Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕೊನೆಗೂ ಶಿವಣ್ಣನನ್ನು ಭೇಟಿ ಮಾಡಿದ ಕಾಫಿ ನಾಡು ಚಂದು.

Posted on August 19, 2022 By Kannada Trend News No Comments on ಕೊನೆಗೂ ಶಿವಣ್ಣನನ್ನು ಭೇಟಿ ಮಾಡಿದ ಕಾಫಿ ನಾಡು ಚಂದು.

ನಾನು ಪುನೀತ್ ಅಣ್ಣ ಮತ್ತು ಶಿವಣ್ಣನ ಅಭಿಮಾನಿ ಅಂತಾನೇ ಸೋಶಿಯಲ್ ಮೀಡಿಯಾದಲ್ಲಿ ಬರ್ತಡೇ ಹಾಡುಗಳನ್ನು ಹಾಡುವುದರ ಮೂಲಕ ಫೇಮಸ್ ಆದಂತಹ ಕಾಫಿ ನಾಡು ಚಂದು ಅವರು ನಿಮ್ಮೆಲ್ಲರಿಗೂ ಗೊತ್ತೇ ಇದ್ದಾರೆ. ಕಳೆದ ನಾಲ್ಕು ಐದು ತಿಂಗಳ ಹಿಂದೆ ಕಾಫಿ ನಾಡು ಚಂದು ಅಂದರೆ ಯಾರು ಕೂಡ ಗುರುತು ಹಿಡಿಯುತ್ತಿರಲಿಲ್ಲ. ಆದರೆ ಈಗ ಕಾಫಿನಾಡು ಚಂದು ಅಂದರೆ ಸಾಕು, ಹುಟ್ಟು ಹಬ್ಬದ ಹಾಡುವುದಕ್ಕೆ ಫೇಮಸ್ ಅಂತಾನೆ ಹೇಳುತ್ತಾರೆ ಅಷ್ಟೇ ಅಲ್ಲದೆ ಎಲ್ಲಿಲ್ಲದ ಬೇಡಿಕೆ ಕೂಡ ಇದೆ. ಹೌದು ಕಾಫಿ ನಾಡು ಚಂದು ಅವರ ಬಳಿ ಹಾಡನ್ನು ಹೇಳಿಸಬೇಕು ಅಂತ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಇರುತ್ತಾರೆ.

ಇನ್ನು ಕಾಫಿನಾಡು ಚಂದು ಅವರು ಮಾತ್ರ ಯಾವುದೇ ವಿಡಿಯೋ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಅಥವಾ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕಿಂತ ಮುಂಚೆ ನಾನು ಶಿವಣ್ಣ ಮತ್ತು ಪುನೀತ್ ಅಣ್ಣ ಅವರ ಅಭಿಮಾನಿ ಅಂತ ಹೇಳಿಕೊಳ್ಳುವುದನ್ನು ನೀವು ಕೇಳೇ ಇರುತ್ತೀರ. ಈ ಕಾರಣಕ್ಕಾಗಿ ಕಾಫಿ ನಾಡು ಚಂದು ಅವರು ಅನುಶ್ರೀ ಅವರ ಬಳಿ ಒಂದು ಮನವಿಯನ್ನು ಮಾಡಿಕೊಂಡಿದ್ದರು ಹೇಗಾದರೂ ಮಾಡಿ ನನ್ನನ್ನು ಒಂದು ಬಾರಿ ಶಿವಣ್ಣ ಅವರ ಬಳಿಗೆ ಕರೆದುಕೊಂಡು ಹೋಗಿ ಅವರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದರು. ಹೌದು ಅನುಶ್ರೀ ಅವರಿಗಾಗಿ ಕಾಫಿ ನಾಡು ಚಂದು ಅವರು ಹೊಸದಾದಂತಹ ಹಾಡೋದನ್ನು ಸೃಷ್ಟಿ ಮಾಡಿದರು ಈ ಹಾಡನ್ನು ಅವರಿಗೆ ಅರ್ಪಿಸಿದರು.

https://www.instagram.com/reel/ChbGF5ZNurz/?utm_source=ig_web_copy_link

ಈ ಹಾಡನ್ನು ಕೇಳಿ ಫಿದಾ ಆದಂತಹ ಅನುಶ್ರೀ ಅವರು ಕಾಫಿ ನಾಡು ಚಂದು ಅವರ ಧ್ವನಿಗೆ ಹಾಗೂ ಅವರ ಟ್ಯಾಲೆಂಟ್ ಗೆ ಮಾರು ಹೋಗಿದ್ದರು‌. ಈ ಸಮಯದಲ್ಲಿ ಕಾಫಿ ನಾಡು ಚಂದು ಅವರಿಗೆ ಮೆಸೇಜ್ ಮಾಡಿದಂತಹ ಅನುಶ್ರೀ ಅವರು ಧನ್ಯವಾದವನ್ನು ಹೇಳಿದರು. ಆ ಸಮಯದಲ್ಲಿ ಕಾಫಿ ನಾಡು ಚಂದು ಅವರು ನನ್ನನ್ನು ಒಂದು ಬಾರಿ ಶಿವಣ್ಣ ಅವರ ಮನೆಗೆ ಕರೆದುಕೊಂಡು ಹೋಗಿ ಅಥವಾ ಶಿವಣ್ಣ ಅವರನ್ನು ಹೇಗಾದರೂ ಮಾಡಿ ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದರು. ಕಾಫಿ ನಾಡು ಚಂದು ಅವರ ಬಹುದಿನದ ಆಸೆ ಕನಸು ಇದೀಗ ನೆರವೇರಿದೆ ಅಂತಾನೇ ಹೇಳಬಹುದು ಹೌದು ನಿನ್ನೆ ಎಷ್ಟೇ ಕಾಫಿನಾಡು ಚಂದು ಅನುಶ್ರೀ ಅವರನ್ನು ಭೇಟಿಯಾಗಿದ್ದಾರೆ.

ಈ ಹಾಡನ್ನು ಸ್ವತಃ ಕಾಫಿ ನಾಡು ಚಂದು ಅವರೇ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದೀಗ ಶಿವಣ್ಣ ಅವರನ್ನು ಭೇಟಿಯಾಗಿರುವಂತಹ ವಿಡಿಯೋ ಮತ್ತು ಫೋಟೋಸ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಿವಣ್ಣ ಅವರು ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ. ಅನುಶ್ರೀ ಅವರು ಈ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿರುವುದು ನಿಮಗೆ ತಿಳಿದೇ ಇದೆ.

https://www.instagram.com/reel/ChbkUQeLOLj/?utm_source=ig_web_copy_link

ಹಾಗಾಗಿ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಗೆ ಕಾಫಿ ನಾಡು ಚಂದು ಅವರನ್ನು ಅನುಶ್ರೀ ಅವರು ಕರೆದುಕೊಂಡು ಹೋಗಿದ್ದಾರೆ ಈ ಸಮಯದಲ್ಲಿ ಕಾಫಿ ನಾಡು ಚಂದು ಅವರು ಶಿವಣ್ಣನವರನ್ನು ನೋಡಿ ಭಾವುಕರಾಗಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಅಭಿಮಾನವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಶಿವಣ್ಣಗಾಗಿ ವಿಶೇಷ ಹಾಡುವುದನ್ನು ರಚಿಸಿ ಅದನ್ನು ವೇದಿಕೆಯ ಮೇಲೆ ಹಾಡಿದರೆ ಈ ಹಾಡನ್ನು ಕೇಳಿದಂತಹ ಶಿವಣ್ಣ ಅವರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಾತ್ರೋರಾತ್ರಿ ಫೇಮಸ್ ಆದಂತಹ ಕಾಫಿ ನಾಡು ಚಂದು ಅವರು ಇದೀಗ ಕರ್ನಾಟಕದ ಮನೆ ಮಾತಾಗಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕೂಡ ಕಾಫಿ ನಾಡು ಚಂದು ಅವರು ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಯಾಕೋ ಒಟಿಟಿಯಲ್ಲಿ ಇವರು ಸೆಲೆಕ್ಟ್ ಆಗಿಲ್ಲ ಹಾಗಾಗಿ ಈ ಬಾರಿ 9ನೇ ಆವೃತ್ತಿಯಲ್ಲಾದರೂ ಕೂಡ ಭಾಗವಹಿಸಬಹುದು ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Anushree, Coffe naadu chandu, DKD, Shivanna
WhatsApp Group Join Now
Telegram Group Join Now

Post navigation

Previous Post: ಎರಡನೇ ಮದುವೆಯ ಬಗ್ಗೆ ಪ್ರಸ್ತಾವನೆ ಮಾಡಿದ ನಟಿ ಮೇಘನಾ ರಾಜ್.
Next Post: ರವಿಚಂದ್ರನ್ ಮತ್ತು ಹಂಸಲೇಖ ದೂರಗಿದ್ದು ಯಾಕೆ ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore