Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಆರೋಗ್ಯ ಸಲಹೆಗಳು.!

Posted on October 21, 2023 By Kannada Trend News No Comments on ಆರೋಗ್ಯ ಸಲಹೆಗಳು.!

 

* ದೊಡ್ಡಪತೆ ಎಲೆಯ ರಸದೊಂದಿಗೆ ಜೀರಿಗೆಯ ಪುಡಿಯನ್ನು ಸೇರಿಸಿ ಸೇವಿಸುವುದರ ಮೂಲಕ ಮತ್ತು ದೇಹದ ಮೇಲಿನ ಪಿತ್ತದ ಬೊಬ್ಬೆಗಳ ಮೇಲೆ ಹಚ್ಚುವುದರಿಂದ ಪಿತ್ತದ ಬೊಬ್ಬೆಗಳನ್ನು ಪೂರ್ತಿಯಾಗಿ ದೂರ ಮಾಡಬಹುದು.
* ಅರಿಶಿನದ ಪುಡಿಯನ್ನು ಬೆಣ್ಣೆಯೊಂದಿಗೆ ಸೇರಿಸಿ ಮುಲಾಮಿನಂತೆ ಮಾಡಿ ನವೆಯಾಗುವಂಥ ದದ್ದುಗಳ ಮೇಲೆ ಹಚ್ಚಿಕೊಂಡರೆ ನವೆ
ಕಡಿಮೆಯಾಗುತ್ತದೆ.

* ಈರುಳ್ಳಿಯ ತುಂಡುಗಳನ್ನು ತುಪ್ಪದಲ್ಲಿ ಹುರಿದು ಪ್ರತಿದಿನ ಸೇವಿಸುತ್ತ ಬಂದರೆ ಒಣ ಕೆಮ್ಮು ವಾಸಿಯಾಗುತ್ತದೆ.
* ಹುಳಿ ಮಾವಿನ ಹಣ್ಣಿನ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಮಾಡಿ, ತುಪ್ಪದಲ್ಲಿ ಹುರಿದು ಸಕ್ಕರೆ ಬೆರೆಸಿ ಸೇವಿಸಿದರೆ ಸ್ತ್ರೀಯಲ್ಲಿ ಕಂಡುಬರುವ ಋತು ಸ್ರಾವದಲ್ಲಿನ ಅತಿ ರಕ್ತಸ್ರಾವವು ನಿಲ್ಲುತ್ತದೆ.
* ಧನಿಯ ಪುಡಿ, ಜೀರಿಗೆ ಮತ್ತು ಮೆಣಸಿನ ಕಾಳುಗಳಿಂದ ತಯಾರಿಸಿದ ಕಷಾಯವನ್ನು ದಿನಕ್ಕೆ ಮೂರು ಬಾರಿಯಂತೆ ಸೇವಿಸುವುದರಿಂದ ಸಾಮಾನ್ಯ ಶೀತದಿಂದ ಬರುವ ತಲೆನೋವು, ಅಜೀರ್ಣ ಹಾಗೂ ಮಲಬದ್ಧತೆಯ ತೊಂದರೆ ಗಳು ನಿವಾರಣೆಯಾಗುತ್ತವೆ.

* ಹರಳು ಗಿಡದ ಬೇರಿನಿಂದ ತಯಾರಿಸಿದ ಕಷಾಯವನ್ನು ಶುಂಠಿ ರಸದೊಂದಿಗೆ ಸೇವಿಸುವುದರಿಂದ ಸೊಂಟನೋವು, ಪಕ್ಕೆನೋವು ಮತ್ತು ಹೃದಯದ ನೋವಿನ ನಿವಾರಣೆಯಾಗುತ್ತದೆ.
* ಸಾಮಾನ್ಯ ಜ್ವರ ಬಂದಾಗ ಬದನೆಯ ಬೇರು ಅಥವಾ ಎಲೆಯ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಎರಡು ವೇಳೆಯಂತೆ ಸೇವಿಸುತ್ತಾ ಬಂದರೆ ಒಂದೆರಡು ದಿನಗಳಲ್ಲೇ ಜ್ವರವು ತಗ್ಗುತ್ತದೆ.
* ಬೆಟ್ಟದ ನೆಲ್ಲಿಕಾಯಿ ಬೀಜಗಳನ್ನು ತುಪ್ಪದಲ್ಲಿ ಹುರಿದು, ನಂತರ ಅನ್ನದ ಗಂಜಿಯಲ್ಲಿ ಅರೆದು ಹಣೆಗೆ ಪಟ್ಟು ಹಾಕುವುದರಿಂದ ಮೂಗಿನ ರಕ್ತ ಸ್ರಾವ ನಿಲ್ಲುತ್ತದೆ.

* ಹುಳಿ ಸೊಪ್ಪಿನ ಎಲೆಗಳನ್ನು ನುಣ್ಣಗೆ ಅರೆದು ಸ್ವಲ್ಪ ಬಿಸಿ ಮಾಡಿ ನೋವಿನಿಂದ ಕೂಡಿದ ಸ್ಥಳದ ಮೇಲೆ ಹಚ್ಚಿದರೆ, ಊತ ಮತ್ತು ನೋವು ಪರಿಹಾರವಾಗುತ್ತದೆ.
* ಗರ್ಭಕೋಶದ ತೊಂದರೆಯನ್ನು ಹೊಂದಿರುವವರು ಪ್ರತಿ ದಿನವೂ ತಪ್ಪದಂತೆ ಮಜ್ಜಿಗೆಯನ್ನು ಸೇವಿಸುವುದು ಒಳಿತು.
* ಮಹಿಳೆಯರು ಅಗತ್ಯವೆನಿಸಿದ ಪ್ರಮಾಣದ ಮೆಂತ್ಯವನ್ನು ತೆಗೆದುಕೊಂಡು ಕಷಾಯವನ್ನಾಗಿಸಿ ಸತತವಾಗಿ ಮೂರು ದಿನಗಳ ಕಾಲ ಸೇವಿಸಿದರೆ ವಿಳಂಬವಾದ ಋತುಚಕ್ರ ಮತ್ತು ಋತುಚಕ್ರದ ಅವಧಿ ಯಲ್ಲಿ ಉಂಟಾಗುವ ಹೊಟ್ಟೆನೋವು ಮರೆಯಾಗುತ್ತದೆ.

* ಋತುಚಕ್ರದಲ್ಲಿ ಸ್ವಲ್ಪ ವಿಳಂಬವಾಗಬೇಕೆಂದು ಬಯಸುವ ಸ್ತ್ರೀಯರು ಬಿಸಿನೀರಿಗೆ ಉಪ್ಪು ಬೆರಸಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯ ಬೇಕು ಎಷ್ಟು ದಿನಗಳು ಹೀಗೆ ಕುಡಿಯುತ್ತಾ ಬರುತ್ತಾರೋ ಅಷ್ಟು ದಿನಗಳವರೆಗೆ ಋತುಚಕ್ರ ಮುಂದೂಡಲ್ಪಡುತ್ತದೆ.
* ಹೆರಿಗೆ ನೋವು ಕಾಣಿಸಿಕೊಳ್ಳುವ ಮೊದಲು ಗರ್ಭಿಣಿಯು ನಾಲ್ಕು ಚಮಚದಷ್ಟು ಶುದ್ಧವಾದ ಜೇನುತುಪ್ಪವನ್ನು ಕುಡಿದರೆ ಹೆರಿಗೆ ಹೆಚ್ಚಿನ ನೋವು ತೊಂದರೆಗಳಿಲ್ಲದೆ ಸುಖವಾಗಿ ಆಗುತ್ತದೆ.
ಹೀಗೆ ಇಷ್ಟೆಲ್ಲ ಮಾಹಿತಿ ಪ್ರತಿಯೊಬ್ಬರೂ ತಿಳಿದುಕೊಂಡಿದ್ದರೆ ಕೆಲವೊಂದು ಸಮಯದಲ್ಲಿ ಇದೆಲ್ಲವೂ ಕೂಡ ಅನುಕೂಲವಾಗುತ್ತದೆ ಎಂದೇ ಹೇಳಬಹುದು.

ಹೌದು ಮನೆಯಲ್ಲಿರುವಂತಹ ಮಹಿಳೆಯರು ಯಾವುದೇ ರೀತಿಯ ಆರೋಗ್ಯ ವಿಚಾರವಾಗಿರಬಹುದು ಮನೆಯವರ ಆರೋಗ್ಯದಲ್ಲಿ ಏನಾದರೂ ತೊಂದರೆ ಆಗಿದ್ದರೆ ಅದನ್ನು ಮನೆಯಲ್ಲಿ ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸಿ ಅದನ್ನು ಹೇಗೆ ದೂರ ಮಾಡಬಹುದು ಎನ್ನುವುದನ್ನು ತಿಳಿದುಕೊಂಡಿರುವುದು ಮುಖ್ಯ ಹೌದು, ಚಿಕ್ಕ ಪುಟ್ಟ ತೊಂದರೆ ಉಂಟಾದರೆ ಮನೆಯಲ್ಲಿಯೇ ಕೆಲವೊಂದು ಔಷಧಿ ಕೊಡುವುದರ ಮೂಲಕ ಆ ಸಮಸ್ಯೆಯನ್ನು ದೂರ ಮಾಡಬಹುದು ಹಾಗೇನಾದರೂ ಯಾವುದೇ ಮಾಹಿತಿ ತಿಳಿದಿಲ್ಲ ಎಂದರೆ ಪ್ರತಿಯೊಂದು ಕೂಡ ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆ ಬರುತ್ತದೆ.

ನಾವು ಸಣ್ಣ ಪುಟ್ಟ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಹಣ ಖರ್ಚು ಮಾಡುವುದರ ಬದಲು ಇಂತಹ ಕೆಲವೊಂದಷ್ಟು ಮಾಹಿತಿಗಳನ್ನು ಗೊತ್ತಿರುವವರ ಬಳಿ ಕೇಳಿ ಹಾಗೂ ಕೆಲವೊಂದು ಕಡೆ ನೋಡಿ ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು ಎಂದೇ ಹೇಳಬಹುದು.

Useful Information

Post navigation

Previous Post: ಕೆಟ್ಟ ಸ್ತ್ರೀಯರ ಲಕ್ಷಣಗಳು.!
Next Post: ಮುಖ ಬೆಳ್ಳಗೆ ಆಗಲು ಸಿಂಪಲ್ 15 ಟಿಪ್ಸ್.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore