ಮಾಲಾಶ್ರೀ ಪತಿ ರಾಮು ಆಗಲಿ ಒಂದು ವರ್ಷವಾದ ನಂತರ ಕುಟುಂಬ ಜೊತೆ ಪ್ಯಾರಿಸ್ ಪ್ರವಾಸ ಎಂಜಾಯ್ ಮಾಡುತ್ತಿರುವ ವಿಡಿಯೋ ನೋಡಿ.

ನಟಿ ಮಾಲಾಶ್ರೀ ಅವರು ಪ್ಯಾರಿಸ್ ಪ್ರವಾಸದಲ್ಲಿದ್ದಾರೆ ತಾಯಿ ಮಗ ಮಗಳ ಜೊತೆ ಅವರು ಇಷ್ಟವಾದ ಸ್ಥಳ ಪ್ಯಾರಿಸ್ ನಲ್ಲಿ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ ರಾಮು ಫಿಲಂಸ್ ಬ್ಯಾನರ್ ನ ನೋಡಿಕೊಳ್ಳುವ ಜವಾಬ್ದಾರಿ ಮಾಲಾಶ್ರೀ ಅವರ ಮೇಲೆ ಬಿದ್ದಿದೆ. ಇದರ ಜೊತೆಗೆ ಅವರು ಮತ್ತೆ ನಟನೆಗೆ ಕಂಬ್ಯಾಕ್ ಮಾಡಿದ್ದಾರೆ ಹೆಚ್ಚು ಹೆಚ್ಚು ಕಥೆಗಳನ್ನು ಕೇಳುತ್ತಾ ಅವರು ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೌದು ಮಕ್ಕಳು ಸದ್ಯ ಶಿಕ್ಷಣವನ್ನು ಪೂರೈಸುತ್ತಿದ್ದಾರೆ, ತಾಯಿಯ ನಟನೆ ಪ್ರೊಡಕ್ಷನ್ ಹೌಸ್ ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರ ಮಕ್ಕಳು ಅರ್ಜುನ್ ಗೌಡ ಪ್ರೀ ರಿಲೀಸ್ ಇವೆಂಟ್ ನಲ್ಲಿ ಹೇಳಿದ್ದರು.

ನೈಟ್ ಕರ್ಫ್ಯೂ ಎಂಬ ಸಿನಿಮಾವನ್ನು ಮಾಲಾಶ್ರೀ ಅವರು ಒಪ್ಪಿಕೊಂಡಿದ್ದು ಕೆಲ ದಿನಗಳ ಹಿಂದೆ ಆಯೋಜಿಸಲಾದ ಸುದ್ದಿಗೋಷ್ಠಿಯೊಂದರಲ್ಲಿ ಭಾಗಿಯಾಗಿದ್ದರು ಈ ಹಿಂದೆ ಪುಟಾಣಿ ಸಫಾರಿ ನಿರ್ದೇಶನ ಮಾಡಿದ್ದ ರವೀಂದ್ರ ವಂಶಿ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗ ಮತ್ತೆ ನಟಿಸುತ್ತಿರುವುದು ನನಗೆ ತುಂಬಾ ಗ್ಯಾಪ್ ಅನಿಸುತ್ತಿಲ್ಲ, ತುಂಬಾ ಖುಷಿಯಾಗುತ್ತಿದೆ ಈ ಕಥೆಯಲ್ಲಿ ಹೊಸತನವಿದೆ, ಹೊಸ ತಂಡ ನನಗೆ ಹೊಸ ಅನುಭವ, ಚಾಲೆಂಜಿಂಗ್ ಇರುತ್ತದೆ. ನಾನು ಡೈರೆಕ್ಟರ್ ಆಗಿ ಎರಡನೇ ಸಿನಿಮಾ ಇದು ಎಂದು ಮಾಲಾಶ್ರೀ ಹೇಳಿದರು.

ನನ್ನ ಪತಿ ಹೋದಾಗಿನಿಂದ ಎಲ್ಲಿಯೂ ಹೊರಗಡೆ ಹೋಗುತ್ತಿಲ್ಲ ಆದರೆ ಅವರು ಕೊನೆಯದಾಗಿ ನಿರ್ದೇಶಿಸಿದ ಚಿತ್ರ ಅರ್ಜುನ್ ಗೌಡ ಸಿನಿಮಾದ ಬಗ್ಗೆ ತುಂಬಾ ಕನಸನ್ನು ಹೊತ್ತಿದ್ದರು ತುಂಬಾ ವಿಭಿನ್ನವಾಗಿ ಮಾಡಿದ್ದರು ಇದು ಅವರ ಕನಸಿನ ಚಿತ್ರ ಎಂದು ಹೇಳುವುದಾದರೆ ತಪ್ಪಾಗುವುದಿಲ್ಲ. ಆದರೆ ಈಗ ಆ ಚಿತ್ರವನ್ನು ಅವರು ಇಲ್ಲದೆಯೇ ಬಿಡುಗಡೆ ಮಾಡುವಂತಹ ಪರಿಸ್ಥಿತಿ ಬಂದಿರುವುದರಿಂದ ನನಗೆ ತುಂಬಾ ದುಃಖವಾಗುತ್ತಿದೆ ಹಾಗೂ ಈ ರಾಮು ಫಿಲಂಸ್ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಬಿಟ್ಟು ಹೋಗಿದ್ದಾರೆ ಆದಕಾರಣ ನಾನು ಅದನ್ನು ಮುಂದುವರಿಸಿಕೊಂಡು ಹೋಗಲೇಬೇಕು ಅದು ಅವರ ಕನಸಾಗಿದ್ದ ಕಾರಣ ಅದನ್ನು ನಾನು ಮುನ್ನಡೆಸಿಕೊಂಡು ಹೋಗುತ್ತೇನೆ.

ಮತ್ತು ಅವರಿಗೆ ನಮ್ಮ ಕನ್ನಡ ಭಾಷೆ ಕನ್ನಡ ಸಿನಿಮಾ ಕನ್ನಡ ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬುದು ಅವರ ಕನಸಾಗಿತ್ತು ಅದರಂತೆ ನಾನು ನನ್ನ ಕೈಲಾದಮಟ್ಟಿಗೆ ನನ್ನ ಬ್ಯಾನರ್ ನಲ್ಲಿ ಹೆಚ್ಚಿನ ಚಿತ್ರಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಮಾಲಾಶ್ರೀ ಅವರು ತುಂಬಾ ಮನನೊಂದು ಹೇಳುತ್ತಾರೆ. ಮತ್ತು ನಾನು ಕೂಡ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಿನಿಮಾಗಳನ್ನು ಮಾಡುತ್ತೇನೆ ಎಂದು ಹೇಳುತ್ತಾರೆ.

ನಾನು ಈ ಮೂಲಕ ನನಗೆ ಹೆಗಲಾಗಿ ನಿಂತಂತಹ ಎಲ್ಲಾ ಚಿತ್ರರಂಗದ ನಿರ್ದೇಶಕರುಗಳಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅರ್ಜುನ್ ಗೌಡ ಪ್ರೀ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿದ ಮಾಲಾಶ್ರೀಯವರ ಮಗ ಈ ಚಿತ್ರವನ್ನು ನೋಡಿದರೆ ನನಗೆ ನನ್ನ ತಂದೆಯನ್ನು ನೋಡಿದಷ್ಟೇ ಖುಷಿಯಾಗುತ್ತದೆ ಎಂದು ಹೇಳುತ್ತಾ ಭಾವುಕರಾಗುತ್ತಾರೆ. ಕೊನೆಯದಾಗಿ ಮಾಲಾಶ್ರೀ ಯವರು ಈ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ನೋಡಿ ಹಾಗೂ ಆ ಮೆಚ್ಚುಗೆಯನ್ನು ರಾಮು ಅವರಿಗೆ ಕೊಡಬೇಕು ಎಂಬುದು ಮಾಲಾಶ್ರೀ ಅವರು ಮನವಿ ಇಂದ ಕೇಳಿಕೊಳ್ಳುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.

Leave a Comment

WhatsApp Group Join Now
Telegram Group Join Now