Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದೇವರ ಕೋಣೆಯಲ್ಲಿ ನೀರು ತುಂಬಿದ ಚೊಂಬು ಇರಲೇಬೇಕು ಏಕೆ ಗೊತ್ತ…?

Posted on October 2, 2023 By Kannada Trend News No Comments on ದೇವರ ಕೋಣೆಯಲ್ಲಿ ನೀರು ತುಂಬಿದ ಚೊಂಬು ಇರಲೇಬೇಕು ಏಕೆ ಗೊತ್ತ…?

 

ನಮ್ಮ ದೇವರ ಕೋಣೆಯಲ್ಲಿ ಯಾವ ಕೆಲವು ವಸ್ತುಗಳು ಇರಬೇಕು ಹಾಗೂ ಯಾವ ಕೆಲವು ವಸ್ತುಗಳು ಇರಬಾರದು, ಹಾಗೇನಾದರೂ ಅಪ್ಪಿತಪ್ಪಿ ಕೆಲವೊಂದು ವಸ್ತುಗಳನ್ನು ಇಟ್ಟರೆ ಯಾವ ರೀತಿಯ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ ಹೀಗೆ ದೇವರ ಮನೆಯಲ್ಲಿ ನಾವು ಯಾವ ರೀತಿಯಾದಂತಹ ವಿಧಾನಗಳನ್ನು ಅನುಸರಿಸಿ ದೇವರ ಪೂಜೆ ಯನ್ನು ಮಾಡಬೇಕು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ಸಂಪೂರ್ಣ ವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ದೇವರಕೋಣೆಯಲ್ಲಿ ನೀರು ತುಂಬಿರುವಂತಹ ಚೊಂಬನ್ನು ಇಡಲೇಬೇಕು ಹಾಗೂ ಈ ರೀತಿ ಇಡುವುದರಿಂದ ಆಗುವ ಪ್ರಯೋಜನ ಏನು ಹಾಗೇನಾದರೂ ಇಡದಿದ್ದರೆ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!

ಮೊದಲನೆಯದಾಗಿ ಈ ರೀತಿ ದೇವರ ಕೋಣೆಯಲ್ಲಿ ತಾಮ್ರದ ಚೊಂಬಿನಲ್ಲಿ ಅಥವಾ ಯಾವುದಾದರೂ ಒಂದು ಚೊಂಬಿನಲ್ಲಿ ನೀರನ್ನು ತುಂಬಿ ಇಡುವುದರಿಂದ ಯಾವುದೆಲ್ಲ ರೀತಿಯ ಪ್ರಯೋಜನವನ್ನು ನಾವು ಕಾಣಬಹುದು ಎನ್ನುವುದನ್ನು ತಿಳಿಯೋಣ.

* ದೇವರ ಕೋಣೆಯಲ್ಲಿ ತಾಮ್ರದ ಚೊಂಬಿನಲ್ಲಿ ನೀರು ಇಡುವುದರಿಂದ ದೈವಿಕ ಶಕ್ತಿ ಹೆಚ್ಚುತ್ತದೆ.
* ದೈನಂದಿನ ಪೂಜೆಯ ನಂತರ, ನಾವು ದೇವತೆಗಳಿಗೆ ಹಣ್ಣುಗಳು, ಸಿಹಿ ತಿಂಡಿಗಳು ಅಥವಾ ಪಂಚಾಮೃತದಂತಹ ಪ್ರಸಾದ ಅಥವಾ ನೈವೇದ್ಯ ವನ್ನು ಅರ್ಪಿಸುತ್ತೇವೆ. ಆ ನೈವೇದ್ಯವನ್ನು ದೇವರಿಗೆ ಅರ್ಪಿಸಿದ ನಂತರ ನೀರನ್ನು ಸಹ ಅರ್ಪಿಸಬೇಕು ಈ ರೀತಿ ಮಾಡಿದರೆ ಮಾತ್ರ ನೈವೇದ್ಯ ಫಲ ದೊರೆಯುವುದು.
* ಪೂಜಾ ಕೋಣೆಯಲ್ಲಿ ಇಡುವಂತಹ ನೀರು ನಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಈ ಲೆಟರ್ ನಿಮ್ಮ ಹೆಸರಲ್ಲಿ ಇದ್ದರೆ ನೀವು ಅದೃಷ್ಟವಂತರು.!

* ಪೂಜೆ ಮಾಡುವಂತ ಸ್ಥಳದಲ್ಲಿ ನೀರನ್ನು ಇಡುವುದರಿಂದ ಮನೆಯಲ್ಲಿ ರುವಂತಹ ಸದಸ್ಯರ ಎಲ್ಲ ಇಷ್ಟಾರ್ಥಗಳು ಈಡೇರುತ್ತದೆ ಮತ್ತು ಮನೆಯಲ್ಲಿ ಸದಾ ಕಾಲ ಸಂತೋಷ ಶಾಂತಿ ನೆಮ್ಮದಿ ಇರುತ್ತದೆ ಎಂದು ಹಿರಿಯರು ಪಾಲಿಸುತ್ತಿದ್ದರು.
* ಪೂಜೆಯ ಮನೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ಇರಿಸಲಾದ ನೀರಿನಲ್ಲಿ ತುಳಸಿಯ ಕೆಲವು ಎಲೆಗಳನ್ನು ಹಾಕಿಡಲಾಗುತ್ತದೆ. ಇದರಿಂದ ನೀರು ಶುದ್ಧ ಮತ್ತು ಪವಿತ್ರವಾಗುತ್ತದೆ ಮತ್ತು ಆಚಮನ ಯೋಗವು ರೂಪುಗೊಳ್ಳುತ್ತದೆ ಮತ್ತು ಇದರಿಂದ ನಾವು ಪೂಜಾ ಸ್ಥಳವನ್ನು ಶುದ್ದೀ ಕರಿಸಿದಾಗ, ದೇವಿ ಮತ್ತು ದೇವರು ಪ್ರಸನ್ನನಾಗುತ್ತಾರೆ.

* ದೇವರ ಪೂಜೆಯಲ್ಲಿ ಹೂವು, ಪತ್ರ, ಪೂಜಾ ಸಾಮಗ್ರಿ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯ ನೀರು ಏಕೆಂದರೆ. ತುಳಸಿ ಹಾಕಿದ ನೀರು ಅಥವಾ ನೀರಿನಲ್ಲಿ ಓಂ ಎಂದು ಬರೆದು ದೇವರ ಕೊಣೆಗೆ, ಪೂಜಾ ಸಾಮಗ್ರಿಗೆ, ಹೂ ಪತ್ರಗಳಿಗೆ ಸಿಂಪಡಿಸಿ ಶುದ್ಧಿಕರಿಸಿದ ನಂತರವೇ ಪೂಜೆ ಪ್ರಾರಂಭಿಸಲು ಸಾಧ್ಯ.
* ಜಗತ್ತನ್ನು ರಕ್ಷಿಸುವ ಮತ್ತು ಮನೆಗೆ ಸಮೃದ್ಧಿಯನ್ನು ತರುವ ವರುಣ ಭಗವಂತನು ಪೂಜೆಯನ್ನು ಮೆಚ್ಚುತ್ತಾನೆ ಎಂದು ನಂಬಲಾಗಿದೆ.

ಗೃಹಿಣಿಯರಿಗಾಗಿ ಸೀಕ್ರೆಟ್ ಟಿಪ್ಸ್ ಗಳು.! ಚಪಾತಿ ಮೃದುವಾಗಿ ಬೇಕು ಎಂದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ.!

* ವಾಸ್ತು ಪ್ರಕಾರ, ಪೂಜಾ ಸ್ಥಳದಲ್ಲಿ ನೀರಿನ ಮಡಕೆಯನ್ನು ಇಡುವುದರಿಂದ ಸಮೃದ್ಧಿಯನ್ನು ಖಾತ್ರಿಗೊಳಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪೂಜಾ ಕೋಣೆಯಲ್ಲಿ ನೀರು ಇಡುವಾಗ ವಾಸ್ತು ತತ್ವಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
• ಮನೆಯ ಉತ್ತರ ಅಥವಾ ಈಶಾನ್ಯ ಮೂಲೆಯಲ್ಲಿ ನೀರಿನ ಪಾತ್ರೆಯನ್ನು ಇರಿಸಿ.
• ನೀರನ್ನು ಸಂಗ್ರಹಿಸಲು ತಾಮ್ರ ಅಥವಾ ಯಾವುದೇ ಲೋಹದ ಪಾತ್ರೆಯನ್ನು ಆರಿಸಿ, ತಾಮ್ರವು ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದು ನಕಾರಾತ್ಮಕತೆಯನ್ನು ಹೋಗಲಾಡಿಸಲು ಬಹು ಮುಖ್ಯ ಎಂದು ಪರಿಗಣಿಸಲಾಗಿದೆ. ಇದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

• ಈ ನೀರನ್ನು ನಿಯಮಿತವಾಗಿ ಬದಲಿಸುತ್ತಾ ಇರಿ ಮತ್ತು ಮನೆಯ ಮೂಲೆ ಮೂಲೆಯಲ್ಲಿ ಚಿಮುಕಿಸಿ. ಮನೆಯಲ್ಲಿ ನೀರು ಚಿಮುಕಿಸುವುದ ರಿಂದ ಧನಾತ್ಮಕ ಶಕ್ತಿ ಬರುತ್ತದೆ.
• ಒಟ್ಟಾರೆಯಾಗಿ ನೀವು ದೇವರ ಕೋಣೆಯಲ್ಲಿ ನೀರು ಇಡುವುದು ಬಹಳ ಶ್ರೇಷ್ಠ ಪ್ರತಿದಿನ ಬದಲಾಯಿಸುತ್ತಾ ಇರಿ ಸಾಧ್ಯವಾಗದಿದ್ದರೆ 2 ದಿನಕೊಮ್ಮೆಯಾದರೂ ಬದಲಾಯಿಸುವುದು ಬಹಳ ಒಳ್ಳೆಯದು. ಇದರಿಂದ ನಿಮ್ಮ ಮನೆಯಲ್ಲಿ ಸದಾ ಮಹಾಲಕ್ಷ್ಮಿ ತಾಯಿಯ ಅನುಗ್ರಹ ಇರುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!
Next Post: ಪಲಾವ್ ಎಲೆಯ ತಂತ್ರ.! ಈ ತಂತ್ರ ಮಾಡಿದ್ದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.!

Leave a Reply Cancel reply

Your email address will not be published. Required fields are marked *

Copyright © 2026 Kannada Trend News.


Developed By Top Digital Marketing & Website Development company in Mysore