ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.
ಈ ಸಮಯದಲ್ಲಿ ಮಾಡಿದ ದಾನದಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದರೊಂದಿಗೆ ಈ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಯೂ ಕಾಳಜಿ ವಹಿಸಬೇಕು. ಆ ವಿಷಯಗಳನ್ನು ಕಾಳಜಿ ವಹಿಸದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗಬಹುದು.
ಈ ದಿನಗಳಲ್ಲಿ, ನಮ್ಮ ಪಿತೃಗಳನ್ನು ಸ್ಮರಿಸುತ್ತಾ, ಪೂರ್ವಜರ ಆತ್ಮಗಳಿಗೆ ತರ್ಪಣೆಯನ್ನು ನೀಡುತ್ತಾ, ಶ್ರಾದ್ಧ ಕರ್ಮ ಮತ್ತು ದಾನವನ್ನು ಮಾಡುವ ಮೂಲಕ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಪೂರ್ವಜರನ್ನು ದೇವರಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ ಅವರ ಆಶೀರ್ವಾದದಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಉಳಿಯುತ್ತದೆ.
ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು.!
ಇಂತಹ ಸನ್ನಿವೇಶದಲ್ಲಿ ಅವರ ಶ್ರಾದ್ಧವನ್ನು ಸರಿಯಾಗಿ ಮಾಡದಿದ್ದರೆ, ಪೂರ್ವಜರು ಕೋಪಗೊಂಡು ಅತೃಪ್ತರಾಗಿ ಹಿಂತಿರುಗುತ್ತಾರೆ ಅವರು ತಮ್ಮ ವಂಶಸ್ಥರನ್ನು ಶಪಿಸುತ್ತಾರೆ. ಶ್ರಾದ್ಧ ಮಾಡುವ ಮೂಲಕ ಒಬ್ಬರಿಗೆ ಪಿತ್ರ ದೋಷ ಎದುರಾಗುವುದಿಲ್ಲ ಎನ್ನುವ ನಂಬಿಕೆಯಿದೆ ಹಾಗಾಗಿ ಈ ಪಿತೃ ಪಕ್ಷದ ಸಮಯದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ.
* ಪಿತೃ ಪಕ್ಷದ ಸಮಯದಲ್ಲಿ ತಾಮಸಿಕ ಆಹಾರವನ್ನು ಸೇವಿಸಬೇಡಿ. ಈ ಸಮಯದಲ್ಲಿ ಸಾತ್ವಿಕ ಆಹಾರವನ್ನು ಸೇವಿಸಿ. ಬೆಳ್ಳುಳ್ಳಿ, ಈರುಳ್ಳಿ ಮಾಂಸ, ಮೀನು ಮತ್ತು ಅಲೋಹಾಲ್ ಅನ್ನು ಸಂಪೂರ್ಣವಾಗಿ ತ್ಯಜಿಸಿ.
* ಈ ಸಮಯದಲ್ಲಿ, ಯಾವುದೇ ಭಿಕ್ಷುಕ ಅಥವಾ ಯಾವುದೇ ಪ್ರಾಣಿಯು ನಿಮ್ಮ ಮನೆಯ ಮುಂದೆ ಬಂದರೆ, ಅವುಗಳನ್ನು
ಖಾಲಿ ಕೈಯಲ್ಲಿ ಕಳುಹಿಸಬಾರದು. ಅಲ್ಲದೆ ಯಾರಾದರೂ ನಿಮ್ಮಬಳಿ ಸಹಾಯ ಕೇಳಿದರೆ, ಸಾಧ್ಯವಾದಷ್ಟು ಸಹಾಯ ಮಾಡಿ.
ಪಲಾವ್ ಎಲೆಯ ತಂತ್ರ.! ಈ ತಂತ್ರ ಮಾಡಿದ್ದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.!
* ಈ ದಿನಗಳಲ್ಲಿ ಪೂರ್ವಿಕರು ನಿಮ್ಮ ಮನೆಗೆ ಯಾವುದೇ ರೂಪದಲ್ಲಿ ಬರಬಹುದು ಎನ್ನುವ ನಂಬಿಕೆಯಿದೆ. ಈ ಸಮಯದಲ್ಲಿ ಮನೆಬಾಗಿಲಿಗೆ
ಬಂದ ಜೀವರಾಶಿಗಳನ್ನು ಸಂತೃಪ್ತಿಗೊಳಿಸಿ. ಇದರಿಂದ ಪೂರ್ವಜರ ಕೃಪೆ ನಿಮ್ಮ ಮೇಲಿರುತ್ತದೆ.
* ಪೋಷಕರಲ್ಲಿ ಯಾರಾದರೂ ಒಬ್ಬರು ಜೀವಂತವಾಗಿದ್ದರೆ, ಅವರಿಗೆ ಸಾಧ್ಯವಾದಷ್ಟು ಗೌರವವನ್ನು ನೀಡಿ. ಅವರ ಸಂತೋಷವನ್ನು ನೋಡಿಕೊಳ್ಳಿ. ಏಕೆಂದರೆ ಈ ಸಮಯದಲ್ಲಿ ಪರಲೋಕಕ್ಕೆ ಹೋದ ತಂದೆ-ತಾಯಿಗಳು ಭೂಮಿಗೆ ಬಂದು ಬದುಕಿರುವ ತಾಯಿ ಅಥವಾ ತಂದೆಯ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂದು ನೋಡುತ್ತಾರೆ.
ದೇವರ ಕೋಣೆಯಲ್ಲಿ ನೀರು ತುಂಬಿದ ಚೊಂಬು ಇರಲೇಬೇಕು ಏಕೆ ಗೊತ್ತ…?
* ಸಂಗಾತಿಯು ನರಳಿದರೆ, ಅವರ ಮನಸ್ಸು ಕೂಡ ನರಳುತ್ತದೆ. ಅವರು ಆಹಾರ ಮತ್ತು ನೀರು ಸಿಗದೆ ಶಪಿಸಿ ಹಿಂತಿರುಗುತ್ತಾರೆ, ಇದರಿಂದಾಗಿ ಜೀವನದಲ್ಲಿ ಒಂದರ ನಂತರ ಒಂದರಂತೆ ತೊಂದರೆಗಳು ಬರಲು ಪ್ರಾರಂಭಿಸುತ್ತವೆ. ಪ್ರಗತಿ ನಿಲ್ಲುತ್ತದೆ.
* ಪಿತೃ ಪಕ್ಷದ ಸಮಯದಲ್ಲಿ ಮನೆಯ ಶಾಂತಿ ಮುಖ್ಯವಾಗುತ್ತದೆ. ಕುಟುಂಬದಲ್ಲಿ ಯಾವುದೇ ಕಾರಣಕ್ಕೂ ವಾದ ವಿವಾದ ಆಗದೆ ಸೌಹಾರ್ದತೆ ಕಾಪಾಡಲು ಪ್ರಯತ್ನಿಸಿ.
* ಪಿತೃರು ಶುದ್ಧತೆಯನ್ನು ಬಯಸ್ತಾರೆ. ಹಾಗಾಗಿ ಮಡಿ – ಮೈಲಿಗೆ ಬಗ್ಗೆಯೂ ಗಮನ ಹರಿಸಬೇಕು. ಮಹಿಳೆಯರು ಮುಟ್ಟಿನ ಸಮಯದಲ್ಲಿ ಶ್ರಾದ್ಧ, ತರ್ಪಣಕ್ಕೆ ಅಗತ್ಯವಿರುವ ಆಹಾರವನ್ನು ತಯಾರಿಸಬಾರದು. ಅಗತ್ಯವಿದ್ದಲ್ಲಿ ಮನೆ ಪುರುಷರು ಕೂಡ ಅಡುಗೆ ಮಾಡಬಹುದು ಪಿತೃಪಕ್ಷದಲ್ಲಿ ಮನೆಯ ಶುಚಿತ್ವದ ಬಗ್ಗೆ ಕಾಳಜಿ ವಹಿಸಬೇಕು. ಆದರೆ, ಸೂರ್ಯಾಸ್ತದ ನಂತರ ಮನೆಯನ್ನು ಸ್ವಚ್ಛಗೊಳಿಸುವಂತಹ ಯಾವುದೇ ಕೆಲಸವನ್ನು ಮಾಡಬೇಡಿ ಪಿತೃ ಪಕ್ಷದಲ್ಲಿ ಪೂರ್ವಜರು ಮನೆಗೆ ಬರುತ್ತಾರೆ ಎನ್ನುವ ನಂಬಿಕೆ ಇದೆ.
ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!
ಹಾಗಾಗಿ ನೀವು ಶ್ರಾದ್ಧ ಅಥವಾ ತರ್ಪಣ ಬಿಡುತ್ತಿದ್ದರೆ ಪೂರ್ವಜರ ಇಷ್ಟವನ್ನು ಗಮನಿಸಿ ಅಡುಗೆ ತಯಾರಿಸಿ.
* ಪಿತೃ ಪಕ್ಷದಲ್ಲಿ ನಿಮ್ಮ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬೇಡಿ.
* ಬಲಿತ ಬಾಳೆ ಹಣ್ಣು, ಮೊಸರು, ಬಿಳಿ ಬಣ್ಣದ ಮಿಠಾಯಿ, ದಕಿಣೆ ರೂಪದಲ್ಲಿ ಹಣವನ್ನು ನೀವು ದಾನವಾಗಿ ನೀಡಬೇಕಾಗುತ್ತದೆ.