿಯೊಂದು ಹಣಕಾಸು ಎಲ್ಲವೂ ಸಹ ನಮ್ಮಿಂದ ದೂರ ಹೋಗುತ್ತದೆ ಎನ್ನುವುದರ ಅರ್ಥ ಇದಾಗಿದೆ ಆದ್ದರಿಂದ ಈ ದಿಕ್ಕು ಕೂಡ ಅಷ್ಟು ಶ್ರೇಯಸ್ಕರವಲ್ಲ.
* ಅದೇ ರೀತಿಯಾಗಿ ಪಶ್ಚಿಮ ದಿಕ್ಕಿಗೆ ಬೀರುವನ್ನು ತಿರುಗಿಸಿ ಇಟ್ಟರೆ ಅದು ಕೂಡ ಅಷ್ಟೊಂದು ಒಳ್ಳೆಯದಲ್ಲ ಎಂದೇ ಹೇಳಬಹುದು. ಹೌದು ಪಶ್ಚಿಮ ದಿಕ್ಕಿನ ಅಧಿಪತಿ ವರುಣದೇವ ಆಗಿರುವುದರಿಂದ ಹೇಗೆ ನೀರು ಕರಗಿ ಹೋಗುತ್ತದೆಯೋ ಅಂದರೆ ಒಂದು ಸ್ಥಳದಲ್ಲಿ ನಿಲ್ಲುವುದಿಲ್ಲ ಅದೇ ರೀತಿಯಾಗಿ ನಿಮ್ಮ ಮನೆಯಲ್ಲಿ ಇರುವಂತಹ ಹಣಕಾಸು ಎಲ್ಲವೂ ಕೂಡ ಒಂದು ಕಡೆ ನಿಲ್ಲುವುದಿಲ್ಲ ಹರಿದು ಹೋಗುತ್ತದೆ ಎನ್ನುವುದರ ಅರ್ಥ ಇದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.