Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಂಗೇಜ್ಮೆಂಟ್ ಮಾಡಿಕೊಂಡು ಮದುವೆ ಆಗದೆ ಹಾಗೆ ಉಳಿದ ನಟಿಯರ ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ.

Posted on September 28, 2022 By Kannada Trend News No Comments on ಎಂಗೇಜ್ಮೆಂಟ್ ಮಾಡಿಕೊಂಡು ಮದುವೆ ಆಗದೆ ಹಾಗೆ ಉಳಿದ ನಟಿಯರ ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ.

ಸ್ನೇಹಿತರೆ ಮದುವೆ ಎಂದರೆ ಒಂದು ಮನಸನ್ನು ಇನ್ನೊಂದು ಮನಸ್ಸು ಮೆಚ್ಚುಗೆ ಪಡುವುದು ಹಾಗೂ ಹೊಂದಾಣಿಕೆಯನ್ನು ಹೊಂದಿರುವುದು ಇತ್ತೀಚಿನ ದಿನಗಳಲ್ಲಿ ಮದುವೆಯಾಗಲಿ ಅಥವಾ ಪ್ರೀತಿ ಆಗಲಿ ಬಹಳ ದಿನಗಳ ಕಾಲ ಉಳಿಯದೆ ಅರ್ಧಕ್ಕೆ ಮುರಿದು ಹೋಗುವುದು ಹೆಚ್ಚಾಗಿ ಕಂಡುಬಂದಿದೆ ಅದರಲ್ಲೂ ನಟ ನಟಿಯರ ಜೀವನದಲ್ಲಂತೂ ಸಾಮಾನ್ಯವಾಗಿವೆ. ಸ್ನೇಹಿತರೆ ಇಂದು ಎಂಗೇಜ್ಮೆಂಟ್ ಆಗಿ ಮುರಿದು ಹೋಗಿರುವ ನಟಿಯರು ಯಾರ್ಯಾರು ಎಂದು ನೋಡೋಣ ಬನ್ನಿ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಮೊದಲಿಗೆ ನಟಿ ರಶ್ಮಿಕಾ ಮಂದಣ್ಣ ರವರು ಇವರು ಕಿರಿಕ್ ಪಾರ್ಟಿ ಎಂಬ ಚಲನಚಿತ್ರ ಮೂಲಕ ಪಾದರ್ಪಣೆ ಮಾಡಿ ಯಶಸ್ವಿಯನ್ನು ಕಂಡಿದ್ದರು ಈ ಮೂಲಕ ಅದೇ ಚಲನಚಿತ್ರ ನಾಯಕ ನಟನಾಗಿದ್ದ ರಕ್ಷಿತ್ ಶೆಟ್ಟಿಯವರ ಜೊತೆ 2017 ಜುಲೈ 3ರಂದು ಎಂಗೇಜ್ಮೆಂಟ್ ಆಗಿತ್ತು ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ರವರು ಬಹು ಬೇಡಿಕೆ ನಟಿಯಾದರು. ಇವರು ತೆಲುಗು ಚಿತ್ರನಂಗಕ್ಕೆ ಕಾಲಿಟ್ಟಿದ್ದು ಅಥವಾ ಇನ್ಯಾವುದೋ ಕಾರಣಕ್ಕೋ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ರವರ ಮಧ್ಯ ಮಿಸ್ ಅಂಡರ್ಸ್ಟ್ಯಾಂಡಿಂಗ್ ಉಂಟಾಗಿ ಎಂಗೇಜ್ಮೆಂಟ್ ಮುರಿದು ಬಿದ್ದಿದೆ.

ಸೆಲೆಬ್ರಿಟಿ ದಂಪತಿಗಳಾದ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ಅವರ ಪುತ್ರ ಸೃಜನ್ ಕೆಲವು ವರ್ಷಗಳ ಹಿಂದೆ ನಾಗಮಂಡಲದ ನಾಯಕ ನಟಿ ವಿಜಯಲಕ್ಷ್ಮಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಯಿತು. ಇವರಿಬ್ಬರು 3 ವರ್ಷಗಳ ಕಾಲ ಸಂಬಂಧದಲ್ಲಿದ್ದರು, ನಿಶ್ಚಿತಾರ್ಥದ ಸಮಾರಂಭದಲ್ಲಿ ಸಾರ್ವಜನಿಕರಿಗೆ ತಮ್ಮ ಪ್ರೇಮ ಜೀವನವನ್ನು ದೃಢಪಡಿಸಿದರು. ಆದರೆ ಕೆಲವೊಂದು ಕಾರಣಗಳು ಭಿನ್ನಾಭಿಪ್ರಾಯ ಉಂಟಾಗಿ ನಿಶ್ಚಿತಾರ್ಥ ಮುರಿದುಬಿದ್ದಿತು. ಆದರೂ ಸಹ ವಿಜಯಲಕ್ಷ್ಮಿಯವರು ಸೃಜನ್ ಲೋಕೇಶ್ ರವರ ಮೇಲೆ ಯಾವುದೇ ತರಹದ ಕೆಟ್ಟ ಭಾವನೆಯನ್ನು ಇಟ್ಟುಕೊಳ್ಳದೆ ಇರುವುದು ವಿಶೇಷವಾಗಿದೆ ಹಾಗೂ ಅವರು ನನ್ನ ಜೀವನದಲ್ಲಿ ಸೃಜನ್ ಒಬ್ಬ ಉತ್ತಮವಾದ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.

ಅಕ್ಕ’ ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಹಾಗೂ ‘ಲಕ್ಷಣ’ ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ಒಂದ್ಕಾಲದಲ್ಲಿ ಪ್ರಣಯ ಪಕ್ಷಿಗಳು. ವರ್ಷಗಳ ಕಾಲ ಪ್ರೇಮದ ಅಮಲಿನಲ್ಲಿ ತೇಲಾಡಿದ ಈ ಜೋಡಿಯ ಪ್ರೀತಿ 5 ವರ್ಷಗಳ ಹಿಂದಷ್ಟೇ ಮುರಿದು ಬಿದ್ದಿತ್ತು. ಅನುಪಮಾ ಅವರು ಸದ್ಯಕ್ಕೆ ನಿರೂಪಣೆಯಲ್ಲಿ ತೊಡಗಿದ್ದಾರೆ. ಅನುಪಮಾ ಹಾಗೂ ಜಗನ್ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಅವರ ಎಂಗೇಜ್ಮೆಂಟ್ ಮದುವೆವರೆಗೂ ಹೋಗಲಿಲ್ಲ.

ಇನ್ನು ಮಳೆ ಹುಡುಗಿ ಎಂದು ಪ್ರಖ್ಯಾತವಾದ ಪೂಜಾ ಗಾಂಧಿಯವರು ಮುಂಗಾರು ಮಳೆ ಚಿತ್ರದ ನಾಯಕ ನಟಿಯಾಗಿ ಮೊದಲು ಚಿತ್ರರಂಗಕ್ಕೆ ನಟನೆ ಮಾಡಿದರು. ಹಾಗೂ ಮುಂಗಾರುಮಳೆ ಚಿತ್ರದಿಂದ ಬಹಳ ಬಹುಬೇಡಿಕೆ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿದರು. ಇವರು 2012 ನವಂಬರ್ 15ರಂದು ಆನಂದ್ ಗೌಡರವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇವರಿಬ್ಬರು ಬಹಳ ವರ್ಷದಿಂದ ಪ್ರೀತಿಯಲ್ಲಿದ್ದು ಎಂಗೇಜ್ಮೆಂಟ್ ಆಗಿ ಒಂದು ತಿಂಗಳ ನಂತರ ಇವರ ಪ್ರೇಮವು ಮದುವೆ ತನಕ ಹೋಗದೆ ಅಲ್ಲಿಗೆ ಮುರಿದು ಬಿದ್ದಿದೆ.

ಅದಕ್ಕೆ ಕಾರಣ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಹೊಂದಾಣಿಕೆ ಇಲ್ಲದ ಕಾರಣ ಇವರ ಪ್ರೀತಿಯು ಮುರಿದು ಬಿದ್ದಿದೆ. ಇನ್ನೂ ರಿಷಿಕಾ ಸಿಂಗ್ ರವರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬುರವರ ಮಗಳು ಇವರು ಕೂಡ ಕನ್ನಡ ಚಿತ್ರರಂಗದಲ್ಲಿ ಬಹಳ ಚಿತ್ರಗಳಲ್ಲಿ ನಟಿಸಿದ್ದಾರೆ. ರಿಷಿಕಾ ಸಿಂಗ್ ರವರು ಸಂದೀಪ್ ಎಂಬುವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು ಆದರೆ ಕೆಲವು ಕೌಟುಂಬಿಕ ಸಮಸ್ಯೆಗಳಿಂದ ಇವರ ನಿಶ್ಚಿತಾರ್ಥ ಮುರಿದು ಬಿದ್ದಿದೆ.

Entertainment Tags:Kannada heroins
WhatsApp Group Join Now
Telegram Group Join Now

Post navigation

Previous Post: ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವ ನಟ ದರ್ಶನ್ ಈ ಸಿನಿಮಾಗಾಗಿ ದರ್ಶನ್ ಪಡೆದ ದುಬಾರಿ ಉಡುಗೊರೆ ಏನು ಗೊತ್ತಾ.
Next Post: ನೇರವಾಗಿ ಇನ್ನು ಮುಂದೆ ನಮಗೆ ಮಕ್ಕಳಾಗುವುದಿಲ್ಲ ಎಂದು ಹೇಳಿದ ನಿವೇದಿತ ಗೌಡ ಕಾರಣವೇನು ಗೊತ್ತಾ.! ನಿಜಕ್ಕೂ ಆಶ್ಚರ್ಯವಾಗುತ್ತೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore