Home Useful Information ರೈತರಿಗೆ 3ನೇ ಕಂತಿನ ₹ 3000 ಬರ ಪರಿಹಾರ ಇಂದು ಮಧ್ಯಾಹ್ನ ರೈತರ ಖಾತೆಗಳಿಗೆ ಜಮೆ

ರೈತರಿಗೆ 3ನೇ ಕಂತಿನ ₹ 3000 ಬರ ಪರಿಹಾರ ಇಂದು ಮಧ್ಯಾಹ್ನ ರೈತರ ಖಾತೆಗಳಿಗೆ ಜಮೆ

0
ರೈತರಿಗೆ 3ನೇ ಕಂತಿನ ₹ 3000 ಬರ ಪರಿಹಾರ ಇಂದು ಮಧ್ಯಾಹ್ನ ರೈತರ ಖಾತೆಗಳಿಗೆ ಜಮೆ

 

ರಾಜ್ಯ ಸರ್ಕಾರದಿಂದ ಈ ಹಿಂದೆ ರೈತರಿಗೆ 2,000 ಹಣವನ್ನು ಮಾತ್ರ ನೀಡಲಾಗಿತ್ತು. ಈಗ ಮತ್ತೆ ಬರ ಪರಿಹಾರ ವಾಗಿ ಕೇಂದ್ರ ಸರ್ಕಾರದಿಂದ ರೈತರ ಖಾತೆಗೆ ಹಣ ಬಿಡುಗಡೆ ಮಾಡಲಾಗಿದೆ. ಈಗ ಮತ್ತೆ ಮೂರನೇ ಕಂತಿನ ಹಣವನ್ನಾಗಿ ನಮ್ಮ ಕರ್ನಾಟಕ ಸರ್ಕಾರದಿಂದ ರೈತರ ಖಾತೆಗೆ 3000 ಹಣ ಬಿಡುಗಡೆ ಮಾಡಲಾಗಿದೆ.

ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಮುಂದೆ ರೈತರ ಬರ ಪರಿಸ್ಥಿತಿಯ ಬಗ್ಗೆ ವಿವರಿಸುವ ವೇಳೆಯಲ್ಲಿ ರೈತರಿಗೆ ನಮ್ಮ ರಾಜ್ಯ ಸರ್ಕಾರದಿಂದ ಇನ್ನೂ ಒಂದು ಕಂತು ಒಟ್ಟು 3000 ಹಣ ಮೂರನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸುದ್ದಿ ಓದಿ:- ಹೀಗೆ ಮಾಡಿ, ವರ್ಷವಾದ್ರು ಕೊತ್ತಂಬರಿಸೊಪ್ಪು ಫ್ರೆಶ್ ಆಗಿ ಇರುತ್ತೆ.!

ಹಾಗಾದರೆ ಯಾವ ಒಂದು ದಿನ ಕರ್ನಾಟಕ ಸರ್ಕಾರ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ ಹಾಗೂ ಯಾವ ಯಾವ ರೈತರು ಈ ಹಣವನ್ನು ಪಡೆಯಬಹುದು ಅಂದರೆ ಇದರ ಪ್ರಯೋಜನ ಸಿಗುತ್ತದೆ ಇದಕ್ಕೇನಾದರೂ ಯಾವುದಾದರೂ ದಾಖಲಾತಿಗಳು ಅಥವಾ ಯಾವು ದಾದರೂ ಕಾಗದ ಪತ್ರಗಳನ್ನು ಕೊಡಬೇಕಾ ಎನ್ನುವುದನ್ನು ಈ ದಿನ ತಿಳಿಯೋಣ.

* ಕರ್ನಾಟಕ ರಾಜ್ಯದ 224 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾ ಗಿದ್ದು ರೈತರಿಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಮತ್ತೊಮ್ಮೆ ನಮ್ಮ ರಾಜ್ಯ ಸರ್ಕಾರದಿಂದ ರೈತರ ಖಾತೆಗಳಿಗೆ 3000 ಹಣವನ್ನು ನೀಡಲು ನಿರ್ಧರಿಸಲಾಗಿದೆ.

ಹಾಗಾದರೆ ಯಾವ ಒಂದು ಸಂದರ್ಭದಲ್ಲಿ ನಾವು ಈ ಹಣವನ್ನು ಪಡೆಯಬಹುದು ಹಾಗೂ ಈ ಹಣವನ್ನು ಪಡೆದುಕೊಳ್ಳಬೇಕು ಎಂದರೆ ರೈತರು ಯಾವುದೆಲ್ಲ ರೀತಿಯ ನಿಯಮಗಳನ್ನು ಪಾಲಿಸಿ, ಈ ಹಣವನ್ನು ಪಡೆದುಕೊಳ್ಳಬಹುದು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈಗ ತಿಳಿಯೋಣ.

ಈ ಸುದ್ದಿ ಓದಿ:- ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ರಾಜೀವ್ ಗಾಂಧಿ ವಸತಿ ನಿಗಮದಿಂದ ಹೊಸ ಮನೆಗಳಿಗಾಗಿ ಆನೈನ್ ಅರ್ಜಿ ಆರಂಭ.!

ರಾಜ್ಯ ಸರ್ಕಾರ ಬರ ಪರಿಹಾರವಾಗಿ 16 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ತಲಾ ಮೂರು ಸಾವಿರ ರೂಪಾಯಿಯಂತೆ ಹಣವನ್ನು ನೀಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಹೇಳಿದ್ದಾರೆ. ಒಣ ಬೇಸಾಯದಲ್ಲಿ ತೊಡಗಿರುವಂತಹ ಸಣ್ಣ ಮತ್ತು ಅತಿ ಸಣ್ಣ ರೈತರು ಸುಮಾರು 16 ಲಕ್ಷ ಕುಟುಂಬದವರು ಇದ್ದಾರೆ.

ಅವರು ಬರದಿಂದ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ ಇಂತಹ ಕುಟುಂಬಗಳಿಗೆ ತಲಾ 3000 ಹಣವನ್ನು ಪರಿಹಾರವಾಗಿ ನೀಡಲು ನಿರ್ಧರಿಸಲಾಗಿದ್ದು. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳು ವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಅವರು ಹೇಳಿದ್ದಾರೆ.

SDRF ಮತ್ತು NDRF ಇಂದಲೂ ರೈತರಿಗೆ ಹಣ ಪಾವತಿಸಲಾಗುವುದು. ಮತ್ತು ರಾಜ್ಯ ಸರ್ಕಾರದ ಹಣವನ್ನು ಸಹ ಪಾವತಿಸಲಾಗುವುದು. ಬರ ಪರಿಹಾರ ವಾಗಿ ರಾಜ್ಯದ ರೈತರ ಖಾತೆ ಗಳಿಗೆ 4300 ಕೋಟಿ ಹಣ ಜಮಾ ಆಗಲಿದೆ ಎಂದು ತಿಳಿಸಿರುವಂತಹ ಸಚಿವರು ಈ ಪ್ರಕ್ರಿಯೆ ಪೂರ್ಣಗೊಳ್ಳಲು 20 ದಿನ ಬೇಕಾಗಬಹುದು ಮತ್ತು ಈಗಾಗಲೇ 32 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 3000 ಕೋಟಿ ರೂಪಾಯಿ ಹಣ ಜಮಾ ಮಾಡಲಾಗಿದೆ ಎಂದರು.

ಈ ಸುದ್ದಿ ಓದಿ:- ಉಚಿತ ಬಸ್‌ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಲ್ಸ್ / ಇನ್ಮುಂದೆ ದುಡ್ಡು ಕೊಟ್ಟು ಪ್ರಯಾಣ.!

ಮೊದಲ ಮತ್ತು ಎರಡನೇ ಕಂತಿನ ಹಣ ಇದುವರೆಗೆ 3000 ಕೋಟಿ ರೂಪಾಯಿಗಳನ್ನು ನೇರ ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆ ಗಳಿಗೆ ಜಮೆ ಮಾಡಲಾಗಿದೆ ಎಂದು ಅವರು ಹೇಳಿದರು. ಸುಮಾರು 1.5 ಲಕ್ಷ ರೈತರ ಖಾತೆಗಳಿಗೆ ಎರಡನೇ ಕಂತಿನ ರೈತರ ಪರಿಹಾರ ಹಣ ಇನ್ನೂ ಜಮೆ ಆಗಿಲ್ಲ ಎಂದು ತಿಳಿಸಿದ ಅವರು ಸಣ್ಣಪುಟ್ಟ ತೊಂದರೆಯಿಂದಾಗಿ ಪರಿಶೀಲನೆಯ ಹಂತದಲ್ಲಿದೆ. ಒಂದೊಮ್ಮೆ ಅದನ್ನು ತೆರವುಗೊಳಿಸಿದರೆ 33 ಲಕ್ಷಕ್ಕೂ ಅಧಿಕ ರೈತರ ಖಾತೆಗಳಿಗೆ ಪರಿಹಾರ ಹಣ ಹೋಗುತ್ತಿತ್ತು ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here