Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Mayur Patel: ನನಗೆ ಯಾವ ಸಿನಿಮಾದಲ್ಲು ಆಫರ್ ಕೊಡದೆ ಇರಲು ಕಾರಣ ಏನು ಗೊತ್ತ.? ನೋವು ಹಂಚಿಕೊಂಡ ನಟ ಮಯೂರ್ ಪಟೇಲ್

Posted on March 20, 2023 By Kannada Trend News No Comments on Mayur Patel: ನನಗೆ ಯಾವ ಸಿನಿಮಾದಲ್ಲು ಆಫರ್ ಕೊಡದೆ ಇರಲು ಕಾರಣ ಏನು ಗೊತ್ತ.? ನೋವು ಹಂಚಿಕೊಂಡ ನಟ ಮಯೂರ್ ಪಟೇಲ್

 

ಮಣಿ, ಲವ್ ಸ್ಟೋರಿ, ಗುನ್ನ, ನಿನದೇ ನೆನಪು, ಮುನಿಯ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದ ಮಯೂರ್ ಪಟೇಲ್ ಅವರು ನಿಧಾನವಾಗಿ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿದ್ದಾರೆ. ಒಂದು ಸಮಯದಲ್ಲಿ ಹೀರೋ ಆಗಿ ಬಹಳ ಫೇಮಸ್ ಆಗಿದ್ದ ಇವರು ಅದ್ಯಾವಾಗ ತೆರೆಯಿಂದ ದೂರವಾಗಿ ಬಿಟ್ಟರು ಎಂದು ಗೊತ್ತೇ ಆಗಲಿಲ್ಲ ಅಷ್ಟೊಂದು ದೊಡ್ಡ ಗ್ಯಾಪ್ ತೆಗೆದುಕೊಂಡು ಬಿಟ್ಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಯಾವ ಸಿನಿಮಾದಲ್ಲಿ ಹೀರೋ ಆಗಿಯೂ ಅಭಿನಯಿಸಿಲ್ಲ. ಹಾಗೆ ಅತಿಥಿ ಪಾತ್ರಗಳಲ್ಲ್ಲೂ ಕೂಡ ಕಾಣಿಸಿಕೊಂಡಿಸಲ್ಲ . ಇದಕ್ಕೆಲ್ಲ ಕಾರಣ ಏನು ಅಷ್ಟು ಪಿಕ್ ಅಲ್ಲಿ ಇದ್ದವರು ಅಷ್ಟು ಬೇಗ ಅವಕಾಶಗಳನ್ನೆಲ್ಲ ಕಳೆದುಕೊಂಡು ಸಿನಿಮಾ ಇಂದ ದೂರಾಗಲು ಕಾರಣ ಏನು ಎನ್ನುವುದನ್ನು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಬಹಳ ವರ್ಷಗಳ ನಂತರ ಮಯೂರ್ ಪಟೇಲ್ ಅವರು ರಾಜೀವ್ ಐಎಎಸ್ ಎನ್ನುವ ಸಿನಿಮಾ ಒಂದರಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಬಂದರೂ ಕೂಡ ಅದೊಂದು ಸ್ಪೆಷಲ್ ರೋಲ್ ಆಗಿದೆಯಂತೆ. ಸಿನಿಮಾ ಸಲುವಾಗಿ ಸಂದರ್ಶನ ಒಂದರಲ್ಲಿ ಭಾಗಿಯಾದ ಇವರು ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣ ಏನು ಎಂದು ಹೇಳಿಕೊಂಡಿದ್ದಾರೆ.

ಹೌದು, ಒಂದು ಕಾಲದಲ್ಲಿ ನಾನು ಕೈತುಂಬಾ ಅವಕಾಶಗಳನ್ನು ಇಟ್ಟುಕೊಂಡಿದ್ದೆ, ಒಳ್ಳೊಳ್ಳೆ ಸಿನಿಮಾಗಳು ಕೂಡ ನನಗೆ ಸಿಗುತ್ತಿತ್ತು. ಆದರೆ ಆ ಸಮಯ ಕಳೆದ ಮೇಲೆ ಈಗ ನನ್ನ ಹತ್ತಿರ ಯಾರು ಕೂಡ ಕಥೆ ಹೇಳಲು ಹುಡುಕಿಕೊಂಡು ಬರುತ್ತಿಲ್ಲ ಏಕೆಂದರೆ ಎಲ್ಲಾ ಕಡೆ ನನ್ನ ಬಗ್ಗೆ ನೆಗೆಟಿವ್ ಆಗಿ ಪಬ್ಲಿಸಿಟಿ ಆಗಿದೆ ನನ್ನನ್ನು ನೋಡಬೇಕು ಎಂದರೆ ನನ್ನ ತಂದೆಯನ್ನು ದಾಟಿಕೊಂಡು ಬರಬೇಕು ಎಂದು ಹಲವರು ಅಂದುಕೊಂಡಿದ್ದಾರೆ.

ಅದೇ ನನಗೆ ಮೈನಸ್ ಪಾಯಿಂಟ್ ಆಗಿರುವುದು ಆದರೆ ನನ್ನ ತಂದೆ ಅವರು ಇಂಡಸ್ಟ್ರಿಯಲ್ ಇದ್ದರೂ ಕೂಡ ಎಂದು ನನ್ನ ಸಿನಿಮಾ ವಿಚಾರವಾಗಿ ತಲೆ ಹಾಕಿದವರಲ್ಲ. ನನ್ನ ಪ್ರೊಡ್ಯೂಸರ್ ಗಳನ್ನು ಮಾತನಾಡಿಸುತ್ತಿದ್ದರು ಅವರೇನಾದರೂ ಸಲಹೆ ಕೇಳಿದಾಗ ಮಾತ್ರ ಸಿನಿಮಾ ರಿಲೀಸ್ ವೇಳೆಗೆ ಏನಾದರು ಸಜೆಶನ್ ಕೊಡುತ್ತಿದ್ದರು ಅಷ್ಟೇ ನನಗೆ ಗೊತ್ತಿರೋ ಹಾಗೆ ಮತ್ಯಾವ ವಿಷಯದಲ್ಲಿ ಅವರು ತಲೆ ಹಾಕುತ್ತಿರಲಿಲ್ಲ.

ಆದರೆ ಈ ರೀತಿ ಒಂದು ತಪ್ಪು ಕಲ್ಪನೆ ಆಗ ಎಲ್ಲರ ತಲೆಯಲ್ಲಿ ತುಂಬಿತ್ತು. ಹಾಗಾಗಿ ಹೆಚ್ಚಿನ ಜನರು ನನ್ನ ಹತ್ತಿರ ಬರಲೇ ಇಲ್ಲ ಮತ್ತು ಇನ್ನೊಂದು ಏನೆಂದರೆ ನಾನು ತುಂಬಾ ಸಂಭಾವನೆ ಡಿಮ್ಯಾಂಡ್ ಮಾಡುತ್ತೇನೆ ಎಂದು ಕೂಡ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದರ ಜೊತೆಗೆ ನನಗೆ ತುಂಬಾ ಅಟಿಟ್ಯೂಡ್ ಇದೆ ಎಂದು ಹಲವರು ಮಾತನಾಡಿಕೊಂಡಿದ್ದಾರೆ.

ಆದರೆ ಈವರೆಗೆ ನನಗೆ ಆಟಿಟ್ಯೂಡ್ ಸ್ಪೆಲ್ಲಿಂಗ್ ಕೂಡ ಗೊತ್ತಿಲ್ಲ, ನಾನು ಎಲ್ಲರೊಳಗೆ ಒಬ್ಬನಾಗಿ ಇರಲು ಆಸೆಪಡುತ್ತಿದ್ದವನು. ಇಂದಿಗೂ ನನ್ನ ತಂದೆ ಹಾಗೂ ಹೆಂಡತಿ ಕೂಡ ಸ್ವಲ್ಪ ಆದರೂ ಆಟಿಟ್ಯೂಡ್ ಇಟ್ಕೋಬೇಕು ಎಂದು ಸಲಹೆ ಕೊಡುತ್ತಾರೆ, ನನಗೆ ಅದು ಬರುವುದೇ ಇಲ್ಲ. ಆದರೂ ಸಹ ನನ್ನ ಬಗ್ಗೆ ಕೆಲವರು ಹೀಗೆಲ್ಲಾ ಹಬ್ಬಿಸಿದ ಕಾರಣ ಈಗ ಅವಕಾಶಗಳಿಲ್ಲದ ರೀತಿ ಆಗಿ ಹೋಗಿದೆ. ಹಾಗಾಗಿ ಸಿನಿಮಾಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ನನಗೆ ತುಂಬಾ ಆಟಿಟ್ಯೂಡ್ ಅಂತ ಸುಳ್ಳು ಹಬ್ಬಿಸಿ ಬಿಟ್ಟಿದ್ದಾರೆ ಹಾಗಾಗಿ ಸಿನಿಮಾ ಆಫರ್ ಸಿಗುತ್ತಾ ಇಲ್ಲ ಎಂದು ಸಂದರ್ಶನದಲ್ಲಿ ನೋವು ಹಂಚಿಕೊಂಡ ನಟ ಮಯೂರ್ ಪಟೇಲ್.

Cinema Updates Tags:Mayur patel
WhatsApp Group Join Now
Telegram Group Join Now

Post navigation

Previous Post: ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು
Next Post: ಸಿಂಹಾದ್ರಿಯ ಸಿಂಹ ಪಾರ್ಟ್-2 ಸಿನಿಮಾ ಮಾಡಲು ಸುದೀಪ್ ಒಪ್ಪಿಕೊಂಡಿದ್ರೂ ಕೂಡ ಸಿನಿಮಾ ಯಾಕಿನ್ನು ಬಂದಿಲ್ಲ ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore