Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಜಗ್ಗೇಶ್ ಮಾತು ಕೇಳಿ ಮನೆ ಕಳ್ಕೊಂಡೆ, ಸಂಕಷ್ಟದಲ್ಲಿ ಸಿಲುಕಿರುವ ನಟ ಬಾಲರಾಜ್, ಅಣ್ಣಾವ್ರ ತಂಗಿಮಗ ಕಷ್ಟದಲ್ಲಿದ್ರು ರಾಜವಂಶ ಯಾಕೆ ಸಹಾಯ ಮಾಡ್ತಿಲ್ಲ ಗೊತ್ತ.?

Posted on January 29, 2023 By Kannada Trend News No Comments on ಜಗ್ಗೇಶ್ ಮಾತು ಕೇಳಿ ಮನೆ ಕಳ್ಕೊಂಡೆ, ಸಂಕಷ್ಟದಲ್ಲಿ ಸಿಲುಕಿರುವ ನಟ ಬಾಲರಾಜ್, ಅಣ್ಣಾವ್ರ ತಂಗಿಮಗ ಕಷ್ಟದಲ್ಲಿದ್ರು ರಾಜವಂಶ ಯಾಕೆ ಸಹಾಯ ಮಾಡ್ತಿಲ್ಲ ಗೊತ್ತ.?

 

ಹ್ಯಾಟ್ರಿಕ್ ಹೀರೋ ಶಿವಣ್ಣ (Shivanna) ಅವರ ಸಂಯುಕ್ತ (Samyuktha) ಸಿನಿಮಾದ ಮೂರು ನಾಯಕರಲ್ಲಿ ಒಬ್ಬರಾಗಿ ಮತ್ತು ರವಿಚಂದ್ರನ್ (Ravichandran) ಅವರ ಸಿಪಾಯಿ (Sipayi) ಅಂತಹ ಸೂಪರ್ ಹಿಟ್ ಸಿನಿಮಾದಲ್ಲಿ ಅವರಿಗೆ ಎದುರಾಳಿ ಪಾತ್ರದಲ್ಲಿ ಮಿಂಚಿದ್ದ ಬಾಲರಾಜ್ (Balaraj) ಅವರು ಒಂದು ಕಾಲದಲ್ಲಿ ಕನ್ನಡದಲ್ಲಿ ಒಳ್ಳೆ ಹೆಸರು ಪಡೆದಿದ್ದ ನಟ. ಕಾಲಕ್ರಮೇಣ ಅವರಿಗೆ ಅವಕಾಶಗಳು ಕಡಿಮೆ ಆಯ್ತು ಮತ್ತು ಚಿತ್ರರಂಗದಿಂದ ಸ್ವಲ್ಪ ದೂರ ಉಳಿದ ಇವರು ಬೇರೆ ಕೆಲಸಗಳಲ್ಲಿ ನಿರತರಾದರು.

ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ದೂರದ ಸಂಬಂಧಿ ಕೂಡ ಆದ ಇವರು ಮಾಡಿದ ಒಂದೇ ಒಂದು ತಪ್ಪಿನಿಂದಾಗಿ ಇಂದು ಇರಲು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಗಳಿಗೆ ಅಳೆಯುವ ಪರಿಸ್ಥಿತಿಗೆ ತಲುಪಿದ್ದಾರೆ. ಅದೇನೆಂದರೆ ಬಸವೇಶ್ವರನಗರದಲ್ಲಿ ಇವರು ಒಂದು ಸ್ವಂತ ಮನೆ ಕಟ್ಟಿಸಿದ್ದರು ಆದರೆ ಅವರು ಮನೆ ಕಟ್ಟಿಸುವ ವೇಳೆ ವಾಸ್ತು (vasthu) ಬಗ್ಗೆ ತಿಳಿದಿರಲಿಲ್ಲವಂತೆ ಹಾಗಾಗಿ ಇಂಜಿನಿಯರ್ ಹೇಳಿದ ರೀತಿಯಲ್ಲಿ ಅವರ ಮನೆ ನಿರ್ಮಾಣವಾಗಿತ್ತು.

ಆ ಮನೆಯಿಂದಲೇ ಅವರಿಗೆ ಇಂದು ಸಾಕಷ್ಟು ಸಂಕಷ್ಟಗಳು ಎದುರಾಗಿದೆ. ಮನೆಗೆ ಬಂದವರೆಲ್ಲ ವಾಸ್ತು ಬಗ್ಗೆ ಹೇಳುತ್ತಿದ್ದರಂತೆ. ಹಾಗಾಗಿ ವಾಸ್ತುವಿನ ಗಂಧ ಗಾಳಿ ಕೂಡ ಗೊತ್ತಿಲ್ಲದ ಇವರು ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಬೇರೆಯವರನ್ನು ಕೇಳಿದಾಗ ಜಗ್ಗೇಶ್ (Jaggesh) ಅವರಿಗೆ ಇದರ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ಯಾರೋ ಸಲಹೆ ಕೊಟ್ಟರಂತೆ. ಒಮ್ಮೆ ಯಾವುದೊ ಶೂಟಿಂಗ್ ವೇಳೆ ಜಗ್ಗೇಶ್ ಅವರು ಬಾಲರಾಜ್ ಅವರಿಗೆ ಸಿಕ್ಕಾಗ ತಮ್ಮ ಸಮಸ್ಯೆಯನ್ನು ಹೇಳಿಕೊಂಡರಂತೆ.

ದಯವಿಟ್ಟು ಒಮ್ಮೆ ನಮ್ಮ ಮನೆಗೆ ಬಂದು ನೋಡಿ ಸಮಾಧಾನವಾಗುತ್ತದೆ ಎಂದಾಗ ಒಮ್ಮೆ ಜಗ್ಗೇಶ್ ಅವರು ಸಹ ಬಾಲರಾಜ್ ಮನೆಗೆ ಬಂದರಂತೆ. ಮನೆ ಒಳಗೆ ಬರುವ ಮುನ್ನವೇ ಮನೆ ಇರುವ ಅವಸ್ಥೆ ನೋಡಿ ತಕ್ಷಣವೇ ನೀನು ಮನೆ ಖಾಲಿ ಮಾಡು, ಇಲ್ಲದಿದ್ದರೆ ಇನ್ನೂ ದೊಡ್ಡ ಕಷ್ಟಗಳಿಗೆ ಸಿಕ್ಕಿಹಾಕಿಕೊಳ್ಳುತ್ತೀಯ ಎಂದು ಹೇಳಿದರಂತೆ. ಅಂದು ಜಗ್ಗೇಶ್ ಅವರು ಹೇಳಿದ್ದು ಕೂಡ ಸತ್ಯಕ್ಕೆ ಹತ್ತಿರವಾಗಿದ್ದಂತೆ ಯಾಕೆಂದರೆ ಆ ಮನೆ ಕಟ್ಟಿಸಿದಾಗ ಒಂದಲ್ಲ ಒಂದು ಸಮಸ್ಯೆ ಬರುತ್ತಿತ್ತಂತೆ.

ಜೊತೆಗೆ ಅಕ್ಕಪಕ್ಕದ ಮನೆಗಳು ಕೂಡ ನಿರ್ಮಾಣ ಆದ್ದರಿಂದ ಹಾಗೂ ಮನೆಯಲ್ಲಿ ವಾಸ್ತು ಇಲ್ಲದ ಕಾರಣ ಮನಸ್ಸಿಗೆ ನೆಮ್ಮದಿ ಇಲ್ಲದೆ ಅದೇ ಯೋಚನೆ ಮನೆಮಾರಲು ನಿರ್ಧರಿಸಿದರಂತೆ. ಆದರೆ ಇವರು ಮನೆ ಮಾರಿಬೇಕು ಎಂದು ಅಂದುಕೊಂಡ ಮೂರು ವರ್ಷಗಳ ನಂತರ ಆ ಮನೆ ಸೇಲ್ ಆಯ್ತಂತೆ. ಸಹಕಾರಿ ನಗರ, ಬ್ರಿಗೇಡ್ ರೋಡ್, ಯಶವಂತಪುರ ಹೀಗೆ ನಾನು ಕಡೆ ಬಾಡಿಗೆ ಮನೆಗಳಲ್ಲಿ ಇದ್ದು ನನ್ನ ರೀತಿಯ ಸಂಕಷ್ಟಗಳಿಗೆ ಅವರು ಸಿಕ್ಕಿಹಾಕಿ ಕೊಂಡಿದ್ದರಂತೆ.

ಬಸವೇಶ್ವರ ನಗರದ ಸಮೀಪವೇ ಅವರ ಮಾವನ ಮನೆ ಇದ್ದ ಕಾರಣ ಅಲ್ಲೊಂದು ಬಾಡಿಗೆ ಮನೆಯಲ್ಲಿ ಇದ್ದರಂತೆ. ಅರಮನೆ ಕಾರ್ಯಕ್ಕೆ ಮಾವನ ಮನೆಯವರೆಲ್ಲ ಬಂದಿದ್ದಾಗ ಅಲ್ಲಿ ಕಳ್ಳತನವಾಯಿತಂತೆ. ಅವರ ಮನೆಯಲ್ಲಿ ಬಾಲರಾಜ್ ಪತ್ನಿಯದೇ 10 ಲಕ್ಷಕ್ಕಿಂತ ಹೆಚ್ಚು ಮೊತ್ತದ ಒಡವೆ ಇತ್ತಂತೆ. ಸೈಟ್ ಗಳನ್ನು ಮಾರಿ ಒಂದು ಕಡೆ ಹಣ ಡೆಪಾಸಿಟ್ ಮಾಡಿದ್ದಾರಂತೆ ಅಲ್ಲೂ ಕೂಡ ಮೋಸವಾಗಿ ಆ ಕಾಲದಲ್ಲಿ 15 ಲಕ್ಷ ಹಣ ಕಳೆದುಕೊಂಡರಂತೆ. ಇಷ್ಟೆಲ್ಲ ಕಷ್ಟ ನೋಡಿದ್ದೇನೆ ಖಂಡಿತ ಒಂದಲ್ಲ ಒಂದು ದಿನ ನಮಗೂ ಉಳಿತಾಗುತ್ತದೆ ಎನ್ನುವ ಭರವಸೆಯ ಮಾತುಗಳನ್ನು ಆಡುವ ಬಾಲರಾಜ್ ಅವರ ಒಳ್ಳೆತನವನ್ನು ಮೆಚ್ಚಲೇಬೇಕು.

Viral News Tags:Actor balaraj, Balaraj, Jaggesh
WhatsApp Group Join Now
Telegram Group Join Now

Post navigation

Previous Post: ಕ್ರಾಂತಿಯಲ್ಲಿ ಅಪ್ಪು ಫೋಟೋ ಹಾಕಿಲ್ಲ ಟ್ರಿಬ್ಯೂಟ್ ಕೊಟ್ಟಿಲ್ಲ ಅಂತ ಗಲಾಟೆ ಮಾಡ್ತಿದ್ದಿರಲ್ಲ ಯುವರತ್ನದಲ್ಲಿ ಚಿರು ಹಾಕಿದ್ರಾ ಟ್ರಿಬ್ಯೂಟ್ ಕೊಟ್ರಾ.? ದಚ್ಚು ಅಭಿಮಾನಿಗಳು ಪ್ರಶ್ನೆ.!
Next Post: 500ಕ್ಕೂ ಹೆಚ್ಚು ಕನ್ನಡ ಸಿನಿಮಾದಲ್ಲಿ ನಟಿಸಿದ ಮನ್ ದೀಪ್ ರಾಯ್ ವಿ.ಧಿ.ವ.ಶ ಕಂಬನಿ ಮಿಡಿದ ಚಿತ್ರರಂಗ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore