Home Astrology ಕುಂಭ ರಾಶಿ 15 ದಿನಗಳ ನಂತರ ರೂಪಗೊಳ್ಳಲಿದೆ ಗಜಕೇಸರಿ ರಾಜಯೋಗ, ಲಬಿಸಲಿದೆ ಅಪಾರ ಸಿರಿ ಸಂಪತ್ತು.!

ಕುಂಭ ರಾಶಿ 15 ದಿನಗಳ ನಂತರ ರೂಪಗೊಳ್ಳಲಿದೆ ಗಜಕೇಸರಿ ರಾಜಯೋಗ, ಲಬಿಸಲಿದೆ ಅಪಾರ ಸಿರಿ ಸಂಪತ್ತು.!

0
ಕುಂಭ ರಾಶಿ 15 ದಿನಗಳ ನಂತರ ರೂಪಗೊಳ್ಳಲಿದೆ ಗಜಕೇಸರಿ ರಾಜಯೋಗ, ಲಬಿಸಲಿದೆ ಅಪಾರ ಸಿರಿ ಸಂಪತ್ತು.!

 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ದೇವ ಗುರು ಗೃಹಸ್ಪತಿಯು ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದು ಶೀಘ್ರದಲ್ಲಿಯೇ ಚಂದ್ರನೂ ಕೂಡ ಮೇಷ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಇದರಿಂದ ಮೇಷ ರಾಶಿಯಲ್ಲಿ ಈ ಇಬ್ಬರ ಮೈತ್ರಿಯಿಂದ ಗಜಕೇಸರಿ ರಾಜ ಯೋಗ ರಚನೆಗೊಳ್ಳಲಿದೆ.

ಈ ಯೋಗಗಳನ್ನು ಅತ್ಯಂತ ಶುಭಯೋಗಗಳಲ್ಲಿ ಒಂದು ಎಂದು ಹೇಳಲಾಗುತ್ತದೆ ಮತ್ತು ಇದು ಎಲ್ಲಾ ದ್ವಾದಶ ರಾಶಿಗಳ ಜನರ ಜೀವನದ ಮೇಲೆ ಪ್ರಭಾವವನ್ನು ಬೀರಲಿದೆ. ಅದರಲ್ಲೂ ವಿಶೇಷವಾಗಿ ಕುಂಭ ರಾಶಿಯವರಿಗೆ ಅಪಾರ ಸಿರಿ ಸಂಪತ್ತು ಕರುಣಿಸಲಿದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹೊಸದಾಗಿ ರೂಪಗೊಳ್ಳಲಿರುವಂತಹ ಗಜಕೇಸರಿ ರಾಜಯೋಗವು ಕುಂಭ ರಾಶಿಯವರಿಗೆ ಏನೆಲ್ಲ ಸಿರಿ ಸಂಪತ್ತನ್ನು ತಂದುಕೊಡುತ್ತದೆ.

ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ವೈದಿಕ ಜ್ಯೋತಿಷ್ಯ ಪಂಚಾಂಗದ ಪ್ರಕಾರ ಗುರು ಹಾಗೂ ಚಂದ್ರರ ಮೈತ್ರಿಯ ಕಾರಣ ಗಜಕೇಸರಿ ರಾಜಯೋಗ ರೂಪಗೊಳ್ಳಲಿದೆ. ಇದರಿಂದ ಕೆಲವು ರಾಶಿಯ ಜನರಿಗೆ ಭಾಗ್ಯದ ಅಪಾರ ಬೆಂಬಲ ಸಿಗಲಿದ್ದು ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿದೆ.

ಆ ಅದೃಷ್ಟ ರಾಶಿಗಳಲ್ಲಿ ಕುಂಭ ರಾಶಿ ಕೂಡ ಒಂದು ಇಲ್ಲಿ ಗಜಕೇಸರಿ ರಾಜ ಯೋಗದಿಂದಾಗಿ ಕುಂಭ ರಾಶಿಯ ಜಾತಕದ ಭಾಗ್ಯದಲ್ಲಿ ಖಂಡಿತವಾಗಿ ಹೊಸ ಹೊಳಪು ಕಂಡು ಬರಲಿದೆ. ಇಲ್ಲಿ ನಿಮ್ಮ ಪರಾಕ್ರಮ ಕ್ಷೇತ್ರದಲ್ಲಿ ವಿಶಿಷ್ಟವಾದ ಈ ರಾಜಯೋಗ ರೂಪುಗೊಳ್ಳಲಿದ್ದು ಹೀಗಾಗಿ ಇಲ್ಲಿ ನಿಮ್ಮ ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರದ ಪ್ರಾಪ್ತಿ ಉಂಟಾಗಲಿದೆ.

ಅಂದರೆ ಮಕ್ಕಳ ವಿವಾಹ ಹಾಗೂ ಕೆಲಸಕ್ಕೆ ಸಂಬಂಧಿಸಿದಂತೆ ಸಂತಸದ ಸುದ್ದಿ ನಿಮಗೆ ಖಂಡಿತವಾಗಿಯೂ ಈ ಸಮಯದಲ್ಲಿ ಸಿಗಲಿದೆ. ಜೊತೆಗೆ ನಿಮಗೆ ವಿವಾಹವಾಗಿದ್ದರೆ ಗಂಡ ಹೆಂಡತಿ ಇಬ್ಬರ ನಡುವಿನ ಪ್ರೀತಿ ಬಾಂಧವ್ಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಬಹುದು. ಇದರಿಂದ ನೀವು ಮತ್ತಷ್ಟು ಖುಷಿಯ ನೆಮ್ಮದಿಯ ಜೀವನವನ್ನು ಕೂಡ ನಡೆಸಲು ಸಾಧ್ಯವಾಗುತ್ತದೆ.

ಆದಾಯ ಮತ್ತು ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿಗೊಳ್ಳ ಲಿದೆ. ಹಾಗೂ ನಿಮ್ಮ ಮನಸ್ಸು ಕೂಡ ಸಂತಸದಿಂದ ಕೂಡಿರುತ್ತದೆ. ಹಾಗೂ ಆಕಸ್ಮಿಕವಾಗಿ ಈ ಸಮಯದಲ್ಲಿ ನಿಮಗೆ ತಿಳಿಯದ ಹಾಗೆ ಧನಾಗಮನ ಆಗುವ ಸಾಧ್ಯತೆಗಳು ಕೂಡ ಹೆಚ್ಚಾಗಿ ಇದೆ. ಈ ಸಮಯದಲ್ಲಿ ನಿಮ್ಮ ಘನತೆ ಗೌರವ ನಿಮ್ಮ ಸ್ಥಾನಮಾನವೂ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಮೇಲೆ ಹೇಳಿದಂತೆ ಅಚಾನಕ್ಕಾಗಿ ನಿಮಗೆ ತಿಳಿಯದ ಹಾಗೆ ಧನಪ್ರಾಪ್ತಿಯಾಗಲಿದೆ.

ನೀವು ಯಾರಿಗಾದರೂ ಹಣ ಕೊಟ್ಟಿದ್ದರೆ ಅವರು ಕೂಡ ನಿಮ್ಮನ್ನು ಸತಾಯಿಸುತ್ತಿದ್ದರೆ ಈ ಸಮಯದಲ್ಲಿ ಆ ಎಲ್ಲಾ ಹಣವು ಕೂಡ ಬರುವ ಸಾಧ್ಯತೆ ಇದೆ. ವ್ಯಾಪಾರ ಮಾಡುವಂತಹ ಜನರಿಗೆ ಭಾರಿ ಲಾಭ ಉಂಟಾ ಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಸ್ಥಾನಮಾನ ಖಂಡಿತವಾಗಿಯೂ ಹೆಚ್ಚಳಗೊಳ್ಳಲಿದೆ ಇದಲ್ಲದೆ ಇಲ್ಲಿ ನಿಮ್ಮ ಪದ ಪ್ರತಿಷ್ಠೆಯೂ ಕೂಡ ವೃದ್ಧಿಗೊಳ್ಳಲಿದೆ.

ಜನರು ಇಲ್ಲಿ ನಿಮ್ಮ ಮಾತುಗಳಿಂದ ಪ್ರಭಾವಿತಗೊಳ್ಳ ಲಿದ್ದಾರೆ. ಅದಲ್ಲದೆ ಶನಿ ಇಲ್ಲಿ ಸಾಡೇಸಾತಿ ದ್ವಿತೀಯ ಚರಣ ನಿಮ್ಮ ಮೇಲೆ ನಡೆಯುತ್ತಿರುವ ಕಾರಣ ನಿರ್ಧಾರಗಳನ್ನು ಸಾಕಷ್ಟು ಯೋಚನೆ ಮಾಡಿದ ನಂತರವೇ ಕೈಗೊಳ್ಳಬೇಕು. ಉಳಿದಂತೆ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಆದಾಯ ಹೆಚ್ಚಳವಾಗಲಿದೆ.

ನಿಮ್ಮ ಆದಾಯದ ಹೊಸ ಮೂಲಗಳು ಸಹ ತೆರೆದುಕೊಳ್ಳಲಿದೆ ಅವಿವಾಹಿತರಿಗೂ ಕೂಡ ವಿವಾಹ ಪ್ರಸ್ತಾಪ ಬರುವ ಸಾಧ್ಯತೆ ಇದೆ. ಇನ್ನು ಹೂಡಿಕೆ ಯಿಂದಲೂ ಕೂಡ ಸಾಕಷ್ಟು ಲಾಭ ಸಿಗಲಿದೆ. ಮಕ್ಕಳ ಕೈಯಿಂದ ಲಾಭ ಹಾಗೂ ಸುಖದ ಪ್ರಾಪ್ತಿ ಉಂಟಾಗಲಿದೆ. ಇಲ್ಲಿ ನಿಮ್ಮ ಪಿತ್ರಾರ್ಜಿತ ಸಂಪತ್ತು ಕೂಡ ನಿಮಗೆ ಬಂದು ಸೇರುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here