Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ರಾಜಮೌಳಿ ನಿರ್ದೇಶನದ ಯಾವ ಸಿನಿಮಾದಲ್ಲೂ ಕೂಡ ಪ್ರಕಾಶ್ ರಾಜ್ ಅವರಿಗೆ ಅವಕಾಶ ಕೊಟ್ಟಿಲ್ಲ ಯಾಕೆ ಗೊತ್ತಾ? ಬಹುಬೇಡಿಕೆ ನಟನಾಗಿದ್ರು ಪ್ರಕಾಶ್ ರಾಜ್ ಅವರನ್ನು ದೂರ ಇಟ್ಟಿರೋದ್ಯಾಕೆ.

Posted on March 18, 2023 By Kannada Trend News No Comments on ರಾಜಮೌಳಿ ನಿರ್ದೇಶನದ ಯಾವ ಸಿನಿಮಾದಲ್ಲೂ ಕೂಡ ಪ್ರಕಾಶ್ ರಾಜ್ ಅವರಿಗೆ ಅವಕಾಶ ಕೊಟ್ಟಿಲ್ಲ ಯಾಕೆ ಗೊತ್ತಾ? ಬಹುಬೇಡಿಕೆ ನಟನಾಗಿದ್ರು ಪ್ರಕಾಶ್ ರಾಜ್ ಅವರನ್ನು ದೂರ ಇಟ್ಟಿರೋದ್ಯಾಕೆ.

ಪ್ರಕಾಶ್ ರಾಜ್ ಕನ್ನಡಿಗರಿಗೆ ಪ್ರಕಾಶ್ ರೈ ಆಗಿ ಪರಿಚಿತರವಾಗಿರುವ ಪ್ರಕಾಶ್ ರಾಜ್ ಅವರು ಕನ್ನಡಿಗರೇ. ಆರಂಭದಲ್ಲಿ ಕನ್ನಡದ ಚಲನಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ಪಾತ್ರ ಮಾಡುತ್ತಿದ್ದ ಇವರು ಎಂತಹ ಅದ್ಭುತ ಕಲಾವಿದ ಎನ್ನುವುದು ಈಗ ಇಡೀ ದೇಶಕ್ಕೆ ತಿಳಿದಿದೆ. ಕನ್ನಡದಲ್ಲಿ ಅವಕಾಶಗಳ ಕೊರತೆಯಿಂದ ಪರಭಾಷಾ ಇಂಡಸ್ಟ್ರಿಗಳ ಕಡೆ ವಲಸೆ ಹೋದ ಪ್ರಕಾಶ್ ರಾಜ್ ಪಂಚಭಾಷ ತಾರೆ ಆಗಿ ಮಿಂಚುತ್ತಿದ್ದಾರೆ.

ಈ ಮೂಲಕ ನ್ಯಾಷನಲ್ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಕಾಶ್ ರಾಜ್ ಅವರ ಕಾಲ್ ಶೀಟ್ ಗಾಗಿ ಬಾಲಿವುಡ್ ವಲಯವೂ ಕೂಡ ಕಾಯುತ್ತಿದೆ. ಇತ್ತೀಚೆಗೆ ವಿಲನ್ ಆಗಿ, ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಪ್ರಕಾಶ್ ರಾಜ್ ಅವರು ತಮ್ಮ ನಟನೆಯಲ್ಲಿ ಎಂತಹದೋ ಒಂದು ಶಕ್ತಿ ತುಂಬುತ್ತಾರೆ.

ಅವರ ಆ ಸಹಜ ನಟನೆ ಮತ್ತು ನಟನ ಚಾತುರ್ಯದಿಂದ ಜೊತೆಗೆ ಸೃಜನಾತ್ಮಕ ಚಿಂತನೆಯಿಂದ ಪಾತ್ರವನ್ನು ಜೀವಂತವಾಗಿಸುವ ಇವರಿಗೆ ಮಾರ್ಕೆಟ್ ಅಲ್ಲಿ ಸದಾ ಬೇಡಿಕೆ ಇರುತ್ತದೆ. ಹಂತ ಹಂತವಾಗಿ ಸಿನಿಮಾಗಳಲ್ಲಿ ತನ್ನದೇ ಆದ ಒಂದು ಘನತೆಯನ್ನು ಬೆಳೆಸಿಕೊಂಡ ಪ್ರಕಾಶ್ ರಾಜ್ ಅವರು ಇತ್ತೀಚಿಗೆ ಕೆಜಿಎಫ್ 2 ಚಿತ್ರದಲ್ಲೂ ಕೂಡ ಕಾಣಿಸಿಕೊಂಡು ತಾವು ದೇಶದ ಪ್ರಮುಖ ಸಿನಿಮಾಗಳಲ್ಲಿ ಎಷ್ಟು ಮುಖ್ಯರು ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಹೈ ಬಜೆಟ್ ಸಿನಿಮಾಗಲಿ ಅಥವಾ ಪಾನ್ ಇಂಡಿಯಾ ಚಿತ್ರವೇ ಆಗಲಿ ಸಿನಿಮಾ ತಂಡದ ಕಡೆಯಿಂದ ಒಂದು ಕರೆ ಪ್ರಕಾಶ್ ರಾಜ್ ಅವರಿಗೆ ಖಂಡಿತವಾಗಿಯೂ ಹೋಗಿರುತ್ತದೆ. ಅಂದಿನ ಹಿರಿಯ ನಿರ್ದೇಶಕರಿಂದ ಈಗಿನ ಯುವ ನಿರ್ದೇಶಕರವರೆಗೆ ಎಲ್ಲರ ನೆಚ್ಚಿನ ನಟನಾಗಿರುವ ಪ್ರಕಾಶ್ ರಾಜ್ ಅವರು ಈವರಿಗೆ ಸಾಕಷ್ಟು ಹೆಸರಾಂತ ಮತ್ತು ಸ್ಟಾರ್ ನಿರ್ದೇಶಕರ ಅಡಿಯಲ್ಲಿ ಕೆಲಸ ಮಾಡಿದ್ದಾರೆ.

ಆದರೆ ಕನ್ನಡ ಮೂಲದವರಾ,ಗಿ ಈಗ ತೆಲುಗಿನಲ್ಲಿ ನೆಲೆ ಕಂಡಿರುವ ರಾಜಮೌಳಿ ಅವರ ನಿರ್ದೇಶನದ ಒಂದು ಸಿನಿಮಾದಲ್ಲೂ ಕೂಡ ಪ್ರಕಾಶ್ ರಾಜ್ ಅವರು ಪೂರ್ತಿ ಪ್ರಮಾಣದಲ್ಲಿ ನಟಿಸಿಲ್ಲ. ವಿಕ್ರಮಾರ್ಕುಡು ಎನ್ನುವ ಸಿನಿಮಾದಲ್ಲಿ 5 ನಿಮಿಷಗಳ ಒಂದು ಸಣ್ಣ ಪಾತ್ರದಲ್ಲಿ ಅತಿಥಿಯಾಗಿ ಬಂದು ಹೋದ ಪ್ರಕಾಶ್ ರಾಜ್ ಅವರು ಮತ್ತೆಂದೂ ರಾಜ ಮೌಳಿ ಅವರ ನಿರ್ದೇಶನದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

ಈ ಬಗ್ಗೆ ಈಗ ಎಲ್ಲರಿಗೂ ಅನುಮಾನ ಹುಟ್ಟಿದೆ ಇದಕ್ಕೆ ಕಾರಣ ಏನೆಂದು ತಿಳಿದುಕೊಳ್ಳಬೇಕು ಇದೇ ಪ್ರಶ್ನೆಯನ್ನು ಸಂದರ್ಶನ ಒಂದರಲ್ಲಿ ರಾಜ ಮೌಳಿ ಅವರ ಮುಂದಿಟ್ಟಾಗ ಅವರು ಕೊಟ್ಟ ಉತ್ತರ ಬೇರೆನೆ ಇತ್ತು. ಪ್ರಕಾಶ್ ರಾಜ್ ಎಂತಹ ಉತ್ತಮ ಕಲಾವಿದ ಅವರಿಗೆ ಯೂವುದೋ ಪಾತ್ರ ಕೊಟ್ಟು ಸಿನಿಮಾಗೆ ತುರುಕುವ ಅವಶ್ಯಕತೆ ಇಲ್ಲ. ನನ್ನ ನಿರ್ದೇಶನದಲ್ಲಿ ಒಂದು ಅತ್ಯುತ್ತಮ ಪಾತ್ರವನ್ನು ಅವರು ಮಾಡಬೇಕು ಎನ್ನುವ ಆಸೆ ನನಗಿದೆ ಅಷ್ಟು ತೂಕದ ಪಾತ್ರ ಇದ್ದಾಗ ಖಂಡಿತವಾಗಿ ಅವರನ್ನೇ ಕೇಳುತ್ತೇನೆ.

ಇಲ್ಲವಾದರೆ ಮುಂದೆ ಒಂದು ದಿನ ಅವರಿಗಾಗಿ ಒಂದು ಪಾತ್ರ ಸೃಷ್ಟಿಸಿ ನನ್ನ ಸಿನಿಮಾದಲ್ಲಿ ಹಾಕಿಕೊಳ್ಳುತ್ತೇನೆ ಎಂದು ರಾಜ ಮೌಳಿ ಅವರು ಉತ್ತರ ಕೊಟ್ಟಿದ್ದಾರೆ. ಪ್ರಕಾಶ್ ರಾಜ್ ಅವರು ಸಿನಿಮಾ ಕಲಾವಿದನಾಗಿ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಸಾಕಷ್ಟು ಜನರಿಗೆ ಹತ್ತಿರವಾಗಿದ್ದಾರೆ. ಕಲಾವಿದನಾಗಿ ಇವರು ವಿಲನ್ ಎನ್ನುವ ಶೇಡ್ ಅಲ್ಲಿಯೇ ಪ್ರೇಕ್ಷಕರ ಮನಸಿನಲ್ಲಿ ಕುಳಿತಿದ್ದಾರೆ. ನೀವು ಸಹ ಪ್ರಕಾಶ್ ರಾಜ್ ಅವರ ಅಭಿನಯದ ಸಿನಿಮಾಗಳನ್ನು ನೋಡಿದ್ದರೆ ಅವರ ಅಭಿನಯದ ಯಾವ ಸಿನಿಮಾದ ಯಾವ ಪಾತ್ರ ನಿಮಗೆ ಇಷ್ಟ ಆಯಿತು ಎಂದು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Cinema Updates
WhatsApp Group Join Now
Telegram Group Join Now

Post navigation

Previous Post: ನಟಿ ಅನುಪ್ರಭಾಕರ್ ಮೊದಲ ಮದುವೆ ಮುರಿದು ಬೀಳಲು ಕಾರಣವೇನು ಗೊತ್ತ.? ಕೊನೆಗೂ ಸಂದರ್ಶನ ಒಂದರಲ್ಲಿ ಸತ್ಯ ಬಿಚ್ಚಿಟ್ಟ ನಟಿ.
Next Post: ಡಾ. ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ನಡುವೆ ಬಿರುಕು ತಂದಿಟ್ಟಿದ್ದು ದ್ವಾರಕೀಶ್ ಅವರಾ.? ಲೀಲಾವತಿ ನಿಜವಾದ ಹೆಸರೇನು? ಸ್ವಂತ ಗಂಡನನ್ನೆ ಕೆಲಸಕ್ಕೆ ಇಟ್ಟುಕೊಂಡಿದ್ರಾ ಲೀಲಾವತಿ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore