Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಡಾ. ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ನಡುವೆ ಬಿರುಕು ತಂದಿಟ್ಟಿದ್ದು ದ್ವಾರಕೀಶ್ ಅವರಾ.? ಲೀಲಾವತಿ ನಿಜವಾದ ಹೆಸರೇನು? ಸ್ವಂತ ಗಂಡನನ್ನೆ ಕೆಲಸಕ್ಕೆ ಇಟ್ಟುಕೊಂಡಿದ್ರಾ ಲೀಲಾವತಿ.?

Posted on March 18, 2023 By Kannada Trend News No Comments on ಡಾ. ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ನಡುವೆ ಬಿರುಕು ತಂದಿಟ್ಟಿದ್ದು ದ್ವಾರಕೀಶ್ ಅವರಾ.? ಲೀಲಾವತಿ ನಿಜವಾದ ಹೆಸರೇನು? ಸ್ವಂತ ಗಂಡನನ್ನೆ ಕೆಲಸಕ್ಕೆ ಇಟ್ಟುಕೊಂಡಿದ್ರಾ ಲೀಲಾವತಿ.?

 

ಕರ್ನಾಟಕದಲ್ಲಿ ಡಾ.ರಾಜಕುಮಾರ್ ಅವರಷ್ಟು ಜನಪ್ರಿಯತೆ ಮತ್ತು ಪ್ರೀತಿ ಅಭಿಮಾನ ಪಡೆದ ವ್ಯಕ್ತಿ ಮತ್ತೊಬ್ಬರು ಹುಟ್ಟಲಾರರು. ಆದರೆ ಅನೇಕ ವಿಷಯಗಳಿಗೆ ಆದರ್ಶವಾಗಿ ಸರಳತೆಯ ಮೇರು ಪರ್ವತದಂತೆ ಬದುಕಿದ ಅಣ್ಣಾವ್ರನ್ನು ಕೂಡ ಕೆಲ ವಿವಾದಗಳು ಬಿಟ್ಟಿಲ್ಲ. ಅದರಲ್ಲೂ ರಾಜಕುಮಾರ್ ವಿಷ್ಣುವರ್ಧನ್ ಅವರ ನಡುವೆ ಗಂಧದಗುಡಿ ಸಿನಿಮಾ ಶೂಟಿಂಗ್ ವೇಳೆ ಆದ ಕಹಿ ಘಟನೆ ಮತ್ತು ಲೀಲಾವತಿ ಅವರ ಸಂಬಂಧದ ಜೊತೆ ತಳಕು ಹಾಕಿಕೊಂಡಿರುವ ಅಣ್ಣಾವ್ರ ಹೆಸರು ಇದರ ಬಗ್ಗೆ ಇಂದಿಗೂ ಸಹ ಸ್ಪಷ್ಟತೆ ಸಿಕ್ಕದೆ ಕರುನಾಡ ಜನಕ್ಕೆ ಇವು ಯಕ್ಷ ಪ್ರಶ್ನೆಗಳಾಗಿವೆ.

ಅಣ್ಣಾವ್ರ ಕುಟುಂಬದ ಬಗ್ಗೆ ಕರುನಾಡಿಗೆ ಗೊತ್ತಿಲ್ಲದ ಅನೇಕ ವಿಚಾರಗಳನ್ನು ಸಂದರ್ಶನಗಳಲ್ಲಿ ಹೇಳಿಕೊಂಡಿರುವ ದೊಡ್ಮನೆಗೆ ಬಹಳ ಹತ್ತಿರವಾಗಿರುವ NR ರಮೇಶ್ ಅವರು ಇದಕ್ಕೆಲ್ಲ ನೇರವಾಗಿ ದ್ವಾರಕೀಶ್ ಅವರನ್ನೇ ಹೊಣೆ ಮಾಡಿದ್ದಾರೆ. ಆ ಬಗ್ಗೆ ಯಾವುದೇ ಭಯವಿಲ್ಲದೆ ಬಹಿರಂಗವಾಗಿ ಸಂದರ್ಶನಗಳಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಅವರು ದ್ವಾರಕೀಶ್, ರಾಜೇಂದ್ರ ಸಿಂಗ್ ಬಾಬು ಮತ್ತಿತರದು ವಿಷ್ಣುವರ್ಧನ್ ಅವರ ಸುತ್ತ ಸುತ್ತುಕೊಂಡು ಅವರನ್ನು ದಾರಿ ತಪ್ಪಿಸಿದ್ದರು ಎಂದು ಹೇಳುತ್ತಿದ್ದಾರೆ.

ಜೊತೆಗೆ ದ್ವಾರಕೀಶ್ ಅವರು ಗಂಧದಗುಡಿ ಸಿನಿಮಾ ಬಗ್ಗೆ ಎಷ್ಟು ಅಪಪ್ರಚಾರ ಮಾಡಿದ್ದರು ಎಂದು ಗಂಧದಗುಡಿ ನಿರ್ಮಾಪಕರಾಗಿದ್ದ ಎಂಪಿ ಶಂಕರ್ ಅವರ ಆತ್ಮಚರಿತ್ರೆ ಕಾಡಿನ ರಾಜದಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಗಂಧದಗುಡಿ ಶೂಟಿಂಗ್ ವೇಳೆ ಯಾವುದೇ ಗುಂಡುಗಳು ಇಲ್ಲದ ಬಂದೂಕಲ್ಲಿ ಗುಂಡುಗಳು ಹೇಗೆ ಬಂತು ಎನ್ನುವುದಕ್ಕೆ ಇನ್ನು ಉತ್ತರ ಸಿಕ್ಕಿಲ್ಲ. ಆ ದೃಶ್ಯದಲ್ಲಿ ನೇರವಾಗಿ ಅಣ್ಣಾವ್ರ ಎದೆಗೆ ಗುರಿಯಿಟ್ಟು ಸೀನ್ ತೆಗೆಯಬೇಕಿತ್ತು.

ಆದರೆ ತೂಕದ ಕಾರಣ ಅವರು ಅದನ್ನು ಎತ್ತಲಾಗದೆ ಬಾಗಿಸಿದ್ದ ಕಾರಣ ಅನಾಹುತ ತಪ್ಪಿ ಹೋಯಿತು. ಆದರೂ FIR ದಾಖಲಾದಾಗ ಸ್ವತಃ ರಾಜಕುಮಾರ್ ಅವರೇ ಅಂದಿನ ಮುಖ್ಯಮಂತ್ರಿ ಆಗಿದ್ದ ಡಿ.ದೇವರಾಜ್ ಅರಸ್ ಅವರಿಗೆ ಕರೆ ಮಾಡಿ ಕೇಸ್ ಕೈ ಬಿಡುವಂತೆ ಮನವಿ ಸಲ್ಲಿಸಿದ್ದು ಅಕ್ಷರಶಃ ಸತ್ಯ ಎಂದು ಹೇಳಿದ್ದಾರೆ. ಕೊನೆಗೆ ಲೀಲಾವತಿ ಅವರನ್ನು ಅಸ್ತ್ರವಾಗಿ ಬಳಸಿದ್ದರು ಲೀಲಾವತಿ ಹಾಗೂ ಅಣ್ಣಾವ್ರು ಒಟ್ಟಿಗೆ ಸಿನಿಮಾ ಅಭಿನಯಿಸುವುದಕ್ಕಿಂತ ಮುನ್ನ ಐದು ವರ್ಷಗಳ ಹಿಂದೆಯೇ ಮಹದೇವ ಭಾಗವತ ಎನ್ನುವವರನ್ನು ವಿವಾಹವಾಗಿದ್ದರು.

ಆದರೆ ನಿಧಾನವಾಗಿ ಇವರಿಗೆ ಜನಪ್ರಿಯತೆ ಬರುತ್ತಿದ್ದಂತೆ ಅವರನ್ನು ಅವರ ಮನೆ ಅಡುಗೆ ಕೆಲಸಕ್ಕೆ ಇಟ್ಟುಕೊಂಡರು. ಇಂದಿಗೂ ಸಹ ಭಾಗವತ ಅವರ ಮೊಮ್ಮಕ್ಕಳು ಬದುಕಿದ್ದಾರೆ ಅವರೇ ಇದನ್ನು ಪುರಾವೆ ಸಮೇತ ಹೇಳುತ್ತಾರೆ. ಆಗಿಲ್ಲ ಎಂದರೆ ಚೆನ್ನೈ ಬಳಿಯ ಸುತ್ತಮುತ್ತಲಿನ ಆಸ್ತಿಗಳೆಲ್ಲ ಹೇಗೆ ಬಂತು, ಮಹಾದೇವ ಭಾಗವತ್ ಅವರ ಆಸ್ತಿ ಯಾರಿಗೆ ವರ್ಗಾವಣೆ ಆಯಿತು ಎಂದು ನೋಡಿದರೆ ಅಲ್ಲೇ ಇದಕ್ಕೆಲ್ಲ ಸ್ಪಷ್ಟತೆ ಸಿಕ್ಕಿ ಬಿಡುತ್ತದೆ.

ನಿಧಾನವಾಗಿ ದ್ವಾರಕೀಶ್ ಬಣ್ಣ ಗೊತ್ತಾದ ಮೇಲೆ ವಿಷ್ಣುವರ್ಧನ್ ಅವರನ್ನು ಅವಾಯ್ಡ್ ಮಾಡುತ್ತಿದ್ದಂತೆ ವಿಷ್ಣುವರ್ಧನ್ ಅವರ ವಿರುದ್ಧವೂ ಷಡ್ಯಂತ ರೂಪಿಸಿ ತನ್ನನ್ನು ತಾನೇ ಕರ್ನಾಟಕ ಕುಳ್ಳ ಎಂದು ಕರೆದುಕೊಂಡಿದ್ದ ದ್ವಾರಕೀಶ್ ಅವರು ಹಳೆ ಕುಳ್ಳ ಹೊಸ ಕಳ್ಳ ಎಂದು ವಿಷ್ಣುವರ್ಧನ್ ಎದುರಿಗೆ ಶಶಿಕುಮಾರ್ ಅವರನ್ನು ಹೀರೋ ಹಾಕಿ ಮಾಡಿಕೊಂಡು ಸಿನಿಮಾ ಮಾಡಿದರು.

ಆದರೆ ಅದಕ್ಕೂ ಬಗ್ಗದೇ ಹೋದಾಗ ವಿಷ್ಣುವರ್ಧನ್ ಅವರು ನನಗೆ ತುಂಬಾ ದ್ರೊಹ ಮಾಡಿದ್ದಾರೆ ಇಲ್ಲದ ಪ್ರಚಾರ ಮಾಡಿ ಎಂದು ದ್ರೋಹಿ ಎನ್ನುವ ಸಿನಿಮಾವನ್ನು ಮಾಡಿ ವಿಜಯಕಾಂತ್ ಎನ್ನುವ ತಮಿಳು ನಟರನ್ನು ಆಕ್ಟಿಂಗ್ ಮಾಡಿಸಿ ಅದರಲ್ಲಿ ವಿಷ್ಣುವರ್ಧನ್ ಅವರ ಹೆಗಲ ಮೇಲೆ ಅವರು ಕಾಲಿಟ್ಟಿರುವಂತೆ ಪೋಸ್ಟ್ ಮಾಡಿದ್ದರು. ಅದನ್ನು ಮೊದಲ ದಿನವೇ ತೆರೆ ಕಾಣದಂತೆ ಅಭಿನಯ ಥಿಯೇಟರ್ ಗೆ ಬೆಂಕಿ ಹಾಕಿ ಮುಚ್ಚಿಸಿದ್ದೆವು ಎಂಬಿತ್ಯಾದಿ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಆ ಸಂದರ್ಶನದ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Cinema Updates Tags:Dr Raj Kumar, Dwarakish, Vishnu vardhan
WhatsApp Group Join Now
Telegram Group Join Now

Post navigation

Previous Post: ರಾಜಮೌಳಿ ನಿರ್ದೇಶನದ ಯಾವ ಸಿನಿಮಾದಲ್ಲೂ ಕೂಡ ಪ್ರಕಾಶ್ ರಾಜ್ ಅವರಿಗೆ ಅವಕಾಶ ಕೊಟ್ಟಿಲ್ಲ ಯಾಕೆ ಗೊತ್ತಾ? ಬಹುಬೇಡಿಕೆ ನಟನಾಗಿದ್ರು ಪ್ರಕಾಶ್ ರಾಜ್ ಅವರನ್ನು ದೂರ ಇಟ್ಟಿರೋದ್ಯಾಕೆ.
Next Post: ಅಪ್ಪು ಸ್ಥಾನವನ್ನು ಯುವರಾಜಗೆ ದಯವಿಟ್ಟು ಕೊಡಬೇಡಿ, ಸ್ವಂತ ಪರಿಶ್ರಮದಿಂದ ಹಾಗು ವ್ಯಕ್ತಿತ್ವದಿಂದ ಅವರವರೇ ಜಾಗ ಮಾಡಿಕೊಳ್ಳಬೇಕು ಎಂದ ರಾಘವೇಂದ್ರ ರಾಜಕುಮಾರ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore