Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬೀರುವನ್ನು ಈ ದಿಕ್ಕಿಗೆ ಇಟ್ಟರೆ ದುಡ್ಡೇ ಬರೋಲ್ಲ ಎಚ್ಚರ.!

Posted on February 11, 2024 By Kannada Trend News No Comments on ಬೀರುವನ್ನು ಈ ದಿಕ್ಕಿಗೆ ಇಟ್ಟರೆ ದುಡ್ಡೇ ಬರೋಲ್ಲ ಎಚ್ಚರ.!

 

ಹಣ ಇಲ್ಲ ಎಂದರೆ ಈಗಿನ ಕಾಲದಲ್ಲಿ ಯಾವುದೇ ಕೆಲಸಗಳು ಕೂಡ ನಡೆಯುವುದಿಲ್ಲ. ಹಣ ನಮ್ಮ ಅಗತ್ಯತೆಯನ್ನು ಪೂರೈಸುವಂತಹ ವಸ್ತು. ಹಣ ಎನ್ನುವ ವಸ್ತು ಇಲ್ಲದೆ ಯಾರು ಸಹ ನೆಮ್ಮದಿಯನ್ನು ಪಡೆದು ಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಹಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಗತ್ಯ ಹಣ ಇಲ್ಲದೆ ಜೀವನದಲ್ಲಿ ಏನನ್ನು ಪಡೆದು ಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಲಕ್ಷ್ಮಿ ದೇವಿಯ ಪ್ರತಿರೂಪವಾಗಿರುವಂತಹ ಹಣ ಹಾಗೂ ಹಣದ ಪೆಟ್ಟಿಗೆಯನ್ನು ಮನೆಯಲ್ಲಿ ವಿಶೇಷ ಸ್ಥಾನದಲ್ಲಿ ಇಟ್ಟು ಪೂಜಿಸಬೇಕು ಅಂತ ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಹಣವನ್ನು ಯಾವ ಸ್ಥಳದಲ್ಲಿ ಹಾಗೂ ಯಾವ ದಿಕ್ಕಿನಲ್ಲಿ ಇಡುತ್ತೇವೆ ಎನ್ನುವುದರ ಆಧಾರದ ಮೇಲೆ ಸಂತೋಷ ಹಾಗೂ ಸಮೃದ್ಧಿಯು ವೃದ್ಧಿಯಾಗುತ್ತದೆ.

ಜೀವನದಲ್ಲಿ ಎಂದಿಗೂ ಹಣದ ಕೊರತೆ ಆಗಬಾರದು ವ್ಯಾಪಾರ ಮತ್ತು ವೃತ್ತಿಯಲ್ಲಿ ನಿರಂತರವಾಗಿ ಹಣದ ಹರಿವು ಇರಬೇಕು ಎಂದರೆ ಕೆಲವು ನಿಯಮಗಳನ್ನು ಅನುಸರಿಸಬೇಕು. ಹಾಗಾದರೆ ಆ ನಿಯಮಗಳು ಯಾವುದು ಎನ್ನುವುದನ್ನು ಈ ದಿನ ತಿಳಿಯೋಣ. ಮನೆಯಲ್ಲಿ ಹಣ ಒಡವೆಗಳನ್ನಿಡುವಂತಹ ಬೀರು ಅಥವಾ ತಿಜೋರಿಗಳ ವಿಷಯದಲ್ಲೂ ಕೆಲವು ವಾಸ್ತು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

ಈ ಸುದ್ದಿ ನೋಡಿ:- ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್.! ಉಚಿತವಾಗಿ ಸಿಗುತ್ತೆ ಹೊಲಿಗೆ ಮಿಷನ್.! ಅರ್ಜಿ ಸಲ್ಲಿಸುವುದೇಗೆ ನೋಡಿ.!

ಮನೆಯ ಕೋಣೆಗೆ ಯಾವುದಾದರೂ ಒಂದು ಮೂಲೆಯಲ್ಲಿ ಬೀರು ಇದ್ದರೆ ಆಯಿತು ಎಂದು ಉದಾಸೀನ ಮಾಡುವುದರಿಂದ ನಾವು ನಮ್ಮ ಜೀವನ ದಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತೇವೆ. ಕೈಯಲ್ಲಿ ಮನೆಯಲ್ಲಿ ಹಣ ಉಳಿಯುವುದೇ ಇಲ್ಲ. ಮನೆಯ ಸಂಪತ್ತನ್ನು ಹೊಂದಿರುವಂತಹ ಈ ಬೀರುಗಳು ಸರಿಯಾದ ವಾಸ್ತು ದಿಕ್ಕಿನಲ್ಲಿ ಇರಬೇಕು ಅಂತ ಹೇಳಲಾಗುತ್ತದೆ.

ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವಾಗ ಮನೆಯ ಕೊಠಡಿ ಯ ಉದ್ದ ಅಳತೆ ನೋಡಿಕೊಂಡು ಹೇಗೆ ಅನುಕೂಲವಾಗುತ್ತದೆಯೋ ಹಾಗೆ ವಸ್ತುಗಳನ್ನು ಇಟ್ಟುಕೊಳ್ಳುತ್ತೇವೆ. ಆದರೆ ಹೀಗೆ ಮಾಡುವುದು ತಪ್ಪು ಇದರಿಂದ ನಮ್ಮ ಹಣಕಾಸಿನ ಹರಿವು ನಮ್ಮ ಐಶ್ವರ್ಯ ಕುಂಠಿತ ಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಣ ಇಡುವಂತಹ ಪೆಟ್ಟಿಗೆ ಅಥವಾ ಬೀರು ವನ್ನು ನೈರುತ್ಯ ದಿಕ್ಕಿಗೆ ಇಡಬೇಕು. ಆಗ ಲಕ್ಷ್ಮಿ ದೇವಿಯು ಆಕರ್ಷಿತಳಾಗುತ್ತಾಳೆ.

ಮನೆಯಲ್ಲಿ ಯಾವುದೇ ಕುಂದು ಕೊರತೆ ಉಂಟಾಗುವುದಿಲ್ಲ. ಅಗತ್ಯಕ್ಕೆ ಬೇಕಾಗಿರುವಷ್ಟು ಹಣಕಾಸು ನಿರಂತರವಾಗಿ ಬರುತ್ತಿರುತ್ತದೆ ಅಂತ ಹೇಳಲಾಗುತ್ತದೆ. ಹಣವನ್ನಿಡುವಂತಹ ಬೀರು ಅಥವಾ ಪೆಟ್ಟಿಗೆ ಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಹೀಗೆ ಇಟ್ಟರೆ ಸದಾಕಾಲ ಹಣಕಾಸಿನ ಕೊರತೆ ಸಮಸ್ಯೆಗಳು ತಲೆದೂರುತ್ತಲೇ ಇರುತ್ತದೆ.

ಈ ಸುದ್ದಿ ನೋಡಿ:- ಹೊಸ ಆಯುಷ್ಮಾನ್ ಕಾರ್ಡ್ ಪಡೆಯಲು ಹೀಗೆ ಮಾಡಿ | 5 ಲಕ್ಷ ಖರ್ಚಿನ ಉಚಿತ ಚಿಕಿತ್ಸೆ | ದವಾಖಾನೆ ಕಾರ್ಡ್ ಅರ್ಜಿ ಪ್ರಾರಂಭ……||

ಹಣವನ್ನು ಇಡುವಂತಹ ಬೀರು ಅಥವಾ ಪೆಟ್ಟಿಗೆಯನ್ನು ತೆರೆಯುವಂತಹ ದಿಕ್ಕು ಕೂಡ ಅತ್ಯಂತ ಪ್ರಮುಖ ಸ್ಥಾನವನ್ನು ವಹಿಸುತ್ತದೆ. ಬೀರುವನ್ನು ತೆಗೆಯುವಾಗ ಅದರ ಬಾಗಿಲು ದಕ್ಷಿಣ ದಿಕ್ಕಿಗೆ ಮುಖ ಮಾಡುವಂತೆ ಇರಬಾರದು. ದಕ್ಷಿಣ ದಿಕ್ಕು ಹಣಕಾಸು ಬರುವಂತಹ ಮೂಲಗಳನ್ನು ನಿಲ್ಲಿಸುತ್ತದೆ.

ದಕ್ಷಿಣ ದಿಕ್ಕಿನಲ್ಲಿ ಬಾಗಿಲು ತೆರೆಯುವಂತಹ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸಿಸುವುದಿಲ್ಲ. ಅಂಥವರ ಮನೆಯಲ್ಲಿ ಹಣಕಾಸು ಕುಂಟಿತವಾಗುತ್ತದೆ ಹಾಗೂ ಹಣಕಾಸಿಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಅಂತ ಹೇಳ ಲಾಗುತ್ತದೆ ಹಣವನ್ನು ಎಂದಿಗೂ ಕೂಡ ನೆಲದ ಮೇಲೆ ಇಡಬಾರದು.

ಮನೆಯ ಗೋಡೆಗಳಿಗೆ ಕಪಾಟುಗಳನ್ನು ಅಳವಡಿಸಿ ಇಡಬಹುದು ಆದರೆ ನೇರವಾಗಿ ನೆಲಕ್ಕೆ ತಾಕುವಂತೆ ಯಾವುದೇ ಕಾರಣಕ್ಕೂ ಇಡಬಾರದು. ಹಣದ ಪೆಟ್ಟಿಗೆಯನ್ನು ಕೆಳಗೆ ಇಡುವಂತಹ ಸಂದರ್ಭದಲ್ಲೂ ಕೂಡ ನೆಲದ ಮೇಲೆ ತಾಕುವಂತೆ ಇಡಬಾರದು ಒಂದು ಟೇಬಲ್ ಅಥವಾ ಒಂದು ಬಟ್ಟೆಯನ್ನು ಹಾಕಿ ಅದರ ಮೇಲೆ ಇಡುವುದು ಒಳ್ಳೆ ಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Astrology
WhatsApp Group Join Now
Telegram Group Join Now

Post navigation

Previous Post: ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್.! ಉಚಿತವಾಗಿ ಸಿಗುತ್ತೆ ಹೊಲಿಗೆ ಮಿಷನ್.! ಅರ್ಜಿ ಸಲ್ಲಿಸುವುದೇಗೆ ನೋಡಿ.!
Next Post: ಪ್ರತಿದಿನ ದೇವಸ್ಥಾನಕ್ಕೆ ಹೋಗುವುದರಿಂದ ಈ 33 ಲಾಭಗಳು ಸಿಗುತ್ತವೆ…….||

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore