Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಉತ್ತಮ ಆರೋಗ್ಯ ಪಡೆಯಲು ನಿಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.!

Posted on September 21, 2023 By Kannada Trend News No Comments on ಉತ್ತಮ ಆರೋಗ್ಯ ಪಡೆಯಲು ನಿಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.!

 

● ರಾತ್ರಿ ವೇಳೆಯಲ್ಲಿ ಎಣ್ಣೆಯಲ್ಲಿ ಕರಿದಿರುವ ಹೆಚ್ಚು ಮಸಾಲೆ ಇರುವ ಮತ್ತು ಹೆಚ್ಚು ಕೊಬ್ಬಿನಂಶದಿಂದ ಕೂಡಿರುವ ಆಹಾರ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.
● ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರಬೇಕು ದ್ವಿದಳ ಧಾನ್ಯಗಳು ಹಾಗೂ ಬೆಳೆ ಕಾಳುಗಳಲ್ಲಿ ಪ್ರೊಟೀನ್ ಯಥೇಚ್ಛವಾಗಿರುವುದರಿಂದ ಆಹಾರದಲ್ಲಿ ಅವುಗಳು ಇರಬೇಕು.

● ತಂಪು ಪಾನೀಯಗಳಿಂದ ದೇಹಕ್ಕೆ ಯಾವ ರೀತಿಯ ಪೋಷಕಾಂಶಗಳು ಹಾಗೂ ಕ್ಯಾಲೋರಿ ಕೂಡ ಸಿಗುವುದಿಲ್ಲ ದೇಹದ ತೂಕ ಹೆಚ್ಚಾಗಲು ಅದು ಕಾರಣವಾಗುತ್ತದೆ ಅಷ್ಟೇ. ಆರೋಗ್ಯದ ದೃಷ್ಟಿಯಿಂದ ರಾಸಾಯನಿಕಯುಕ್ತ ತಂಪು ಪಾನೀಯಗಳ ಸೇವನೆ ಬಿಟ್ಟರೆ ಒಳ್ಳೆಯದು.
● ಆಹಾರ ಸೇವಿಸುವಾಗ ಮನಸ್ಸು ಬಹಳ ಪ್ರಶಾಂತವಾಗಿರಬೇಕು. ಆಗಿದ್ದಾಗ ಮಾತ್ರ ನಾವು ತಿಂದ ಆಹಾರದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುವುದು.

ಈ ಐದು ನಕ್ಷತ್ರಗಳಲ್ಲಿ ಹುಟ್ಟಿದವರು ಬಹಳ ಪುಣ್ಯವಂತರು.!

● ಆಲ್ಕೋಹಾಲ್ ಅಭ್ಯಾಸ ಒಳ್ಳೆಯದಲ್ಲ. ಯಾಕೆಂದರೆ ಇದು ನೇರವಾಗಿ ದೇಹದ ಜೀರ್ಣಾಂಗ ಕ್ರಿಯೆ ಮೇಲೆ ದುಷ್ಪರಿಣಾಮ ಬೀರುತ್ತದೆ ಅದರ ಮೂಲಕ ದೇಹದ ಎಲ್ಲಾ ಅಂಗಗಳು ಕೂಡ ಡ್ಯಾಮೇಜ್ ಆಗುತ್ತದೆ.
● ಹುಳಿ ರುಚಿ ಹೊಂದಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು.
● ಆಹಾರದಲ್ಲಿ ಹಸಿರು ತರಕಾರಿ, ಸೊಪ್ಪು, ಹಣ್ಣುಗಳು ಸಹ ಇರಬೇಕು.

● ಮಾನಸಿಕ ಒತ್ತಡ ಕಡಿಮೆ ಮಾಡುವ ಹಾಗೂ ನಿದ್ರಾಹೀನತೆ ಸಲುವಾಗಿ ಔಷಧಿಗಳನ್ನು ಸೇವಿಸುತ್ತಿದ್ದರೆ ಅದನ್ನು ನಿಲ್ಲಿಸಿ ನೈಸರ್ಗಿಕವಾಗಿ ಇದಕ್ಕೆ ಪರಿಹಾರ ಮಾರ್ಗ ಹುಡುಕಿಕೊಳ್ಳಿ.
● ಮಲಗುವ ಕೋಣೆಯಲ್ಲಿ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತಿರಬೇಕು
● ಕೋಪ ತಾಪಗಳನ್ನು ದೂರ ಮಾಡಿ ಯಾವಾಗಲೂ ಮನಸ್ಸನ್ನು ಶಾಂತಿಯಾಗಿ ಇಟ್ಟುಕೊಳ್ಳಬೇಕು ಮತ್ತು ಎಲ್ಲರ ಜೊತೆ ನಗುನಗುತ್ತ ಸಮಯ ಕಳೆಯಬೇಕು.

ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಎಲ್ಲರಿಗೂ ಮಹತ್ವದ ಸೂಚನೆ.! ಈ ಕೆಲಸ ಮಾಡಿಲ್ಲ ಎಂದರೆ ಪಿಂಚಣಿ ಬರುವುದಿಲ್ಲ.!

● ಪ್ರತಿನಿತ್ಯ ಕೂಡ ಹಲ್ಲು, ವಸಡು, ನಾಲಿಗೆ ಇವುಗಳನ್ನು ಸರಿಯಾದ ವಿಧಾನದಲ್ಲಿ ಸ್ವಚ್ಛ ಮಾಡಿಕೊಳ್ಳಬೇಕು.
● ಉಸಿರನ್ನು ದೀರ್ಘವಾಗಿ ಎಳೆದು ಕೆಲವು ಸೆಕೆಂಡ್ ಗಳ ಕಾಲ ಅದನ್ನು ಹಾಗೆ ಹಿಡಿದುಕೊಂಡು ನಂತರ ನಿಧಾನವಾಗಿ ಉಸಿರನ್ನು ಬಿಡುವುದರಿಂದ ಆಗುತ್ತದೆ ಅನೇಕ ದೈಹಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
● ನಮ್ಮಿಂದ ಎಷ್ಟು ಸಾಧ್ಯ ಅಷ್ಟು ಮಾತ್ರ ಕೆಲಸವನ್ನು ಒಪ್ಪಿಕೊಳ್ಳಬೇಕು ಎಲ್ಲವನ್ನು ಮಾಡಲು ಹೊರಟರೆ ದೈಹಿಕ ಆಲಸ್ಯದ ಜೊತೆಗೆ ಮಾನಸಿಕ ಒತ್ತಡ ಕೂಡ ಹೆಚ್ಚಾಗಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಹಾಗಾಗಿ ಒಪ್ಪಿಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಿ.

● ದಿನವೂ ಕನಿಷ್ಠ ಆರರಿಂದ ಎಂಟು ಗಂಟೆ ನಿದ್ದೆ ಮಾಡಲೇಬೇಕು
● ದೇಹ ವಿಶ್ರಾಂತಿ ಕೇಳಿದಾಗ ಬಹಳ ಆಯಾಸವಾಗಿದ್ದಾಗ ರೆಸ್ಟ್ ಮಾಡುವುದು ಬಹಳ ಮುಖ್ಯ.
● ಬೆನ್ನಿನ ಮೂಳೆಯಲ್ಲಿರುವ ಸ್ಪೈನಲ್ ಕಾರ್ಡ್ ಯಾವಾಗಲೂ ನೇರ ಬಂಗಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ನಡೆಯುವಾಗ ಕುಳಿತುಕೊಳ್ಳುವಾಗ ಓಡಾಡುವಾಗ ಕೂಡ ಇದು ನೇರವಾಗಿರಬೇಕು.
● ಆಹಾರವನ್ನು ಚೆನ್ನಾಗಿ ಆಗಿದ್ದು ನುಂಗಬೇಕು, ಯಾವುದೇ ಆಹಾರವನ್ನು ಅತಿಯಾಗಿ ಸೇವನೆ ಮಾಡಬಾರದು.

ಕೈ ಕಾಲು ಜೋಮು ಹಿಡಿಯುತ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.!

● ಪ್ರತಿ ದಿನವೂ ಕ್ರಮವಾಗಿ ಮಲವಿಸರ್ಜನೆ ಆಗುವಂತೆ ನೋಡಿಕೊಳ್ಳಬೇಕು
● ದಿನದಲ್ಲಿ ಯಾವುದೇ ಒಂದು ಹೊತ್ತಾದರೂ ಕೆಲ ಸಮಯ ಹೊರಗಡೆ ಹೋಗಿ ಶುದ್ಧವಾದ ಗಾಳಿಯಲ್ಲಿ ಮಲಗಿ ವಿಶ್ರಾಂತಿ ಪಡೆಯಬೇಕು.
● ಬ್ರಹ್ಮಚರ್ಯ ವ್ರತವನ್ನು ಪಾಲನೆ ಮಾಡಲೇಬೇಕು.
● ಶ್ರೀಗಂಧ, ಕರ್ಪೂರ, ತುಳಸಿ, ಧೂಪ ಇವುಗಳ ಹೊಗೆಯನ್ನು ಮನೆಯಲ್ಲಿ ಹಾಕಿ ಮನೆ ವಾತಾವರಣ ಶುದ್ಧಿಯಾಗಿ ಇರುವಂತೆ ನೋಡಿಕೊಳ್ಳಬೇಕು.

● ಮನೆ ಸುತ್ತ ಹಸುವಿನ ಸಗಣಿಯಿಂದ ಸಾರಿಸಿ ವಾತಾವರಣವನ್ನು ನೈರ್ಮಲ್ಯವಾಗಿ ಇಟ್ಟುಕೊಳ್ಳಬೇಕು.
● ತಂಬಾಕು, ಗುಟ್ಕಾ, ಮದ್ಯಪಾನ, ಧೂಮಪಾನ ಮುಂತಾದ ಯಾವುದೇ ದುರಭ್ಯಾಸಗಳ ದಾಸರಾಗಬಾರದು. ಈಗಾಗಲೇ ಅಭ್ಯಾಸ ಇದ್ದರೆ ಅದರ ಪ್ರಮಾಣ ಕಡಿಮೆ ಮಾಡಿಕೊಂಡು ಬಿಟ್ಟುಬಿಡಬೇಕು. ಇದೇ ರೀತಿ ಇನ್ನಷ್ಟು ಟಿಪ್ ಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Useful Information
WhatsApp Group Join Now
Telegram Group Join Now

Post navigation

Previous Post: ಈ ಐದು ನಕ್ಷತ್ರಗಳಲ್ಲಿ ಹುಟ್ಟಿದವರು ಬಹಳ ಪುಣ್ಯವಂತರು.!
Next Post: ಮನೆ ಸ್ವಚ್ಛಗೊಳಿಸುವ ಸುಲಭ ವಿಧಾನ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore