Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟಿ ಅನುಪ್ರಭಾಕರ್ ಮೊದಲ ಮದುವೆ ಮುರಿದು ಬೀಳಲು ಕಾರಣವೇನು ಗೊತ್ತ.? ಕೊನೆಗೂ ಸಂದರ್ಶನ ಒಂದರಲ್ಲಿ ಸತ್ಯ ಬಿಚ್ಚಿಟ್ಟ ನಟಿ.

Posted on March 17, 2023 By Kannada Trend News No Comments on ನಟಿ ಅನುಪ್ರಭಾಕರ್ ಮೊದಲ ಮದುವೆ ಮುರಿದು ಬೀಳಲು ಕಾರಣವೇನು ಗೊತ್ತ.? ಕೊನೆಗೂ ಸಂದರ್ಶನ ಒಂದರಲ್ಲಿ ಸತ್ಯ ಬಿಚ್ಚಿಟ್ಟ ನಟಿ.

 

ಅನುಪ್ರಭಾಕರ್ ಕನ್ನಡದ ಚಂದುಳ್ಳಿ ಚೆಲುವೆ, ಅಪ್ಪಟ ಕನ್ನಡತಿಯಾದ ಈಕೆ ಹಳ್ಳಿ ಸೊಗಡಿನ ಸಾಂಸಾರಿಕ ಚಿತ್ರಗಳಿಗೂ, ಲವ್ ಸ್ಟೋರಿ ಗೂ ಹೇಳಿ ಮಾಡಿಸಿದಂತಹ ನಟಿ ಅಪ್ರತಿಮ ಸುಂದರಿ, ಅಪ್ಸರೆಯಂತಹ ಕಂಗೊಳಿಸುತ್ತಿದ್ದ ಅಷ್ಟೇ ಮಟ್ಟದ ಟ್ಯಾಲೆಂಟ್ ಕೂಡ ಹೊಂದಿರುವ ನಟಿ. ಅನುಪ್ರಭಾಕರ್ ಅವರು ಇಂದಿಗೂ ಸಹ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿರುವ ನಟಿ ಆದರೆ ಅನುಪ್ರಭಾಕರ್ ವಿಷಯ ಬಂದಾಗ ಇತ್ತೀಚಿಗೆ ಅವರ ಎಲ್ಲಾ ವಿಷಯಗಳಿಗಿಂತ ಹೆಚ್ಚಾಗಿ ಅವರ ಮೊದಲ ಮದುವೆ ವಿಷಯದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ.

ಯಾಕೆಂದರೆ ಪ್ರಭಾಕರ್ ಅವರು ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಖ್ಯಾತ ಹಿರಿಯ ನಟಿ ಆದ ಅಭಿನಯ ಶಾರದೆ ಜಯಂತಿ ಅವರ ಪುತ್ರನ ಕೈಹಿಡಿದು ಅವರ ಮನೆಗೆ ಸೊಸೆಯಾಗಿ ಹೋಗಿದ್ದರು. ನಂತರ ಆ ಮದುವೆ ಮುರಿದು ಬಿದ್ದಿತ್ತು, ಇಷ್ಟು ದಿನ ಸುಮ್ಮನಿದ್ದ ನಟಿ ಈಗ ಮೊದಲ ಮದುವೆ ಬಗ್ಗೆ ಎಂದು ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಚಿತ್ರಲೋಕ ಎನ್ನುವ ಸಂದರ್ಶನದಲ್ಲಿ ಮದುವೆಯ ಬಗ್ಗೆ ಮಾತನಾಡಿದ ನಟಿ ಧೈರ್ಯವಾಗಿ ತನ್ನ ಜೀವನದ ಕಥೆಯನ್ನು ಹೇಳಿದ್ದಾರೆ.

ನಾನು ಜಯಂತಿ ಅಮ್ಮ ಅವರ ಸೊಸೆಯಾಗಿ ಹೋಗಿ ಬಹಳ ವಿಷಯಗಳನ್ನು ಅವರಿಂದ ಕಲಿತೆ. ಒಂದು ಹೆಣ್ಣಾಗಿ ಮಾತ್ರವಲ್ಲದೆ ಒಬ್ಬ ನಟಿಯಾಗಿ ಹೇಗಿರಬೇಕು ಎನ್ನುವುದನ್ನು ನಾನು ಅವರಿಂದ ಕಲಿತೆ. ಅವರ ಜೊತೆ ನನಗೆ ಒಂದು ಉತ್ತಮ ಸಂಬಂಧ ಇತ್ತು. ಮಗಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ಅವರು ನನ್ನನ್ನು ನೋಡಿಕೊಳ್ಳುತ್ತಿದ್ದರು. ಆದರೆ ಗಂಡ ಹೆಂಡತಿ ಎನ್ನುವ ಸಂಬಂಧ ಬಂದಾಗ ಸ್ವಲ್ಪ ಏರುಪೇರು ಆಗಿ ನಾವು ಅನಿವಾರ್ಯ ಕಾರಣಗಳಿಂದ ದೂರ ಆಗಬೇಕಾಯಿತು.

ಯಾಕೆಂದರೆ 10 ರಿಂದ 12 ವರ್ಷಗಳ ಕಾಲ ನಾನು ಅವರ ಜೊತೆಗೆ ಇದ್ದೆ ಆದರೆ ನಂತರ ಇಂತಹದೊಂದು ದಿನ ಬರುತ್ತದೆ ಎಂದು ನಾವು ಬಯಸಿರಲಿಲ್ಲ. ಜೀವನ ಎಂದರೆ ಹೀಗೆ ಅಂದುಕೊಂಡದ್ದಕ್ಕಿಂತ ಅನಿರೀಕ್ಷಿತವಾದುದ್ದೇ ಹೆಚ್ಚಾಗಿ ಆಗುವುದು. ಹಾಗೆ ನನ್ನ ಜೀವನದಲ್ಲೂ ಅಂತಹ ಕಹಿ ಘಟನೆ ಬಂತು ನಾವಿಬ್ಬರು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎನ್ನುವ ಸಂದರ್ಭ ಬಂದಾಗ ಈ ಕಹಿ ಡಿಸಿಶನ್ ಅನ್ನು ನಾವು ತೆಗೆದುಕೊಳ್ಳಲೇ ಬೇಕಾಯಿತು.

ಒಂದು ದಿನ ನಾನು ನನ್ನ ಅಮ್ಮನ ಮನೆಗೆ ವಾಪಸ್ ಬರಬೇಕಾಯಿತು. ಆ ಸಮಯಕ್ಕೆ ನನ್ನ ತಂದೆ ಇರಲಿಲ್ಲ ಆದರೂ ನನ್ನ ಕುಟುಂಬದ ಎಲ್ಲರೂ ನನ್ನನ್ನು ಸಪೋರ್ಟ್ ಮಾಡಿ ಕುಗ್ಗಿ ಹೋಗಿದ್ದ ನನ್ನನ್ನು ಚೇತರಿಸಿಕೊಳ್ಳುವ ರೀತಿ ಮಾಡಿದರು. ಆ ಒಂದು ಕಾರಣಕ್ಕಾಗಿ ನಾನು ಇಂದು ಹೊಸ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು ಇದೇ ಕಾರಣಕ್ಕಾಗಿ ನಾನು ಎಲ್ಲಾ ಹೆತ್ತವರನ್ನು ಕೇಳಿಕೊಳ್ಳುತ್ತೇನೆ ಒಂದು ವೇಳೆ ನಿಮ್ಮ ಮಕ್ಕಳ ಮದುವೆಗಳು ಈ ರೀತಿ ಆದಾಗ ದಯವಿಟ್ಟು ಅವರನ್ನು ಸ್ವಾಗತಿಸಿ ಅವರಿಗೆ ಸಪೋರ್ಟ್ ಮಾಡಿ ನಿಲ್ಲಿ.

ಆದರೆ ಒಂದು ರಿಲೇಶನ್ಶಿಪ್ ಅದರಲ್ಲೂ ಗಂಡ ಹೆಂಡತಿ ಮಧ್ಯೆ ಏನಾಯ್ತು ಎನ್ನುವುದನ್ನು ವಿವರವಾಗಿ ಆಚೆ ಹೇಳುವ ಅವಶ್ಯಕತೆ ಇಲ್ಲ. ಅದು ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ವಿಚಾರ. ಹಾಗಾಗಿ ಏನೋ ಸರಿ ಬರಲಿಲ್ಲ ಹಾಗಾಗಿ ದೂರವಾಗಿದ್ದೇವೆ ಅಷ್ಟೇ ಆದರೆ ಈಗ ರಘು ಅವರು ನನ್ನ ಜೀವನದಲ್ಲಿ ಮತ್ತೆ ಸಿಕ್ಕಿ ಮತ್ತೆ ಒಂದು ಹೊಸ ಜೀವನ ಸೃಷ್ಟಿ ಆಗಿದೆ ಈ ಬಗ್ಗೆ ನಾನು ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ. ಎಲ್ಲ ಹೆಣ್ಣು ಮಕ್ಕಳ ಹೆತ್ತವರು ಕೇಳಲೇಬೇಕಾದ ಮಾತು ಇದಾಗಿದ್ದು, ಅನು ಪ್ರಭಾಕರ್ ಅವರ ಪ್ರಬುದ್ಧತೆಯ ಮಾತುಗಳನ್ನು ಕೇಳಲು ಈ ವಿಡಿಯೋ ನೋಡಿ.

Viral News Tags:Anuprabhakar
WhatsApp Group Join Now
Telegram Group Join Now

Post navigation

Previous Post: ಹಿಜಾಬ್ ವಿಚಾರದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಾಪ ತಟ್ಟಿ ಕಿರಿಕ್ ಕೀರ್ತಿ ಅವರಿಗೆ ಇಂದು ಈ ಪರಿಸ್ಥಿತಿ ಬಂದಿದ್ದ.? ಈ ಬಗ್ಗೆ ಕೀರ್ತಿ ಏನಂದ್ರು ನೋಡಿ. ಹಾಲಿನಂತಿದ ಸಂಸಾರ ಇಂದು ಬೀದಿ ಪಾಲು.
Next Post: ರಾಜಮೌಳಿ ನಿರ್ದೇಶನದ ಯಾವ ಸಿನಿಮಾದಲ್ಲೂ ಕೂಡ ಪ್ರಕಾಶ್ ರಾಜ್ ಅವರಿಗೆ ಅವಕಾಶ ಕೊಟ್ಟಿಲ್ಲ ಯಾಕೆ ಗೊತ್ತಾ? ಬಹುಬೇಡಿಕೆ ನಟನಾಗಿದ್ರು ಪ್ರಕಾಶ್ ರಾಜ್ ಅವರನ್ನು ದೂರ ಇಟ್ಟಿರೋದ್ಯಾಕೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore