Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಒಣದ್ರಾಕ್ಷಿಯಲ್ಲಿರುವ ಔಷಧೀಯ ಗುಣಗಳು.!

Posted on November 13, 2023 By Kannada Trend News No Comments on ಒಣದ್ರಾಕ್ಷಿಯಲ್ಲಿರುವ ಔಷಧೀಯ ಗುಣಗಳು.!

 

ಒಣದ್ರಾಕ್ಷಿಯನ್ನು ನಾವು ಸುಲಭವಾಗಿ ಮನೆಯಲ್ಲಿ ನಾವು ತಯಾರಿಸ ಬಹುದು ಹೌದು ದ್ರಾಕ್ಷಿಯನ್ನು ತಂದು ಚೆನ್ನಾಗಿ ತೊಳೆದು ಅದನ್ನು ಬಿಸಿಲಿನಲ್ಲಿ ಒಣಗಿಸುವುದರ ಮೂಲಕ ನಾವು ಒಣದ್ರಾಕ್ಷಿಯನ್ನಾಗಿ ಮಾಡಬಹುದು. ಆದರೆ ಹೆಚ್ಚಿನ ಜನಕ್ಕೆ ಒಣ ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಯಾವ ಆರೋಗ್ಯ ಪ್ರಯೋಜನ ಉಂಟಾಗುತ್ತದೆ ಎಂಬ ಮಾಹಿತಿ ತಿಳಿದಿಲ್ಲ.

ಬದಲಿಗೆ ಅದನ್ನು ಹಲವಾರು ಆಹಾರ ಪದಾರ್ಥಗಳಿಗೆ ಸಿಹಿ ಖಾದ್ಯ ತಯಾರು ಮಾಡುವುದಕ್ಕೆ ಉಪಯೋಗಿಸು ತ್ತಾರೆ ಅದರಲ್ಲೂ ಹಬ್ಬ ಹರಿದಿನಗಳಲ್ಲಿ ಪೂಜಾ ಸಮಯದಲ್ಲಿ ಅಭಿಷೇಕಕ್ಕೆ ಹೀಗೆ ಹಲವಾರು ವಿಧಾನಗಳಲ್ಲಿ ನಾವು ಬಳಸುವುದು ಸರ್ವೇಸಾಮಾನ್ಯ ಹೌದು ದೇವರಿಗೆ ನೈವೇದ್ಯ ಮಾಡುವುದಕ್ಕೂ ಕೂಡ ಬಳಸುತ್ತೇವೆ. ಆದರೆ ಒಣದ್ರಾಕ್ಷಿಯನ್ನು ನಾವು ಸೇವನೆ ಮಾಡುವುದರಿಂದ.

ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಎನ್ನುವ ಮಾಹಿತಿ ತಿಳಿದಿಲ್ಲ. ಹಾಗಾದರೆ ಈ ದಿನ ಒಣದ್ರಾಕ್ಷಿ ಯಲ್ಲಿ ಯಾವುದೆಲ್ಲ ರೀತಿಯ ಪೋಷಕಾಂಶಗಳು ಇದೆ ಹಾಗೂ ಅದು ನಮ್ಮ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ ಹಾಗೂ ಇದನ್ನು ಹೇಗೆ ಉಪಯೋಗ ಮಾಡುವುದರಿಂದ ಇದರ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಒಣದ್ರಾಕ್ಷಿಯು ಯಥೇಚ್ಛವಾದ ಫೈಬರ್, ಕಬ್ಬಿಣ, ಉತ್ಕರ್ಷಣ ನಿರೋಧಕ ಗುಣ, ಹೊಂದಿದ್ದು ಇದರಿಂದ ನಾವು ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
* ಇದರಲ್ಲಿರುವಂತಹ ಫೈಬರ್ ಅಂಶ ನಿಮ್ಮ ಜೀರ್ಣಾಂಗ ವ್ಯವಸ್ಥೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
* ಕೆಂಪು ರಕ್ತ ಕಣಗಳನ್ನು ತಯಾರಿಸಲು ಕಬ್ಬಿಣವು ಮುಖ್ಯವಾಗಿದೆ ಮತ್ತು ನಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೂ ಆಮ್ಲಜನಕ ವನ್ನು ಸಾಗಿಸಲು ಸಹಾಯ ಮಾಡುತ್ತದೆ.

* ಉತ್ಕರ್ಷಣ ನಿರೋಧಕಗಳು ಜೀವಕೋಶಗಳು ಮತ್ತು ಡಿಎನ್ಎಗೆ ಹಾನಿಯಾಗದಂತೆ ತಡೆಯುತ್ತದೆ ಹಾಗಾದರೆ ಒಣದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ಆರೋಗ್ಯ ಪ್ರಯೋಜನ ಪಡೆಯಬಹುದು ಎಂದು ನೋಡುವುದಾದರೆ.
* ಒಣದ್ರಾಕ್ಷಿಯ ಸೇವನೆಯಿಂದ ಶರೀರದಲ್ಲಿ ಚೈತನ್ಯ ಮೂಡುತ್ತದೆ.
* ಹಾಗೂ ಮಲಬದ್ಧತೆಗೆ ಒಣದ್ರಾಕ್ಷಿಯು ಅತ್ಯುತ್ತಮ ಮದ್ದು.

* ದೈನಂದಿನ ಆಹಾರ ಕ್ರಮದಲ್ಲಿ ಒಣದ್ರಾಕ್ಷಿಯನ್ನು ಬಳಸುವುದರಿಂದ ಆಹಾರದ ರುಚಿ ಹೆಚ್ಚುವುದರೊಂದಿಗೆ ಆರೋಗ್ಯಕ್ಕೂ ಉತ್ತಮ.
* ಕ್ಷಯ ರೋಗಿಗಳು ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುವುದು.
* ನಾಲ್ಕೈದು ಒಣದ್ರಾಕ್ಷಿಗಳನ್ನು ಸ್ವಲ್ಪ ನೀರಿನಲ್ಲಿ ಕಿವುಚಿತಿಂದರೆ ಅಜೀರ್ಣ ಕ್ಕೆ ಉತ್ತಮ ಮದ್ದು.
* ಒಣ ದ್ರಾಕ್ಷಿಯನ್ನು ಹಾಲಿನಲ್ಲಿ ರಾತ್ರಿ ನೆನೆಸಿ ಮರುದಿನ ಹಾಲಿನೊಂದಿಗೆ ಸೇವಿಸಿದರೆ ಆಹಾರದಲ್ಲಿರುವ ಪೌಷ್ಟಿಕಾಂಶ ಹೆಚ್ಚು ಸಿಗುತ್ತದೆ ಆರೋಗ್ಯ ಕ್ಕೂ ಉತ್ತಮವೂ ಹೌದು.

* ಒಣ ದ್ರಾಕ್ಷಿಯ ಸೇವನೆಯಿಂದ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲದೆ ರಕ್ತವೃದ್ಧಿಯಾಗುತ್ತದೆ.
* ಮೂಳೆಗಳ ಆರೋಗ್ಯಕ್ಕೆ ಉತ್ತಮ ಮದ್ದು.
* ಒಣದ್ರಾಕ್ಷಿಯನ್ನು ದಿನವಿಡೀ ನೀರಿನಲ್ಲಿ ನೆನೆಸಿ ಮರುದಿನ ಆ ದ್ರಾಕ್ಷಿ ಕಿವುಚಿ ಅದರ ನೀರನ್ನು ಬಸಿದು ಕುಡಿದರೆ ಹಳೆಯ ಚರ್ಮರೋಗ ಗುಣವಾಗುತ್ತದೆ.
* ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
* ಇದರಲ್ಲಿರುವಂತಹ ಫೈಬರ್ ಅಂಶ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಒಣದ್ರಾಕ್ಷಿಯು ಸಕ್ಕರೆಯಿಂದ ತುಂಬಿರುತ್ತದೆ. ಹಾಗಾಗಿ ಇದನ್ನು ಯಾವ ಪ್ರಮಾಣದಲ್ಲಿ ಸೇವನೆ ಮಾಡಬೇಕು ಎನ್ನುವುದು ಬಹಳ ಮುಖ್ಯವಾಗಿರುತ್ತದೆ.
* ಒಣದ್ರಾಕ್ಷಿ ತೂಕ ಹೆಚ್ಚಿಸಲು ಅಥವಾ ಇಳಿಸಲು ಎರಡಕ್ಕೂ ಸಹಕಾರಿ ಯಾಗಿದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.
* ತೂಕ ಇಳಿಕೆ ಮಾಡಿಕೊಳ್ಳಲು ಬಯಸುವವರು ಇದರಲ್ಲಿರುವ ಪೋಷ ಕಾಂಶಗಳ ಅಗತ್ಯದಿಂದಾಗಿ ನಿಯಮಿತವಾಗಿ ಸೇವನೆ ಮಾಡಬಹುದು. ತೂಕ ಹೆಚ್ಚಿಸಬೇಕು ಎನ್ನುವವರು ಹೆಚ್ಚಾಗಿ ಆಹಾರ ಕ್ರಮದಲ್ಲಿ ಇದನ್ನು ಉಪಯೋಗಿಸಬೇಕು.

* ಇದು ಗ್ಯಾಸ್ ಹೊಟ್ಟೆ ಉಬ್ಬರ ಮತ್ತು ಸೆಳೆತದಂತಹ ಸಮಸ್ಯೆಗಳಿಂದ ಪಾರು ಮಾಡುತ್ತದೆ.
* ಇದು ನಿಮ್ಮ ರಕ್ತದೊತ್ತಡದಲ್ಲಿನ ಏರುಪೇರು ನಿಯಂತ್ರಿಸುತ್ತದೆ.
* ಕೆಲವು ಒಣ ದ್ರಾಕ್ಷಿಗಳು ಕ್ಯಾನ್ಸ‌ರ್ ನಂತಹ ಅಪಾಯಕಾರಿ ಕಾಯಿಲೆ ಯಿಂದ ದೂರ ಉಳಿಸುತ್ತದೆ.
* ಉತ್ತಮ ನಿದ್ರೆಯನ್ನು ಒದಗಿಸುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಈ ಹೂವು ಕಂಡರೆ ಬಿಡಬೇಡಿ ಎಲ್ಲಾ ಸಾಲಗಳಿಂದ ಮುಕ್ತಿ ಪಡೆಯಲು ಈ ಹೂವನ್ನು ಮನೆಯ ಈ ಜಾಗದಲ್ಲಿ ಹೀಗೆ ಇಡಿ ಸಮಸ್ಯೆ ಕಳೆದು ಕೋಟ್ಯಾಧಿಪತಿಗಳಾಗುತ್ತಿರಾ.!
Next Post: ಮೂತ್ರ ವಿಸರ್ಜನೆ ಮಾಡುವಾಗ ಈ 10 ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore