Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!

Posted on September 30, 2023 By Kannada Trend News No Comments on ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!

 

ಬಹಳ ಹಿಂದಿನ ದಿನಗಳಲ್ಲಿ ಅಂದರೆ ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುವಂತಹ ಕೆಲವೊಂದು ಬಳ್ಳಿಗಳನ್ನು ಉಪಯೋಗಿಸಿಕೊಂಡು ಅವುಗಳಿಂದ ಕಷಾಯಗಳನ್ನು ಮಾಡಿ ಸೇವನೆ ಮಾಡಿಕೊಂಡು ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿ ದ್ದರು. ಆದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ಪಡೆದು ಕೊಳ್ಳುತ್ತಿದ್ದಾರೆ.

ಆದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ಸಣ್ಣ ಸಮಸ್ಯೆಯೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎಂದು ಹೇಳಿದರೆ ತಪ್ಪಾಗುವು ದಿಲ್ಲ. ಆದ್ದರಿಂದ ನಾವೆಲ್ಲರೂ ಕೂಡ ನಮ್ಮ ಹಿಂದಿನವರು ಯಾವ ರೀತಿಯ ಕೆಲವು ಆಯುರ್ವೇದ ಔಷಧಿಗಳನ್ನು ಉಪಯೋಗಿಸುತ್ತಿ ದ್ದರೋ ಅಂತಹ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.

ಯಾವ ರಾಶಿಗೆ ಯಾವ ಬಣ್ಣ ಶುಭವಾಗಿರುತ್ತದೆ ನೋಡಿ.!

ಹಾಗಾದರೆ ಈ ದಿನ ನಾವೆಲ್ಲರೂ ಕೂಡ ನಮ್ಮ ಸುತ್ತಮುತ್ತ ಸಿಗುವಂತಹ ಕೆಲವೊಂದು ವಸ್ತುಗಳನ್ನು ಉಪಯೋಗಿಸಿ ಅವುಗಳನ್ನು ಕಷಾಯ ಮಾಡಿ ಸೇವನೆ ಮಾಡುವುದರಿಂದ ಯಾವ ರೀತಿ ಆರೋಗ್ಯ ಪ್ರಯೋಜ ನಗಳನ್ನು ಪಡೆದುಕೊಳ್ಳಬಹುದು ಹಾಗೂ ನಮ್ಮ ಅಡುಗೆ ಮನೆಯ ಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಕಷಾಯ ಮಾಡಿ ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆ ದೂರ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಜೀರಿಗೆ ಕಷಾಯವನ್ನು ಮಾಡಿಕೊಂಡು ಸೇವನೆ ಮಾಡುವುದರಿಂದ ಅದು ನಮ್ಮ ಜಠರದ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಗ್ಯಾಸ್ ಅಸಿಡಿಟಿ ಇಂತಹ ಸಮಸ್ಯೆಯನ್ನು ಸಹ ದೂರ ಮಾಡುತ್ತದೆ.
* ಕೊತ್ತಂಬರಿ ಯನ್ನು ನಾವು ಅಧಿಕವಾಗಿ ಸೇವನೆ ಮಾಡುವುದರಿಂದ ಅದು ನಮ್ಮ ರಕ್ತದಲ್ಲಿರುವಂತಹ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ.

ದೇಹದ ತೂಕವನ್ನು ಕಡಿಮೆ ಮಾಡುವ 10 ಸುಲಭ ಮಾರ್ಗಗಳು.!

* ಮೆಂತ್ಯ ಕಾಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇವನೆ ಮಾಡುವುದ ರಿಂದ ಅದು ನಮ್ಮ ದೇಹದಲ್ಲಿರುವಂತಹ ಕೊಲೆಸ್ಟ್ರಾಲ್ ಮಟ್ಟವನ್ನು ದಿನೇ ದಿನೇ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ಇದು ಮಧುಮೇಹ ಸಮಸ್ಯೆಯನ್ನು ಸಹ ನಿಯಂತ್ರಣ ಮಾಡುತ್ತದೆ.
* ಕರಿಮೆಣಸಿನ ಸೇವನೆ ಮಾಡುವುದರಿಂದ ಕ್ಯಾನ್ಸರ್ ನಂತಹ ಭಯಾ ನಕ ಕಾಯಿಲೆ ಬರುವುದನ್ನು ತಡೆಗಟ್ಟಬಹುದು ಹಾಗೂ ಇದರ ಸೇವನೆ ಯಿಂದ ಶೀತ ಮತ್ತು ಕೆಮ್ಮಿನ ನಿವಾರಣೆಯನ್ನು ಸಹ ಮಾಡಿಕೊಳ್ಳ ಬಹುದು.

* ಸಾಸಿವೆ ಬೀಜವನ್ನು ಅನೇಕ ಆಯುರ್ವೇದ ಔಷಧಿಯನ್ನು ತಯಾರಿ ಸುವುದರಲ್ಲಿ ಉಪಯೋಗಿಸುತ್ತಾರೆ ಹೌದು. ಅದೇ ರೀತಿಯಾಗಿ ಸಾಸಿವೆ ಬೀಜವನ್ನು ನಾವು ಪ್ರತಿನಿತ್ಯ ನಮ್ಮ ಆಹಾರ ಪದ್ಧತಿಯಲ್ಲಿ ಉಪಯೋಗಿ ಸುತ್ತೇವೆ ಇದು ನಮ್ಮ ಕೀಲುನೋವು ಮತ್ತು ಮೂಳೆಗಳ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಎಂದು ಸಹ ಹೇಳುತ್ತಾರೆ.

ಯಾವ ರಾಶಿಯವರ ಸ್ವಭಾವ ಹೇಗೆ ಇರುತ್ತೆ.!

* ವಾರಕ್ಕೆ ಒಮ್ಮೆಯಾದರೂ ಒಂದು ಏಲಕ್ಕಿಯನ್ನು ಅಗಿದು ಜಗಿದು ಸೇವನೆ ಮಾಡುವುದರಿಂದ ನಮ್ಮ ಬಾಯಿಯಿಂದ ಬರುವಂತಹ ದುರ್ವಾಸನೆಯನ್ನು ತಡೆಗಟ್ಟಬಹುದು ಬಾಯಿಯಲ್ಲಿ ಹಲವಾರು ರೀತಿಯ ಸೂಕ್ಷ್ಮ ಬ್ಯಾಕ್ಟೀರಿಯಗಳು ಇರುತ್ತದೆ ಅವು ಕೆಲವೊಮ್ಮೆ ಕೆಟ್ಟ ವಾಸನೆಯನ್ನು ಬೀರುತ್ತದೆ ಅಂತಹ ಸಮಯದಲ್ಲಿ ಈ ವಿಧಾನ ಅನುಸರಿಸುವುದು ತುಂಬಾ ಉತ್ತಮ.

* ಅರಿಶಿನವನ್ನು ನಮ್ಮ ಆಹಾರ ಪದ್ಧತಿಯಲ್ಲಿ ಉಪಯೋಗಿಸುವುದ ರಿಂದ ಕ್ಷೀಣಗೊಳ್ಳುವ ರೋಗಗಳ ವಿರುದ್ಧ ತನ್ನ ಕೆಲಸವನ್ನು ಮಾಡುತ್ತದೆ.
* ಲವಂಗ ನಮ್ಮ ಲಿವರ್ ಆರೋಗ್ಯವನ್ನು ಸುಧಾರಿಸಿ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.
* ಇನ್ನು ಶುಂಠಿಯನ್ನು ಉಪಯೋಗಿಸುವುದರಿಂದ ಹೃದಯಕ್ಕೆ ಸಂಬಂಧಿಸಿದಂತಹ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಷ್ಟೇ ಅಲ್ಲದೆ ಮುಟ್ಟಿನ ಸಮಯದಲ್ಲಿ ಬರುವಂತಹ ನೋವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/w9wyFArAFjs?si=YeNK_4B2KB51tj-z

Useful Information
WhatsApp Group Join Now
Telegram Group Join Now

Post navigation

Previous Post: ಯಾವ ರಾಶಿಗೆ ಯಾವ ಬಣ್ಣ ಶುಭವಾಗಿರುತ್ತದೆ ನೋಡಿ.!
Next Post: ಸ-ತ್ತವರ ಈ 3 ವಸ್ತುಗಳನ್ನು ಅಪ್ಪಿತಪ್ಪಿಯು ಬಳಸಬೇಡಿ.!

Leave a Reply Cancel reply

Your email address will not be published. Required fields are marked *

Copyright © 2026 Kannada Trend News.


Developed By Top Digital Marketing & Website Development company in Mysore