Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.!

Posted on April 29, 2024 By Kannada Trend News No Comments on ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.!

 

ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪ ಎಂದು ಕೂಡ ಕರೆಯುತ್ತಾರೆ. ದೀಪದಲ್ಲಿ ಪದ್ಮಾಸನದಲ್ಲಿ ಲಕ್ಷ್ಮಿ ಕುಳಿತಿರಬೇಕು ಎರಡು ಕಡೆ ಆನೆ ಇರಬೇಕು ಅಖಂಡ ಸೌಭಾಗ್ಯವನ್ನು ನೀಡುವಂತಹ ಕಾಮಾಕ್ಷಿ ದೀಪ ಪ್ರತಿದಿನ ಪ್ರತಿ ಮನೆಗಳಲ್ಲಿ ಕಚೇರಿಗಳಲ್ಲಿ ಹಣಕಾಸು ವ್ಯವಹಾರ ಮಾಡುವ ಸ್ಥಳದಲ್ಲಿ ಇಟ್ಟರೆ ವಿಶೇಷವಾದ ಫಲ ದೊರೆಯುತ್ತದೆ.

ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ತಂದಾಗ ಅಥವಾ ಉಡುಗೊರೆ ಯಾಗಿ ನೀಡಿದಾಗ ಅದನ್ನು ಮನೆಯಲ್ಲಿ ಶುದ್ಧವಾದ ನೀರಿನಿಂದ ಹುಣಸೆಹಣ್ಣಿನಿಂದ ತೊಳೆದು ಶುಭ್ರವಾದ ವಸ್ತ್ರದಿಂದ ಒರೆಸಿ ಇಡಬೇಕು. ಕಾಮಾಕ್ಷಿ ದೀಪವನ್ನು ನೆಲದ ಮೇಲೆ ಇಡಬಾರದು ಒಂದು ವೇಳೆ ತಾಮ್ರ ಹಿತ್ತಾಳೆ ಬೆಳ್ಳಿ ತಟ್ಟೆಯ ಮೇಲೆ ಇಡಬೇಕು. ಅಷ್ಟದಳ ರಂಗೋಲಿ ಯನ್ನು ಅಕ್ಕಿ ಹಿಟ್ಟಿನಿಂದ ಹಾಕಬೇಕು ಅದರ ಮೇಲೆ ದೀಪ ಇಡಬೇಕು ನಂತರ ಅರಿಶಿಣ ಕುಂಕುಮದಿಂದ ಪೂಜೆ ಮಾಡಬೇಕು.

* ದೇವರ ಪೂಜೆಯ ಮೊದಲು ದೀಪದ ಪೂಜೆ ಮಾಡಬೇಕು ಜ್ಯೋತಿಯ ಪೂಜೆಗಾಗಿ ದೀಪಕ್ಕೆ ಹೂವು ಇಟ್ಟು ಅಲಂಕಾರ ಮಾಡಿ ಎರಡು ಶುದ್ಧವಾದ ಬತ್ತಿ ಇಟ್ಟು ದೀಪ ಹಚ್ಚಬೇಕು.
* ಕಾಮಾಕ್ಷಿ ದೀಪವನ್ನು ನೇರವಾಗಿ ಬೆಂಕಿ ಕಡ್ಡಿಯಿಂದಾಗಲಿ ಅಥವಾ ಮೇಣದಬತ್ತಿಯಿಂದಾಗಲಿ ನೇರವಾಗಿ ಬತ್ತಿ ಹಚ್ಚಬಾರದು. ಈ ರೀತಿ ಹಚ್ಚಿದರೆ ಶ್ರೀ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತಾಗುತ್ತದೆ. ಆದ್ದ ರಿಂದ ತುಪ್ಪದಲ್ಲಿ ನೆನೆಸಿದ ಬತ್ತಿಯಿಂದ ಅಥವಾ ತುಳಸಿ ಕಾಷ್ಟಗಳಿಂದ ಕಾಮಾಕ್ಷಿ ದೀಪವನ್ನು ಹಚ್ಚಬೇಕು.

ಈ ಸುದ್ದಿ ಓದಿ:- ಯಾವ ದಿನಾಂಕದಂದು ಹುಟ್ಟಿದ ಹುಡುಗಿಯರು ಲಕ್ಷ್ಮಿ ಸ್ವರೂಪ ಗೊತ್ತಾ.!

* ದೀಪವನ್ನು ಬೆಂಕಿ ಕಡ್ಡಿಯಿಂದ ಹಚ್ಚಿದರೆ ಶನಿ ದೋಷ ಪ್ರಾಪ್ತಿಯಾಗುತ್ತದೆ. ಕಾಮಾಕ್ಷಿ ದೀಪ ಪೂರ್ವ ಅಥವಾ ಉತ್ತರ ದಿಕ್ಕಿಗೆ ಉರಿಯಬೇಕು ದೀಪ ಅತಿ ದೊಡ್ಡದಾಗಿಯೂ ಅಥವಾ ಚಿಕ್ಕದಾಗಿಯೂ ಉರಿಯ ಬಾರದು ಸಾಧಾರಣ ಮಟ್ಟದಲ್ಲಿ ಉರಿಯಬೇಕು ದೀಪ ಎಷ್ಟು ಪ್ರಶಾಂತವಾಗಿ ಉರಿಯುತ್ತದೆಯೋ ಆ ಮನೆ ನಂದಾ ಗೋಕುಲದಂತೆ ಇರುತ್ತದೆ. ಮನೆಯವರ ಮನಸ್ಸು ಸಂತೋಷದಿಂದ ಇರುತ್ತದೆ.

* ಹಾಗೆ ಕಾಮಾಕ್ಷಿ ದೀಪವನ್ನು ಶುದ್ಧ ಹಸುವಿನ ತುಪ್ಪದಿಂದ ಹಚ್ಚಬೇಕು ಎಳ್ಳೆಣ್ಣೆಯಿಂದ ಕೊಬ್ಬರಿ ಎಣ್ಣೆಯಿಂದ ಕೂಡ ಹಚ್ಚಬಹುದು.
* ಈ ದೀಪವನ್ನು ಗೋಧೂಳಿ ಸಮಯದಲ್ಲಿ ಹಚ್ಚಬೇಕು. ಇದರಿಂದ ಲಕ್ಷ್ಮಿ ಕಟಾಕ್ಷ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಶಾಸ್ತ್ರ ಪಂಡಿತರು.
* ಸಂಜೆಯ ಸಮಯದಲ್ಲಿ ದೀಪ ಹಚ್ಚಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ನೆಮ್ಮದಿ ಪ್ರಾಪ್ತಿಯಾಗುತ್ತದೆ.

* ಕಾಮಾಕ್ಷಿ ದೀಪ ಮುಕ್ಕಾಗಿ ಇರಬಾರದು ಲಕ್ಷ್ಮಿಯ ಮುಖ ಕಳೆಯಾಗಿ ನೀಟಾಗಿ ಮೂಡಿರಬೇಕು ದೀಪದಲ್ಲಿ ಯಾವುದೇ ಕಲೆ ಇರಬಾರದು.
* ಮನೆಗೆ ತಂದ ದೀಪವನ್ನು ನೀವೇ ಬಳಸಬೇಕು ಯಾರಿಗೂ ಉಡು ಗೊರೆಯಾಗಿ ಕೊಡಬಾರದು. ಒಂದು ವೇಳೆ ಉಡುಗೊರೆಯಾಗಿ ನೀಡಬೇಕೆಂದರೆ ಖರೀದಿಸಿದ ತಕ್ಷಣ ಅಂಗಡಿಯಲ್ಲಿ ಪ್ಯಾಕ್ ಮಾಡಿಸಿ ಅದನ್ನು ಕೊಡಿ.

ಈ ಸುದ್ದಿ ಓದಿ:- ಹಿರಿಯರು ಹೇಳಿರುವ 45 ಕಿವಿ ಮಾತುಗಳು ಒಮ್ಮೆ ಕೇಳಿ ಜೀವನ ಬದಲಾಗುತ್ತದೆ.!

* ಕಾಮಾಕ್ಷಿ ದೀಪವನ್ನು ಉಡುಗೊರೆಯಾಗಿ ಕೊಡುವುದು ಅಥವಾ ಪಡೆದುಕೊಳ್ಳುವುದು ಬಹಳ ಒಳ್ಳೆಯದು ನೀವು ಕೊಟ್ಟಷ್ಟು ಲಕ್ಷ್ಮಿ ಸಂತೃಪ್ತಿಯಾಗುತ್ತಾಳೆ ಹಾಗೂ ಲಕ್ಷ್ಮಿ ಕಟಾಕ್ಷ ಉಂಟಾಗುತ್ತದೆ.
* ಪ್ರತಿದಿನ ಕಾಮಾಕ್ಷಿ ದೀಪವನ್ನು ಹಚ್ಚುವಾಗ ಹೊಸಬತ್ತಿ ಪರಿಶುದ್ಧವಾದ ಎಣ್ಣೆಯಿಂದ ಹಚ್ಚಬೇಕು. ಬಳಸಿದ ಎಣ್ಣೆ ಅಥವಾ ಬತ್ತಿ ಮತ್ತೆ ಬಳಸಬಾರದು.
* ಉಳಿದ ಎಣ್ಣೆ ಬತ್ತಿಯನ್ನು ನೀರಿನಲ್ಲಿ ಅಥವಾ ಮರದ ಬುಡಕ್ಕೆ ಹಾಕ ಬೇಕು ಶುದ್ಧವಾದ ಬಟ್ಟೆ ಪೇಪರ್ ನಿಂದ ಒರೆಸಿದರೆ ದೀಪ ಶುದ್ಧವಾಗುತ್ತದೆ.

* ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರ ದೀಪವನ್ನು ಶುದ್ಧೀ ಕರಣ ಮಾಡಬಾರದು. ಏಕೆಂದರೆ ಲಕ್ಷ್ಮಿ ಅಲ್ಲಿಂದ ಕಾಲು ತೆಗೆಯುತ್ತಾಳೆ ಎಂದು ಹಿರಿಯರು ಹೇಳುತ್ತಾರೆ.
* ಯಾವತ್ತಿಗೂ ಒಂಟಿ ದೀಪ ಒಂಟಿ ಬತ್ತಿ ಇಡಬಾರದು ಒಂದು ದೀಪಕ್ಕೆ ಎರಡು ಬತ್ತಿ ಅಥವಾ ಎರಡು ದೀಪಕ್ಕೆ ಬತ್ತಿ ಹಚ್ಚಿ ಇಡಬಹುದು. ಒಂಟಿ ದೀಪವನ್ನು ಹಚ್ಚಿದರೆ ಒಂಟಿ ಬತ್ತಿಯಿಂದ ಹಚ್ಚಿದರೆ ಸೂತಕ ಮನೆಯ ವಾತಾವರಣ ಹಾಗೂ ದಾರಿದ್ರ್ಯ ಉಂಟುಮಾಡುತ್ತದೆ.

* ಕಾಮಾಕ್ಷಿ ದೀಪವನ್ನು ದುಡ್ಡಿನ ಸಮಸ್ಯೆ ಇರುವವರು ಆರೋಗ್ಯ ಸಮಸ್ಯೆ ಇರುವವರು, ಎಷ್ಟು ಪ್ರಯತ್ನ ಪಟ್ಟರೂ ಕೆಲಸ ಕಾರ್ಯ ಮಾಡಿದರು ಹತ್ತುತ್ತಾ ಇಲ್ಲ ಎನ್ನುವವರು, ದಾಂಪತ್ಯದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ಸ್ವಂತ ಉದ್ಯೋಗದಲ್ಲಿ ಏಳಿಗೆಗಾಗಿ ಕಾಮಾಕ್ಷಿ ದೀಪವನ್ನು ಗೋಧೂಳಿ ಸಮಯದಲ್ಲಿ ಹಚ್ಚುವುದರಿಂದ ನಿಮ್ಮಲ್ಲಿರುವ ದಾರಿದ್ರ್ಯ ದೂರವಾಗುತ್ತದೆ. ಸುಖ ಶಾಂತಿ ನೆಮ್ಮದಿ ಉಂಟಾಗುತ್ತದೆ.

Useful Information

Post navigation

Previous Post: ಪೂಜಾ ಕೋಣೆಯಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬಾರದು……!!
Next Post: ಕೂದಲಿನ ಸೌಂದರ್ಯಕ್ಕಾಗಿ ಈ ಸಲಹೆ ಪಾಲಿಸಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore