Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಲಕ್ಷ್ಮಿ ಮಗಳು ಬೀದಿ ಬದಿಯಲ್ಲಿ ಸೋಪ್ ಮಾರುತ್ತಿದ್ದಾರೆ, ಅವಕಾಶವಿಲ್ಲದೆ ಬೀದಿಗೆ ಬಿದ್ದ ಐಶ್ವರ್ಯ ಭಾಸ್ಕರನ್

Posted on June 18, 2022 By Kannada Trend News No Comments on ಲಕ್ಷ್ಮಿ ಮಗಳು ಬೀದಿ ಬದಿಯಲ್ಲಿ ಸೋಪ್ ಮಾರುತ್ತಿದ್ದಾರೆ, ಅವಕಾಶವಿಲ್ಲದೆ ಬೀದಿಗೆ ಬಿದ್ದ ಐಶ್ವರ್ಯ ಭಾಸ್ಕರನ್

ಖ್ಯಾತ ನಟಿ ಲಕ್ಷ್ಮೀ ಅವರು ಯಾರಿಗೆ ಗೊತ್ತಿಲ್ಲ ತಾನೇ ಹೇಳಿ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲೆಯಾಳಂ ಹೀಗೆ ದಕ್ಷಿಣ ಭಾರತದ ಸಾಕಷ್ಟು ನಾಯಕನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಇಲ್ಲಿಯವರೆಗೂ ಕೂಡ ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಒಂದು ಕಾಲದಲ್ಲಿ ನಾಯಕ ನಟಿಯಾಗಿ ಮತ್ತೊಂದು ಕಾಲದಲ್ಲಿ ಪೋಷಕ ನಟಿಯಾಗಿ ಈಗ ಹಲವಾರು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಸೇವೆ ಸಲ್ಲಿಸುತ್ತಿದ್ದರು ಇಷ್ಟು ದೊಡ್ಡ ತಾರಾಬಳಗವನ್ನು ಹೊಂದಿದಂತಹ ಲಕ್ಷ್ಮಿ ಅವರ ಮಗಳು ಈಗ ಬೀದಿಗೆ ಬಿದ್ದಿರುವಂತಹ ಘಟನೆಯನ್ನು ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತದೆ. ಅಷ್ಟಕ್ಕೂ ಲಕ್ಷ್ಮಿ ಅವರ ಮಗಳ ಬದುಕಲ್ಲಿ ಏನಾಗಿತ್ತು ಈ ರೀತಿ ಇವರು ಬೀದಿಬದಿಯಲ್ಲಿ ಕುಳಿತುಕೊಂಡು ಸೋಪ್ ಅನ್ನು ಮಾರುವಂತಹ ಕೆಲಸಕ್ಕೆ ಯಾಕೆ ಇಳಿದರು ಎಂಬುದನ್ನು ನೋಡಿದರೆ ಎಂತವರಾದರೂ ಕೂಡ ಕಣ್ಣೀರು ಹಾಕುತ್ತಾರೆ. ಇನ್ನು ಲಕ್ಷ್ಮಿ ಅವರ ವೈಯಕ್ತಿಕ ಜೀವನವನ್ನು ನೋಡುವುದಾದರೆ ಇವರು ಮೂರು ಮದುವೆಯನ್ನು ಆಗುತ್ತಾರೆ ಇವರ ಮೂರು ಜನ ಪತಿಯಂದರಲ್ಲಿ ಮೊದಲನೇ ಪತಿಯ ಮಗಳು ಐಶ್ವರ್ಯ ಭಾಸ್ಕರನ್

ಇವರು ಕೂಡ ತಾಯಿಯ ಮಾದರಿಯಲ್ಲೇ ಒಂದು ಕಾಲದಲ್ಲಿ ಫೇಮಸ್ ನಟಿ ತೆಲುಗು ಮತ್ತು ತಮಿಳು ಹಾಗೂ ಮಲೆಯಾಳಂ ಹಾಗೂ ಕನ್ನಡದಲ್ಲಿ ಹಲವಾರು ನಾಯಕನಟರ ಜೊತೆ ನಟಿಯಾಗಿ ನಟಿಸಿದ್ದಾರೆ. ಇಲ್ಲಿಯವರೆಗೂ ಕೂಡ ಸುಮಾರು ನೂರಕ್ಕೂ ಅಧಿಕ ಚಲನಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದ ನಂತರ ಪೋಷಕ ನಟಿಯಾಗಿ ಕೂಡ ನಟಿಸಿದರು. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಇವರು ತಮ್ಮ ಕೈಯಾರೆ ತಮ್ಮ ಜೀವನವನ್ನು ಹಾಳು ಮಾಡಿಕೊಂಡರು. ಐಶ್ವರ್ಯ ಭಾಸ್ಕರನ್ ಅವರು ತನ್ವೀರ್ ಮಹಮ್ಮದ್ ಎಂಬ ಮುಸ್ಲಿಂ ಯುವಕನನ್ನು ಪ್ರೀತಿಸುತ್ತಾರೆ ಇವರನ್ನು ಮದುವೆಯಾಗಲು ಮುಂದಾಗುತ್ತಾರೆ. ಆದರೆ ಲಕ್ಷ್ಮಿಯವರಿಗೆ ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸುವುದಕ್ಕೆ ಸ್ವಲ್ಪವೂ ಕೂಡ ಇಷ್ಟ ಇರುವುದಿಲ್ಲ ಈ ಕಾರಣಕ್ಕಾಗಿ ತಮ್ಮ ಮಗಳ ಮದುವೆಗೆ ವಿರೋಧವನ್ನು ವ್ಯಕ್ತ ಪಡಿಸುತ್ತಾರೆ. ಆದರೂ ಕೂಡ ಐಶ್ವರ್ಯ ಅವರು ನಾನು ಪ್ರೀತಿಸಿದಂತಹ ಯುವಕನನ್ನೇ ನಾನು ಮದುವೆಯಾಗುತ್ತೇನೆ ಇದರಲ್ಲಿ ನೀನು ಹಸ್ತಕ್ಷೇಪ ಮಾಡಬೇಡ ಎಂದು ತಾಯಿಗೆ ಜಗಳ ಆಡಿಕೊಂಡು ತನ್ವೀರ್ ಮೊಹಮ್ಮದ್ ಅವರನ್ನು ಮದುವೆಯಾಗುತ್ತಾರೆ.

ಮದುವೆಯಾದ ಸ್ವಲ್ಪ ದಿನದ ತನಕವು ಕೂಡ ಇವರಿಬ್ಬರ ಜೀವನದಲ್ಲಿ ಯಾವುದೇ ರೀತಿಯಾದಂತಹ ಕ’ಲಹ ಉಂಟಾಗುವುದಿಲ್ಲ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಾರೆ ಸ್ವಲ್ಪ ದಿನದ ನಂತರ ಈ ದಂಪತಿಗಳಿಗೆ ಒಂದು ಹೆಣ್ಣು ಮಗು ಜನಿಸುತ್ತದೆ. ದಿನಗಳು ಕಳೆದಂತೆ ತನ್ವೀರ್ ಮೊಹಮ್ಮದ್ ಅವರು ತಮ್ಮ ನಿಜವಾದ ಮುಖವನ್ನು ತೋರಿಸುತ್ತಾರೆ ಇಷ್ಟು ದಿನಗಳ ಕಾಲ ಅವರು ಮುಖವಾಡದ ಬದುಕನ್ನು ಹಾಕಿಕೊಂಡಿರುತ್ತಾರೆ. ತನ್ವಿರ್ ಅವರು ತುಂಬಾನೇ ಡ್ರ’ಗ್ಸ್ ಗೆ ಅಡಿಕ್ಟ್ ಆಗಿರುತ್ತಾರೆ ಅಷ್ಟೇ ಅಲ್ಲದೆ ಕುಡಿತದ ಚಟವನ್ನು ಕೂಡಾ ಹೊಂದಿರುತ್ತಾರೆ. ಆದರೆ ಅಷ್ಟೊತ್ತಿಗಾಗಲೇ ಐಶ್ವರ್ಯ ಬಸ್ಕರನ್ ಅವರು ಸಂಪೂರ್ಣವಾಗಿ ಚಿತ್ರತಂಡದಿಂದ ದೂರವಾಗಿ ತಮ್ಮ ಮಗಳು ಹಾಗೂ ಸಂಸಾರದ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ. ತನ್ವೀರ್ ಅವರು ಯಾವುದೇ ಕೆಲಸ ಕಾರ್ಯಕ್ಕೆ ಹೋಗದೆ ಮನೆಯಲ್ಲೇ ಇರುತ್ತಾರೆ ಡ್ರ’ಗ್ಸ್ ಸೇವನೆ ಮಾಡುವುದಕ್ಕೆ ಇದಕ್ಕೆ ಹಣವನ್ನು ನೀಡುವಂತೆ ಐಶ್ವರ್ಯ ಅವರಿಗೆ ಹಿಂ’ಸೆ ನೀಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಐಶ್ವರ್ಯ ಅವರಿಗೆ ಯಾವುದೇ ಅವಕಾಶಗಳು ದೊರೆಯುವುದಿಲ್ಲ ಪ್ರತಿನಿತ್ಯವೂ ಕೂಡ ತನ್ನ ಪತಿ ನೀಡುತ್ತಿದ್ದ ಹಿಂ’ಸೆಯನ್ನು ಸಹಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ. ಒಂದು ಕಡೆ ಅವರು ತಮ್ಮ ತಾಯಿ ಆದಂತಹ ಲಕ್ಷ್ಮಿ ಅವರಿಂದಲೂ ಕೂಡ ದೂರ ಆಗಿರುತ್ತಾರೆ.

ಏಕೆಂದರೆ ಲಕ್ಷ್ಮಿ ಅವರಿಗೆ ಇಷ್ಟ ಇಲ್ಲದಂತಹ ಯುವಕನನ್ನು ಮದುವೆಯಾದ ಕಾರಣಕ್ಕೆ ಸಂಪೂರ್ಣವಾಗಿ ಲಕ್ಷ್ಮಿ ಅವರು ಕೂಡ ಮಗಳನ್ನು ದೂರ ಇಟ್ಟಿರುತ್ತಾರೆ. ಒಂದು ಕಡೆ ತಾಯಿಯ ಆಸರೆಯಿಲ್ಲ ಮತ್ತೊಂದು ಕಡೆ ಕೆಲಸ ಇಲ್ಲ ಈಗ ಪತಿ ನೋಡಿದರೆ ಈ ರೀತಿ ಇಂ’ಸೆ ನೀಡುತ್ತಿರುವುದು ಇವೆಲ್ಲದರ ನೋ’ವಿನಿಂದಾಗಿ ತಮ್ಮ ಪತಿಗೆ ಅವರು ವಿ’ಚ್ಛೇ’ದ’ನವನ್ನು ನೀಡುತ್ತಾರೆ. ನಂತರ ತಮ್ಮ ಮಗಳನ್ನು ಕರೆದುಕೊಂಡು ಹೋಗಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡುತ್ತಾರೆ ಇಲ್ಲಿ ಬಂದಂತಹ ಸಂಬಳದಿಂದ ತಮ್ಮ ಮಗಳ ವಿದ್ಯಾಭ್ಯಾಸ ಹಾಗೂ ಲಾಲನೆ ಪಾಲನೆ ಪೋಷಣೆ ಮಾಡಲು ಪ್ರಾರಂಭ ಮಾಡುತ್ತಾರೆ. ಸ್ವಲ್ಪ ದಿನಗಳು ಕಳೆದ ನಂತರ ಮಗಳು ಕೂಡ ಬೇರೊಬ್ಬ ಯುವಕನ ಜೊತೆ ಮದುವೆಯಾಗುತ್ತಾರೆ ಅಲ್ಲಿಗೆ ಐಶ್ವರ್ಯ ಅವರು ಸಂಪೂರ್ಣವಾಗಿ ಒಬ್ಬಂಟಿ ಆಗುತ್ತಾರೆ. ಜನ್ಮ ಕೊಟ್ಟ ಮಗಳು ದೂರಾಗುತ್ತಾರೆ ಹೆತ್ತ ತಾಯಿಯು ಕೂಡ ದೂರಾಗುತ್ತಾರೆ ಪತಿಯು ಕೂಡ ದೂರ ಆಗುತ್ತಾರೆ ಇವೆಲ್ಲದರಿಂದ ಮಾನಸಿಕವಾಗಿ ತುಂಬಾನೇ ಕುಗ್ಗಿ ಹೋಗುತ್ತಾರೆ. ಆದರೂ ಕೂಡ ಬದುಕನ್ನು ಸಾಗಿಸಬೇಕು ಎಂಬ ಕಾರಣಕ್ಕಾಗಿ ಯಾವುದಾದರೂ ಒಂದು ಕೆಲಸವನ್ನು ಮಾಡಬೇಕು ಅಂತ ಬಯಸುತ್ತಾರೆ ಆದರೆ ಇವರಿಗೆ ಯಾರೂ ಕೂಡ ಕೆಲಸವನ್ನು ನೀಡುವುದಿಲ್ಲ. ಹಾಗಾಗಿ ಬೀದಿ ಬದಿ ಕುಳಿತುಕೊಂಡು ಸೋಪ್ ಮಾರುವಂತಹ ಕಾರ್ಯವನ್ನು ಇದೀಗ ಮಾಡುತ್ತಿದ್ದಾರೆ. ಇದನ್ನು ಕಂಡಂತಹ ಕಲಾವಿದರೊಬ್ಬರು ನಿಮ್ಮ ಬದುಕಿನಲ್ಲಿ ಏನಾಯಿತು ಈಗ ಯಾಕೆ ಈ ರೀತಿ ಕೆಲಸ ಮಾಡುತ್ತಿದ್ದೀರಾ ಅಂತ ಕೇಳಿದಾಗ ತಮ್ಮ ಜೀವನದಲ್ಲಿ ನಡೆದಂತಹ ಎಲ್ಲಾ ಕಹಿ ಘಟನೆಗಳನ್ನು ಕೂಡ ಹೇಳಿಕೊಳ್ಳುತ್ತಾರೆ.

ನನಗೆ ಹೇಗಾದರೂ ಮಾಡಿ ಸಿನಿಮಾರಂಗದಲ್ಲಿ ಒಂದು ಅವಕಾಶವನ್ನು ಕೊಡಿ ನಾನು ಕೆಲಸ ಮಾಡುತ್ತೇನೆ ನನ್ನ ಬದುಕನ್ನು ಸಾಗಿಸುವುದಕ್ಕೆ ಹಣದ ಅವಶ್ಯಕತೆ ಇದೆ ಅಂತ ಸಿಕ್ಕ ಸಿಕ್ಕವರನ್ನೆಲ್ಲ ಕೇಳಿಕೊಳ್ಳುತ್ತಿದ್ದಾರೆ ಯಾರು ಕೂಡ ಇವರಿಗೆ ಅವಕಾಶವನ್ನು ನೀಡುತ್ತಿಲ್ಲ‌. ಹಾಗಾಗಿ ಐಶ್ವರ್ಯ ಅವರು ಕೊನೆಗೆ ನಿಮ್ಮ ಮನೆಯ ಟಾಯ್ಲೆಟ್ ಕ್ಲೀನ್ ಮಾಡುವ ಕೆಲಸ ಇದ್ದರೆ ಕೊಡಿ ಅದನ್ನಾದರೂ ಮಾಡುತ್ತೇನೆ ಅಂತ ಹೇಳುತ್ತಿದ್ದಾರೆ. ಐಶ್ವರ್ಯ ಭಾಸ್ಕರನ್ ಅವರು ಈ ರೀತಿ ಹೇಳುತ್ತಿರುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಇದನ್ನು ನೋಡಿದಂತಹ ನೆಟ್ಟಿಗರು ಮತ್ತು ಅಭಿಮಾನಿಗಳು ನಿಜಕ್ಕೂ ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಏಕೆಂದರೆ ಸೆಲೆಬ್ರಿಟಿಗಳು ಅಂದಾಗ ನಾವು ಅವರಿಗೆ ಯಾವುದೇ ಕಷ್ಟ ಇರುವುದಿಲ್ಲ ಜೀವನದಲ್ಲಿ ಉನ್ನತ ಮಟ್ಟದ ಐಷಾರಾಮಿ ಬದುಕನ್ನು ಸಾಗಿಸುತ್ತಾರೆ ಅಂತ ಅಂದುಕೊಳ್ಳುತ್ತೇವೆ. ಆದರೆ ಸ್ಟಾರ್ ನಟ-ನಟಿಯರೆಲ್ಲ ಕೂಡ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಇದೀಗ ಖ್ಯಾತ ನಟಿ ಲಕ್ಷ್ಮಿ ಅವರ ಮಗಳ ಬದುಕೇ ಉದಾಹರಣೆ ಅಂತ ಹೇಳಬಹುದು. ಪ್ರೀತಿ-ಪ್ರೇಮ ಅಂತ ಮೋಸ ಹೋಗುವುದರ ಬದಲಾಗಿ ತಂದೆ-ತಾಯಿ ತೋರಿಸಿದಂತಹ ಹುಡುಗನನ್ನು ಮದುವೆಯಾದರೆ ಇಂತಹ ದುರ್ಗತಿ ಬರುವುದಿಲ್ಲ ಎಂಬುದು ನಮ್ಮ ಉದ್ದೇಶವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು‌.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

Cinema Updates Tags:Aishwarya Bhaskaran, Lakshmi
WhatsApp Group Join Now
Telegram Group Join Now

Post navigation

Previous Post: ಇದ್ದಕ್ಕಿದ್ದ ಹಾಗೆ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ ಧ್ರುವ ಸರ್ಜಾ ಯಾಕೆ ಗೊತ್ತಾ.?
Next Post: ಇದ್ದಕ್ಕಿದ್ದ ಹಾಗೇ ಅಪ್ಪು ಅವರ ಮನೆ ತೊರೆದ ಗನ್ ಮ್ಯಾನ್ ಚಲಪತಿ ಕಾರಣವೇನು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore