ಕಾಮಾಕ್ಷಿ ದೀಪವನ್ನು ಗಜಲಕ್ಷ್ಮೀ ದೀಪ ಎಂದು ಸಹ ಕರೆಯುತ್ತಾರೆ. ದೀಪದಲ್ಲಿ ಪದ್ಮಾಸನದಲ್ಲಿ ಲಕ್ಷ್ಮೀ ಕುಳಿತಿರಬೇಕು ಎರಡು ಕಡೆ ಆನೆ ಇರಬೇಕು. ಅಖಂಡ ಸೌಭಾಗ್ಯವನ್ನು ನೀಡುವಂತಹ ಕಾಮಾಕ್ಷಿ ದೀಪ ಪ್ರತಿದಿನ ಪ್ರತಿ ಮನೆಗಳಲ್ಲಿ, ಕಛೇರಿಗಳಲ್ಲಿ, ಹಣಕಾಸು ವ್ಯವಹಾರ ಮಾಡುವ ಸ್ಥಳದಲ್ಲಿ ಇಟ್ಟರೆ ವಿಶೇಷವಾದ ಫಲ ದೊರೆಯುತ್ತದೆ.
ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ತಂದಾಗ ಅಥವಾ ಉಡುಗೊರೆ ಯಾಗಿ ನೀಡಿದಾಗ ಅದನ್ನು ಮನೆಯಲ್ಲಿ ಶುದ್ಧವಾದ ನೀರಿನಿಂದ ಹುಣಸೆ ಹಣ್ಣಿನಿಂದ ತೊಳೆದು ಶುಭ್ರವಾದ ವಸ್ತ್ರದಿಂದ ಒರೆಸಿ ಇಡಬೇಕು. ಕಾಮಾಕ್ಷಿ ದೀಪವನ್ನು ನೆಲದ ಮೇಲೆ ಇಡಬಾರದು ಒಂದು ಮಣೆ, ಹಲಗೆ, ತಾಮ್ರದ ತಟ್ಟೆ, ಹಿತ್ತಾಳೆ, ಅಥವಾ ಬೆಳ್ಳಿ ತಟ್ಟೆಯ ಮೇಲೆ ಇಡಬೇಕು.
ನಿಮ್ಮ ಊಟದಲ್ಲಿ ಈ ಪದಾರ್ಥಗಳನ್ನು ಸೇರಿಸಿ ತಿನ್ನಿ ಕೂದಲು ಉದುರುವುದು ಸಂಪೂರ್ಣ ನಿಲ್ಲುತ್ತೆ.!
ಅಷ್ಟದಳ ರಂಗೋಲಿಯನ್ನು ಅಕ್ಕಿ ಹಿಟ್ಟಿನಿಂದ ಹಾಕಬೇಕು ಅದರ ಮೇಲೆ ದೀಪ ಇಡಬೇಕು ನಂತರ ಅರಿಶಿನ, ಕುಂಕುಮದಿಂದ ಪೂಜೆ ಮಾಡಬೇಕು. ದೇವರ ಪೂಜೆಯ ಮೊದಲು ದೀಪದ ಪೂಜೆ ಮಾಡ ಬೇಕು ಜ್ಯೋತಿಯ ಪೂಜೆಗಾಗಿ ದೀಪಕ್ಕೆ ಹೂವು ಇಟ್ಟು ಅಲಂಕಾರ ಮಾಡಿ ಎರಡು ಶುದ್ಧವಾದ ಬತ್ತಿ ಇಟ್ಟು ಪೂಜೆ ಮಾಡಬೇಕು.
ಕಾಮಾಕ್ಷಿ ದೀಪವನ್ನು ಬೆಂಕಿ ಕಡ್ಡಿಯಿಂದಾಗಲಿ ಅಥವಾ ಮೇಣದ ಬತ್ತಿಯಿಂದಾ ಗಲಿ ನೇರವಾಗಿ ಬತ್ತಿ ಹಚ್ಚಬಾರದು. ಈ ತರಹ ಹಚ್ಚಿದರೆ ಶ್ರೀ ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತಾಗುತ್ತದೆ ಆದ್ದರಿಂದ ತುಪ್ಪದಲ್ಲಿ ನೆನೆಸಿರುವ ಬತ್ತಿಯಿಂದ ಅಥವಾ ತುಳಸಿ ಕಡ್ಡಿಯಿಂದ ಕಾಮಾಕ್ಷಿ ದೀಪವನ್ನು ಹಚ್ಚಬೇಕು.
ಪುರುಷರಲ್ಲಿ ಈ ರೀತಿಯ ಲಕ್ಷಣಗಳಿದ್ದರೆ ಅವರು ಬಹಳ ಅದೃಷ್ಟವಂತರು.!
ದೀಪವನ್ನು ಬೆಂಕಿ ಕಡ್ಡಿಯಿಂದ ಹಚ್ಚಿದರೆ ಶನಿ ದೋಷ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಬೆಂಕಿಕಡ್ಡಿಯಿಂದ ಕಾಮಾಕ್ಷಿ ದೀಪವನ್ನು ಹಚ್ಚಬಾರದು. ಕಾಮಾಕ್ಷಿ ದೀಪ ಪೂರ್ವ ಅಥವಾ ಉತ್ತರ ದಿಕ್ಕಿಗೆ ಉರಿಯಬೇಕು ದೀಪಾ ಅತಿ ದೊಡ್ಡದಾಗಿಯೂ ಅಥವಾ ಚಿಕ್ಕದಾಗಿಯೂ ಉರಿಯಬಾರದು.
ಸಾಧಾರಣ ಮಟ್ಟದಲ್ಲಿ ಉರಿಯಬೇಕು ದೀಪ ಎಷ್ಟು ಪ್ರಶಾಂತವಾಗಿ ಉರಿಯುತ್ತದೆಯೋ ಆ ಮನೆ ನಂದಾಗೋಕುಲದಂತೆ ಇರುತ್ತೆ. ಮನೆ ಮನಸ್ಸು ಸಂತೋಷದಿಂದ ಇರುತ್ತದೆ. ಹಾಗೆ ಕಾಮಾಕ್ಷಿ ದೀಪವನ್ನು ಶುದ್ಧ ಹಸುವಿನ ತುಪ್ಪದಿಂದ ಹಚ್ಚಬೇಕು ಎಳ್ಳೆಣ್ಣೆ ಯಿಂದ ಕೊಬ್ಬರಿ ಎಣ್ಣೆಯಿಂದ ಕೂಡ ಹಚ್ಚಬಹುದು.
ಬೆಂಡೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ಈ 2 ಪದಾರ್ಥ ತಿನ್ನಬೇಡಿ ನಿಮ್ಮ ಜೀವಕ್ಕೆ ಕುತ್ತು ತರುತ್ತೆ ಎಚ್ಚರ.!
ಈ ದೀಪವನ್ನು ಗೋಧೂಳಿ ಸಮಯದ ಲ್ಲಿ ಹಚ್ಚಬೇಕು ಇದರಿಂದ ಲಕ್ಷ್ಮೀ ಕಟಾಕ್ಷ ಹೆಚ್ಚಾಗುತ್ತದೆ ಎಂದು ಹೇಳು ತ್ತಾರೆ. ಸಂಜೆಯ ಸಮಯದಲ್ಲಿ ದೀಪ ಹಚ್ಚಬೇಕು. ಈ ರೀತಿ ಮಾಡುವು ದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಮತ್ತು ಮನೆಯಲ್ಲಿ ಸದಾ ಕಾಲ ನಿಮ್ಮದಿ ಪ್ರಾಪ್ತಿ ಆಗುತ್ತದೆ ಹಾಗೂ ಯಾವುದೇ ರೀತಿಯ ತೊಂದರೆ ಇಲ್ಲದೆ ಇರಬಹುದು.
ಕಾಮಾಕ್ಷಿ ದೀಪ ಮುಕ್ಕಾಗಿರಬಾರದು, ಲಕ್ಷ್ಮೀಯ ಮುಖ ಕಳೆಯಾಗಿ ಸರಿಯಾಗಿ ಮೂಡಿರಬೇಕು, ದೀಪದಲ್ಲಿ ಯಾವುದೇ ಕಲೆ ಆಗಿರ ಬಾರದು. ಮನೆಗೆ ತಂದ ದೀಪವನ್ನು ನೀವೇ ಬಳಸಬೇಕು ಯಾರಿಗೂ ಉಡುಗೊರೆಯಾಗಿ ಕೊಡಬಾರದು. ಒಂದು ವೇಳೆ ಉಡುಗೊರೆಯಾಗಿ ನೀಡಬೇಕೆಂದರೆ ಖರೀದಿಸಿದ ತಕ್ಷಣ ಅಂಗಡಿಯಲ್ಲೇ ಪ್ಯಾಕ್ ಮಾಡಿಸಿ ಅದನ್ನು ಕೊಡಿ ಕಾಮಾಕ್ಷಿ ದೀಪವನ್ನು ಉಡುಗೊರೆಯಾಗಿ ಕೊಡುವುದು ಅಥವಾ ಪಡೆದುಕೊಳ್ಳುವುದು ಬಹಳ ಒಳ್ಳೆಯದು.
ಮೂರನೇ ಕಂತಿನ ಅಕ್ಕಿ ಜಣ ಜಮಾ ಆಗಿದೆ.! ಈ ರೀತಿ ಚೆಕ್ ಮಾಡಿ.!
ನೀವು ಕೊಟ್ಟಷ್ಟು ಲಕ್ಷ್ಮೀ ಸಂತೃಪ್ತಿಯಾಗುತ್ತಾಳೆ ಹಾಗೂ ಲಕ್ಷ್ಮೀ ಕಟಾಕ್ಷ ಉಂಟಾಗುತ್ತದೆ. ಪ್ರತಿದಿನ ಕಾಮಾಕ್ಷಿ ದೀಪವನ್ನು ಹಚ್ಚುವಾಗ ಹೊಸಬತ್ತಿ, ಪರಿಶುದ್ಧವಾದ ಎಣ್ಣೆಯಿಂದ ಹಚ್ಚಬೇಕು. ಬಳಸಿದ ಎಣ್ಣೆ ಅಥವಾ ಬತ್ತಿ ಮತ್ತೆ ಮತ್ತೆ ಬಳಸಬಾರದು. ಉಳಿದ ಎಣ್ಣೆ ಬತ್ತಿಯನ್ನು ನೀರಿನಲ್ಲಿ ಅಥವಾ ಮರದ ಬುಡಕ್ಕೆ ಹಾಕಬೇಕು. ಶುದ್ಧವಾದ ಬಟ್ಟೆ, ಪೇಪರ್ ನಿಂದ ಒರೆಸಿದರೆ ದೀಪ ಶುದ್ಧವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ