Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಾಂತಾರ ಪಾರ್ಟ್ – 2 ಸಿನಿಮಾ ದಯವಿಟ್ಟು ಮಾಡಬೇಡಿ ಎಂದು ಬೇಡಿಕೆ ಇಟ್ಟ ಕಾರವಾಳಿ ಭಾಗದವರು. ಸಂಕಷ್ಟಕ್ಕೆ ಸಿಲುಕಿದ ನಟ ರಿಷಭ್ ಶೆಟ್ಟಿ.

Posted on April 7, 2023 By Kannada Trend News No Comments on ಕಾಂತಾರ ಪಾರ್ಟ್ – 2 ಸಿನಿಮಾ ದಯವಿಟ್ಟು ಮಾಡಬೇಡಿ ಎಂದು ಬೇಡಿಕೆ ಇಟ್ಟ ಕಾರವಾಳಿ ಭಾಗದವರು. ಸಂಕಷ್ಟಕ್ಕೆ ಸಿಲುಕಿದ ನಟ ರಿಷಭ್ ಶೆಟ್ಟಿ.

 

ಈ ಬಲವಾದ ಕಾರಣಗಳಿಗಾಗಿ ರಿಷಬ್ ಶೆಟ್ಟಿ ಅವರಿಗೆ ಕಾಂತಾರ 2 ಮಾಡೋದು ಬೇಡ ಎನ್ನುತ್ತಿದ್ದಾರೆ ಕರಾವಳಿ ಭಾಗದವರು. ಕಾಂತಾರ ಕಳೆದ ವರ್ಷ ತೆರೆ ಕಂಡ ಲೋ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾ. ಈ ಚಿತ್ರ ತಯಾರಾದಾಗ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ ಎನ್ನುವ ನಿರೀಕ್ಷೆ ಯಾರಲ್ಲೂ ಸಹ ಇರಲಿಲ್ಲ. ಸಿನಿಮಾ ತೆರೆ ಕಂಡ ಮೇಲೆ ಅದಕ್ಕೆ ಸಿಕ್ಕ ಪ್ರಚಾರ ಹಾಗೂ ಜನತೆಯಿಂದ ಸಿಕ್ಕ ಪ್ರತಿಕ್ರಿಯೆ ಅದನ್ನು ಪಾನ್ ಇಂಡಿಯಾ ಸಿನಿಮಾ ಆಗಿ ಎಲ್ಲ ಭಾಷೆಗೂ ಡಬ್ ಆಗುವ ರೀತಿ ಮಾಡಿತು.

ಈ ಸಿನಿಮಾದ ಸಕ್ಸಸ್ ಇಂದ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಅವರು ಡಿವೈನ್ ಸ್ಟಾರ್ ಎನ್ನುವ ಪಟ್ಟ ಕೂಡ ಗಿಟ್ಟಿಸಿಕೊಂಡಿರು. ಇದರೊಂದಿಗೆ ದೇಶದ ಅನೇಕ ಅವಾರ್ಡ್ ಗಳನ್ನು ಬಾಚಿಕೊಂಡತು ಸಿನಿಮಾ. ಕಾಂತರಾ ಸಿನಿಮಾದ ನೈಜ ನಟನೆ ಕಾರಣ ಚಿತ್ರ ಆಸ್ಕರ್ ಅವಾರ್ಡಿಗೂ ಕೂಡ ನಾಮಿನೇಟ್ ಆಗಿ ದೇಶದ ಗರಿಮೆ ಹೆಚ್ಚಿಸಿತ್ತು.

ಗಳಿಕೆಯಲ್ಲೂ ಮತ್ತು ಪ್ರಖ್ಯಾತಿಯಲ್ಲೂ ದೇಶ ವಿದೇಶಗಳೆಲ್ಲ ಹೆಸರು ಮಾಡಿದ ಕಾಂತರಾ ಸಿನಿಮಾ ಕರಾವಳಿ ಭಾಗದ ಜನರ ಜನಜೀವನ ನಂಬಿಕೆ ಆಚಾರ ವಿಚಾರ, ದೈವ, ಭೂತಕೋಲ, ದೈವ ನರ್ತನ, ಇತ್ಯಾದಿ ವಿಷಯಗಳನ್ನು ಪ್ರಪಂಚದ ಮೂಲೆ ಮೂಲೆಗೆ ತಿಳಿಸುವ ಪ್ರಯತ್ನ ಮಾಡಿತು. ಸಿನಿಮಾದ ಮೂಲ ಕಥೆ ಧರ್ಮ ಅಧರ್ಮದ ನಡುವಿನ ಹೋರಾಟವನ್ನು ತಿಳಿಸುವುದಾದರೂ ಅದನ್ನು ಪ್ರೆಸೆಂಟ್ ಮಾಡಿದ ರೀತಿ ಅದಕ್ಕೆ ಸೇರಿಸಿರುವ ಅಂಶಗಳೆಲ್ಲ ಇಂದು ಇಡೀ ಪ್ರಪಂಚ ಕರ್ನಾಟಕದ ಕರಾವಳಿಯತ್ತ ತಿರುಗಿ ನೋಡುವಂತೆ ಮಾಡಿತು.

ಇದರ ಸಕ್ಸಸ್ ಬೆನ್ನಲ್ಲೇ ಎಲ್ಲರೂ ಕಾಂತರಾ ಟು ಸಿನಿಮಾ ಶುರುವಾಗುತ್ತದೆ ಎಂದು ಹೋಪ್ ಇಟ್ಟು ಕೊಂಡಿದ್ದಾರೆ. ಚಿತ್ರತಂಡ ಕೂಡ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು ಸ್ವತಃ ರಿಷಭ್ ಶೆಟ್ಟಿ ಅವರೇ ಕಾಂತರಾ ಟು ಸೀಕ್ವೆಲ್ ಬದಲು ಪ್ರಿಕ್ವೆಲ್ ಆಗಿ ಬರಲಿದೆ ಎನ್ನುವ ಭರವಸೆಯ ಮಾತುಗಳನ್ನು ಆಡಿದ್ದಾರೆ. ಆದರೆ ಕರಾವಳಿ ಭಾಗದ ಜನರು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಕಾಂತರಾ ಸಿನಿಮಾ ಪಾರ್ಟ್ ಟು ಬರುವುದೇ ಬೇಡ ಎಂದು ಹೇಳುತ್ತಿದ್ದಾರೆ.

ಅವರು ಹೇಳುವುದಕ್ಕೆ ಸಾಕಷ್ಟು ಕಾರಣಗಳಿದ್ದು, ಅದರಲ್ಲೊಬ್ಬರು ಟ್ವಿಟರ್ ಮೂಲಕ ಐಪಿಎಲ್ ನಲ್ಲಿ ದೈವದ ಗೆಟಪ್ ಹಾಕಿಕೊಂಡು ಆರ್‌ಸಿಬಿ ಫ್ಯಾನ್ ಒಬ್ಬ ನೃತ್ಯ ಮಾಡಿದ್ದ ವಿಡಿಯೋವನ್ನು ಹಾಕಿ ಅದಕ್ಕೆ ರಿಷಭ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ಈ ರೀತಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇವರು ಈ ರೀತಿ ಆಡುತ್ತಿರುವುದು ದೈವನರ್ತಕರಿಗೆ ಮಾಡುತ್ತಿರುವ ಅವಮಾನ ಆಗಿದೆ. ದಯವಿಟ್ಟು ಪಾರ್ಟ್ 2 ಮಾಡಬೇಡಿ ಎಂದು ಕೇಳಿದ್ದಾರೆ.

ಈಗ ಟ್ವಿಟರ್ ಅಲ್ಲಿ ಇದರ ಬಗ್ಗೆ ಅಭಿಯಾನ ಕೂಡ ಶುರು ಆಗಿದ್ದು ಮತ್ತೊಬ್ಬರು ದೈವ ನರ್ತನ ಎನ್ನುವುದು ಕರಾವಳಿ ಭಾಗದವರು ನಂಬಿಕೆಗೆ ಧರ್ಮಕ್ಕೆ ಸಂಬಂಧಪಟ್ಟ ವಿಚಾರ, ನೃತ್ಯ ಪ್ರಕಾರವಲ್ಲ ಪ್ರದರ್ಶನ ಪಡಿಸುವುದಕ್ಕೆ ದಯವಿಟ್ಟು ಇದನ್ನು ಇಲ್ಲಿಗೆ ಬಿಡಿ ಎಂದು ಕೇಳಿದ್ದಾರೆ. ಮತ್ತೊಬ್ಬರು ಕಾಂತಾರ ಸಿನಿಮಾ ಈಗಾಗಲೇ ಸಾಕಷ್ಟು ಸಕ್ಸಸ್ ಕೊಟ್ಟಿದೆ, ಕರಾವಳಿ ಭಾಗದ ಜನರಿಗೆ ಇನ್ನೂ ಈ ವಿಚಾರವಾಗಿ ಬಹಳ ಭಕ್ತಿ ಇದೆ ಅದನ್ನು ಹಾಳು ಮಾಡಬೇಡಿ ನೀವು ಇಷ್ಟಕ್ಕೆ ತೃಪ್ತರಾಗಿ ಕಾಂತರಾ ಟು ಕೈ ಬಿಡಿ ಎಂದು ಹೇಳಿದ್ದಾರೆ.

ಇದೆಲ್ಲದರ ನಡುವೆ ರಿಷಭ್ ಶೆಟ್ಟಿ ಅವರ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ಕೊಡುತ್ತಿದ್ದು ಸಾಕಷ್ಟು ಜನ ಕಾಂತರಾದ ಪ್ರೀಕ್ವೆಲ್ ನೋಡಲು ಕಾಯುತ್ತಿದ್ದೇವೆ, ಅದು ಬಂದರೆ ಸಹ ಏನು ತಪ್ಪಿಲ್ಲ ಮಾಡಿ ಎಂದು ಸಪೋರ್ಟ್ ಮಾಡುತ್ತಿದ್ದಾರೆ. ಕರಾವಳಿ ಭಾಗದ ಸಂಪ್ರದಾಯವನ್ನು ವಿಶ್ವವಿಖ್ಯಾತಿ ಮಾಡುತ್ತಿರುವ ರಿಷಭ್ ಶೆಟ್ಟಿ ಅವರ ಪ್ರಯತ್ನಕ್ಕೆ ನಾವೆಲ್ಲರೂ ಬೆಂಬಲವಾಗಿರೋಣ ಎಂದು ಮತ್ತೊಬ್ಬರು ಹೇಳುತ್ತಿದ್ದಾರೆ. ಇದೆಲ್ಲದರ ಜೊತೆ ಕಾಂತಾರ ಪ್ರೀಕ್ವೆಲ್ ಬರುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Cinema Updates Tags:Kantara, Kantara part 2, Rishab Shetty
WhatsApp Group Join Now
Telegram Group Join Now

Post navigation

Previous Post: ಕೋಟಿ ಕೋಟಿ ಆಸ್ತಿ ಇದ್ರು ನಟ ನಾಗಾರ್ಜುನ್ ಹೆಂಡ್ತಿ ಮಾತ್ರ ಮೈ ಮೇಲೆ ಚೂರು ಬಂಗಾರ ಹಾಕಲ್ಲ ಯಾಕೆ ಗೊತ್ತಾ.?
Next Post: ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore