Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು.!

Posted on October 3, 2023 By Kannada Trend News No Comments on ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ವಾಸ್ತು ಶಾಸ್ತ್ರದ ಬಗ್ಗೆ ಹಲವಾರು ವಿಧಾನಗಳನ್ನು ಅನುಸರಿಸಿರುತ್ತಾರೆ. ಹೌದು ವಾಸ್ತು ಶಾಸ್ತ್ರದ ಪ್ರಕಾರ ನೀವು ಮನೆಯನ್ನು ನಿರ್ಮಿಸಿದ್ದೆ ಆದರೆ ನಿಮ್ಮ ಮನೆಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಎನ್ನುವುದು ಇರುತ್ತದೆ. ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ ಹಾಗೇನಾದರೂ ನೀವು ನಿಮಗೆ ಇಷ್ಟ ಬಂದ ರೀತಿಯಲ್ಲಿ ಮನೆಯನ್ನು ಕಟ್ಟಿಸಿದ್ದೇ ಆದಲ್ಲಿ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಆದ್ದರಿಂದ ಮನೆಯನ್ನು ಒಮ್ಮೆ ಕಟ್ಟುವುದು ಹಾಗಾಗಿ ಅದನ್ನು ಆದಷ್ಟು ಉತ್ತಮವಾದ ವಿಧಾನ ಗಳನ್ನು ಅನುಸರಿಸುವುದರ ಮೂಲಕ ಮನೆಯನ್ನು ನಿರ್ಮಾಣ ಮಾಡುವುದು ಬಹಳ ಒಳ್ಳೆಯದು. ಹಾಗಾದರೆ ಈ ದಿನ ವಾಸ್ತು ಶಾಸ್ತ್ರದ ಪ್ರಕಾರ ನಾವು ಯಾವುದೆಲ್ಲ ರೀತಿಯ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಬೇಕು.

ಪಲಾವ್ ಎಲೆಯ ತಂತ್ರ.! ಈ ತಂತ್ರ ಮಾಡಿದ್ದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.!

ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿಯೋಣ.

* ನಿವೇಶನದ ಪೂರ್ವ ಹಾಗೂ ಉತ್ತರ ದಿಕ್ಕಿನ ಭಾಗದಲ್ಲಿ ಹೆಚ್ಚಿಗೆ ಸ್ಥಳ ಬಿಡಬೇಕು. ಈ ರೀತಿ ಸ್ಥಳ ಬಿಟ್ಟು ಕಟ್ಟುವುದರಿಂದ ನಿಮ್ಮ ಮನೆಗೆ ಒಳ್ಳೆಯ ಬೆಳಕು ಸಿಗುವುದು ಮಾತ್ರವಲ್ಲದೆ ನಿಮ್ಮ ಮನೆಯಲ್ಲಿ ಅಭಿ ವೃದ್ಧಿ ಎನ್ನುವುದು ಹೆಚ್ಚಾಗುತ್ತಾ ಹೋಗುತ್ತದೆ.

* ಮನೆ ಕಟ್ಟುವುದನ್ನು ಶುಕ್ಲ ಪಕ್ಷದಲ್ಲಿ ಪ್ರಾರಂಭ ಮಾಡಬೇಕು. ಈ ಸಮಯವು ಬಹಳ ಶುಭಕರವಾಗಿದ್ದು ಈ ಸಮಯದಲ್ಲಿ ನೀವು ಮನೆಯನ್ನು ನಿರ್ಮಾಣ ಮಾಡುವುದರಿಂದ ಯಾವುದೇ ರೀತಿಯ ಅಡ್ಡಿ ಬರುವುದಿಲ್ಲ ಸುಲಭವಾಗಿ ಮನೆಯ ಕೆಲಸ ನಡೆಯುತ್ತದೆ. ಹಾಗಾಗಿ ಈ ಒಂದು ಶುಕ್ಲ ಪಕ್ಷದ ಸಮಯದಲ್ಲಿ ಪ್ರಾರಂಭ ಮಾಡುವುದು ಉತ್ತಮ.

ದೇವರ ಕೋಣೆಯಲ್ಲಿ ನೀರು ತುಂಬಿದ ಚೊಂಬು ಇರಲೇಬೇಕು ಏಕೆ ಗೊತ್ತ…?

* ನಿವೇಶನದ ಪೂರ್ವ ಉತ್ತರದ ನಡುವೆ ಬರುವ ಈಶಾನ್ಯ ಮೂಲೆಯ ಲ್ಲಿಯೇ ಈಶ್ವರನ ವಾಸ. ಆ ಮೂಲೆಯಲ್ಲಿಯೇ ಪೂಜಾಕೋಣೆಯನ್ನು ಕಟ್ಟಬೇಕು. ಜಾಸ್ತಿ ಸ್ಥಳವಿಲ್ಲದಿದ್ದರೆ ಒಂದು ಮಂಟಪವನ್ನು ಇಟ್ಟು ಪೂಜಿಸಬೇಕು.
* ದೇವರ ಮುಖವನ್ನು ಉತ್ತರ ಪೂರ್ವ ಅಥವಾ ಪಶ್ಚಿಮದಲ್ಲಿ ಇಡ ಬಹುದು. ಆದರೆ ದಕ್ಷಿಣಾಭಿಮುಖವಾಗಿ ದೇವರನ್ನು ಸ್ಥಾಪಿಸಬಾರದು. ದೇವರನ್ನು ಪೂಜಿಸುವ ವ್ಯಕ್ತಿ ಪೂರ್ವಾಭಿಮುಖವಾಗಿ ಇದ್ದರೆ ಒಳ್ಳೆಯದು.

* ಶೌಚಾಲಯವನ್ನು ಈಶಾನ್ಯ ದಿಕ್ಕಿನಲ್ಲಿ ಕಟ್ಟಬಾರದು, ಪಶ್ಚಿಮ ದಕ್ಷಿಣ ನೈರುತ್ಯ ದಿಕ್ಕುಗಳ ವಲಯದಲ್ಲಿ ಬರುವಂತೆ ಕಟ್ಟಬೇಕು. ಈಶಾನ್ಯ ದಿಕ್ಕಿನಲ್ಲಿ ಸೆಪ್ಟಿಕ್ ಟ್ಯಾಂಕ್ ಕಟ್ಟಬಾರದು ಪ್ರವೇಶ ದ್ವಾರಕ್ಕೆ ಹೊಂದಿ ಕೊಂಡು ಶೌಚಾಲಯ ಕಟ್ಟಬಾರದು.
* ಮನೆಯ ಪೂರ್ವ ಉತ್ತರ ಈಶಾನ್ಯ ದಿಕ್ಕುಗಳನ್ನು ಭಾಗವು ತಗ್ಗು ಅಥವಾ ಇಳಿಜಾರು ಇದ್ದರೆ ಶುಭ.
* ಆಗ್ನೇಯ ಭಾಗದಲ್ಲಿ ಅಡುಗೆ ಮನೆಯು ಇರಬೇಕು ಒಂದು ವೇಳೆ
ಅಡುಗೆ ಮನೆ ಮಾಡಬಹುದು ಈಶಾನ್ಯದಲ್ಲಿ ಅಡುಗೆ ಮನೆ ಇರಬಾರದು.

ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!

* ಸಾಧ್ಯವಾಗದಿದ್ದರೆ ವಾಯು ವ್ಯದಲ್ಲಿ ಮುಖ್ಯದ್ವಾರದಿಂದ ನೇರವಾಗಿ ಅಡುಗೆಮನೆ ಇರಬಾರದು.
* ಪೂರ್ವ ಉತ್ತರ ಈಶಾನ್ಯಗಳಲ್ಲಿ ತುಳಸಿ ಕಟ್ಟೆ ಬೃಂದಾವನವನ್ನು ಕಟ್ಟ ಬಾರದು, ಆ ದಿಕ್ಕುಗಳಲ್ಲಿ ತುಳಸಿ ಗಿಡಗಳ ಕುಂಡಗಳನ್ನು ಇಡಬಾರದು, ದಕ್ಷಿಣ ದಕ್ಷಿಣ ನೈರುತ್ಯ ಪಶ್ಚಿಮ ನೈರುತ್ಯದಲ್ಲಿ ತುಳಸಿ ಬೃಂದಾವನವನ್ನು ಕಟ್ಟಬಹುದು ಅಥವಾ ಕುಂಡಗಳನ್ನು ಇಡಬಹುದು.
* ಬಾವಿ ಬೋರ್ ವೆಲ್ ನೀರಿನ ಸಂಪು ಇತ್ಯಾದಿ ನೀರಿನ ಮೂಲಗಳನ್ನು ಈಶಾನ್ಯ ದಿಕ್ಕಿನಲ್ಲಿ ತೆಗೆಸಬೇಕು ಅಥವಾ ಹಾಕಿಸಬೇಕು.

* ಮನೆಯ ಮೇಲಕ್ಕೆ ಇರುವ ಮೆಟ್ಟಿಲುಗಳು ಉತ್ತರದಿಂದ ದಕ್ಷಿಣಕ್ಕೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಏರುವಂತೆ ಇರಬೇಕು ಮನೆಯ ಈಶಾನ್ಯ ಭಾಗದಲ್ಲಿ ಯಾವುದೇ ಮೆಟ್ಟಿಲುಗಳು ಇರಬಾರದು.
* ವಿದ್ಯಾರ್ಥಿಗಳು ಪೂರ್ವ ಈಶಾನ್ಯ ಅಥವಾ ಉತ್ತರಾಭಿಮುಖವಾಗಿ ನೇರವಾಗಿ ಕುಳಿತು ಅಭ್ಯಾಸ ಮಾಡಬೇಕು ಪೂರ್ವ ಅಥವಾ ಉತ್ತರದ ಗೋಡೆಗೆ ಬರೆಯುವ ಹಲಗೆಯನ್ನು ಅಳವಡಿಸಬೇಕು.
* ಕಾರ್ ಸ್ಕೂಟರ್ ಇತ್ಯಾದಿ ವಾಹನಗಳನ್ನು ಪೂರ್ವ ಉತ್ತರ ಅಥವಾ ವಾಯುವ್ಯ ಭಾಗದಲ್ಲಿ ನಿಲ್ಲಿಸಬೇಕು.

Useful Information
WhatsApp Group Join Now
Telegram Group Join Now

Post navigation

Previous Post: ಪಲಾವ್ ಎಲೆಯ ತಂತ್ರ.! ಈ ತಂತ್ರ ಮಾಡಿದ್ದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.!
Next Post: ಪಿತೃ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಗಳು.!

Leave a Reply Cancel reply

Your email address will not be published. Required fields are marked *

Copyright © 2026 Kannada Trend News.


Developed By Top Digital Marketing & Website Development company in Mysore