Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇದುವರೆಗೂ ಒಂದು ಹನಿ ಕೂಡ ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ನಟ ಯಾರು ಗೊತ್ತಾ?

Posted on July 17, 2022 By Kannada Trend News No Comments on ಇದುವರೆಗೂ ಒಂದು ಹನಿ ಕೂಡ ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ನಟ ಯಾರು ಗೊತ್ತಾ?

ತೆರೆ ಮೇಲೆ ಕಾಣುವ ಹೀರೋಗಳು ಎಂದರೆ ನಾವು ನಿಜ ಜೀವನದಲ್ಲೂ ಕೂಡ ಅವರು ಹಾಗೆ ಇರುತ್ತಾರೆ ಎಂದು ಕೊಡುತ್ತೇವೆ. ಎಷ್ಟೋ ಜನರು ಇದಕ್ಕೆ ನಿಜ ಜೀವನದಲ್ಲಿ ವಿರುದ್ಧವಾಗಿರುತ್ತಾರೆ. ಯಾಕೆಂದರೆ ಅವರು ಕಲಾವಿದರುಗಳು ಅವರು ತೆರೆ ಮೇಲೆ ಬರಿ ಪಾತ್ರವನ್ನು ಅಷ್ಟೇ ಅನುಸರಿಸಿ ಆ ರೀತಿ ಅಭಿನಯ ಮಾಡುತ್ತಿರುತ್ತಾರೆ ಆದರೆ ತೆರೆ ಹಿಂದೆ ಅವರಿಗೊಂದು ವೈಯಕ್ತಿಕ ಬದುಕಿದೆ ಎಷ್ಟೋ ಜನ ಕಲಾವಿದರುಗಳು ತೆರೆ ಮೇಲೆ ಖಳನಾಯಕನಾಗಿ ಅಭಿನಯ ಮಾಡಿದರೂ ಕೂಡ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು. ಎಷ್ಟೋ ಜನರು ತೆರೆ ಮೇಲೆ ಹೀರೋಗಳಾಗಿದ್ದರು ಕೂಡ ಅವರು ಅಂತಹ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದೆ ಅವರ ಬಣ್ಣ ಬಯಲಾಗಿದ್ದು ಎಲ್ಲರಿಗೂ ತಿಳಿದಿದೆ ಹಾಗಾಗಿ ಸಿನಿಮಾ ಹಾಗೂ ವೈಯಕ್ತಿಕ ಬದುಕು ಒಂದೇ ರೀತಿ ಇದೆ ಎಂದು ನೂರಕ್ಕೆ ನೂರರಷ್ಟು ಹೇಳುವುದು ಕಷ್ಟ.

ಆದರೆ ಕೆಲವೇ ಕೆಲವು ಬೆರಳೆಣಿಕೆಯಷ್ಟು ಹೀರೋಗಳು ಮಾತ್ರ ಈ ರೀತಿ ತೆರೆ ಮೇಲೆ ಹೇಗೆ ಜನರಿಗೆ ಸಂದೇಶ ಕೊಡುತ್ತಾರೆ ನಿಜ ಜೀವನದಲ್ಲಿಯೂ ಕೂಡ ಹಾಗೆ ನಡೆ ಕೊಂಡುಕೊಂಡು ಎಲ್ಲರಿಗೂ ಆದರ್ಶ ವಾಗುತ್ತಾರೆ. ತೆರೆ ಮೇಲೆ ಕಾಣುವ ಹೀರೋಗಳ ವಿಚಾರವಾಗಿ ಹೇಳುವುದಾದರೆ ಆಗಿನ ಕಾಲದಲ್ಲಿ ಹೀರೋಗಳು ಎಂದರೆ ಅವುಗಳ ಚಿತ್ರಣವೇ ಬೇರೆಯಾಗಿತ್ತು. ಹಿಂದೆ ಡಾಕ್ಟರ್ ರಾಜಕುಮಾರ್ ಅವರ ಕಾಲದಲ್ಲಿ ಮೂಡಿ ಬರುತ್ತಿದ್ದ ಸಿನಿಮಾಗಳಲ್ಲಿ ಸಿನಿಮಾದ ನಾಯಕ ಎಂದರೆ ಎಲ್ಲರೂ ಕೂಡ ಅವರನ್ನು ತುಂಬಾ ಭಕ್ತಿಭಾವದಿಂದ ನೋಡುತ್ತಿದ್ದರು. ನಿಜ ಜೀವನದಲ್ಲೂ ಕೂಡ ಅದೇ ರೀತಿ ಬದುಕಬೇಕು ಎಂದು ಪ್ರಯತ್ನ ಪಡುತ್ತಿದ್ದರು. ಡಾಕ್ಟರ್ ರಾಜಕುಮಾರ್ ಅಥವಾ ವಿಷ್ಣುವರ್ಧನ್, ಶಂಕರ್ ನಾಗ್ ಇವರ ಸಿನಿಮಾಗಳು ಈ ರೀತಿ ಜನಕ್ಕೆ ಅನುಕೂಲವಾಗುವ ರೀತಿ ಸಂದೇಶಗಳು ಹಾಗೂ ಆ ರೀತಿಯ ಒಳ್ಳೆಯ ಭಾವನೆಗಳಿರುವ ದೃಶ್ಯಗಳಿಂದ ಕೂಡಿರುತ್ತಿದ್ದವು.

ಈಗಿನ ಕಾಲದ ಸಿನಿಮಾಗಳು ಮೊದಲ ದೃಶ್ಯವೇ ಶುರುವಾಗುವುದು ಹೀರೋನ ಹೀರೋಯಿಸಂ ತೋರಿಸುವುದರಿಂದ ಈಗಿನ ಕಾಲದ ಹೀರೋಯಿಸಂ ಎಂದರೆ ನಾಲ್ಕು ಜನರಿಗೆ ಹೊಡೆಯುವುದು, ಸಿಗರೇಟ್ ಸೇದುತ್ತಾ ಹೊಗೆ ಬಿಡುತ್ತಾ ಕೈಯಲ್ಲಿ ಮಧ್ಯದ ಬಾಟಲಿಗಳನ್ನು ಹಿಡಿದುಕೊಂಡು ತಂದೆ ತಾಯಿ ಗುರು ಹಿರಿಯರಿಗೆ ಎದುರು ಮಾತನಾಡುತ್ತಾ ಸಿನಿಮಾ ಆರಂಭದಲ್ಲೇ ಈ ರೀತಿಯ ದುರ್ವರ್ತನೆಗಳನ್ನು ಸಿನಿಮಾ ಮುಗಿಯವರೆಗೂ ಮುಂದುವರಿಸಿಕೊಂಡು ಹೋಗುವುದು ರೂಢಿಯಾಗಿದೆ. ಇಂತಹ ಸಿನಿಮಾಗಳನ್ನು ನೋಡುವ ಯುವ ಜನತೆಯ ಮನಸ್ಸಿನಲ್ಲಿ ಇದೇ ಹೀರೋಯಿಸಂ ಎನ್ನುವ ಒಂದು ಬಲವಾದ ಮೌಢ್ಯತೆ ಆವರಿಸಿಕೊಳ್ಳುತ್ತದೆ. ಅವರು ಕೂಡ ನಾನು ಹೀರೋ ಆಗಬೇಕು ನನ್ನನ್ನು ಜನ ನೋಡಿ ಮೆಚ್ಚಿಕೊಳ್ಳಬೇಕು ಎಂದು ಇಂತಹ ವರ್ತನೆಗಳನ್ನು ಅನುಸರಿಸಲು ಶುರುಮಾಡುತ್ತಾರೆ.

ಈ ಮನಸ್ಥಿತಿ ಇರುವ ಹುಡುಗರುಗಳು ಸಾರ್ವಜನಿಕವಾಗಿ ಈ ರೀತಿ ಕಾಣಿಸಿಕೊಳ್ಳುತ್ತಾರೆ ಹಾಗೂ ಇದರಿಂದಲೇ ಸಮಾಜದ ಸ್ವಾಸ್ಥ್ಯ ಇದರಿಂದಲೇ ಹಾಳಾಗುತ್ತಿದೆ ಎನ್ನಬಹುದು. ಜನ ಎಡುವುತ್ತಿರುವುದು ಇಲ್ಲಿಯೇ ತೆರೆ ಮೇಲೆ ಇಂಥ ಸನ್ನಿವೇಶಗಳು ಬರುವಾಗಲೇ ಧೂ.ಮಪಾನ ಹಾಗೂ ಮ.ಧ್ಯಪಾನ ಆರೋಗ್ಯಕ್ಕೆ ಹಾ.ನಿಕರ ಎನ್ನುವ ಶೀರ್ಷಿಕೆಯೊಂದಿಗೆ ಬರುತ್ತದೆ ಹಾಗೂ ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುವ ಸಂದರ್ಭದಲ್ಲಿ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಸಂಬಂಧಪಟ್ಟ ಹಾಗೆ ಎಲ್ಲ ಜಾಗರೂಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ದಯವಿಟ್ಟು ಯಾವುದೇ ಮುಂಜಾಗತ ಕ್ರಮವಿಲ್ಲದೆ ಯಾರು ಈ ರೀತಿ ನಡೆದುಕೊಳ್ಳಬಾರದು ಎನ್ನುವುದನ್ನು ಕೂಡ ಅಲ್ಲಿ ಬರೆದಿರುತ್ತಾರೆ ಆದರೆ ಇವುಗಳನ್ನು ಯಾರು ಗಮನಿಸುವುದಿಲ್ಲ ಬರಿ ಹೀರೋ ಹಾಗೂ ಆತನ ನಟನೆ ಮೇಲೆ ಗಮನ ಕೊಡುವ ಇವರು ಅದನ್ನೇ ಅನುಸರಿಸಲು ಹೋಗಿ ಹಲವಾರು ಅವಾಂತರ ಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.

ಆದರೆ ಸಿನಿಮಾ ಹಾಗೂ ಧಾರಾವಾಹಿ ಇನ್ನಿತರ ಸಂದರ್ಭದಲ್ಲಿ ಆ ಪಾತ್ರಗಳಿಗೆ ಅದು ಅವಶ್ಯಕತೆ ಇರುವುದರಿಂದ ಮಾತ್ರ ಹೀರೋಗಳು ಹಾಗೆ ನಡೆದುಕೊಳ್ಳುತ್ತಾರೆ ಆದರೆ ವೈಯುಕ್ತ ಬದುಕಿನಲ್ಲಿ ಅವರು ಸುಂದರವಾಗಿ ಅವರ ಜೀವನವನ್ನು ಕಟ್ಟಿಕೊಂಡಿರುತ್ತಾರೆ ಎನ್ನುವುದು ಇನ್ನು ನಮ್ಮ ಜನಕ್ಕೆ ಸರಿಯಾಗಿ ಮನವರಿಕೆ ಆಗಿಯೇ ಇಲ್ಲ. ಉದಾಹರಣೆಗೆ ಹೇಳಬೇಕು ಎಂದರೆ ಸಿನಿಮಾಗಳಲ್ಲಿ ಧೂಮಪಾನ ಮದ್ಯಪಾನ ಮಾಡುವ ಎಷ್ಟೋ ನಟರುಗಳು ನಿಜ ಜೀವನದಲ್ಲಿ ಅವುಗಳನ್ನು ಕೈಯಲ್ಲಿ ಕೂಡ ಮುಟ್ಟುವುದಿಲ್ಲ ಇಂತಹ ಉದಾಹರಣೆಗಳು ಮೊದಲಿಗೆ ಡಾಕ್ಟರ್ ರಾಜಕುಮಾರ್ ಅವರಿಂದ ಶುರುವಾಗುತ್ತದೆ. ಅಣ್ಣಾವ್ರು ಕರ್ನಾಟಕದ ಎಷ್ಟೋ ಜನರ ಪಾಲಿಕೆ ಆದರ್ಶ ಹಾಗೂ ಅಣ್ಣಾವ್ರ ಬಂಗಾರದ ಮನುಷ್ಯ ಎನ್ನುವ ಸಿನಿಮಾವನ್ನು ನೋಡಿ ಎಷ್ಟೋ ಜನ ಪಟ್ಟಣ ಸೇರಿದ್ದ ಯುವಕರು ಮತ್ತೆ ಹಳ್ಳಿಗಳಿಗೆ ಹೋಗಿ ವ್ಯವಸಾಯ ಮಾಡಲು ಶುರು ಮಾಡಿದರು.

ಯಾಕೆಂದರೆ ಅಣ್ಣ ಅವರ ಒಂದೊಂದು ಮಾತು ಹಾಗು ಅವರ ಒಂದೊಂದು ಸಿನಿಮವು ಜನರ ಮನಸ್ಸಿನಲ್ಲಿ ಇಂತಹದೊಂದು ಒಳ್ಳೆಯ ಪರಿವರ್ತನೆಗೆ ಕಾರಣವಾಗಿತ್ತು. ಸನ್ನಿವೇಶಗಳಿಗೆ ಅವಶ್ಯಕತೆ ಇದ್ದಾಗ ಧೂಮಪಾನ ಮತ್ತು ಮಧ್ಯಪಾನ ಮಾಡುವಂತೆ ಕಾಣಿಸಿಕೊಂಡರು ಕೂಡ ನಿಜ ಜೀವನದಲ್ಲಿ ಇವುಗಳಿಂದ ದೂರವಿದ್ದರು. ಇವರ ಹಾದಿಯಲ್ಲೇ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ಅವರು ಸಹ ನಡೆಕೊಂಡರು. ಅಪ್ಪು ಅವರು ಕೂಡ ಸಾಧ್ಯವಾದಷ್ಟು ಇಂತಹ ಪಾತ್ರಗಳು ಕಡಿಮೆ ಮಾಡಿಕೊಂಡೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇವರ ಸಿನಿಮಾಗಳನ್ನು ಕುಟುಂಬ ಸಮೇತವಾಗಿ ಕುಳಿತು ನೆಮ್ಮದಿಯಾಗಿ ಯಾವುದೇ ಮುಜುಗರವಿಲ್ಲದೇ ನೋಡಬಹುದಾಗಿತ್ತು. ಅಂತಹ ಒಳ್ಳೆಯ ಮೌಲ್ಯಯುತ ಕಥೆಗಳು ಪುನೀತ್ ರಾಜ್ ಕುಮಾರ್ ಅವರ ಸಿನಿಮಾದಲ್ಲಿ ಇರುತ್ತಿತ್ತು.

ಇವರು ಕೂಡ ನಿಜ ಜೀವನದಲ್ಲಿ ಎಂದಿಗೂ ಧೂಮಪಾನ ಮಾಡಿದವರಲ್ಲ ಹಾಗೂ ಮಧ್ಯವನ್ನು ಮುಟ್ಟಿದವರಲ್ಲ. ಹಾಗೆ ಕಿಚ್ಚ ಸುದೀಪ್ ಅವರು ಕೂಡ ಮುಂದೆ ಸಿಗರೇಟ್ ಅನ್ನು ಸೇದುತ್ತಿದ್ದರು ಆದರೆ 10 ವರ್ಷಗಳ ಹಿಂದೆ ಅವರಿಗೆ ಅನಾರೋಗ್ಯ ಸಮಸ್ಯೆಯಾಗಿ ಅಂದಿನಿಂದ ಆ ಚಟವನ್ನು ಅವರೇ ಇಷ್ಟಪಟ್ಟು ಬಿಟ್ಟವರು ಇಂದಿಗೂ ಸಹ ಅದನ್ನು ಮುಟ್ಟೇ ಇಲ್ಲ ಮತ್ತು ಇದುವರೆಗೂ ಒಂದು ಸಲವೂ ಕೂಡ ಇವರು ಮದ್ಯಪಾನ ಕೂಡ ಮಾಡಿಲ್ಲವಂತೆ. ಇನ್ನು ಎಲ್ಲರಿಗಿಂತ ಹೆಚ್ಚಾಗಿ ರವಿಚಂದ್ರನ್ ಸರ್ ಅವರನ್ನು ಸಿನಿಮಾ ಮೇಲೆ ನೋಡಿದವರು ಖಂಡಿತ ಇವರೊಬ್ಬ ಕುಡುಕ ಎಂದುಕೊಳ್ಳುತ್ತಾರೆ. ಆದರೆ ನಿಜ ಜೀವನದಲ್ಲಿ ರವಿಚಂದ್ರನ್ ಅವರು ಸಹ ಧೂಮಪಾನ ಮಧ್ಯಪಾನ ಇಂತಹ ದುಷ್ಚಟಗಳಿಂದ ದೂರವಿದ್ದು ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಹಾಗೂ ಇದೇ ಹಾದಿಯಲ್ಲಿ ವಿಜಯ ರಾಘವೇಂದ್ರ ಅವರು ಕೂಡ ಇದ್ದಾರೆ. ಎಲ್ಲರೂ ಇವರನ್ನು ಅಮೂಲ್ ಬೇಬಿ ಎನ್ನುತ್ತಾರೆ ನಿಜವಾಗಿಯೂ ಅದೇ ರೀತಿಯ ಮಗುವಿನಂತಹ ಗುಣಗಳು ವಿಜಯ ರಾಘವೇಂದ್ರ ಅವರಿಗಿದೆ. ಇಷ್ಟು ನಟರಲ್ಲಿ ನಿಮ್ಮ ನೆಚ್ಚಿನ ನಟ ಯಾರು ಅಂತ ಕಾಮೆಂಟ್ ಮಾಡಿ.

Entertainment Tags:Kannada film actors, Kannada heros
WhatsApp Group Join Now
Telegram Group Join Now

Post navigation

Previous Post: ಅಭಿಮಾನಿಗಳು ಸೃಷ್ಟಿಸಿದ ಈ ಫೋಟೋ ನೋಡಿ ಭಾವುಕರಾಗಿ ಕಣ್ಣಿರಿಡುತ್ತ ಮೇಘನಾ ರಾಜ್ ಹೇಳಿದ್ದೇನೆ ನೋಡಿ. ಯಾವ ಹೆಣ್ಣಿಗೂ ಈ ಸ್ಥಿತಿ ಬರದಿರಲಿ.
Next Post: ಇಂಗ್ಲಿಷ್ ನಲ್ಲಿ ಪಟಪಟನೆ ಮಾತಾಡಿದ ದೊಡ್ಮನೆ ಸೊಸೆ, ಅಪ್ಪು ಹೆಂಡತಿ ಅಶ್ವಿನಿ ಅವರ ಈ ಅಪರೂಪದ ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore