ಸಾಮಾನ್ಯವಾಗಿ ಚಿಕ್ಕ ಮಕ್ಕಳು ಅಂದರೆ 2 ರಿಂದ 5 ವರ್ಷದ ಒಳಗಿನ ಮಕ್ಕಳು ಊಟ ಮಾಡುವುದಕ್ಕೆ ತುಂಬಾ ಕಿರಿಕಿರಿ ಮಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ತಾಯಂದಿರಿಗೆ ಆಗಲಿ ಮನೆಯಲ್ಲಿರುವಂತಹ ಇತರರಿಗೆ ಒಂದು ದೊಡ್ಡ ಸಮಸ್ಯೆಯಾಗಿಯೇ ಇದು ನಿಲ್ಲುತ್ತದೆ. ಯಾವ ಒಂದು ಕಾರಣಕ್ಕಾಗಿ ಮಕ್ಕಳು ಊಟ ಮಾಡುತ್ತಿಲ್ಲ ಏನಾದರೂ ಆರೋಗ್ಯದಲ್ಲಿ ಸಮಸ್ಯೆ ಇದೆಯಾ ಅಥವಾ ಆ ಮಕ್ಕಳಿಗೆ ಯಾವ ಆಹಾರ ಇಷ್ಟ ಹೀಗೆ ಎಲ್ಲದರ ಬಗ್ಗೆಯೂ ಕೂಡ ಆಲೋಚನೆಯನ್ನು ಮಾಡುತ್ತಿರುತ್ತಾರೆ.
ಆದರೆ ಎಷ್ಟೇ ಒಳ್ಳೆಯ ಆಹಾರವನ್ನು ಕೊಟ್ಟರೂ ಕೂಡ ಅವರು ಕೆಲವೊಮ್ಮೆ ಯಾವುದನ್ನು ಕೂಡ ಸರಿಯಾಗಿ ಸೇವನೆ ಮಾಡುವುದಿಲ್ಲ. ಬದಲಿಗೆ ಚಿಕ್ಕ ಪುಟ್ಟದಕ್ಕೂ ಕೂಡ ಕಿರಿಕಿರಿ ಮಾಡುತ್ತಿರುತ್ತಾರೆ ಆದ್ದರಿಂದ ಕೆಲವೊಂದಷ್ಟು ಜನ ತಂದೆ-ತಾಯಿಗಳು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ವೈದ್ಯರಿಗೆ ತೋರಿಸಿಕೊಂಡು ಬರುತ್ತಾರೆ ಅವರು ಕೊಡುವಂತಹ ಹಲವಾರು ಔಷಧಿಗಳನ್ನು ಮಾತ್ರೆ ಎಲ್ಲವುಗಳನ್ನು ಸಹ ಕೊಡುತ್ತಾರೆ.
ಆದರೂ ಕೂಡ ಅವರು ಸರಿಯಾದ ರೀತಿಯಲ್ಲಿ ತಮ್ಮ ಆಹಾರ ಕ್ರಮವನ್ನು ಅನುಸರಿಸುವುದಿಲ್ಲ ಬದಲಿಗೆ ಏನನ್ನು ಕೂಡ ಸೇವನೆ ಮಾಡಲು ಇಷ್ಟಪಡುವುದಿಲ್ಲ. ಆದರೆ ಇನ್ನು ಮುಂದೆ ಈ ರೀತಿಯ ಸಮಸ್ಯೆ ಇದ್ದರೆ ಈಗ ನಾವು ಹೇಳುವಂತಹ ಈ ಒಂದು ಮನೆ ಮದ್ದನ್ನು ನೀವು ಮಾಡಿ ಸೇವನೆ ಮಾಡಿಸಿದರೆ ಮಕ್ಕಳು ಅವರಾಗಿಯೇ ಹಸಿವಾಗುತ್ತಿದೆ ಏನಾದರೂ ಕೊಡಿ ಎಂದು ಕೇಳುವಂತಹ ಪರಿಸ್ಥಿತಿಗೆ ಬರುತ್ತಾರೆ.
ಹೌದು ಅಷ್ಟೊಂದು ಒಳ್ಳೆಯ ಮನೆಮದ್ದಾಗಿ ಇದು ಪರಿಣಮಿಸುತ್ತದೆ ಹಾಗಾದರೆ ಈ ದಿನ ಮಕ್ಕಳ ಹಸಿವನ್ನು ಹೆಚ್ಚಿಸುವಂತಹ ಈ ಒಂದು ಮನೆ ಮದ್ದು ಯಾವುದು ಅಂದರೆ ಆ ಒಂದು ಲೇಹವನ್ನು ಹೇಗೆ ತಯಾರಿಸುವುದು ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಮೊದಲನೆಯದಾಗಿ ಈ ಮನೆ ಮದ್ದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಓಂ ಕಾಳು ಅರ್ಧ ಚಮಚ
* ಜೀರಿಗೆ ಅರ್ಧ ಚಮಚ
* ಒಂದು ಚಮಚ ಜೇನುತುಪ್ಪ
* ಒಂದು ಇಂಚು ಹಸಿ ಶುಂಠಿ
ಇಷ್ಟು ಪದಾರ್ಥ ಇದ್ದರೆ ನಿಮಗೆ ಈ ಒಂದು ಲೇಹ ತಯಾರಾಗುತ್ತದೆ. ಹಾಗಾದರೆ ಅದನ್ನು ಹೇಗೆ ತಯಾರಿಸುವುದು ಎಂದು ನೋಡುವುದಾದರೆ
ಮೊದಲು ಒಂದು ಪಾತ್ರೆಯಲ್ಲಿ ಓಂಕಾಳು ಮತ್ತು ಜೀರಿಗೆ ಎರಡನ್ನು ಕೂಡ ಚೆನ್ನಾಗಿ ಹುರಿದು ನುಣ್ಣನೆ ಪುಡಿ ಮಾಡಿಕೊಳ್ಳಬೇಕು ಆನಂತರ ಅದಕ್ಕೆ ಕಾಲು ಚಮಚ ಹಸಿ ಶುಂಠಿಯ ರಸ ಹಾಗೂ ಅರ್ಧ ಚಮಚ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ರೀತಿ ಸಿದ್ಧವಾದಂತಹ ಲೇಹವನ್ನು ನಿಮ್ಮ ಮಕ್ಕಳಿಗೆ ಆಹಾರ ಕೊಡುವ ಅರ್ಧ ಗಂಟೆ ಮುಂಚಿತವಾಗಿ ಅರ್ಧ ಚಮಚ ಈ ಲೇಹವನ್ನು ತಿನಿಸಿದರೆ ಆನಂತರ ಅರ್ಧ ಗಂಟೆ ಬಿಟ್ಟು ಆಹಾರ ಕೊಟ್ಟರೆ ಅವರು ಸೇವನೆ ಮಾಡುತ್ತಾರೆ.
ಯಾವುದೇ ರೀತಿಯ ಕಿರಿಕಿರಿಯನ್ನು ಅವರು ಮಾಡುವುದಿಲ್ಲ. ಹಾಗೇನಾದರೂ ಹೊಟ್ಟೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದರೂ ಕೂಡ ಅವೆಲ್ಲವೂ ಕೂಡ ಈ ಒಂದು ಲೇಹದಿಂದ ಗುಣವಾಗುತ್ತದೆ. ಇದು ಸಂಪೂರ್ಣವಾಗಿ ಆಯುರ್ವೇದದ ವಿಧಾನ ವಾಗಿದ್ದು ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂದೇ ಹೇಳಬಹುದು.