ರವಿಚಂದ್ರನ್ ಸಿನಿಮಾದಲ್ಲಿ ನಟಿಸುವುದಕ್ಕೆ ತಿರಸ್ಕರಿಸಿದ ಏಕೈಕ ನಟಿ ಇವರೇ ಅಷ್ಟಕ್ಕೂ ರವಿಚಂದ್ರನ್ ಸಿನಿಮಾ ನಿರಕರಿಸಿದ್ದು ಯಾಕೆ ಗೊತ್ತ.?

ಕ್ರೇಜಿಸ್ಟಾರ್ ರವಿಚಂದ್ರನ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಕಳೆದ ನಾಲ್ಕೈದು ದಶಕಗಳಿಂದಲೂ ಕೂಡ ಸಿನಿಮಾರಂಗದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಒಂದು ಕಾಲದಲ್ಲಿ ರವಿಚಂದ್ರನ್ ಹೆಸರು ಕೇಳಿದರೆ ಸಾಕು ಪಡ್ಡೆ ಹುಡುಗರು ಮತ್ತು ಹದಿ ಹರಿಯದ ಯುವತಿಯರು ಹುಚ್ಚೆದ್ದು ಕುಣಿಯುತ್ತಿದ್ದರು. ಅಷ್ಟರ ಮಟ್ಟಿಗೆ ಇವರು ಮೂಡಿ ಮಾಡಿದ್ದರು ಇವರ ಸಿನಿಮಾದಲ್ಲಿ ಇರುವಂತಹ ಕಾನ್ಸೆಪ್ಟ್ ಆಗಿರಬಹುದು ಹಾಡುಗಳು ಆಗಿರಬಹುದು ಕಥೆ ಸಂಭಾಷಣೆ ಇವೆಲ್ಲವೂ ಕೂಡ ಅಷ್ಟರ ಮಟ್ಟಿಗೆ ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿದ್ದವು. ಒಂದು ಕಾಲದಲ್ಲಿ ಯುವಕರ ಹಾಟ್ ಫೇವರೆಟ್ ನಟ ಅಂದರೆ ಅದು ರವಿಚಂದ್ರನ್ ಅಂತಾನೇ ಹೇಳಬಹುದು.

ರವಿಚಂದ್ರನ್ ಸಿನಿಮಾ ತೆರೆ ಕಾಣುತ್ತಿದೆ ಅಂದರೆ ಸಾಕು ಎಲ್ಲರೂ ಕೂಡ ಕಾದು ಕುಳಿತಿದ್ದರು ಅಷ್ಟು ಮನಮೋಹಕವಾದಂತಹ ನಟನೆಯನ್ನು ಮಾಡುತ್ತಿದ್ದರು. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ರವಿಚಂದ್ರನ್ ಅವರ ಜೊತೆ ನಟನೆ ಮಾಡುವುದಕ್ಕೆ ಸಾಲು ಸಾಲು ಹೀರೋಯಿನ್ ಗಳು ಕಾದು ಕುಳಿತಿದ್ದರು. ಹೌದು ರವಿಚಂದ್ರನ್ ಜೊತೆ ಹೀರೋಯಿನ್ ಆಗಿ ನೀವು ಮಾಡಬೇಕು ಅಂದರೆ ಯಾವ ನಟಿಯು ಕೂಡ ಇದನ್ನು ತಿರಸ್ಕರಿಸುತ್ತಿರಲಿಲ್ಲ. ಸಂತೋಷವಾಗಿಯೇ ನಾನು ರವಿ ಸರ್ ಜೊತೆ ನಟನೆ ಮಾಡುವುದಕ್ಕೆ ಸಿದ್ಧಾಲಾಗಿದ್ದೇನೆ ಎಂಬ ಮಾತನ್ನು ಹೇಳುತ್ತಿದ್ದರಂತೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಆಗಿರಬಹುದು ಅಥವಾ ತಮಿಳಿನ ಖ್ಯಾತ ನಟಿ ರಂಭ ತೆಲುಗಿನ ರಮ್ಯಾ ಕೃಷ್ಣ ಸೌಂದರ್ಯ ಹೀಗೆ ಪರ ರಾಜ್ಯದಲ್ಲಿ ಹೀರೋಯಿನ್ಗಳಾಗಿ ಮೆರೆದಂತಹ ನಟಿ ಮಣಿಯರನ್ನು ಕರೆದುಕೊಂಡು ಬಂದು ನಮ್ಮ ಕನ್ನಡ ಸಿನಿಮಾದಲ್ಲಿ ನಟಿಸುವಂತೆ ಮಾಡುತ್ತಿದ್ದರು.

ಇದರಿಂದಲೇ ನಮಗೆ ತಿಳಿಯುತ್ತದೆ ರವಿಚಂದ್ರನ್ ಅವರ ಹವಾ ಮತ್ತು ಕ್ರೇಜಿ ಎಷ್ಟರ ಮಟ್ಟಿಗೆ ಇತ್ತು ಅಂತ ಇನ್ನು ಹೊಸ ನಟಿಯರ ಬಗ್ಗೆ ಹೇಳಲೇ ಬೇಕಿಲ್ಲ. ಒಂದು ಚಾನ್ಸ್ ಕೊಟ್ಟರೆ ಸಾಕು ರವಿ ಸರ್ ಅವರ ಜೊತೆ ಅಭಿನಯ ಮಾಡಬೇಕು ಅಂತ ಹೇಳುತ್ತಾರೆ ಆದರೆ ಇತ್ತೀಚಿಗಷ್ಟೇ ಕನ್ನಡದ ನಟಿಯೊಬ್ಬರು ರವಿಚಂದ್ರನ್ ಅವರ ಜೊತೆ ನಟಿಯಾಗಿ ಆಕ್ಟ್ ಮಾಡುವುದಕ್ಕೆ ನಿರಾಕರಿಸಿದ್ದರಂತೆ. ಹೌದು ಈ ವಿಚಾರ ವಿಚಿತ್ರವಾದರೂ ಕೂಡ ಸತ್ಯ ಈ ವಿಚಾರವನ್ನು ಸ್ವತಃ ರವಿ ಚಂದ್ರನ್ ಅವರೇ ವೇದಿಕೆಯ ಮೇಲೆ ಇದೀಗ ಹೇಳಿಕೊಂಡಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಎಲ್ಲರೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಆ ನಟಿ ಯಾರಿರಬಹುದು ಎಂಬ ಕುತೂಹಲವನ್ನು ಕೂಡ ಹೊರಹಾಕಿದ್ದಾರೆ ಹೌದು ಆ ನಟಿ ಬೇರೆ ಯಾರು ಅಲ್ಲ ಸೋನಾಲ್ ಮಾಂಟೇನೋ ಎಂಬುವರು. ಈ ನಟಿ ರವಿಚಂದ್ರನ್ ಅವರ ಜೊತೆ ನಟನೆ ಮಾಡುವುದಕ್ಕೆ ತಿರಸ್ಕರಿಸಿದಂತಹ ವ್ಯಕ್ತಿ ಸದ್ಯಕ್ಕೆ ಇವರು ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಆದಂತಹ ಝೈಧ್ ಖಾನ್ ಅವರ ಬನಾರಸ್ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇದಾಗಲೇ ಮುಗಿದಿದ್ದು ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷ ಏನೆಂದರೆ ಝೃಧ್ ಖಾನ್ ರವಿಚಂದ್ರನ್ ಅವರ ಬಳಿ ಹೋಗಿ ಈ ಸಿನಿಮಾದ ಟ್ರೈಲರ್ ಅನ್ನು ನೀವೇ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಬಂದಂತಹ ರವಿಚಂದ್ರನ್ ಅವರು ಬನಾರಸ್ ಸಿನಿಮಾದ ಟ್ರೈಲರ್ ಅನ್ನು ಲಾಂಚ್ ಮಾಡಿದ್ದಾರೆ ಆ ಸಮಯದಲ್ಲಿ ನಟಿ ಸೋನಾಲ್ ಅವರನ್ನು ನೋಡಿ ನೀವೇ ಅಲ್ಲವೇ ನನ್ನ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದು ಎಂದು ಕಾಲು ಎಳೆದಿದ್ದಾರೆ. ಅಷ್ಟೇ ಅಲ್ಲದೆ ನೀವು ರಿಜೆಕ್ಟ್ ಮಾಡಿದ್ದು ಒಳ್ಳೇದೇ ಆಯಿತು ಏಕೆಂದರೆ ಆ ಸಿನಿಮಾ ಓಡಲೇ ಇಲ್ಲ ಬಿಡಿ ಎಂದು ಮತ್ತೊಮ್ಮೆ ಕಾಲೆಳೆದಿದ್ದಾರೆ. ಈ ವಿಚಾರವನ್ನು ಕೇಳುತ್ತಿದ್ದ ಹಾಗೆ ವೇದಿಕೆಯ ಮೇಲೆ ಇದ್ದಂತಹ ಎಲ್ಲರೂ ಕೂಡ ನಕ್ಕಿದ್ದಾರೆ ಆದರೂ ಕೂಡ ಈ ನಟಿಯ ಧೈರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು.

ಏಕೆಂದರೆ ಇಂದಿನ ಕಾಲದಲ್ಲಿ ಅವಕಾಶ ಸಿಕ್ಕರೆ ಸಾಕು ಯುವಕನಾದನು ಸರಿ ಮುದುಕನಾದರೂ ಸರಿ ನಟನೆ ಮಾಡಬೇಕು ಅಂತ ಹೇಳುತ್ತಾರೆ ಆದರೆ ನಟಿ ಸೋನಾಲ್ ಮಾತ್ರ ತನಗೆ ಸೂಕ್ತವಾದಂತ ಮತ್ತು ಒಪ್ಪುವಂತಹ ವ್ಯಕ್ತಿಯ ಜೊತೆ ಮಾತ್ರ ನಾನು ನಟನೆ ಮಾಡಬೇಕು ಎಂದು ಪಣತೊಟ್ಟು ರವಿಚಂದ್ರನ್ ಅವರ ಸಿನಿಮಾ ರಿಜೆಕ್ಟ್ ಮಾಡಿ ಝೈಧ್ ಖಾನ್ ಅವರ ಜೊತೆ ಬನಾರಸ್ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಈ ಸಿನಿಮಾ ಇದೇ ನವಂಬರ್ ತಿಂಗಳಲ್ಲಿ ಇದ್ದರೆ ಕಾಣಲಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

 

Leave a Comment

WhatsApp Group Join Now
Telegram Group Join Now